ನವದೆಹಲಿ: ದೆಹಲಿ ಬಿಜೆಪಿ ಘಟಕದ ಪ್ರದೇಶ ಮಂತ್ರಿ (ನಾಯಕಿ) ಸಂತೋಷ್ ಗೋಯಲ್ ಭಾನುವಾರ ಕೋವಿಡ್ ಸೋಂಕಿನಿಂದ ಮೃತಪಟ್ಟಿರುವುದಾಗಿ ಬಿಜೆಪಿ ರಾಜ್ಯ ಘಟಕ ತಿಳಿಸಿದೆ.
ರಾಜಧಾನಿ ದೆಹಲಿಯಲ್ಲಿ ದಿನೇದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರು ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಇದೀಗ ಹೆಮ್ಮಾರಿ ಬಿಜೆಪಿ ನಾಯಕಿಯನ್ನು ಬಲಿ ಪಡೆದಿದೆ.
ಸಂತೋಷ್ ಗೋಯಲ್ ಅವರು ಸಮಾಜ ಸೇವೆಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರು. ಕಳೆದ ವರ್ಷ ಲಾಕ್ಡೌನ್ ಸಮಯದಲ್ಲಿ ಬಡ ಜನರಿಗೆ ಆಹಾರ ಮತ್ತು ಪಡಿತರ ವ್ಯವಸ್ಥೆ ಮಾಡಿದ್ದರು. ಜೊತೆಗೆ ಸಾವಿರಾರು ಜನರಿಗೆ ಸ್ವತಃ ಮಾಸ್ಕ್ ತಯಾರಿಸಿ, ವಿತರಿಸಿದ್ದರು.
ಇದನ್ನೂ ಓದಿ: ಅನ್ನಪೂರ್ಣ ಶಿಖರ ಏರಿದ ರಷ್ಯಾದ ಮೂವರು ಪರ್ವತಾರೋಹಿಗಳು ನಾಪತ್ತೆ