ETV Bharat / bharat

ಅಚ್ಚರಿ... ಅಯೋಧ್ಯೆಯಲ್ಲಿ ಪತ್ತೆಯಾದವು ಶಿವಲಿಂಗದ ವಿಶೇಷ ಅವಶೇಷಗಳು!

ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಮಂದಿರ ನಿರ್ಮಾಣದ ಕಾರ್ಯ ಪ್ರಾರಂಭವಾಗಿದೆ. ಈ ಮಧ್ಯೆ ದೇವಾಲಯದ ಸ್ಥಳದಲ್ಲಿ ಹಲವು ವಿಶೇಷ ಅವಶೇಷಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

author img

By

Published : May 21, 2020, 2:36 PM IST

Updated : May 21, 2020, 4:04 PM IST

Shiva Linga
ಅಯೋಧ್ಯೆ

ಅಯೋಧ್ಯೆ (ಉತ್ತರ ಪ್ರದೇಶ): ಕೊರೊನಾ ವೈರಸ್​ ಲಾಕ್​ಡೌನ್​ನಿಂದಾಗಿ ಆಯೋಧ್ಯೆಯ ರಾಮಮಂದಿರದ ನಿರ್ಮಾಣ ಕಾರ್ಯ ಸ್ಥಗಿತಗೊಂಡಿತ್ತು. ಲಾಕ್​ಡೌನ್​ ಕೊಂಚ ಸಡಿಲಿಕೆ ನೀಡಿದ ಬಳಿಕ ಈ ಕೆಲಸ ಪುನಃ ಪ್ರಾರಂಭವಾಗಿದ್ದು, ಭೂಮಿ ಸಮತಟ್ಟು ಮಾಡುವಾಗ ಶಿವಲಿಂಗದ ವಿಶೇಷ ಅವಶೇಷಗಳು ಪತ್ತೆಯಾಗಿವೆ ಎಂದು ವಿಶ್ವ ಹಿಂದೂ ಪರಿಷತ್​ನ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ತಿಳಿಸಿದ್ದಾರೆ.

Ayodhya Ram Temple
ಅಯೋಧ್ಯೆಯಲ್ಲಿ ಪತ್ತೆಯಾದ ಅವಶೇಷಗಳು

ಕಳೆದ ಎರಡು ತಿಂಗಳಿನಿಂದ ಕೊರೊನಾ ವೈರಸ್​ ಪ್ರೇರಿತ ಲಾಕ್‌ಡೌನ್​ನಿಂದಾಗಿ ರಾಮ ಮಂದಿರದ ಕಾರ್ಯ ನಿಂತು ಹೋಗಿತ್ತು. ಆದರೆ ಅಯೋಧ್ಯೆ ಕಳೆದ ವಾರವಷ್ಟೇ ಅನುಮತಿ ಪಡೆದು, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​​ನಿಂದ ರಾಮಮಂದಿರ ನಿರ್ಮಾಣಕ್ಕೆ ಸಿದ್ಧತೆಗಳು ಪ್ರಾರಂಭವಾಗಿವೆ.

Ayodhya Ram Temple
ಅಯೋಧ್ಯೆಯಲ್ಲಿ ಪತ್ತೆಯಾದ ಅವಶೇಷಗಳು

ಕೊರೊನಾ ಹರಡುವಿಕೆಯ ಕಾರಣದಿಂದಾಗಿ ಈ ಸ್ಥಳಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳಾದ ಸಾಮಾಜಿಕ ಅಂತರದೊಂದಿಗೆ ಮೂರು ಅರ್ಥ್​ ಮೂವರ್​ ಯಂತ್ರ, ಒಂದು ಕ್ರೇನ್, ಎರಡು ಟ್ರಾಕ್ಟರ್​ಗಳು ಮತ್ತು ಹತ್ತು ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಮೇ 11 ರಿಂದ ಈ ಸ್ಥಳದಲ್ಲಿ ಹಳೆಯ ಕೆಲಸವನ್ನು ಪುನಾರಂಭಿಸಿದ್ದು, ಹಿಂದೂ ದೇವರು ಮತ್ತು ದೇವತೆಗಳ ವಿಗ್ರಹಗಳು ಹಾಗೂ ಕೆಲವು ಪ್ರಾಚೀನ ಅವಶೇಷಗಳು ಇಲ್ಲಿ ದೊರೆತಿವೆ ಎಂದು ವಿನೋದ್​​ ಬನ್ಸಾಲ್ ಹೇಳಿದ್ದಾರೆ.

