ETV Bharat / bharat

ಆ್ಯಂಬುಲೆನ್ಸ್​​ನೊಂದಿಗೆ ಆಸ್ಪತ್ರೆಯಿಂದ ರೋಗಿ ಪರಾರಿ... ಸಿಕ್ಕಿಬಿದ್ದಿದ್ದು ಹೇಗೆ?

ರಸ್ತೆ ಅಪಘಾತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬ ಪ್ಲಾಸ್ಟರ್​ ಆಗಿರುವ ಕೈಯಲ್ಲೇ ಆ್ಯಂಬುಲೆನ್ಸ್ ಚಾಲನೆ ಮಾಡಿಕೊಂಡು ಎಸ್ಕೇಪ್​ ಆಗಿ ಸಿಕ್ಕಿಬಿದ್ದಿದ್ದಾನೆ.

author img

By

Published : Apr 22, 2020, 6:35 PM IST

amravati
ಆ್ಯಂಬುಲೆನ್ಸ್​​ನೊಂದಿಗೆ ಆಸ್ಪತ್ರೆಯಿಂದ ರೋಗಿ ಪರಾರಿ

ಅಮರಾವತಿ (ಮಹಾರಾಷ್ಟ್ರ): ರಸ್ತೆ ಅಪಘಾತಕ್ಕೊಳಗಾಗಿ ಅಮರಾವತಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬ ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಿದ್ದ ಆ್ಯಂಬುಲೆನ್ಸ್​​ ಅನ್ನು ವೇಗವಾಗಿ ಚಾಲನೆ ಮಾಡಿಕೊಂಡು ಪರಾರಿಯಾಗಿದ್ದಾನೆ.

ಪರಾರಿಯಾದ ರೋಗಿಯನ್ನು ಶರದ್ ಕಟಾಡೆ ಎಂದು ಗುರುತಿಸಲಾಗಿದ್ದು, ಪ್ಲಾಸ್ಟರ್​ ಆಗಿರುವ ಕೈಯಲ್ಲೇ ಆ್ಯಂಬುಲೆನ್ಸ್ ಚಾಲನೆ ಮಾಡಿದ್ದಾನೆ. ಈ ವೇಳೆ ಮೂರು ಫ್ಲೈಓವರ್‌ಗಳನ್ನು ದಾಟಿ ಬದ್ನೆರಾ ವರಗೂ ಹೋಗಿದ್ದಾನೆ. ಆದರೆ, ಬದ್ನೆರಾರದಲ್ಲಿ ಕಾರ್ಪೋರೇಟರ್ ಪ್ರಕಾಶ್ ಬನ್ಸೋಡ್ ಎಂಬವರು ಪೌರ ಕಾರ್ಮಿಕರೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವಾಗ ಕೈಯಲ್ಲಿ ಪ್ಲಾಸ್ಟರ್​ ಇರುವ ಚಾಲಕ ವೇಗವಾಗಿ ಆ್ಯಂಬುಲೆನ್ಸ್​​ ಚಲಾಯಿಸುತ್ತಿರುವುದನ್ನು ಗಮನಿದ್ದಾರೆ. ಕಾರ್ಮಿಕರ ಸಹಾಯದಿಂದ ಆ್ಯಂಬುಲೆನ್ಸ್ ಅಡ್ಡಗಟ್ಟಿ ತಡೆದಿದ್ದು, ಬದ್ನೆರಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸದ್ಯ ಶರದ್​ನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಮರಾವತಿ (ಮಹಾರಾಷ್ಟ್ರ): ರಸ್ತೆ ಅಪಘಾತಕ್ಕೊಳಗಾಗಿ ಅಮರಾವತಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬ ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಿದ್ದ ಆ್ಯಂಬುಲೆನ್ಸ್​​ ಅನ್ನು ವೇಗವಾಗಿ ಚಾಲನೆ ಮಾಡಿಕೊಂಡು ಪರಾರಿಯಾಗಿದ್ದಾನೆ.

ಪರಾರಿಯಾದ ರೋಗಿಯನ್ನು ಶರದ್ ಕಟಾಡೆ ಎಂದು ಗುರುತಿಸಲಾಗಿದ್ದು, ಪ್ಲಾಸ್ಟರ್​ ಆಗಿರುವ ಕೈಯಲ್ಲೇ ಆ್ಯಂಬುಲೆನ್ಸ್ ಚಾಲನೆ ಮಾಡಿದ್ದಾನೆ. ಈ ವೇಳೆ ಮೂರು ಫ್ಲೈಓವರ್‌ಗಳನ್ನು ದಾಟಿ ಬದ್ನೆರಾ ವರಗೂ ಹೋಗಿದ್ದಾನೆ. ಆದರೆ, ಬದ್ನೆರಾರದಲ್ಲಿ ಕಾರ್ಪೋರೇಟರ್ ಪ್ರಕಾಶ್ ಬನ್ಸೋಡ್ ಎಂಬವರು ಪೌರ ಕಾರ್ಮಿಕರೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವಾಗ ಕೈಯಲ್ಲಿ ಪ್ಲಾಸ್ಟರ್​ ಇರುವ ಚಾಲಕ ವೇಗವಾಗಿ ಆ್ಯಂಬುಲೆನ್ಸ್​​ ಚಲಾಯಿಸುತ್ತಿರುವುದನ್ನು ಗಮನಿದ್ದಾರೆ. ಕಾರ್ಮಿಕರ ಸಹಾಯದಿಂದ ಆ್ಯಂಬುಲೆನ್ಸ್ ಅಡ್ಡಗಟ್ಟಿ ತಡೆದಿದ್ದು, ಬದ್ನೆರಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸದ್ಯ ಶರದ್​ನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.