ಹೈದರಾಬಾದ್(ತೆಲಂಗಾಣ): ಅಕ್ರಮ ಹೋರ್ಡಿಂಗ್(ಜಾಹೀರಾತು ಫಲಕ) ಹಾಕಿದ್ದಕ್ಕೆ ತೆಲಂಗಾಣದ ಪಶುಸಂಗೋಪನಾ ಸಚಿವ ಟಿ ಶ್ರೀನಿವಾಸ್ ಯಾದವ್ ಅವರಿಗೆ 5,000 ರೂ. ದಂಡ ವಿಧಿಸಲಾಗಿದೆ.
ಹೈದರಾಬಾದ್ ಮಹಾನಗರ ಪಾಲಿಕೆ (ಜಿಹೆಚ್ಎಂಸಿ)ನ ಸೆಂಟ್ರಲ್ ಎನ್ಫೋರ್ಸ್ಮೆಂಟ್ ಸೆಲ್(ಸಿಇಸಿ), ಸಾಮಾಜಿಕ ಮಾಧ್ಯಮಗಳಿಂದ ಕೇಳಿಬಂದಿದ್ದ ದೂರುಗಳ ಆಧಾರದ ಮೇಲೆ ಈ ದಂಡ ವಿಧಿಸಲಾಗಿದೆ ಎಂದು ಜಿಹೆಚ್ಎಂಸಿ ಮೂಲಗಳು ತಿಳಿಸಿವೆ. ಹೀಗಾಗಿ ಸಚಿವರು ದಂಡ ವಿಧಿಸಬೇಕಾಗಿ ಬಂದಿದೆ.
ಇದೇ ಸೋಮವಾರ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಜನ್ಮದಿನ ಇರುವುದರಿಂದ ಜಾಹೀರಾತು ಫಲಕ ಹಾಕಲಾಗಿತ್ತು ಎಂದು ತಿಳಿದುಬಂದಿದೆ.