ETV Bharat / bharat

ಭೇಟಿ ತಿರಸ್ಕರಿಸಿದ ರಾಷ್ಟ್ರಪತಿ: ಪಂಜಾಬ್​ ಮುಖ್ಯಮಂತ್ರಿಯಿಂದ ಅನಿರ್ದಿಷ್ಟಾವಧಿ ಧರಣಿ ಘೋಷಣೆ

ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಅವರು ತಮ್ಮ ಭೇಟಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸೋದಾಗಿ ಪಂಜಾಬ್ ಸಿಎಂ ಘೋಷಿಸಿದ್ದಾರೆ.

author img

By

Published : Nov 3, 2020, 6:08 PM IST

Punjab CM
ಅಮರೀಂದರ್ ಸಿಂಗ್

ನವದೆಹಲಿ: ರಾಜ್ಯದ ಕೆಲವು ವಿಚಾರಗಳ ಬಗ್ಗೆ ಚರ್ಚಿಸಲು ತಮ್ಮ ಭೇಟಿಯನ್ನು ರಾಷ್ಟ್ರಪತಿ ರಾಮನಾಥ್​ ಕೋವಿಂದ್ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಘೋಷಿಸಿದ್ದಾರೆ.

ರಾಜ್ಯದ ಜನಪ್ರತಿನಿಧಿಗಳು ದೆಹಲಿಯ ರಾಜ್​ ಘಾಟ್​​ನಲ್ಲಿ ನವೆಂಬರ್ 4ರಂದು ಧರಣಿ ನಡೆಸಲಿದ್ದು, ರಾಜ್ಯದಲ್ಲಿ ವಿದ್ಯುಚ್ಛಕ್ತಿಯ ಕೊರತೆ, ಅಗತ್ಯ ಸರಕುಗಳ ಪೂರೈಕೆಯ ಕೊರತೆ ಹಾಗೂ ರಾಜ್ಯದಲ್ಲಿ ಗೂಡ್ಸ್ ರೈಲುಗಳ ಚಲನೆಗೆ ಕೇಂದ್ರದ ನಿರಾಕರಣೆ ಮುಂತಾದ ವಿಚಾರಗಳ ವಿರುದ್ಧ ಧ್ವನಿಯೆತ್ತಲಾಗುತ್ತದೆ ಎಂದು ಅಮರೀಂದರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಪಂಜಾಬ್​ಗೆ ಗೂಡ್ಸ್​ ರೈಲುಗಳನ್ನು ಸ್ಥಗಿತಗೊಳಿಸಿದಾಗಿನಿಂದ ಪರಿಸ್ಥಿತಿ ಸಾಕಷ್ಟು ಬಿಗಡಾಯಿಸಿದೆ. ಇದರಿಂದಾಗಿ ಬಹುತೇಕ ವಿದ್ಯುತ್ ಸ್ಥಾವರಗಳು ತಮ್ಮ ಕಾರ್ಯ ನಿಲ್ಲಿಸಿವೆ. ಕೃಷಿ ಉತ್ಪನ್ನಗಳು ಹಾಗೂ ತರಕಾರಿಗಳನ್ನು ಒಂದೆಡೆಯಿಂದ ಮತ್ತೊಂದೆಡೆ ಸಾಗಿಸಲು ಸಾಧ್ಯವಾಗುತ್ತಿಲ್ಲ ಎಂದು ಅಮರೀಂದರ್ ಸಿಂಗ್ ಹೇಳಿದ್ದು, ಕೇಂದ್ರದ ಗಮನ ಸೆಳೆಯಲು ಸಾಂಕೇತಿಕ ಧರಣಿ ನಡೆಸುವುದಾಗಿ ಸ್ಪಷ್ಟನೆ ನೀಡಿದ್ದಾರೆ.

ಇದರ ಜೊತೆಗೆ ರಾಜ್ಯದ ಪರಿಸ್ಥಿತಿಯನ್ನು ಅರಿತು ಎಲ್ಲಾ ಪಕ್ಷಗಳ ಶಾಸಕರು ಕೇಂದ್ರದ ಗಮನ ಸೆಳೆಯಲು ಸಹಕಾರ ನೀಡಬೇಕೆಂದು ಕ್ಯಾಪ್ಟನ್ ಅಮರೀಂದರ್ ಸಿಂಗ್ ಮನವಿ ಮಾಡಿದ್ದಾರೆ.

ಕಲ್ಲಿದ್ದಲು ಪೂರೈಕೆ ಸ್ಥಗಿತಗೊಂಡ ಕಾರಣದಿಂದ ಕಲ್ಲಿದ್ದಲು ದಾಸ್ತಾನು ಮುಗಿದಿದೆ. ಹೀಗಾಗಿ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಕಾರ್ಯಾಚರಣೆ ನಿಲ್ಲಿಸುವುದಾಗಿ ಜಿವಿಕೆ ಪವರ್ ಕಂಪನಿ ಹೇಳಿದೆ. ಕೆಲವು ವಿದ್ಯುತ್ ಸ್ಥಾವರಗಳು ತಮ್ಮ ಕಾರ್ಯಾಚರಣೆಯನ್ನು ಈ ಮೊದಲೇ ಸ್ಥಗಿತಗೊಳಿಸಿವೆ.

