ETV Bharat / bharat

ಬಡವರ ಬೆವರಿನ ಹಣದಲ್ಲಿ ಸರ್ಕಾರ ಸ್ಯಾನಿಟೈಸರ್​ ತಯಾರಿಸುತ್ತಿದೆ: ರಾಗಾ ವಾಗ್ದಾಳಿ - ಕೊರೊನಾ ವೈರಸ್ ರಾಹುಲ್​ ಗಾಂಧಿ

ದೇಶದಲ್ಲಿ ಉಲ್ಬಣಿಸಿರುವ ಕೊರೊನಾ ಸೋಂಕಿನಿಂದ ಸ್ಯಾನಿಟೈಸರ್​ಗಳಿಗೆ ತೀವ್ರವಾಗಿ ಬೇಡಿಕೆ ಉಂಟಾಗಿದ್ದು, ಶ್ರಮಜೀವಿಗಳ ಹಣವನ್ನು ಉಪಯೋಗಿಸಿಕೊಂಡು ಶ್ರೀಮಂತರ ಕೈಗಳನ್ನು ಸರ್ಕಾರ ಶುಚಿಗೊಳಿಸುತ್ತಿದೆ ಎಂದು ರಾಹುಲ್​ ಗಾಂಧಿ ಕಿಡಿ ಕಾರಿದ್ದಾರೆ.

Rahul
ರಾಗಾ ವಾಗ್ದಾಳಿ
author img

By

Published : Apr 21, 2020, 3:20 PM IST

ನವದೆಹಲಿ: ದೇಶದಲ್ಲಿ ಆವರಿಸಿಗೊಂಡ ಕೊರೊನಾ ವೈರಸ್​ ಎಂಬ ಮಹಾಮಾರಿಯಿಂದಾಗಿ ಬಡವರು, ಮಧ್ಯಮ ವರ್ಗದವರು ಹಾಗೂ ಕೂಲಿ ಕಾರ್ಮಿಕರುಗಳು ಹಸಿವಿನಿಂದ ಬಳಲತ್ತಿದ್ದರೆ, ಇತ್ತ ಸರ್ಕಾರ ಮಾತ್ರ ಬಡವರು ಬೆವರಿ ಸುರಿಸಿ ದುಡಿದ ಹಣದಿಂದಾಗಿ ಸ್ಯಾನಿಟೈಸರ್​ಗಳನ್ನು ತಯಾರಿಸುವಲ್ಲಿ ನಿರತವಾಗಿದೆ ಎಂದು ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.

ಇದ್ದಕ್ಕಿದ್ದಂತೆ ಭಾರತ ದೇಶದಲ್ಲಿ ವ್ಯಾಪಿಸಿದ ಕೊರೊನಾ ವೈರಸ್​ನಿಂದಾಗಿ ಸ್ಯಾನಿಟೈಸರ್​ಗಳಿಗೆ ಎಂದಿಲ್ಲಿದ ಬೇಡಿಕೆ ಬಂದಿದೆ. ಮಾರುಕಟ್ಟೆಯಲ್ಲಿ ಸ್ಯಾನಿಟೈಸರ್​ಗಳು ಮಾರಾಟವಾದಷ್ಟು ಬೇರಾವು ವಸ್ತುವೂ ಮಾರಾಟವಾಗುತ್ತಿಲ್ಲ. ಸ್ಯಾನಿಟೈಸರ್​​ನಿಂದ ಕೈಗಳನ್ನು ಶುಚಿಗೊಳಿಸಿದರೆ ಕೊರನಾ ವೈರಸ್​ ತಗುಲುವುದಿಲ್ಲ ಎಂಬ ಕಾರಣಕ್ಕೆ ಜನರು ಈ ಉತ್ಪನ್ನಕ್ಕೆ ಅತೀ ಹೆಚ್ಚಾಗಿ ಮುಗಿಬೀಳುತ್ತಿದ್ದಾರೆ ಎಂದು ಗಾಂಧಿ ಹೇಳಿದ್ದಾರೆ.

ಭಾರತದಲ್ಲಿನ ಬಡವರು ಯಾವಾಗ ಎಚ್ಚೆತ್ತುಕೊಳ್ಳುತ್ತಾರೆ ಎಂಬುದು ತಿಳಿಯದಾಗಿದೆ. ನೀವು ಹಸಿವಿನಿಂದ ಸಾಯುತ್ತಿದ್ದೀರಿ, ಆದರೆ ನಿಮ್ಮ ದುಡಿಮೆಯ ಪಾಲಿನಿಂದ ಸ್ಯಾನಿಟೈಸರ್​ಗಳನ್ನು ತಯಾರಿಸಿ ಶ್ರೀಮಂತರ ಕೈಗಳಲ್ಲಿನ ಸೋಂಕುಗಳನ್ನು ನಿವಾರಣೆ ಮಾಡುವಲ್ಲಿ ಸರ್ಕಾರ ನಿರತವಾಗಿದೆ ಎಂದು ರಾಹುಲ್​ ಗಾಂಧಿ ಟ್ವೀಟ್​ ಮೂಲಕ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.

