ETV Bharat / bharat

ರೈಲು ಸಾಗುತ್ತಿದ್ದ ಹಳಿಯ ಮೇಲೆ ಉರುಳಿತು ಹೆಬ್ಬಂಡೆ! ಆಮೇಲೇನಾಯ್ತು? - undefined

ಮುಂಬೈ-ಪುಣೆ ಮಾರ್ಗದ ಘಾಟ್​ ಸೆಕ್ಷನ್​ನ ಲೊನವಲ ಎಂಬಲ್ಲಿ ಹಳಿ ಮೇಲೆ ನಿನ್ನೆ ರಾತ್ರಿ 8:15 ರ ಸುಮಾರಿಗೆ ದೊಡ್ಡ ಬಂಡೆಯೊಂದು ಉರುಳಿಬಿದ್ದಿದೆ. ಇದೇ ಸಮಯಕ್ಕೆ ಆ ಮಾರ್ಗದಲ್ಲಿ ಮುಂಬೈ-ಕೊಲ್ಲಾಪುರ ಸಹ್ಯಾದ್ರಿ ಎಕ್ಸ್​ಪ್ರೆಸ್​ ರೈಲು ಸಾಗುತ್ತಿತ್ತು. ಸಿಸಿಟಿವಿ ಸಿಬ್ಬಂದಿ ಎಚ್ಚರಿಸದೇ ಇದ್ದರೆ ರೈಲು, ಬಂಡೆಗೆ ಗುದ್ದಿ ಭಾರಿ ಅನಾಹುತವೇ ಸಂಭವಿಸುತ್ತಿತ್ತು.

CCTV
author img

By

Published : Jun 14, 2019, 8:05 PM IST

ಮುಂಬೈ: ರೈಲು ಸಾಗುತ್ತಿದ್ದ ವೇಳೆ ಹಳಿ ಮೇಲೆ ದೊಡ್ಡ ಬಂಡೆಯೊಂದು ಉರುಳಿಬಿದ್ದಿದ್ದು, ಸಿಸಿಟಿವಿ ನಿರ್ವಹಣಾ ಸಿಬ್ಬಂದಿ ಸಕಾಲದಲ್ಲಿ ಎಚ್ಚರಿಸಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದೆ.

ಮುಂಬೈ-ಪುಣೆ ಮಾರ್ಗದ ಘಾಟ್​ ಸೆಕ್ಷನ್​ನ ಲೊನವಲ ಎಂಬಲ್ಲಿ ಹಳಿ ಮೇಲೆ ನಿನ್ನೆ ರಾತ್ರಿ 8:15 ರ ಸುಮಾರಿಗೆ ದೊಡ್ಡ ಬಂಡೆಯೊಂದು ಉರುಳಿಬಿದ್ದಿದೆ. ಇದೇ ಸಮಯಕ್ಕೆ ಆ ಮಾರ್ಗದಲ್ಲಿ ಮುಂಬೈ-ಕೊಲ್ಲಾಪುರ ಸಹ್ಯಾದ್ರಿ ಎಕ್ಸ್​ಪ್ರೆಸ್​ ರೈಲು ಸಾಗುತ್ತಿತ್ತು. ಸಿಸಿಟಿವಿ ಸಿಬ್ಬಂದಿ ಎಚ್ಚರಿಸದೇ ಇದ್ದರೆ ರೈಲು ಬಂಡೆಗೆ ಗುದ್ದಿ ದೊಡ್ಡ ಅನಾಹುತವೇ ಸಂಭವಿಸುತಿತ್ತು.

  • #WATCH Maharashtra: A boulder fell on the railway tracks near Lonavala, around 8 pm on 13 June. Mumbai-Kolhapur 11023 Sahyadri Express was delayed for around 2 hours due to the boulder. All lines were made operational by 11 pm. (Video source: Central Railway CPRO) pic.twitter.com/Jbq3iOSyRe

    — ANI (@ANI) June 13, 2019 " class="align-text-top noRightClick twitterSection" data=" ">

ಆದರೆ ಅದೇ ಸ್ಥಳದಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ಬಂಡೆ ಉರುಳಿದ ದೃಶ್ಯವನ್ನು ನಿರ್ವಹಣಾ ಸಿಬ್ಬಂದಿ ಗಮನಿಸಿ, ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ವಿಚ್ ಆಫ್ ಆಗಿದ್ದ ಓವರ್​ಹೆಡ್​ ಸಾಧನಕ್ಕೆ ತಕ್ಷಣ ವಿದ್ಯುತ್ ಪೂರೈಸಿ, ಈ ಮಾರ್ಗವಾಗಿ ಬರುತ್ತಿದ್ದ ಇತರೆ ರೈಲುಗಳಿಗೂ ಅಪಾಯದ ಮುನ್ಸೂಚನೆ ನೀಡಿದ್ದಾರೆ ಎಂದು ಕೇಂದ್ರೀಯ ರೈಲ್ವೆ ಮುಖ್ಯ ವಕ್ತಾರ ಸುನಿಲ್ ಉದಾಸಿ ಹೇಳಿದರು.

