ETV Bharat / bharat

ಶ್ರೀನಗರದಲ್ಲಿ ಪಿಡಿಪಿ ಕಚೇರಿ ಸೀಲ್ಡ್​​.. ಸರ್ಕಾರದ ನಡೆಗೆ ಮೆಹಬೂಬಾ ಮುಫ್ತಿ ಆಕ್ರೋಶ - ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನೇತೃತ್ವದ ಪಕ್ಷವಾದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಕಚೇರಿಗೆ ಬೀಗ ಜಡೆಯಲಾಗಿದೆ. ಶ್ರೀನಗರ ಪೊಲೀಸರು ಪಿಡಿಪಿ ಕಚೇರಿಯನ್ನು ಸೀಲ್​ ಮಾಡಿದ್ದಾರೆ.

PDP office in Srinagar sealed
ಶ್ರೀನಗರದಲ್ಲಿ ಪಿಡಿಪಿ ಕಚೇರಿ ಸೀಲ್​ಡೌನ್
author img

By

Published : Oct 29, 2020, 12:11 PM IST

ಶ್ರೀನಗರ: ನೂತನ ಭೂಸುಧಾರಣಾ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ)ಯ ನಾಯಕರು ಹಾಗೂ ಕಾರ್ಯಕರ್ತರನ್ನು ಬಂಧಿಸಿರುವ ಪೊಲೀಸರು, ಶ್ರೀನಗರದಲ್ಲಿನ ಪಿಡಿಪಿ ಕಚೇರಿಯನ್ನು ಸೀಲ್​ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಈ ನಡೆಯನ್ನು ಮಾಜಿ ಮುಖ್ಯಮಂತ್ರಿ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಖಂಡಿಸಿದ್ದಾರೆ.

  • PDP office in Srinagar sealed by J&K admin & workers arrested for organising a peaceful protest. A similar protest was allowed in Jammu so why was it thwarted here? Is this your definition of ‘normalcy’ thats being showcased in the world? @PMOIndia @HMOIndia @manojsinha_ pic.twitter.com/j9Y5L5WTyQ

    — Mehbooba Mufti (@MehboobaMufti) October 29, 2020 " class="align-text-top noRightClick twitterSection" data=" ">

"ಶ್ರೀನಗರದಲ್ಲಿ ಜಮ್ಮು-ಕಾಶ್ಮೀರ ಆಡಳಿತ ನಮ್ಮ ಕಚೇರಿಯನ್ನು ಮುಚ್ಚಿದೆ. ಶಾಂತಿಯುತ ಪ್ರತಿಭಟನೆಯನ್ನು ಆಯೋಜಿಸಿದ್ದಕ್ಕಾಗಿ ನಮ್ಮ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಜಮ್ಮುವಿನಲ್ಲಿ ಇದೇ ರೀತಿಯ ಪ್ರತಿಭಟನೆಗೆ ಅನುಮತಿ ನೀಡಲಾಗಿದೆ. ಆದರೆ ಇಲ್ಲಿ ಏಕೆ ತಡೆಯಲಾಗಿದೆ?" ಎಂದು ಮೆಹಬೂಬಾ ಮುಫ್ತಿ ಟ್ವೀಟ್​ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್​ 26 ರಂದು ಜಮ್ಮುವಿನಲ್ಲಿರುವ ಪಿಡಿಪಿ ಕಚೇರಿಗೆ ನುಗ್ಗಿದ ಬಿಜೆಪಿ ಕಾರ್ಯಕರ್ತರು, ಭಾರತ್ ಮಾತಾ ಕೀ ಜೈ ಘೋಷಣೆ ಕೂಗುತ್ತಾ ಕಚೇರಿ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ್ದರು.

ಶ್ರೀನಗರ: ನೂತನ ಭೂಸುಧಾರಣಾ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ)ಯ ನಾಯಕರು ಹಾಗೂ ಕಾರ್ಯಕರ್ತರನ್ನು ಬಂಧಿಸಿರುವ ಪೊಲೀಸರು, ಶ್ರೀನಗರದಲ್ಲಿನ ಪಿಡಿಪಿ ಕಚೇರಿಯನ್ನು ಸೀಲ್​ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಈ ನಡೆಯನ್ನು ಮಾಜಿ ಮುಖ್ಯಮಂತ್ರಿ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಖಂಡಿಸಿದ್ದಾರೆ.

  • PDP office in Srinagar sealed by J&K admin & workers arrested for organising a peaceful protest. A similar protest was allowed in Jammu so why was it thwarted here? Is this your definition of ‘normalcy’ thats being showcased in the world? @PMOIndia @HMOIndia @manojsinha_ pic.twitter.com/j9Y5L5WTyQ

    — Mehbooba Mufti (@MehboobaMufti) October 29, 2020 " class="align-text-top noRightClick twitterSection" data=" ">

"ಶ್ರೀನಗರದಲ್ಲಿ ಜಮ್ಮು-ಕಾಶ್ಮೀರ ಆಡಳಿತ ನಮ್ಮ ಕಚೇರಿಯನ್ನು ಮುಚ್ಚಿದೆ. ಶಾಂತಿಯುತ ಪ್ರತಿಭಟನೆಯನ್ನು ಆಯೋಜಿಸಿದ್ದಕ್ಕಾಗಿ ನಮ್ಮ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಜಮ್ಮುವಿನಲ್ಲಿ ಇದೇ ರೀತಿಯ ಪ್ರತಿಭಟನೆಗೆ ಅನುಮತಿ ನೀಡಲಾಗಿದೆ. ಆದರೆ ಇಲ್ಲಿ ಏಕೆ ತಡೆಯಲಾಗಿದೆ?" ಎಂದು ಮೆಹಬೂಬಾ ಮುಫ್ತಿ ಟ್ವೀಟ್​ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್​ 26 ರಂದು ಜಮ್ಮುವಿನಲ್ಲಿರುವ ಪಿಡಿಪಿ ಕಚೇರಿಗೆ ನುಗ್ಗಿದ ಬಿಜೆಪಿ ಕಾರ್ಯಕರ್ತರು, ಭಾರತ್ ಮಾತಾ ಕೀ ಜೈ ಘೋಷಣೆ ಕೂಗುತ್ತಾ ಕಚೇರಿ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.