ETV Bharat / bharat

ಬಿಗ್​ ರಿಲೀಫ್​​​..! ಚಿದಂಬರಂಗೆ ಜಾಮೀನು ಮಂಜೂರು... 106 ದಿನದ ಜೈಲುವಾಸ ಅಂತ್ಯ

ಜಸ್ಟೀಸ್​ ಆರ್.ಭಾನುಮತಿ ನೇತೃತ್ವ ಪೀಠ ಕಾಂಗ್ರೆಸ್ ನಾಯಕ ಜಾಮೀನು ಅರ್ಜಿಯ ತೀರ್ಪನ್ನು ನ.28ರಂದು ಇಂದಿಗೆ ಕಾಯ್ದಿರಿಸಿತ್ತು. ನ.15ರಂದು ದೆಹಲಿ ಹೈಕೋರ್ಟ್​ ಜಾಮೀನು ನಿರಾಕರಿಸಿದ್ದ ಆದೇಶವನ್ನು ಪ್ರಶ್ನಿಸಿ ಚಿದಂಬರಂ ಸುಪ್ರೀಂ ಮೆಟ್ಟಿಲೇರಿದ್ದರು.

author img

By

Published : Dec 4, 2019, 10:54 AM IST

Updated : Dec 4, 2019, 11:20 AM IST

SC Verdict Today On P Chidambaram's Bail Plea In INX Media Case
ಸುಪ್ರೀಂನಿಂದ ಚಿದಂಬರಂಗೆ ಜಾಮೀನು ಮಂಜೂರು

ನವದೆಹಲಿ: ಐಎನ್​ಎಕ್ಸ್​ ಮೀಡಿಯಾ ಹಗರಣದಲ್ಲಿ ಶಾಮೀಲಾಗಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರಿಗೆ ಇಡಿ ದಾಖಲಿಸಿದ್ದ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ ಜಾಮೀನು ಮಂಜೂರು ಮಾಡಿದೆ.

ಜಾಮೀನು ನೀಡುವ ವೇಳೆ ಸರ್ವೋಚ್ಛ ನ್ಯಾಯಾಲಯ ಕೆಲ ಷರತ್ತುಗಳನ್ನು ವಿಧಿಸಿದೆ. ಚಿದಂಬರಂ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ವ್ಯಕ್ತಿಯ ಮೇಲೂ ಪ್ರಭಾವ ಬೀರುವಂತಿಲ್ಲ ಮತ್ತು ಯಾವುದೇ ಸುದ್ದಿಗೋಷ್ಠಿ ಅಥವಾ ಸಂದರ್ಶನ ನೀಡುವಂತಿಲ್ಲ ಎಂದು ತ್ರಿಸದಸ್ಯ ಪೀಠ ಸೂಚಿಸಿದೆ.

  • Supreme Court grants bail to former Finance Minister & Congress leader P Chidambaram in INX Media money laundering case, registered by the Enforcement Directorate (ED). pic.twitter.com/m2yWKFNOlT

    — ANI (@ANI) December 4, 2019 " class="align-text-top noRightClick twitterSection" data=" ">

ಜಾಮೀನು ಪಡೆಯುವ ವೇಳೆ ಚಿದಂಬರಂ ಅವರು ಎರಡು ಲಕ್ಷ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ನೀಡಬೇಕು. ಕೋರ್ಟ್​ ಅನುಮತಿ ಇಲ್ಲದೆ ಚಿದಂಬರಂ ವಿದೇಶ ಪ್ರಯಾಣ ಮಾಡುವಂತಿಲ್ಲ ಎಂದು ಜಾಮೀನು ಆದೇಶದಲ್ಲಿ ಹೇಳಲಾಗಿದೆ.

ಜಸ್ಟೀಸ್​ ಆರ್.ಭಾನುಮತಿ ನೇತೃತ್ವ ತ್ರಿಸದಸ್ಯ ಪೀಠ ಕಾಂಗ್ರೆಸ್ ನಾಯಕನ ಜಾಮೀನು ಅರ್ಜಿಯ ತೀರ್ಪನ್ನು ಇಂದಿಗೆ ಕಾಯ್ದಿರಿಸಲಾಗಿತ್ತು. ನ.15ರಂದು ದೆಹಲಿ ಹೈಕೋರ್ಟ್​ ಜಾಮೀನು ನಿರಾಕರಿಸಿದ್ದ ಆದೇಶವನ್ನು ಪ್ರಶ್ನಿಸಿ ಚಿದಂಬರಂ ಸುಪ್ರೀಂ ಮೆಟ್ಟಿಲೇರಿದ್ದರು.

