ETV Bharat / bharat

ಚಾರ್​ಧಾಮ್​ಗಳಲ್ಲಿ ಬಾಂಬ್​ ಸ್ಫೋಟ ಬೆದರಿಕೆ : ಪೊಲೀಸರಿಂದ ಬಿಗಿ ಭದ್ರತೆ

author img

By

Published : Oct 15, 2022, 9:06 PM IST

Updated : Oct 15, 2022, 9:38 PM IST

ಹರಿದ್ವಾರ ರೈಲು ನಿಲ್ದಾಣದ ಅಧೀಕ್ಷಕರಿಗೆ ಬಾಂಬ್​ ಹಾಕುವ ಬಗ್ಗೆ ಬೆದರಿಕೆ ಪತ್ರ ಬಂದಿದ್ದು, ಈ ಸಂಬಂಧ ಪೊಲೀಸ್​ ಭದ್ರತೆ ಹೆಚ್ಚಿಸಲಾಗಿದೆ.

jaish-e-mohammed
ಪೊಲೀಸರಿಂದ ಬಿಗಿ ಭದ್ರತೆ

ಹರಿದ್ವಾರ(ಉತ್ತರಾಖಂಡ) : ಹಬ್ಬ ಹರಿದಿನ ಹಿನ್ನೆಲೆಯಲ್ಲಿ ಚಾರ್​ಧಾಮ್​ಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಬಾಂಬ್​ ಹಾಕುವುದಾಗಿ ರೈಲ್ವೆ ಪೊಲೀಸರಿಗೆ ಅನಾಮಧೇಯ ಬೆದರಿಕೆ ಪತ್ರ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಪತ್ರದ ಮೂಲ ಹುಡುಕುವತ್ತ ತನಿಖೆ ಮುಂದುವರೆದಿದೆ.

ಅಕ್ಟೋಬರ್ 10ರಂದು ಪತ್ರ ಬಂದಿದ್ದು, ಅಕ್ಟೋಬರ್​ 25 ಮತ್ತು 27ರಂದು ಚಾರ್​ಧಾಮ್​ ಪ್ರದೇಶದಲ್ಲಿ ಬಾಂಬ್​ ಹಾಕುವುದಾಗಿ ಬರೆಯಲಾಗಿದೆ. ಇದು ಹುಸಿ ಬೆದರಿಕೆ ಪತ್ರವೇ ಅಥವಾ ನಿಜವೇ ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಅಲ್ಲದೇ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್​ ಬಿಗಿ ಭದ್ರತೆ ಹೆಚ್ಚಿಸಲಾಗಿದೆ.

ಕಳೆದ ಹತ್ತು ವರ್ಷಗಳಿಂದ ಈ ರೀತಿ ಬೆದರಿಕೆ ಪತ್ರ ಬರುತ್ತಿದೆ. ಹಬ್ಬದ ವಿಶೇಷ ಸಂದರ್ಭದಲ್ಲಿ ಈ ರೀತಿಯ ಬೆದರಿಕೆ ಪತ್ರಗಳು ರೈಲ್ವೆ ಪೊಲೀಸರಿಗೆ ಬಂದಿದೆ. ಈ ಹಿಂದೆ ಹರಿದ್ವಾರದ ರೈಲ್ವೆ ನಿಲ್ದಾಣದಲ್ಲಿ ಜೈಶ್​ ಎ ಮೊಹಮ್ಮದ್ ಸಂಘಟನೆಯಿಂದ ಬೆದರಿಕೆ ಪತ್ರವೊಂದು ಪತ್ತೆಯಾಗಿದೆ. ಪತ್ರದ ಸಂಬಂಧ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ಓರ್ವ ಕಾಶ್ಮೀರಿ ಪಂಡಿತಗೆ ಗುಂಡಿಕ್ಕಿ ಕೊಲೆ ಮಾಡಿದ ಉಗ್ರರು

ಹರಿದ್ವಾರ(ಉತ್ತರಾಖಂಡ) : ಹಬ್ಬ ಹರಿದಿನ ಹಿನ್ನೆಲೆಯಲ್ಲಿ ಚಾರ್​ಧಾಮ್​ಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಬಾಂಬ್​ ಹಾಕುವುದಾಗಿ ರೈಲ್ವೆ ಪೊಲೀಸರಿಗೆ ಅನಾಮಧೇಯ ಬೆದರಿಕೆ ಪತ್ರ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಪತ್ರದ ಮೂಲ ಹುಡುಕುವತ್ತ ತನಿಖೆ ಮುಂದುವರೆದಿದೆ.

ಅಕ್ಟೋಬರ್ 10ರಂದು ಪತ್ರ ಬಂದಿದ್ದು, ಅಕ್ಟೋಬರ್​ 25 ಮತ್ತು 27ರಂದು ಚಾರ್​ಧಾಮ್​ ಪ್ರದೇಶದಲ್ಲಿ ಬಾಂಬ್​ ಹಾಕುವುದಾಗಿ ಬರೆಯಲಾಗಿದೆ. ಇದು ಹುಸಿ ಬೆದರಿಕೆ ಪತ್ರವೇ ಅಥವಾ ನಿಜವೇ ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಅಲ್ಲದೇ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್​ ಬಿಗಿ ಭದ್ರತೆ ಹೆಚ್ಚಿಸಲಾಗಿದೆ.

ಕಳೆದ ಹತ್ತು ವರ್ಷಗಳಿಂದ ಈ ರೀತಿ ಬೆದರಿಕೆ ಪತ್ರ ಬರುತ್ತಿದೆ. ಹಬ್ಬದ ವಿಶೇಷ ಸಂದರ್ಭದಲ್ಲಿ ಈ ರೀತಿಯ ಬೆದರಿಕೆ ಪತ್ರಗಳು ರೈಲ್ವೆ ಪೊಲೀಸರಿಗೆ ಬಂದಿದೆ. ಈ ಹಿಂದೆ ಹರಿದ್ವಾರದ ರೈಲ್ವೆ ನಿಲ್ದಾಣದಲ್ಲಿ ಜೈಶ್​ ಎ ಮೊಹಮ್ಮದ್ ಸಂಘಟನೆಯಿಂದ ಬೆದರಿಕೆ ಪತ್ರವೊಂದು ಪತ್ತೆಯಾಗಿದೆ. ಪತ್ರದ ಸಂಬಂಧ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ಓರ್ವ ಕಾಶ್ಮೀರಿ ಪಂಡಿತಗೆ ಗುಂಡಿಕ್ಕಿ ಕೊಲೆ ಮಾಡಿದ ಉಗ್ರರು

Last Updated : Oct 15, 2022, 9:38 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.