ETV Bharat / bharat

ಏಪ್ರಿಲ್​ 13 ರವರೆಗೆ 15 ಜಿಲ್ಲೆ ಸಂಪೂರ್ಣ ಬಂದ್​ ಮಾಡಿದ ಯೋಗಿ ಸರ್ಕಾರ!

ಮಹಾಮಾರಿ ಕೊರೊನಾದಿಂದ ಉತ್ತರಪ್ರದೇಶ ತತ್ತರಿಸಿ ಹೋಗಿದ್ದು, ಇದರಿಂದ ಹೊರಬರಲು ಇದೀಗ ಮಹತ್ವದ ನಿರ್ಧಾರ ಕೈಗೊಂಡಿದೆ.

author img

By

Published : Apr 8, 2020, 3:09 PM IST

Coronavirus yogi
Coronavirus yogi

ಲಖನೌ: ಮಹಾಮಾರಿ ಕೊರೊನಾ ದೇಶದಲ್ಲಿ ನಿಲ್ಲುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ದಿನಕಳೆದಂತೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಕಾರಣ ಉತ್ತರಪ್ರದೇಶ ಯೋಗಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಏಪ್ರಿಲ್​ 14ರವರೆಗೆ ದೇಶದಲ್ಲಿ ಲಾಕ್​ಡೌನ್​ ಮುಂದುವರಿದಿದ್ದು, ಇದರ ಮಧ್ಯೆ ಉತ್ತರಪ್ರದೇಶ ಯೋಗಿ ಆದಿತ್ಯನಾಥ್​ ರಾಜ್ಯದ 15 ಜಿಲ್ಲೆಗಳನ್ನ ಸಂಪೂರ್ಣವಾಗಿ ಬಂದ್​ ಮಾಡಿ ಆದೇಶ ಹೊರಹಾಕಿದ್ದಾರೆ. ಇದರಿಂದಾಗಿ ಬೇರೆ ಯಾವುದೇ ಜಿಲ್ಲೆ ಜನರು ಅಲ್ಲಿಗೆ ಹೋಗದಂತೆ ಕ್ರಮ ಕೈಗೊಳ್ಳಲಾಗಿದೆ.

ಇಂದು ಮಧ್ಯರಾತ್ರಿಯಿಂದಲೇ ಈ ಯೋಜನೆ ಜಾರಿಗೆ ಬರಲಿದ್ದು, ಯಾವುದೇ ಕಾರಣಕ್ಕೂ ಏಪ್ರಿಲ್​ 13ವರೆಗೆ ಇಲ್ಲಿಗೆ ಹೋಗಲು ಅವಕಾಶ ಇರಲ್ಲ. ಪ್ರಮುಖವಾಗಿ ಲಖನೌ, ವಾರಣಾಸಿ, ನೋಯ್ಡಾ, ಸೀತಾಪುರ್​ ಗೌತಮ್​ ಬುದ್ಧನಗರ, ಗಾಜಿಯಾಬಾದ್​, ಮಿರತ್​,ಆಗ್ರಾ, ಶಾಮ್ಲಿ ಹಾಗೂ ಶಾರಾದಾಪೂರ್​ ಕೂಡ ಇದರಲ್ಲಿ ಸೇರಿಕೊಂಡಿವೆ.

ಲಖನೌ: ಮಹಾಮಾರಿ ಕೊರೊನಾ ದೇಶದಲ್ಲಿ ನಿಲ್ಲುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ದಿನಕಳೆದಂತೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಕಾರಣ ಉತ್ತರಪ್ರದೇಶ ಯೋಗಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಏಪ್ರಿಲ್​ 14ರವರೆಗೆ ದೇಶದಲ್ಲಿ ಲಾಕ್​ಡೌನ್​ ಮುಂದುವರಿದಿದ್ದು, ಇದರ ಮಧ್ಯೆ ಉತ್ತರಪ್ರದೇಶ ಯೋಗಿ ಆದಿತ್ಯನಾಥ್​ ರಾಜ್ಯದ 15 ಜಿಲ್ಲೆಗಳನ್ನ ಸಂಪೂರ್ಣವಾಗಿ ಬಂದ್​ ಮಾಡಿ ಆದೇಶ ಹೊರಹಾಕಿದ್ದಾರೆ. ಇದರಿಂದಾಗಿ ಬೇರೆ ಯಾವುದೇ ಜಿಲ್ಲೆ ಜನರು ಅಲ್ಲಿಗೆ ಹೋಗದಂತೆ ಕ್ರಮ ಕೈಗೊಳ್ಳಲಾಗಿದೆ.

ಇಂದು ಮಧ್ಯರಾತ್ರಿಯಿಂದಲೇ ಈ ಯೋಜನೆ ಜಾರಿಗೆ ಬರಲಿದ್ದು, ಯಾವುದೇ ಕಾರಣಕ್ಕೂ ಏಪ್ರಿಲ್​ 13ವರೆಗೆ ಇಲ್ಲಿಗೆ ಹೋಗಲು ಅವಕಾಶ ಇರಲ್ಲ. ಪ್ರಮುಖವಾಗಿ ಲಖನೌ, ವಾರಣಾಸಿ, ನೋಯ್ಡಾ, ಸೀತಾಪುರ್​ ಗೌತಮ್​ ಬುದ್ಧನಗರ, ಗಾಜಿಯಾಬಾದ್​, ಮಿರತ್​,ಆಗ್ರಾ, ಶಾಮ್ಲಿ ಹಾಗೂ ಶಾರಾದಾಪೂರ್​ ಕೂಡ ಇದರಲ್ಲಿ ಸೇರಿಕೊಂಡಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.