ETV Bharat / bharat

ಯುವತಿ ಸಜೀವ ದಹನ... ನಿತೀಶ್​ ವಿರುದ್ಧ ರಾಹುಲ್ ಗರಂ:  ಚುನಾವಣಾ ಲಾಭಕ್ಕಾಗಿ ಸತ್ಯ ಮುಚ್ಚಿಟ್ಟ ಆರೋಪ

author img

By

Published : Nov 17, 2020, 12:21 PM IST

ಬಿಹಾರದಲ್ಲಿ ನಡೆದ ಯುವತಿಯ ಜೀವಂತ ದಹನ ಘಟನೆ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿತೀಶ್​ ಕುಮಾರ್ ಹಾಗೂ ಎನ್​ಡಿಎ ವಿರುದ್ಧ ಗುಡುಗಿದ್ದಾರೆ. ಚುನಾವಣಾ ಲಾಭಕ್ಕಾಗಿ ಸತ್ಯ ಮರೆ ಮಾಚಿದ್ದಾರೆ ಎಂದು ಆರೋಪಿಸಿದ್ದಾರೆ.

Congress leader Rahul Gandhi
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ನವದೆಹಲಿ: ಬಿಹಾರದಲ್ಲಿ 20 ವರ್ಷದ ಯುವತಿಯನ್ನು ಸಜೀವ ದಹನ ಮಾಡಿದ ಘಟನೆ ಕುರಿತಂತೆ ಎನ್​ಡಿಎ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ನಿತೀಶ್ ಕುಮಾರ್ ಬಿಹಾರ ಚುನಾವಣೆ ಹಿನ್ನೆಲೆ ಘಟನೆಯನ್ನು ಮುಚ್ಚಿಟ್ಟು ಚುನಾವಣಾ ಲಾಭಕ್ಕೆ ಬಳಸಿಕೊಂಡರು ಎಂದು ಆರೋಪಿಸಿದ್ದಾರೆ.

ಈ ಕುರಿತಂತ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ವೈಶಾಲಿಯಲ್ಲಿ ಯುವತಿ ಜೀವಂತವಾಗಿ ಸುಟ್ಟುಹಾಕಿದ ಘಟನೆಯನ್ನು ಚುನಾವಣೆಯ ಹಿನ್ನೆಲೆ ಮುಚ್ಚಿಡಲಾಗಿತ್ತು. ಆಕೆ ಆಸ್ಪತ್ರೆಯಲ್ಲಿ 15 ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿದ್ದಾರೆ.

  • किसका अपराध ज़्यादा ख़तरनाक है-

    जिसने ये अमानवीय कर्म किया?

    या

    जिसने चुनावी फ़ायदे के लिए इसे छुपाया ताकि इस कुशासन पर अपने झूठे 'सुशासन' की नींव रख सके? pic.twitter.com/VDIeL19F3Q

    — Rahul Gandhi (@RahulGandhi) November 17, 2020 " class="align-text-top noRightClick twitterSection" data=" ">

ಟ್ವೀಟ್​​ನಲ್ಲಿ ಮುಂದುವರಿದು, ಯಾರ ಅಪರಾಧವು ಹೆಚ್ಚು ಅಪಾಯಕಾರಿ..? ಈ ಕೃತ್ಯ ಎಸಗಿದವರ ಅಥವಾ ಚುನಾವಣಾ ಲಾಭ ಪಡೆಯಲು ಈ ಕೃತ್ಯ ಅಡಗಿಸಿಟ್ಟವರು ತಮ್ಮ ಉತ್ತಮ ಆಡಳಿತ ಎಂಬ ಸುಳ್ಳಿಗೆ ಅಡಿಪಾಯ ಹಾಕಿ ಅದನ್ನು ದುರುಪಯೋಗ ಪಡೆಸಿಕೊಂಡಿದ್ದಾರೆ ಎಂದು ರಾಹುಲ್ ದೂರಿದ್ದಾರೆ.

ಅಲ್ಲಿನ ಮಾಧ್ಯಮಗಳ ವರದಿಯ ಪ್ರಕಾರ ಯುವತಿಯನ್ನು ವ್ಯಕ್ತಿಯೊಬ್ಬ ಕಿರುಕುಳ ನೀಡಿ, ಆತನ ಸ್ನೇಹಿತರ ಜೊತೆಗೂಡಿ ಜೀವಂತವಾಗಿ ಸುಟ್ಟುಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

  • Bihar: Funeral of a girl, allegedly burnt to death in Vaishali district, held by family after assurance from police.
    Family members had held a protest at Kargil Chowk in Patna on Nov 15th demanding arrest of 2 accused, who allegedly burnt the 20-yr old girl
    (Pics from 15.11.2020) pic.twitter.com/Oc7tBruKGF

    — ANI (@ANI) November 17, 2020 " class="align-text-top noRightClick twitterSection" data=" ">

ಘಟನೆಯ ಬಳಿಕ ನವೆಂಬರ್ 15ರಂದು ನ್ಯಾಯ ಒದಗಿಸುವಂತೆ ಹಾಗೂ ಈ ಕೃತ್ಯ ಎಸಗಿದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಯುವತಿಯ ಕುಟುಂಬಸ್ಥರು ಪಾಟ್ನಾದ ಕಾರ್ಗಿಲ್ ಚೌಕ್‌ನಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದ್ದರು. ಬಳಿಕ ಪೊಲೀಸರ ಆಶ್ವಾಸನೆಯ ಮೇರೆಗೆ ಅಂತ್ಯ ಸಂಸ್ಕಾರ ನಡೆಸಿದ್ದರು.