  • Supreme Court says P Chidambaram should not temper with the evidence and not influence the witnesses. He should also not give press interviews or make make public statements in connection with this case. https://t.co/JTs5nGBpJd

    — ANI (@ANI) December 4, 2019 " class="align-text-top noRightClick twitterSection" data=" ">

74 ವರ್ಷದ ಚಿದಂಬರಂ ಅವರಿಗೆ ಜಾಮೀನು ನೀಡಿದಲ್ಲಿ ಸಾಕ್ಷಿದಾರರಿಗೆ ಪ್ರಭಾವ ಬೀರುವ ಸಾಧ್ಯತೆ ದಟ್ಟವಾಗಿದೆ ಎಂದು ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯ(ಇಡಿ) ತನ್ನ ವಾದ ಮಂಡಿಸಿತ್ತು. ಆದರೆ ತನಿಖಾ ಸಂಸ್ಥೆ ನನ್ನ ವೈಯಕ್ತಿಕ ಘನತೆಗೆ ಕುಂದು ತರುವಂತಿಲ್ಲ ಎಂದು ಚಿದಂಬರಂ ಪ್ರತಿವಾದ ಮಂಡಿಸಿದ್ದರು.

  • Supreme Court directs P Chidambaram to furnish a bail bond of Rs 2 lakhs along with 2 sureties of the same amount. SC also says Chidambaram can not travel abroad without the Court's permission. https://t.co/JTs5nGBpJd

    — ANI (@ANI) December 4, 2019 " class="align-text-top noRightClick twitterSection" data=" ">

ಇಡಿ ಪರ ವಾದ ಮಂಡಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್​ ತುಷಾರ್ ಮೆಹ್ತಾ, ಇಂತಹ ಆರ್ಥಿಕ ಅಪರಾಧಗಳು ದೇಶದ ಆರ್ಥಿಕತೆ ಪೆಟ್ಟು ನೀಡುವುದು ಮಾತ್ರವಲ್ಲದೆ ವ್ಯವಸ್ಥೆ ಮೇಲಿನ ಜನರ ನಂಬಿಕೆಗಳೂ ನಶಿಸುವಂತೆ ಮಾಡುತ್ತದೆ ಎಂದು ಕೋರ್ಟ್​ ಮುಂದೆ ಹೇಳಿದ್ದರು.

ಚಿದಂಬರಂ ಪರ ವಾದ ಮಂಡಿಸಿದ್ದ ಹಿರಿಯ ವಕೀಲರಾದ ಕಪಿಲ್ ಸಿಬಲ್ ಹಾಗೂ ಅಭಿಷೇಕ್​ ಮನುಸಿಂಘ್ವಿ, ಹಗರಣದ ಸಾಕ್ಷಿದಾರರ ಮೇಲೆ ತಮ್ಮ ಕಕ್ಷಿದಾರ(ಚಿದಂಬರಂ) ಪ್ರಭಾವ ಬೀರಿದ್ದಾರೆ ಎನ್ನುವುದಕ್ಕೆ ಯಾವ ಸಾಕ್ಷ್ಯ ಇದೆ ಎಂದು ಪ್ರಶ್ನೆ ಮಾಡಿದ್ದರು.

ಪಿ.ಚಿದಂಬರಂ ಅವರನ್ನು ಆ.12ರಂದು ಸಿಬಿಐ ರಾತ್ರೋರಾತ್ರಿ ಬಂಧಿಸಿತ್ತು. ಈ ಪ್ರಕರಣದಲ್ಲಿ ಅ.22ರಂದು ಜಾಮೀನು ದೊರೆತಿತ್ತು. ಆದರೆ ಅ.16ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸತತ ಎರಡು ಗಂಟೆ ವಿಚಾರಣೆ ನಡೆಸಿ ಬಂಧಿಸಿತ್ತು.

ನವದೆಹಲಿ: ಐಎನ್​ಎಕ್ಸ್​ ಮೀಡಿಯಾ ಹಗರಣದಲ್ಲಿ ಶಾಮೀಲಾಗಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರಿಗೆ ಇಡಿ ದಾಖಲಿಸಿದ್ದ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ ಜಾಮೀನು ಮಂಜೂರು ಮಾಡಿದೆ.

ಜಾಮೀನು ನೀಡುವ ವೇಳೆ ಸರ್ವೋಚ್ಛ ನ್ಯಾಯಾಲಯ ಕೆಲ ಷರತ್ತುಗಳನ್ನು ವಿಧಿಸಿದೆ. ಚಿದಂಬರಂ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ವ್ಯಕ್ತಿಯ ಮೇಲೂ ಪ್ರಭಾವ ಬೀರುವಂತಿಲ್ಲ ಮತ್ತು ಯಾವುದೇ ಸುದ್ದಿಗೋಷ್ಠಿ ಅಥವಾ ಸಂದರ್ಶನ ನೀಡುವಂತಿಲ್ಲ ಎಂದು ತ್ರಿಸದಸ್ಯ ಪೀಠ ಸೂಚಿಸಿದೆ.

  • Supreme Court grants bail to former Finance Minister & Congress leader P Chidambaram in INX Media money laundering case, registered by the Enforcement Directorate (ED). pic.twitter.com/m2yWKFNOlT

    — ANI (@ANI) December 4, 2019 " class="align-text-top noRightClick twitterSection" data=" ">

ಜಾಮೀನು ಪಡೆಯುವ ವೇಳೆ ಚಿದಂಬರಂ ಅವರು ಎರಡು ಲಕ್ಷ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ನೀಡಬೇಕು. ಕೋರ್ಟ್​ ಅನುಮತಿ ಇಲ್ಲದೆ ಚಿದಂಬರಂ ವಿದೇಶ ಪ್ರಯಾಣ ಮಾಡುವಂತಿಲ್ಲ ಎಂದು ಜಾಮೀನು ಆದೇಶದಲ್ಲಿ ಹೇಳಲಾಗಿದೆ.

