ETV Bharat / bharat

ಕಾಶ್ಮೀರದ ಅಧಿಕಾರಿಗಳ ವಿರೋಧದ ನಡುವೆಯೂ ಶ್ರೀನಗರಕ್ಕೆ ಹೊರಟ ರಾಹುಲ್ ಗಾಂಧಿ! - ಕಾಂಗ್ರೆಸ್ ನಾಯಕ​ ರಾಹುಲ್ ಗಾಂಧಿ

ಆರ್ಟಿಕಲ್​ 370 ರದ್ದಾದ ಬಳಿಕ ಕಾಶ್ಮೀರದಲ್ಲಿ ಸಹಜ ಸ್ಥಿತಿ ಮರುಸ್ಥಾಪಿಸಲು ಪ್ರಯತ್ನ ನಡೆಯುತ್ತಿದೆ. ಹೀಗಾಗಿ ರಾಜಕೀಯ ನಾಯಕರು ಕಾಶ್ಮೀರಕ್ಕೆ ಬಂದು ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿಪಡಿಸುವ ಕಾರ್ಯ ಮಾಡಬಾರದು ಎಂದು ಕಾಶ್ಮೀರದ ಅಧಿಕಾರಿಗಳು ಮನವಿ ಮಾಡಿದ್ದರು. ಈ ನಡುವೆಯೂ ಈ ಮನವಿ ಧಿಕ್ಕರಿಸಿ ಕೈ ನಾಯಕ ರಾಹುಲ್​ ಗಾಂಧಿ ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ.

Rahul Gandhi heads to Srinagar in between administration opposition
author img

By

Published : Aug 24, 2019, 12:19 PM IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅಧಿಕಾರಿಗಳ ವಿರೋಧದ ನಡುವೆಯೂ ಸಿಪಿಐ, ಸಿಪಿಐ-ಎಂ, ಆರ್​ಜೆಡಿ, ಡಿಎಂಕೆ ಸೇರಿದಂತೆ ಒಂಭತ್ತು ವಿರೋಧ ಪಕ್ಷಗಳ ನಾಯಕರೊಂದಿಗೆ ಕಾಂಗ್ರೆಸ್ ನಾಯಕ​ ರಾಹುಲ್ ಗಾಂಧಿ ಶ್ರೀನಗರಕ್ಕೆ ಹೊರಟಿದ್ದಾರೆ.

ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ್ದ ಸಂವಿಧಾನದ 370ನೇ ವಿಧಿಯನ್ನ ರದ್ದುಗೊಳಿಸಿದ ನಂತರ ಇದೇ ಮೊದಲ ಬಾರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ವಿರೋಧ ಪಕ್ಷ ನಾಯಕರೊಂದಿಗೆ ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದಾರೆ. ಕಣಿವೆ ನಾಡಿನ ವಾಸ್ತವ ಸ್ಥಿತಿಗತಿ ಅರಿಯಲು ಮತ್ತು ಕೈ ನಾಯಕರೊಂದಿಗೆ ಚರ್ಚೆ ನಡೆಸುವ ಸಲುವಾಗಿ ರಾಹುಲ್​ ಶ್ರೀನಗರಕ್ಕೆ ಭೇಟಿ ನೀಡುತ್ತಿದ್ದಾರೆ.

  • Congress leader Rahul Gandhi onboard flight to Srinagar. A delegation of Opposition leaders, including Rahul Gandhi, are visiting Jammu & Kashmir today. pic.twitter.com/VMnquvE1WQ

    — ANI (@ANI) August 24, 2019 " class="align-text-top noRightClick twitterSection" data=" ">

ಆದರೆ, ರಾಹುಲ್​ ಭೇಟಿಯನ್ನು ವಿರೋಧಿಸಿರುವ ಕಾಶ್ಮೀರದ ಅಧಿಕಾರಿಗಳು ಹಾಗೂ ಜಮ್ಮು ಮತ್ತು ಕಾಶ್ಮೀರ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಾಶ್ಮೀರಕ್ಕೆ ಭೇಟಿ ನೀಡದಂತೆ ರಾಹುಲ್​ಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್​ ಮಾಡಿರುವ ಜಮ್ಮು ಮತ್ತು ಕಾಶ್ಮೀರ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಗಡಿಯಾಚೆಗಿನ ಭಯೋತ್ಪಾದನೆ, ಉಗ್ರರ ಮತ್ತು ಪ್ರತ್ಯೇಕತಾವಾದಿಗಳ ದಾಳಿಯಿಂದ ಜಮ್ಮು ಮತ್ತು ಕಾಶ್ಮೀರದ ಜನರನ್ನು ರಕ್ಷಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಹೀಗಾಗಿ ಸಾರ್ವಜನಿಕ ಸುವ್ಯವಸ್ಥೆಯನ್ನು ಪುನಃಸ್ಥಾಪಿಸುವ ಪ್ರಯತ್ನ ನಡೆಯುತ್ತಿರುವಾಗ ರಾಜಕೀಯ ನಾಯಕರು ಅದಕ್ಕೆ ಅಡ್ಡಿ ಪಡಿಸುವ ಕಾರ್ಯ ಮಾಡಬಾರದು ಎಂದು ತಿಳಿಸಿದ್ದಾರೆ.