Ayodhya Ram Temple
ಅಯೋಧ್ಯೆಯಲ್ಲಿ ಪತ್ತೆಯಾದ ಅವಶೇಷಗಳು

ಪುರಾತನ ಹೂವಿನ ಹೂದಾನಿ, ಕಮಾನಿನ ಕಲ್ಲುಗಳು, ಕಪ್ಪು ಸ್ಪರ್ಶ ಕಲ್ಲಿನಿಂದ ಮಾಡಿದ ಏಳು ಸ್ತಂಭಗಳು, ಕೆಂಪು ಕಲ್ಲಿನ ಆರು ಕಂಬಗಳು ಮತ್ತು ಐದು ಅಡಿ ಎತ್ತರದ ಕೆತ್ತಿದ ಶಿವಲಿಂಗ ಈಗಾಗಲೇ ಈ ಸ್ಥಳದಲ್ಲಿ ನಮಗೆ ದೊರೆತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದಲ್ಲದೆ, ಮರಳುಗಲ್ಲಿನ ಕೆತ್ತನೆಗಳು, ಕಂಬಗಳು ಹಾಗೂ ಶಿವಲಿಂಗ ಸಹ ಈ ಸ್ಥಳದಲ್ಲಿ ಕಂಡುಬಂದಿವೆ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಹೇಳಿದರು.

Ayodhya Ram Temple
ಅಯೋಧ್ಯೆಯಲ್ಲಿ ಪತ್ತೆಯಾದ ಅವಶೇಷಗಳು

ಈ ಹಿಂದೆ ಹೈಕೋರ್ಟ್‌ನ ನೀಡಿದ ನಿರ್ದೇಶನದ ಮೇರೆಗೆ ಸ್ಥಳದಲ್ಲಿ ಹೂಳೆತ್ತುವ ಕೆಲಸ ನಡೆಸಿದಾಗ ಅಂತಹ ಅವಶೇಷಗಳು ದೊರೆತಿವೆ. ಈಗ ಕೆಲಸ ಪುನಾರಂಭಗೊಂಡಿದ್ದು, ಇನ್ನಷ್ಟು ವಸ್ತುಗಳನ್ನು ಹುಡುಕಲಾಗುತ್ತಿದೆ ಹಾಗೂ ಎಲ್ಲಾ ಕಲಾಕೃತಿಗಳನ್ನು ಜಾಗ್ರತೆಯಿಂದ ಸಂರಕ್ಷಿಸಲಾಗುತ್ತಿದೆ ಎಂದು ಬನ್ಸಾಲ್ ಹೇಳಿದ್ದಾರೆ.

ಅಯೋಧ್ಯೆ (ಉತ್ತರ ಪ್ರದೇಶ): ಕೊರೊನಾ ವೈರಸ್​ ಲಾಕ್​ಡೌನ್​ನಿಂದಾಗಿ ಆಯೋಧ್ಯೆಯ ರಾಮಮಂದಿರದ ನಿರ್ಮಾಣ ಕಾರ್ಯ ಸ್ಥಗಿತಗೊಂಡಿತ್ತು. ಲಾಕ್​ಡೌನ್​ ಕೊಂಚ ಸಡಿಲಿಕೆ ನೀಡಿದ ಬಳಿಕ ಈ ಕೆಲಸ ಪುನಃ ಪ್ರಾರಂಭವಾಗಿದ್ದು, ಭೂಮಿ ಸಮತಟ್ಟು ಮಾಡುವಾಗ ಶಿವಲಿಂಗದ ವಿಶೇಷ ಅವಶೇಷಗಳು ಪತ್ತೆಯಾಗಿವೆ ಎಂದು ವಿಶ್ವ ಹಿಂದೂ ಪರಿಷತ್​ನ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ತಿಳಿಸಿದ್ದಾರೆ.

Ayodhya Ram Temple
ಅಯೋಧ್ಯೆಯಲ್ಲಿ ಪತ್ತೆಯಾದ ಅವಶೇಷಗಳು

ಕಳೆದ ಎರಡು ತಿಂಗಳಿನಿಂದ ಕೊರೊನಾ ವೈರಸ್​ ಪ್ರೇರಿತ ಲಾಕ್‌ಡೌನ್​ನಿಂದಾಗಿ ರಾಮ ಮಂದಿರದ ಕಾರ್ಯ ನಿಂತು ಹೋಗಿತ್ತು. ಆದರೆ ಅಯೋಧ್ಯೆ ಕಳೆದ ವಾರವಷ್ಟೇ ಅನುಮತಿ ಪಡೆದು, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​​ನಿಂದ ರಾಮಮಂದಿರ ನಿರ್ಮಾಣಕ್ಕೆ ಸಿದ್ಧತೆಗಳು ಪ್ರಾರಂಭವಾಗಿವೆ.

