ಪಥನಮತ್ತಟ್ಟ (ಕೇರಳ) : ಕೋವಿಡ್-19 ಲಾಕ್ಡೌನ್ ಎಫೆಕ್ಟ್ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆದಾಯಕ್ಕೂ ತಟ್ಟಿದೆ. ಪ್ರತಿ ವರ್ಷ ಈ ಸೀಸನ್ನಲ್ಲಿ ಅತಿ ಹೆಚ್ಚು ಭಕ್ತರು ಅಯ್ಯಪ್ಪನ ಸನ್ನಿದಾನಕ್ಕೆ ಭೇಟಿ ನೀಡುತ್ತಿದ್ದರು.
ಆದರೆ, ಈ ಬಾರಿ ಕೋವಿಡ್-19 ಕಾರಣದಿಂದ ಭಕ್ತರ ಸಂಖ್ಯೆ ಇಳಿಮುಖವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 156.60 ಕೋಟಿ ರೂ. ಆದಾಯ ಭಕ್ತರಿಂದ ಹರಿದು ಬಂದಿತ್ತು. ಆದರೆ, ಈ ಬಾರಿ 39 ದಿನಗಳಲ್ಲಿ ಕೇವಲ 9.09 ಕೋಟಿ ರೂ,ಗೆ ಇಳಿದಿದೆ ಎಂದು ಅಯ್ಯಪ್ಪ ಸ್ವಾಮಿ ದೇವಸ್ಥಾನ ಮಂಡಳಿ ತಿಳಿಸಿದೆ.
ಈ ವರ್ಷ ಈವರೆಗೆ 71,706 ಭಕ್ತರು ಭೇಟಿ ನೀಡಿದ್ದಾರೆ. ಶಬರಿಮಲೆಯ ಆದಾಯವು ಹಿಂದಿನ ವರ್ಷಕ್ಕೆ ಹೋಲಿಸಿದ್ರೆ, ಈ ವರ್ಷ ಭಾರಿ ಕುಸಿದಿದೆ. ಶಬರಿಮಲೆಗೆ ಭೇಟಿ ನೀಡುವ ಭಕ್ತರ ಸಂಖ್ಯೆಗೆ ಸಂಬಂಧಿಸಿದಂತೆ ಹೈಕೋರ್ಟ್ ಮತ್ತು ಸರ್ಕಾರದ ಶಿಫಾರಸುಗಳಿಗೆ ಆದ್ಯತೆ ನೀಡಲಾಗಿದೆ ಎಂದರು. ಮಂಡಲ-ಮಕರವಿಲಾಕು ಉತ್ಸವದ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧ್ಯಕ್ಷ ಎನ್ ವಾಸು ತಿಳಿಸಿದ್ದಾರೆ.
ಓದಿ : ಬಹುದಿನಗಳ ಬಾಳಿಕೆ ಬರುವ ಲ್ಯಾಕ್ ಬಳೆಗಳು: ಬಣ್ಣ ಬಣ್ಣದ ಅರಗಿನ ಬಳೆಗಳ ಮೋಡಿ ನೋಡಿ..!