  • Congress leader Rahul Gandhi onboard flight to Srinagar. A delegation of Opposition leaders, including Rahul Gandhi, are visiting Jammu & Kashmir today. pic.twitter.com/ixBkANgksg

    — ANI (@ANI) August 24, 2019 " class="align-text-top noRightClick twitterSection" data=" ">

ಆದರೆ, ಈ ಮನವಿಯನ್ನು ಧಿಕ್ಕರಿಸಿರುವ ಕೈ ನಾಯಕ ರಾಹುಲ್​ ಗಾಂಧಿ ಈಗಾಗಲೇ ತಮ್ಮ ನಿವಾಸವನ್ನು ತೊರೆದು ಕಾಶ್ಮೀರದತ್ತ ಪ್ರಯಾಣ ಬೆಳೆಸಿದ್ದಾರೆ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅಧಿಕಾರಿಗಳ ವಿರೋಧದ ನಡುವೆಯೂ ಸಿಪಿಐ, ಸಿಪಿಐ-ಎಂ, ಆರ್​ಜೆಡಿ, ಡಿಎಂಕೆ ಸೇರಿದಂತೆ ಒಂಭತ್ತು ವಿರೋಧ ಪಕ್ಷಗಳ ನಾಯಕರೊಂದಿಗೆ ಕಾಂಗ್ರೆಸ್ ನಾಯಕ​ ರಾಹುಲ್ ಗಾಂಧಿ ಶ್ರೀನಗರಕ್ಕೆ ಹೊರಟಿದ್ದಾರೆ.

ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ್ದ ಸಂವಿಧಾನದ 370ನೇ ವಿಧಿಯನ್ನ ರದ್ದುಗೊಳಿಸಿದ ನಂತರ ಇದೇ ಮೊದಲ ಬಾರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ವಿರೋಧ ಪಕ್ಷ ನಾಯಕರೊಂದಿಗೆ ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದಾರೆ. ಕಣಿವೆ ನಾಡಿನ ವಾಸ್ತವ ಸ್ಥಿತಿಗತಿ ಅರಿಯಲು ಮತ್ತು ಕೈ ನಾಯಕರೊಂದಿಗೆ ಚರ್ಚೆ ನಡೆಸುವ ಸಲುವಾಗಿ ರಾಹುಲ್​ ಶ್ರೀನಗರಕ್ಕೆ ಭೇಟಿ ನೀಡುತ್ತಿದ್ದಾರೆ.

  • Congress leader Rahul Gandhi onboard flight to Srinagar. A delegation of Opposition leaders, including Rahul Gandhi, are visiting Jammu & Kashmir today. pic.twitter.com/VMnquvE1WQ

    — ANI (@ANI) August 24, 2019 " class="align-text-top noRightClick twitterSection" data=" ">

ಆದರೆ, ರಾಹುಲ್​ ಭೇಟಿಯನ್ನು ವಿರೋಧಿಸಿರುವ ಕಾಶ್ಮೀರದ ಅಧಿಕಾರಿಗಳು ಹಾಗೂ ಜಮ್ಮು ಮತ್ತು ಕಾಶ್ಮೀರ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಾಶ್ಮೀರಕ್ಕೆ ಭೇಟಿ ನೀಡದಂತೆ ರಾಹುಲ್​ಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್​ ಮಾಡಿರುವ ಜಮ್ಮು ಮತ್ತು ಕಾಶ್ಮೀರ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಗಡಿಯಾಚೆಗಿನ ಭಯೋತ್ಪಾದನೆ, ಉಗ್ರರ ಮತ್ತು ಪ್ರತ್ಯೇಕತಾವಾದಿಗಳ ದಾಳಿಯಿಂದ ಜಮ್ಮು ಮತ್ತು ಕಾಶ್ಮೀರದ ಜನರನ್ನು ರಕ್ಷಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಹೀಗಾಗಿ ಸಾರ್ವಜನಿಕ ಸುವ್ಯವಸ್ಥೆಯನ್ನು ಪುನಃಸ್ಥಾಪಿಸುವ ಪ್ರಯತ್ನ ನಡೆಯುತ್ತಿರುವಾಗ ರಾಜಕೀಯ ನಾಯಕರು ಅದಕ್ಕೆ ಅಡ್ಡಿ ಪಡಿಸುವ ಕಾರ್ಯ ಮಾಡಬಾರದು ಎಂದು ತಿಳಿಸಿದ್ದಾರೆ.

  • Congress leader Rahul Gandhi onboard flight to Srinagar. A delegation of Opposition leaders, including Rahul Gandhi, are visiting Jammu & Kashmir today. pic.twitter.com/ixBkANgksg

    — ANI (@ANI) August 24, 2019 " class="align-text-top noRightClick twitterSection" data=" ">

ಆದರೆ, ಈ ಮನವಿಯನ್ನು ಧಿಕ್ಕರಿಸಿರುವ ಕೈ ನಾಯಕ ರಾಹುಲ್​ ಗಾಂಧಿ ಈಗಾಗಲೇ ತಮ್ಮ ನಿವಾಸವನ್ನು ತೊರೆದು ಕಾಶ್ಮೀರದತ್ತ ಪ್ರಯಾಣ ಬೆಳೆಸಿದ್ದಾರೆ.

Intro:Body:

rahul


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.