ETV Bharat / bharat

ಮಾಸ್ಕ್ ಹಾಕದ ಬೈಕ್​ ಸವಾರನ ಜಾತಿ ಮಾಹಿತಿ ಕೆದಕಿದ ಆರೋಪ: ಕಾನ್ಸ್​ಸ್ಟೇಬಲ್​ ವರ್ಗಾವಣೆ - Coimbatore News

ಲಾಕ್‌ಡೌನ್ ಮಾನದಂಡಗಳನ್ನು ಪಾಲಿಸದ ವಾಹನ ಸವಾರನಿಗೆ ದಂಡ ವಿಧಿಸುವ ಸಂದರ್ಭದಲ್ಲಿ ಕಾನ್​ಸ್ಟೇಬಲ್​ ಜಾತಿ ಮಾಹಿತಿ ಕೇಳಿದ್ದಾರೆ ಎನ್ನಲಾದ ವಿಡಿಯೋ ವೈರಲ್​ ಆಗಿದೆ. ಸದ್ಯ ಈ ಆರೋಪದ ಮೇಲೆ ಪೇದೆಯನ್ನು ವರ್ಗಾವಣೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಜಾತಿ ಮಾಹಿತಿ ಕೇಳಿದ ಪೇದೆ ವರ್ಗಾವಣೆ
ಜಾತಿ ಮಾಹಿತಿ ಕೇಳಿದ ಪೇದೆ ವರ್ಗಾವಣೆ
author img

By

Published : Oct 9, 2020, 5:31 PM IST

ಕೊಯಮತ್ತೂರು: ತಿರುಪುರ ಜಿಲ್ಲೆಯಲ್ಲಿ ಮಾಸ್ಕ್​ ಧರಿಸದ ಹಿನ್ನೆಲೆ ಬೈಕ್​ ಸವಾರನಿಗೆ ಪೊಲೀಸ್​ ಕಾನ್​ಸ್ಟೇಬಲ್​ವೋರ್ವ ದಂಡ ವಿಧಿಸಿದ್ದಾರೆ. ಈ ವೇಳೆ ಜಾತಿ ಮಾಹಿತಿ ಕೇಳಿದ್ದಾರೆ ಎನ್ನಲಾದ ಪೊಲೀಸ್​ ವಿರುದ್ಧ ಚಾಲಕ ಗರಂ ಆಗಿದ್ದು, ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಕಾನ್​ಸ್ಟೇಬಲ್​ನನ್ನು ವರ್ಗಾವಣೆ ಮಾಡಲಾಗಿದೆ.

ಲಾಕ್‌ಡೌನ್ ಮಾನದಂಡಗಳನ್ನು ಪಾಲಿಸದವರಿಗೆ ದಂಡ ವಿಧಿಸಲು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಹೀಗಾಗಿ ಕಾಶಿರಾಜನ್ ಎಂಬ ಪೊಲೀಸ್​ ಕಾನ್​ಸ್ಟೇಬಲ್​ ತಿರುಪುರ-ಪೆರುಮನಲ್ಲೂರ್ ಜಂಕ್ಷನ್‌ನಲ್ಲಿ ದ್ವಿಚಕ್ರ ವಾಹನ ಸವಾರ ಮಾಸ್ಕ್​ ಧರಿಸಿಲ್ಲವೆಂದು ಆತನನ್ನು ತಡೆದಿದ್ದಾರೆ. ಈ ವೇಳೆ ಆತನ ವಿವರ ಮತ್ತು ಜಾತಿಯ ಹೆಸರನ್ನು ಹೇಳುವಂತೆ ಒತ್ತಾಯಿಸಿದ್ದಾರೆ ಎನ್ನಲಾಗ್ತಿದೆ. ಇದರಿಂದ ಕೋಪಗೊಂಡ ಸವಾರ ಗಲಾಟೆ ಮಾಡಿದ್ದಾನೆ.

ಸದ್ಯ ಇವರಿಬ್ಬರ ವಾಗ್ವಾದದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದಾದ ಬಳಿಕ ಪೊಲೀಸ್ ಇಲಾಖೆ ಕಾಶಿರಾಜನ್ ಅವರನ್ನು ಸಶಸ್ತ್ರ ಮೀಸಲು ವಿಭಾಗಕ್ಕೆ ವರ್ಗಾಯಿಸಿದೆ. ಈ ಬಗ್ಗೆ ವಿವರವಾದ ತನಿಖೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ ವಿಜಯ ಕಾರ್ತಿಕೇಯನ್ ಭರವಸೆ ನೀಡಿದ್ದಾರೆ.

ಕೊಯಮತ್ತೂರು: ತಿರುಪುರ ಜಿಲ್ಲೆಯಲ್ಲಿ ಮಾಸ್ಕ್​ ಧರಿಸದ ಹಿನ್ನೆಲೆ ಬೈಕ್​ ಸವಾರನಿಗೆ ಪೊಲೀಸ್​ ಕಾನ್​ಸ್ಟೇಬಲ್​ವೋರ್ವ ದಂಡ ವಿಧಿಸಿದ್ದಾರೆ. ಈ ವೇಳೆ ಜಾತಿ ಮಾಹಿತಿ ಕೇಳಿದ್ದಾರೆ ಎನ್ನಲಾದ ಪೊಲೀಸ್​ ವಿರುದ್ಧ ಚಾಲಕ ಗರಂ ಆಗಿದ್ದು, ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಕಾನ್​ಸ್ಟೇಬಲ್​ನನ್ನು ವರ್ಗಾವಣೆ ಮಾಡಲಾಗಿದೆ.

ಲಾಕ್‌ಡೌನ್ ಮಾನದಂಡಗಳನ್ನು ಪಾಲಿಸದವರಿಗೆ ದಂಡ ವಿಧಿಸಲು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಹೀಗಾಗಿ ಕಾಶಿರಾಜನ್ ಎಂಬ ಪೊಲೀಸ್​ ಕಾನ್​ಸ್ಟೇಬಲ್​ ತಿರುಪುರ-ಪೆರುಮನಲ್ಲೂರ್ ಜಂಕ್ಷನ್‌ನಲ್ಲಿ ದ್ವಿಚಕ್ರ ವಾಹನ ಸವಾರ ಮಾಸ್ಕ್​ ಧರಿಸಿಲ್ಲವೆಂದು ಆತನನ್ನು ತಡೆದಿದ್ದಾರೆ. ಈ ವೇಳೆ ಆತನ ವಿವರ ಮತ್ತು ಜಾತಿಯ ಹೆಸರನ್ನು ಹೇಳುವಂತೆ ಒತ್ತಾಯಿಸಿದ್ದಾರೆ ಎನ್ನಲಾಗ್ತಿದೆ. ಇದರಿಂದ ಕೋಪಗೊಂಡ ಸವಾರ ಗಲಾಟೆ ಮಾಡಿದ್ದಾನೆ.

ಸದ್ಯ ಇವರಿಬ್ಬರ ವಾಗ್ವಾದದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದಾದ ಬಳಿಕ ಪೊಲೀಸ್ ಇಲಾಖೆ ಕಾಶಿರಾಜನ್ ಅವರನ್ನು ಸಶಸ್ತ್ರ ಮೀಸಲು ವಿಭಾಗಕ್ಕೆ ವರ್ಗಾಯಿಸಿದೆ. ಈ ಬಗ್ಗೆ ವಿವರವಾದ ತನಿಖೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ ವಿಜಯ ಕಾರ್ತಿಕೇಯನ್ ಭರವಸೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.