ETV Bharat / bharat

ವಿಷಪೂರಿತ ಮದ್ಯಸೇವನೆ ಪ್ರಕರಣ: ಚಳಿ ಕಾರಣವಾ?.. ಇಲ್ಲಾ ಸತ್ಯ ಮುಚ್ಚಿಡಲು ಸರ್ಕಾರದ ಯತ್ನವಾ?

ಮದ್ಯ ಸೇವೆ ಮತ್ತು ಮಾರಾಟವನ್ನು ಬಿಹಾರ ಸರ್ಕಾರವು ಸಂಪೂರ್ಣವಾಗಿ ನಿಷೇಧ ಮಾಡಿದ್ದು, ನಕಲಿ ಮದ್ಯಸೇವನೆಗೆ ಕಾರಣವಾಗುತ್ತಿದೆ ಎನ್ನಲಾಗುತ್ತಿದೆ. ಕೆಮ್ಮಿಗೆ ಬಳಸುವ ಸಿರಪ್​​ನಲ್ಲಿ ಅಕ್ರಮ ಮದ್ಯ ಬೆರೆಸುವ ಮಟ್ಟಿಗೆ ನಕಲಿ ಮದ್ಯ ಜಾಲ ಹರಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

author img

By

Published : Jan 22, 2022, 12:53 PM IST

Bihar hooch tragedy toll mounts to 16 as Govt fails to curb illicit liquor trade
ವಿಷಪೂರಿತ ಮದ್ಯಸೇವನೆ ಪ್ರಕರಣ: ಸತ್ಯ ಮುಚ್ಚಿಡಲು ಸರ್ಕಾರ ಯತ್ನ?

ಸಾರಣ್ (ಬಿಹಾರ): ವಿಷಪೂರಿತ ಮದ್ಯಸೇವನೆ ಮಾಡಿ, ಸಾವನ್ನಪ್ಪುವ ಪ್ರಕರಣಗಳು ಬಿಹಾರದಲ್ಲಿ ಇನ್ನೂ ನಿಂತಿಲ್ಲ. ಹಿಂದಿನ ವಾರ ಸರಣ್ ಜಿಲ್ಲೆಯ ಮರ್ಹೌರಾ ನಗರದಲ್ಲಿ ವಿಷಪೂರಿತ ಮದ್ಯಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.

ಇಂತಹ ದುರಂತಗಳನ್ನು ನಿಯಂತ್ರಣಕ್ಕೆ ತರಲು ಬಿಹಾರ ರಾಜ್ಯ ಸಂಪೂರ್ಣವಾಗಿ ವಿಫಲವಾಗಿದೆ. ಮೃತಪಟ್ಟ ಎಲ್ಲರ ವಿವರ ಈಟಿವಿ ಭಾರತ್​ಗೆ ಸಿಕ್ಕಿದೆ. ಮರ್ಹೌರಾ ನಗರದ ಜವಾಹರ್ ಮಹತೋ, ರಾಜೇಶ್ ಶರ್ಮಾ, ಮುನ್ನಾ ಸಿಂಗ್ ಮತ್ತು ಭುಲನ್ ಮಾಂಝಿ, ಅಮ್ನೋರ್​ ನಗರದ ಬನಾಯ್ ಸಿಂಗ್, ವೀರೇಂದ್ರ ಠಾಕೂರ್, ಸಂಪತ್ ಮಹತೋ, ಕೃಷ್ಣ ಮಹತೋ, ರಾಮನಾಥ್ ರೈ, ಮೊಹಮ್ಮದ್ ಇಸಾ, ಮಿಥಿಲೇಶ್ ಸಿಂಗ್ ಮತ್ತು ನಂದನ್ ಪ್ರದೇಶದ ಬ್ರಿಜ್ ಬಿಹಾರಿ ರಾಯ್, ನೌಕ್ರಾದ ಭರತ್ ರಾಯ್, ಸಿವಾನ್‌ನ ಅನಿಲ್ ಮಿಸ್ತ್ರಿ, ಸುತಿಹಾರ್‌ನ ಸುಖಲ್ ಮಹತೋ ಮತ್ತು ನಾವಡಾದ ಧನೇಜರ್ ರೈ ಮೃತಪಟ್ಟವರಾಗಿದ್ದಾರೆ.