Ayodhya Ram Temple
ಅಯೋಧ್ಯೆಯಲ್ಲಿ ಪತ್ತೆಯಾದ ಅವಶೇಷಗಳು

ಕೊರೊನಾ ಹರಡುವಿಕೆಯ ಕಾರಣದಿಂದಾಗಿ ಈ ಸ್ಥಳಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳಾದ ಸಾಮಾಜಿಕ ಅಂತರದೊಂದಿಗೆ ಮೂರು ಅರ್ಥ್​ ಮೂವರ್​ ಯಂತ್ರ, ಒಂದು ಕ್ರೇನ್, ಎರಡು ಟ್ರಾಕ್ಟರ್​ಗಳು ಮತ್ತು ಹತ್ತು ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಮೇ 11 ರಿಂದ ಈ ಸ್ಥಳದಲ್ಲಿ ಹಳೆಯ ಕೆಲಸವನ್ನು ಪುನಾರಂಭಿಸಿದ್ದು, ಹಿಂದೂ ದೇವರು ಮತ್ತು ದೇವತೆಗಳ ವಿಗ್ರಹಗಳು ಹಾಗೂ ಕೆಲವು ಪ್ರಾಚೀನ ಅವಶೇಷಗಳು ಇಲ್ಲಿ ದೊರೆತಿವೆ ಎಂದು ವಿನೋದ್​​ ಬನ್ಸಾಲ್ ಹೇಳಿದ್ದಾರೆ.

Ayodhya Ram Temple
ಅಯೋಧ್ಯೆಯಲ್ಲಿ ಪತ್ತೆಯಾದ ಅವಶೇಷಗಳು

ಪುರಾತನ ಹೂವಿನ ಹೂದಾನಿ, ಕಮಾನಿನ ಕಲ್ಲುಗಳು, ಕಪ್ಪು ಸ್ಪರ್ಶ ಕಲ್ಲಿನಿಂದ ಮಾಡಿದ ಏಳು ಸ್ತಂಭಗಳು, ಕೆಂಪು ಕಲ್ಲಿನ ಆರು ಕಂಬಗಳು ಮತ್ತು ಐದು ಅಡಿ ಎತ್ತರದ ಕೆತ್ತಿದ ಶಿವಲಿಂಗ ಈಗಾಗಲೇ ಈ ಸ್ಥಳದಲ್ಲಿ ನಮಗೆ ದೊರೆತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದಲ್ಲದೆ, ಮರಳುಗಲ್ಲಿನ ಕೆತ್ತನೆಗಳು, ಕಂಬಗಳು ಹಾಗೂ ಶಿವಲಿಂಗ ಸಹ ಈ ಸ್ಥಳದಲ್ಲಿ ಕಂಡುಬಂದಿವೆ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಹೇಳಿದರು.

Ayodhya Ram Temple
ಅಯೋಧ್ಯೆಯಲ್ಲಿ ಪತ್ತೆಯಾದ ಅವಶೇಷಗಳು

ಈ ಹಿಂದೆ ಹೈಕೋರ್ಟ್‌ನ ನೀಡಿದ ನಿರ್ದೇಶನದ ಮೇರೆಗೆ ಸ್ಥಳದಲ್ಲಿ ಹೂಳೆತ್ತುವ ಕೆಲಸ ನಡೆಸಿದಾಗ ಅಂತಹ ಅವಶೇಷಗಳು ದೊರೆತಿವೆ. ಈಗ ಕೆಲಸ ಪುನಾರಂಭಗೊಂಡಿದ್ದು, ಇನ್ನಷ್ಟು ವಸ್ತುಗಳನ್ನು ಹುಡುಕಲಾಗುತ್ತಿದೆ ಹಾಗೂ ಎಲ್ಲಾ ಕಲಾಕೃತಿಗಳನ್ನು ಜಾಗ್ರತೆಯಿಂದ ಸಂರಕ್ಷಿಸಲಾಗುತ್ತಿದೆ ಎಂದು ಬನ್ಸಾಲ್ ಹೇಳಿದ್ದಾರೆ.

Last Updated : May 21, 2020, 4:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.