ಬಂಡೆ ಉರುಳಿದ ಸ್ಥಳದಿಂದ ದೂರದಲ್ಲಿ ನಿಂತಿದ್ದ ರೈಲು ಎರಡು ಗಂಟೆಗಳ ತರುವಾಯ ಅಲ್ಲಿಂದ ತಕುರ್ವಾಡಿಗೆ ತೆರಳಿತು. ರಾತ್ರಿ 10:30ಕ್ಕೆ ಕೊಲ್ಲಾಪುರದತ್ತ ಪ್ರಯಾಣ ಬೆಳೆಸಿತು. ಪ್ರಯಾಣಿಕರಿಗೆ ತೊಂದರೆಯಾಗದಂತೆ, ನೀರು, ತಿಂಡಿ ವ್ಯವಸ್ಥೆ ಮಾಡಲಾಗಿತ್ತು ಎಂದರು.

ಬೃಹತ್ ಬಂಡೆಯು 2.3 ಮೀಟರ್​ ಉದ್ದ, 1.6 ಮೀಟರ್​ ಎತ್ತರ ಹಾಗೂ 2.2 ವಿಸ್ತೀರ್ಣವಿತ್ತು ಎಂದೂ ತಿಳಿಸಿದರು.

ಮುಂಬೈ: ರೈಲು ಸಾಗುತ್ತಿದ್ದ ವೇಳೆ ಹಳಿ ಮೇಲೆ ದೊಡ್ಡ ಬಂಡೆಯೊಂದು ಉರುಳಿಬಿದ್ದಿದ್ದು, ಸಿಸಿಟಿವಿ ನಿರ್ವಹಣಾ ಸಿಬ್ಬಂದಿ ಸಕಾಲದಲ್ಲಿ ಎಚ್ಚರಿಸಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದೆ.

ಮುಂಬೈ-ಪುಣೆ ಮಾರ್ಗದ ಘಾಟ್​ ಸೆಕ್ಷನ್​ನ ಲೊನವಲ ಎಂಬಲ್ಲಿ ಹಳಿ ಮೇಲೆ ನಿನ್ನೆ ರಾತ್ರಿ 8:15 ರ ಸುಮಾರಿಗೆ ದೊಡ್ಡ ಬಂಡೆಯೊಂದು ಉರುಳಿಬಿದ್ದಿದೆ. ಇದೇ ಸಮಯಕ್ಕೆ ಆ ಮಾರ್ಗದಲ್ಲಿ ಮುಂಬೈ-ಕೊಲ್ಲಾಪುರ ಸಹ್ಯಾದ್ರಿ ಎಕ್ಸ್​ಪ್ರೆಸ್​ ರೈಲು ಸಾಗುತ್ತಿತ್ತು. ಸಿಸಿಟಿವಿ ಸಿಬ್ಬಂದಿ ಎಚ್ಚರಿಸದೇ ಇದ್ದರೆ ರೈಲು ಬಂಡೆಗೆ ಗುದ್ದಿ ದೊಡ್ಡ ಅನಾಹುತವೇ ಸಂಭವಿಸುತಿತ್ತು.

  • #WATCH Maharashtra: A boulder fell on the railway tracks near Lonavala, around 8 pm on 13 June. Mumbai-Kolhapur 11023 Sahyadri Express was delayed for around 2 hours due to the boulder. All lines were made operational by 11 pm. (Video source: Central Railway CPRO) pic.twitter.com/Jbq3iOSyRe

    — ANI (@ANI) June 13, 2019 " class="align-text-top noRightClick twitterSection" data=" ">

ಆದರೆ ಅದೇ ಸ್ಥಳದಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ಬಂಡೆ ಉರುಳಿದ ದೃಶ್ಯವನ್ನು ನಿರ್ವಹಣಾ ಸಿಬ್ಬಂದಿ ಗಮನಿಸಿ, ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ವಿಚ್ ಆಫ್ ಆಗಿದ್ದ ಓವರ್​ಹೆಡ್​ ಸಾಧನಕ್ಕೆ ತಕ್ಷಣ ವಿದ್ಯುತ್ ಪೂರೈಸಿ, ಈ ಮಾರ್ಗವಾಗಿ ಬರುತ್ತಿದ್ದ ಇತರೆ ರೈಲುಗಳಿಗೂ ಅಪಾಯದ ಮುನ್ಸೂಚನೆ ನೀಡಿದ್ದಾರೆ ಎಂದು ಕೇಂದ್ರೀಯ ರೈಲ್ವೆ ಮುಖ್ಯ ವಕ್ತಾರ ಸುನಿಲ್ ಉದಾಸಿ ಹೇಳಿದರು.

ಬಂಡೆ ಉರುಳಿದ ಸ್ಥಳದಿಂದ ದೂರದಲ್ಲಿ ನಿಂತಿದ್ದ ರೈಲು ಎರಡು ಗಂಟೆಗಳ ತರುವಾಯ ಅಲ್ಲಿಂದ ತಕುರ್ವಾಡಿಗೆ ತೆರಳಿತು. ರಾತ್ರಿ 10:30ಕ್ಕೆ ಕೊಲ್ಲಾಪುರದತ್ತ ಪ್ರಯಾಣ ಬೆಳೆಸಿತು. ಪ್ರಯಾಣಿಕರಿಗೆ ತೊಂದರೆಯಾಗದಂತೆ, ನೀರು, ತಿಂಡಿ ವ್ಯವಸ್ಥೆ ಮಾಡಲಾಗಿತ್ತು ಎಂದರು.

ಬೃಹತ್ ಬಂಡೆಯು 2.3 ಮೀಟರ್​ ಉದ್ದ, 1.6 ಮೀಟರ್​ ಎತ್ತರ ಹಾಗೂ 2.2 ವಿಸ್ತೀರ್ಣವಿತ್ತು ಎಂದೂ ತಿಳಿಸಿದರು.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.