ಮದ್ಯ ಸೇವೆ ಮತ್ತು ಮಾರಾಟವನ್ನು ಬಿಹಾರ ಸರ್ಕಾರವು ಸಂಪೂರ್ಣವಾಗಿ ನಿಷೇಧ ಮಾಡಿರುವ ಕಾರಣದಿಂದ ಇಂತಹ ಅವಘಡಗಳು ಸಂಭವಿಸುತ್ತಿವೆ ಎಂದು ಹೇಳಲಾಗುತ್ತಿದ್ದು, ಕೆಮ್ಮಿಗೆ ಬಳಸುವ ಸಿರಪ್​​ನಲ್ಲಿ ಅಕ್ರಮ ಮದ್ಯ ಬೆರೆಸುವ ಮಟ್ಟಿಗೆ ನಕಲಿ ಮದ್ಯ ಜಾಲ ಹರಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಮೃತಪಟ್ಟಿದ್ದು ಚಳಿಯಿಂದಲೇ?: ಅಕ್ರಮ ಮದ್ಯಸೇವನೆಯಿಂದ ವ್ಯಕ್ತಿಗಳು ಮೃತರಾಗುತ್ತಿದ್ದಾರೆ ಬಹುತೇಕ ಎಲ್ಲೆಡೆಯಿಂದಲೂ ವರದಿಯಾಗಿದೆ. ಗುರುವಾರವಷ್ಟೆ ಸುದ್ದಿಗೋಷ್ಠಿ ಕರೆದಿದ್ದ ಸಾರಣ್ ಜಿಲ್ಲಾಧಿಕಾರಿ ರಾಜೇಶ್ ಮೀನಾ, ಅಕ್ರಮ ಮದ್ಯವೇ ಸಾವಿಗೆ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಮೃತಪಟ್ಟಿರುವವರ ಮನೆಯಲ್ಲಿ ವಿಷಪೂರಿತ ಮದ್ಯದ ಬಾಟಲಿಗಳು ದೊರೆತರೂ, ಅವರು ಮದ್ಯದಿಂದಲೇ ಮೃತಪಟ್ಟಿದ್ದಾರೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದಿದ್ದರು.

ಇದಕ್ಕೂ ಹಿಂದೆ ಜಿಲ್ಲಾಡಳಿತ ವ್ಯಕ್ತಿಗಳು ಚಳಿಯಿಂದ ಮೃತಪಟ್ಟಿದ್ದಾರೆ ಎಂದು ಹೇಳಿಕೆ ನೀಡಿತ್ತು. ಅಚ್ಚರಿಯ ವಿಚಾರ ಎಂದರೆ, ಮೃತಪಟ್ಟವರ ಮರಣೋತ್ತರ ಪರೀಕ್ಷಾ ವರದಿಗಳಲ್ಲಿ ಕೂಡಾ ಸಾವಿಗೆ ಸ್ಪಷ್ಟ ಕಾರಣವನ್ನು ಉಲ್ಲೇಖಿಸಿಲ್ಲ. ಈ ಮೂಲಕ ಸರ್ಕಾರ ಏನನ್ನೋ ಮುಚ್ಚಿಡಲು ಮುಂದಾಗುತ್ತಿದೆ ಎಂಬ ಆರೋಪಗಳೂ ಇವೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಿತೀಶ್ ನೇತೃತ್ವದ ಬಿಹಾರ ಸರ್ಕಾರದ ವಿರುದ್ಧ ವಿರೋಧ ಪಕ್ಷ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಶುಕ್ರವಾರ ಲೋಕ ಜನ ಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್​ ರಾಜ್ಯಪಾಲ ಫಗು ಚೌಹಾಣ್​ಗೆ ಪತ್ರ ಬರೆದಿದ್ದು, ರಾಷ್ಟ್ರಪತಿ ಆಡಳಿತ ಹೇರಿಕೆಗೆ ಮನವಿ ಮಾಡಿದ್ದರು.