ಕಲ್ಲಿದ್ದಲು, ಯೂರಿಯಾ, ಡಿಎಪಿ ಮತ್ತು ಇತರ ಅಗತ್ಯ ಸಾಮಗ್ರಿಗಳು ರಾಜ್ಯದಲ್ಲಿ ಖಾಲಿಯಾಗಿದ್ದು, ಪರಿಸ್ಥಿತಿ ಭೀಕರವಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದು, ವಿದ್ಯುತ್ ಖರೀದಿಯ ಬಿಡ್ ತೆರವುಗೊಳಿಸದ ಕಾರಣ ರಾಜ್ಯವು ತೀವ್ರ ವಿದ್ಯುತ್ ಕೊರತೆ ಎದುರಿಸುತ್ತಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿ: ರಾಜ್ಯದ ಕೆಲವು ವಿಚಾರಗಳ ಬಗ್ಗೆ ಚರ್ಚಿಸಲು ತಮ್ಮ ಭೇಟಿಯನ್ನು ರಾಷ್ಟ್ರಪತಿ ರಾಮನಾಥ್​ ಕೋವಿಂದ್ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಘೋಷಿಸಿದ್ದಾರೆ.

ರಾಜ್ಯದ ಜನಪ್ರತಿನಿಧಿಗಳು ದೆಹಲಿಯ ರಾಜ್​ ಘಾಟ್​​ನಲ್ಲಿ ನವೆಂಬರ್ 4ರಂದು ಧರಣಿ ನಡೆಸಲಿದ್ದು, ರಾಜ್ಯದಲ್ಲಿ ವಿದ್ಯುಚ್ಛಕ್ತಿಯ ಕೊರತೆ, ಅಗತ್ಯ ಸರಕುಗಳ ಪೂರೈಕೆಯ ಕೊರತೆ ಹಾಗೂ ರಾಜ್ಯದಲ್ಲಿ ಗೂಡ್ಸ್ ರೈಲುಗಳ ಚಲನೆಗೆ ಕೇಂದ್ರದ ನಿರಾಕರಣೆ ಮುಂತಾದ ವಿಚಾರಗಳ ವಿರುದ್ಧ ಧ್ವನಿಯೆತ್ತಲಾಗುತ್ತದೆ ಎಂದು ಅಮರೀಂದರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಪಂಜಾಬ್​ಗೆ ಗೂಡ್ಸ್​ ರೈಲುಗಳನ್ನು ಸ್ಥಗಿತಗೊಳಿಸಿದಾಗಿನಿಂದ ಪರಿಸ್ಥಿತಿ ಸಾಕಷ್ಟು ಬಿಗಡಾಯಿಸಿದೆ. ಇದರಿಂದಾಗಿ ಬಹುತೇಕ ವಿದ್ಯುತ್ ಸ್ಥಾವರಗಳು ತಮ್ಮ ಕಾರ್ಯ ನಿಲ್ಲಿಸಿವೆ. ಕೃಷಿ ಉತ್ಪನ್ನಗಳು ಹಾಗೂ ತರಕಾರಿಗಳನ್ನು ಒಂದೆಡೆಯಿಂದ ಮತ್ತೊಂದೆಡೆ ಸಾಗಿಸಲು ಸಾಧ್ಯವಾಗುತ್ತಿಲ್ಲ ಎಂದು ಅಮರೀಂದರ್ ಸಿಂಗ್ ಹೇಳಿದ್ದು, ಕೇಂದ್ರದ ಗಮನ ಸೆಳೆಯಲು ಸಾಂಕೇತಿಕ ಧರಣಿ ನಡೆಸುವುದಾಗಿ ಸ್ಪಷ್ಟನೆ ನೀಡಿದ್ದಾರೆ.

ಇದರ ಜೊತೆಗೆ ರಾಜ್ಯದ ಪರಿಸ್ಥಿತಿಯನ್ನು ಅರಿತು ಎಲ್ಲಾ ಪಕ್ಷಗಳ ಶಾಸಕರು ಕೇಂದ್ರದ ಗಮನ ಸೆಳೆಯಲು ಸಹಕಾರ ನೀಡಬೇಕೆಂದು ಕ್ಯಾಪ್ಟನ್ ಅಮರೀಂದರ್ ಸಿಂಗ್ ಮನವಿ ಮಾಡಿದ್ದಾರೆ.

ಕಲ್ಲಿದ್ದಲು ಪೂರೈಕೆ ಸ್ಥಗಿತಗೊಂಡ ಕಾರಣದಿಂದ ಕಲ್ಲಿದ್ದಲು ದಾಸ್ತಾನು ಮುಗಿದಿದೆ. ಹೀಗಾಗಿ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಕಾರ್ಯಾಚರಣೆ ನಿಲ್ಲಿಸುವುದಾಗಿ ಜಿವಿಕೆ ಪವರ್ ಕಂಪನಿ ಹೇಳಿದೆ. ಕೆಲವು ವಿದ್ಯುತ್ ಸ್ಥಾವರಗಳು ತಮ್ಮ ಕಾರ್ಯಾಚರಣೆಯನ್ನು ಈ ಮೊದಲೇ ಸ್ಥಗಿತಗೊಳಿಸಿವೆ.

ಕಲ್ಲಿದ್ದಲು, ಯೂರಿಯಾ, ಡಿಎಪಿ ಮತ್ತು ಇತರ ಅಗತ್ಯ ಸಾಮಗ್ರಿಗಳು ರಾಜ್ಯದಲ್ಲಿ ಖಾಲಿಯಾಗಿದ್ದು, ಪರಿಸ್ಥಿತಿ ಭೀಕರವಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದು, ವಿದ್ಯುತ್ ಖರೀದಿಯ ಬಿಡ್ ತೆರವುಗೊಳಿಸದ ಕಾರಣ ರಾಜ್ಯವು ತೀವ್ರ ವಿದ್ಯುತ್ ಕೊರತೆ ಎದುರಿಸುತ್ತಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.