ಜಸ್ಟೀಸ್​ ಆರ್.ಭಾನುಮತಿ ನೇತೃತ್ವ ತ್ರಿಸದಸ್ಯ ಪೀಠ ಕಾಂಗ್ರೆಸ್ ನಾಯಕನ ಜಾಮೀನು ಅರ್ಜಿಯ ತೀರ್ಪನ್ನು ಇಂದಿಗೆ ಕಾಯ್ದಿರಿಸಲಾಗಿತ್ತು. ನ.15ರಂದು ದೆಹಲಿ ಹೈಕೋರ್ಟ್​ ಜಾಮೀನು ನಿರಾಕರಿಸಿದ್ದ ಆದೇಶವನ್ನು ಪ್ರಶ್ನಿಸಿ ಚಿದಂಬರಂ ಸುಪ್ರೀಂ ಮೆಟ್ಟಿಲೇರಿದ್ದರು.

  • Supreme Court says P Chidambaram should not temper with the evidence and not influence the witnesses. He should also not give press interviews or make make public statements in connection with this case. https://t.co/JTs5nGBpJd

    — ANI (@ANI) December 4, 2019 " class="align-text-top noRightClick twitterSection" data=" ">

74 ವರ್ಷದ ಚಿದಂಬರಂ ಅವರಿಗೆ ಜಾಮೀನು ನೀಡಿದಲ್ಲಿ ಸಾಕ್ಷಿದಾರರಿಗೆ ಪ್ರಭಾವ ಬೀರುವ ಸಾಧ್ಯತೆ ದಟ್ಟವಾಗಿದೆ ಎಂದು ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯ(ಇಡಿ) ತನ್ನ ವಾದ ಮಂಡಿಸಿತ್ತು. ಆದರೆ ತನಿಖಾ ಸಂಸ್ಥೆ ನನ್ನ ವೈಯಕ್ತಿಕ ಘನತೆಗೆ ಕುಂದು ತರುವಂತಿಲ್ಲ ಎಂದು ಚಿದಂಬರಂ ಪ್ರತಿವಾದ ಮಂಡಿಸಿದ್ದರು.

  • Supreme Court directs P Chidambaram to furnish a bail bond of Rs 2 lakhs along with 2 sureties of the same amount. SC also says Chidambaram can not travel abroad without the Court's permission. https://t.co/JTs5nGBpJd

    — ANI (@ANI) December 4, 2019 " class="align-text-top noRightClick twitterSection" data=" ">

ಇಡಿ ಪರ ವಾದ ಮಂಡಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್​ ತುಷಾರ್ ಮೆಹ್ತಾ, ಇಂತಹ ಆರ್ಥಿಕ ಅಪರಾಧಗಳು ದೇಶದ ಆರ್ಥಿಕತೆ ಪೆಟ್ಟು ನೀಡುವುದು ಮಾತ್ರವಲ್ಲದೆ ವ್ಯವಸ್ಥೆ ಮೇಲಿನ ಜನರ ನಂಬಿಕೆಗಳೂ ನಶಿಸುವಂತೆ ಮಾಡುತ್ತದೆ ಎಂದು ಕೋರ್ಟ್​ ಮುಂದೆ ಹೇಳಿದ್ದರು.

ಚಿದಂಬರಂ ಪರ ವಾದ ಮಂಡಿಸಿದ್ದ ಹಿರಿಯ ವಕೀಲರಾದ ಕಪಿಲ್ ಸಿಬಲ್ ಹಾಗೂ ಅಭಿಷೇಕ್​ ಮನುಸಿಂಘ್ವಿ, ಹಗರಣದ ಸಾಕ್ಷಿದಾರರ ಮೇಲೆ ತಮ್ಮ ಕಕ್ಷಿದಾರ(ಚಿದಂಬರಂ) ಪ್ರಭಾವ ಬೀರಿದ್ದಾರೆ ಎನ್ನುವುದಕ್ಕೆ ಯಾವ ಸಾಕ್ಷ್ಯ ಇದೆ ಎಂದು ಪ್ರಶ್ನೆ ಮಾಡಿದ್ದರು.

ಪಿ.ಚಿದಂಬರಂ ಅವರನ್ನು ಆ.12ರಂದು ಸಿಬಿಐ ರಾತ್ರೋರಾತ್ರಿ ಬಂಧಿಸಿತ್ತು. ಈ ಪ್ರಕರಣದಲ್ಲಿ ಅ.22ರಂದು ಜಾಮೀನು ದೊರೆತಿತ್ತು. ಆದರೆ ಅ.16ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸತತ ಎರಡು ಗಂಟೆ ವಿಚಾರಣೆ ನಡೆಸಿ ಬಂಧಿಸಿತ್ತು.

Intro:Body:Conclusion:
Last Updated : Dec 4, 2019, 11:20 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.