ಇದಕ್ಕೂ ಮುನ್ನ ದೀಪಾವಳಿಯ ಸಮಯದಲ್ಲಿ ಪಶ್ಚಿಮ ಚಂಪಾರಣ್, ಗೋಪಾಲ್​ಗಂಜ್, ಮುಜಾಪ್ಫರ್ಪುರ್ ಮತ್ತು ಸಮಷ್ಟಿಪುರದಲ್ಲಿ ನಕಲಿ ಮದ್ಯ ಸೇವನೆಯಿಂದಾಗಿ 40 ಮಂದಿ ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು.

ಇದನ್ನೂ ಓದಿ: ಮುಂಬೈನ 20 ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ದುರಂತ: 7 ಸಾವು, 15ಕ್ಕೂ ಹೆಚ್ಚು ಮಂದಿಗೆ ಗಾಯ

ಸಾರಣ್ (ಬಿಹಾರ): ವಿಷಪೂರಿತ ಮದ್ಯಸೇವನೆ ಮಾಡಿ, ಸಾವನ್ನಪ್ಪುವ ಪ್ರಕರಣಗಳು ಬಿಹಾರದಲ್ಲಿ ಇನ್ನೂ ನಿಂತಿಲ್ಲ. ಹಿಂದಿನ ವಾರ ಸರಣ್ ಜಿಲ್ಲೆಯ ಮರ್ಹೌರಾ ನಗರದಲ್ಲಿ ವಿಷಪೂರಿತ ಮದ್ಯಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.

ಇಂತಹ ದುರಂತಗಳನ್ನು ನಿಯಂತ್ರಣಕ್ಕೆ ತರಲು ಬಿಹಾರ ರಾಜ್ಯ ಸಂಪೂರ್ಣವಾಗಿ ವಿಫಲವಾಗಿದೆ. ಮೃತಪಟ್ಟ ಎಲ್ಲರ ವಿವರ ಈಟಿವಿ ಭಾರತ್​ಗೆ ಸಿಕ್ಕಿದೆ. ಮರ್ಹೌರಾ ನಗರದ ಜವಾಹರ್ ಮಹತೋ, ರಾಜೇಶ್ ಶರ್ಮಾ, ಮುನ್ನಾ ಸಿಂಗ್ ಮತ್ತು ಭುಲನ್ ಮಾಂಝಿ, ಅಮ್ನೋರ್​ ನಗರದ ಬನಾಯ್ ಸಿಂಗ್, ವೀರೇಂದ್ರ ಠಾಕೂರ್, ಸಂಪತ್ ಮಹತೋ, ಕೃಷ್ಣ ಮಹತೋ, ರಾಮನಾಥ್ ರೈ, ಮೊಹಮ್ಮದ್ ಇಸಾ, ಮಿಥಿಲೇಶ್ ಸಿಂಗ್ ಮತ್ತು ನಂದನ್ ಪ್ರದೇಶದ ಬ್ರಿಜ್ ಬಿಹಾರಿ ರಾಯ್, ನೌಕ್ರಾದ ಭರತ್ ರಾಯ್, ಸಿವಾನ್‌ನ ಅನಿಲ್ ಮಿಸ್ತ್ರಿ, ಸುತಿಹಾರ್‌ನ ಸುಖಲ್ ಮಹತೋ ಮತ್ತು ನಾವಡಾದ ಧನೇಜರ್ ರೈ ಮೃತಪಟ್ಟವರಾಗಿದ್ದಾರೆ.

