ಪುರಿ: ಒಡಿಶಾದ ಪ್ರಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ರಕ್ಷಾ ಬಂಧನಕ್ಕೆ ವಿಶಿಷ್ಟ ಸಂದೇಶವನ್ನು ನೀಡಿದ್ದಾರೆ.
ಪುರಿ ಸಮುದ್ರ ಕಡಲತೀರದಲ್ಲಿ ತಮ್ಮ ಕಲೆಯ ಮೂಲಕ ಕೊರೊನಾ ವಾರಿಯರ್ಸ್ ಚಿತ್ರ ಬಿಡಿಸಿ ಗೌರವ ಸೂಚಿಸಿದ್ದಾರೆ. ಜನತೆ ಕೂಡ ಈ ಬಾರಿಯ ರಕ್ಷಾ ಬಂಧನವನ್ನು ಕೊರೊನಾ ವಾರಿಯರ್ಸ್ಗೆ ಗೌರವ ನೀಡುವ ಮೂಲಕ ಆಚರಿಸಿ ಎಂದು ಮನವಿ ಮಾಡಿದ್ದಾರೆ. ಪೊಲೀಸರು, ವೈದ್ಯರಿಗೆ ಪಟ್ನಾಯಕ್ ಹೃತ್ಪೂರ್ವಕ ಗೌರವ ಸಲ್ಲಿಸಿದರು.