ನವದೆಹಲಿ: ಬಿಹಾರದಲ್ಲಿ 20 ವರ್ಷದ ಯುವತಿಯನ್ನು ಸಜೀವ ದಹನ ಮಾಡಿದ ಘಟನೆ ಕುರಿತಂತೆ ಎನ್​ಡಿಎ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ನಿತೀಶ್ ಕುಮಾರ್ ಬಿಹಾರ ಚುನಾವಣೆ ಹಿನ್ನೆಲೆ ಘಟನೆಯನ್ನು ಮುಚ್ಚಿಟ್ಟು ಚುನಾವಣಾ ಲಾಭಕ್ಕೆ ಬಳಸಿಕೊಂಡರು ಎಂದು ಆರೋಪಿಸಿದ್ದಾರೆ.

ಈ ಕುರಿತಂತ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ವೈಶಾಲಿಯಲ್ಲಿ ಯುವತಿ ಜೀವಂತವಾಗಿ ಸುಟ್ಟುಹಾಕಿದ ಘಟನೆಯನ್ನು ಚುನಾವಣೆಯ ಹಿನ್ನೆಲೆ ಮುಚ್ಚಿಡಲಾಗಿತ್ತು. ಆಕೆ ಆಸ್ಪತ್ರೆಯಲ್ಲಿ 15 ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿದ್ದಾರೆ.

  • किसका अपराध ज़्यादा ख़तरनाक है-

    जिसने ये अमानवीय कर्म किया?

    या

    जिसने चुनावी फ़ायदे के लिए इसे छुपाया ताकि इस कुशासन पर अपने झूठे 'सुशासन' की नींव रख सके? pic.twitter.com/VDIeL19F3Q

    — Rahul Gandhi (@RahulGandhi) November 17, 2020 " class="align-text-top noRightClick twitterSection" data=" ">

ಟ್ವೀಟ್​​ನಲ್ಲಿ ಮುಂದುವರಿದು, ಯಾರ ಅಪರಾಧವು ಹೆಚ್ಚು ಅಪಾಯಕಾರಿ..? ಈ ಕೃತ್ಯ ಎಸಗಿದವರ ಅಥವಾ ಚುನಾವಣಾ ಲಾಭ ಪಡೆಯಲು ಈ ಕೃತ್ಯ ಅಡಗಿಸಿಟ್ಟವರು ತಮ್ಮ ಉತ್ತಮ ಆಡಳಿತ ಎಂಬ ಸುಳ್ಳಿಗೆ ಅಡಿಪಾಯ ಹಾಕಿ ಅದನ್ನು ದುರುಪಯೋಗ ಪಡೆಸಿಕೊಂಡಿದ್ದಾರೆ ಎಂದು ರಾಹುಲ್ ದೂರಿದ್ದಾರೆ.

ಅಲ್ಲಿನ ಮಾಧ್ಯಮಗಳ ವರದಿಯ ಪ್ರಕಾರ ಯುವತಿಯನ್ನು ವ್ಯಕ್ತಿಯೊಬ್ಬ ಕಿರುಕುಳ ನೀಡಿ, ಆತನ ಸ್ನೇಹಿತರ ಜೊತೆಗೂಡಿ ಜೀವಂತವಾಗಿ ಸುಟ್ಟುಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

  • Bihar: Funeral of a girl, allegedly burnt to death in Vaishali district, held by family after assurance from police.
    Family members had held a protest at Kargil Chowk in Patna on Nov 15th demanding arrest of 2 accused, who allegedly burnt the 20-yr old girl
    (Pics from 15.11.2020) pic.twitter.com/Oc7tBruKGF

    — ANI (@ANI) November 17, 2020 " class="align-text-top noRightClick twitterSection" data=" ">

ಘಟನೆಯ ಬಳಿಕ ನವೆಂಬರ್ 15ರಂದು ನ್ಯಾಯ ಒದಗಿಸುವಂತೆ ಹಾಗೂ ಈ ಕೃತ್ಯ ಎಸಗಿದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಯುವತಿಯ ಕುಟುಂಬಸ್ಥರು ಪಾಟ್ನಾದ ಕಾರ್ಗಿಲ್ ಚೌಕ್‌ನಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದ್ದರು. ಬಳಿಕ ಪೊಲೀಸರ ಆಶ್ವಾಸನೆಯ ಮೇರೆಗೆ ಅಂತ್ಯ ಸಂಸ್ಕಾರ ನಡೆಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.