ಮದ್ಯ ಸೇವೆ ಮತ್ತು ಮಾರಾಟವನ್ನು ಬಿಹಾರ ಸರ್ಕಾರವು ಸಂಪೂರ್ಣವಾಗಿ ನಿಷೇಧ ಮಾಡಿರುವ ಕಾರಣದಿಂದ ಇಂತಹ ಅವಘಡಗಳು ಸಂಭವಿಸುತ್ತಿವೆ ಎಂದು ಹೇಳಲಾಗುತ್ತಿದ್ದು, ಕೆಮ್ಮಿಗೆ ಬಳಸುವ ಸಿರಪ್​​ನಲ್ಲಿ ಅಕ್ರಮ ಮದ್ಯ ಬೆರೆಸುವ ಮಟ್ಟಿಗೆ ನಕಲಿ ಮದ್ಯ ಜಾಲ ಹರಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಮೃತಪಟ್ಟಿದ್ದು ಚಳಿಯಿಂದಲೇ?: ಅಕ್ರಮ ಮದ್ಯಸೇವನೆಯಿಂದ ವ್ಯಕ್ತಿಗಳು ಮೃತರಾಗುತ್ತಿದ್ದಾರೆ ಬಹುತೇಕ ಎಲ್ಲೆಡೆಯಿಂದಲೂ ವರದಿಯಾಗಿದೆ. ಗುರುವಾರವಷ್ಟೆ ಸುದ್ದಿಗೋಷ್ಠಿ ಕರೆದಿದ್ದ ಸಾರಣ್ ಜಿಲ್ಲಾಧಿಕಾರಿ ರಾಜೇಶ್ ಮೀನಾ, ಅಕ್ರಮ ಮದ್ಯವೇ ಸಾವಿಗೆ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಮೃತಪಟ್ಟಿರುವವರ ಮನೆಯಲ್ಲಿ ವಿಷಪೂರಿತ ಮದ್ಯದ ಬಾಟಲಿಗಳು ದೊರೆತರೂ, ಅವರು ಮದ್ಯದಿಂದಲೇ ಮೃತಪಟ್ಟಿದ್ದಾರೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದಿದ್ದರು.

ಇದಕ್ಕೂ ಹಿಂದೆ ಜಿಲ್ಲಾಡಳಿತ ವ್ಯಕ್ತಿಗಳು ಚಳಿಯಿಂದ ಮೃತಪಟ್ಟಿದ್ದಾರೆ ಎಂದು ಹೇಳಿಕೆ ನೀಡಿತ್ತು. ಅಚ್ಚರಿಯ ವಿಚಾರ ಎಂದರೆ, ಮೃತಪಟ್ಟವರ ಮರಣೋತ್ತರ ಪರೀಕ್ಷಾ ವರದಿಗಳಲ್ಲಿ ಕೂಡಾ ಸಾವಿಗೆ ಸ್ಪಷ್ಟ ಕಾರಣವನ್ನು ಉಲ್ಲೇಖಿಸಿಲ್ಲ. ಈ ಮೂಲಕ ಸರ್ಕಾರ ಏನನ್ನೋ ಮುಚ್ಚಿಡಲು ಮುಂದಾಗುತ್ತಿದೆ ಎಂಬ ಆರೋಪಗಳೂ ಇವೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಿತೀಶ್ ನೇತೃತ್ವದ ಬಿಹಾರ ಸರ್ಕಾರದ ವಿರುದ್ಧ ವಿರೋಧ ಪಕ್ಷ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಶುಕ್ರವಾರ ಲೋಕ ಜನ ಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್​ ರಾಜ್ಯಪಾಲ ಫಗು ಚೌಹಾಣ್​ಗೆ ಪತ್ರ ಬರೆದಿದ್ದು, ರಾಷ್ಟ್ರಪತಿ ಆಡಳಿತ ಹೇರಿಕೆಗೆ ಮನವಿ ಮಾಡಿದ್ದರು.

ಇದಕ್ಕೂ ಮುನ್ನ ದೀಪಾವಳಿಯ ಸಮಯದಲ್ಲಿ ಪಶ್ಚಿಮ ಚಂಪಾರಣ್, ಗೋಪಾಲ್​ಗಂಜ್, ಮುಜಾಪ್ಫರ್ಪುರ್ ಮತ್ತು ಸಮಷ್ಟಿಪುರದಲ್ಲಿ ನಕಲಿ ಮದ್ಯ ಸೇವನೆಯಿಂದಾಗಿ 40 ಮಂದಿ ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು.

ಇದನ್ನೂ ಓದಿ: ಮುಂಬೈನ 20 ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ದುರಂತ: 7 ಸಾವು, 15ಕ್ಕೂ ಹೆಚ್ಚು ಮಂದಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.