ಕೋವಿಡ್​-19 ಚಿಕಿತ್ಸೆಗೆ ಸಂಬಂಧಿಸಿದಂತೆ ಸಣ್ಣ ಮತ್ತು ದೊಡ್ಡ ಉಪಕರಣಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ ವಿಧಿಸಬೇಡಿ ಎಂದು ಈ ಹಿಂದೆ ರಾಹುಲ್​ ಗಾಂಧಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಅದಲ್ಲದೆ, ಕೊರೊನಾ ವೈರಸ್​​ ಬಿಕ್ಕಟ್ಟನ್ನು ತಡೆಗಟ್ಟಲು ಕೋವಿಡ್​-19 ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಲು ವಯಾನಾಡಿನ ಶಾಸಕರು ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ರಾಗಾ ಉಲ್ಲೇಖಿಸಿದ್ದಾರೆ.

ನವದೆಹಲಿ: ದೇಶದಲ್ಲಿ ಆವರಿಸಿಗೊಂಡ ಕೊರೊನಾ ವೈರಸ್​ ಎಂಬ ಮಹಾಮಾರಿಯಿಂದಾಗಿ ಬಡವರು, ಮಧ್ಯಮ ವರ್ಗದವರು ಹಾಗೂ ಕೂಲಿ ಕಾರ್ಮಿಕರುಗಳು ಹಸಿವಿನಿಂದ ಬಳಲತ್ತಿದ್ದರೆ, ಇತ್ತ ಸರ್ಕಾರ ಮಾತ್ರ ಬಡವರು ಬೆವರಿ ಸುರಿಸಿ ದುಡಿದ ಹಣದಿಂದಾಗಿ ಸ್ಯಾನಿಟೈಸರ್​ಗಳನ್ನು ತಯಾರಿಸುವಲ್ಲಿ ನಿರತವಾಗಿದೆ ಎಂದು ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.

ಇದ್ದಕ್ಕಿದ್ದಂತೆ ಭಾರತ ದೇಶದಲ್ಲಿ ವ್ಯಾಪಿಸಿದ ಕೊರೊನಾ ವೈರಸ್​ನಿಂದಾಗಿ ಸ್ಯಾನಿಟೈಸರ್​ಗಳಿಗೆ ಎಂದಿಲ್ಲಿದ ಬೇಡಿಕೆ ಬಂದಿದೆ. ಮಾರುಕಟ್ಟೆಯಲ್ಲಿ ಸ್ಯಾನಿಟೈಸರ್​ಗಳು ಮಾರಾಟವಾದಷ್ಟು ಬೇರಾವು ವಸ್ತುವೂ ಮಾರಾಟವಾಗುತ್ತಿಲ್ಲ. ಸ್ಯಾನಿಟೈಸರ್​​ನಿಂದ ಕೈಗಳನ್ನು ಶುಚಿಗೊಳಿಸಿದರೆ ಕೊರನಾ ವೈರಸ್​ ತಗುಲುವುದಿಲ್ಲ ಎಂಬ ಕಾರಣಕ್ಕೆ ಜನರು ಈ ಉತ್ಪನ್ನಕ್ಕೆ ಅತೀ ಹೆಚ್ಚಾಗಿ ಮುಗಿಬೀಳುತ್ತಿದ್ದಾರೆ ಎಂದು ಗಾಂಧಿ ಹೇಳಿದ್ದಾರೆ.

ಭಾರತದಲ್ಲಿನ ಬಡವರು ಯಾವಾಗ ಎಚ್ಚೆತ್ತುಕೊಳ್ಳುತ್ತಾರೆ ಎಂಬುದು ತಿಳಿಯದಾಗಿದೆ. ನೀವು ಹಸಿವಿನಿಂದ ಸಾಯುತ್ತಿದ್ದೀರಿ, ಆದರೆ ನಿಮ್ಮ ದುಡಿಮೆಯ ಪಾಲಿನಿಂದ ಸ್ಯಾನಿಟೈಸರ್​ಗಳನ್ನು ತಯಾರಿಸಿ ಶ್ರೀಮಂತರ ಕೈಗಳಲ್ಲಿನ ಸೋಂಕುಗಳನ್ನು ನಿವಾರಣೆ ಮಾಡುವಲ್ಲಿ ಸರ್ಕಾರ ನಿರತವಾಗಿದೆ ಎಂದು ರಾಹುಲ್​ ಗಾಂಧಿ ಟ್ವೀಟ್​ ಮೂಲಕ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.

ಕೋವಿಡ್​-19 ಚಿಕಿತ್ಸೆಗೆ ಸಂಬಂಧಿಸಿದಂತೆ ಸಣ್ಣ ಮತ್ತು ದೊಡ್ಡ ಉಪಕರಣಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ ವಿಧಿಸಬೇಡಿ ಎಂದು ಈ ಹಿಂದೆ ರಾಹುಲ್​ ಗಾಂಧಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಅದಲ್ಲದೆ, ಕೊರೊನಾ ವೈರಸ್​​ ಬಿಕ್ಕಟ್ಟನ್ನು ತಡೆಗಟ್ಟಲು ಕೋವಿಡ್​-19 ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಲು ವಯಾನಾಡಿನ ಶಾಸಕರು ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ರಾಗಾ ಉಲ್ಲೇಖಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.