ETV Bharat / bharat

ರಾಷ್ಟ್ರೀಯ ನೇತ್ರದಾನ ದಿನ: ಕಣ್ಣನ್ನು ದಾನ ಮಾಡಿ ಅಂಧರಿಗೆ ಬೆಳಕಾಗಿ

author img

By

Published : Aug 24, 2020, 7:43 PM IST

ಕಣ್ಣು ಮನುಷ್ಯನ ದೇಹದ ಅತ್ಯಮೂಲ್ಯ ಪ್ರಚೇಂದ್ರಿಯ. ನಮ್ಮ ದೇಹದ ಬಹಳ ಸೂಕ್ಷ್ಮವಾದ ಹಾಗೂ ಅಮೂಲ್ಯವಾದ ಅಂಗವೂ ಹೌದು. ಕಣ್ಣು ಮನುಷ್ಯನಿಗೆ ಎಷ್ಟು ಮುಖ್ಯವೆಂದರೆ ಕಣ್ಣುಗಳನ್ನು ನಮಗೆ ಹೆಚ್ಚು ಪ್ರಿಯವಾದ, ಹತ್ತಿರವಾದ ವಸ್ತುಗಳಿಗೆ ಹೋಲಿಸುತ್ತೇವೆ. ಇಂಥ ಅತ್ಯಮೂಲ್ಯವಾದ ಕಣ್ಣಿನ ದಾನದ ಜಾಗೃತಿಯನ್ನು ಭಾರತದಲ್ಲಿ ವಿಶಿಷ್ಟವಾಗಿ ಹದಿನೈದು ದಿನ ಆಚರಿಸಲಾಗುತ್ತದೆ.

ನೇತ್ರದಾನ
ನೇತ್ರದಾನ

ರಾಷ್ಟ್ರೀಯ ನೇತ್ರದಾನ ಆಚರಣೆಯನ್ನು ಪ್ರತಿ ವರ್ಷ ಆಗಸ್ಟ್ 25ರಿಂದ ಸೆಪ್ಟೆಂಬರ್ 8ರವರೆಗೆ ಆಚರಿಸಲಾಗುತ್ತದೆ. ಸಾರ್ವಜನಿಕರಲ್ಲಿ ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಜನರು ತಮ್ಮ ನೇತ್ರ ಸೇರಿದಂತೆ ಅಂಗಾಂಗವನ್ನು ದಾನ ಮಾಡಲು ಪ್ರೇರೆಪಣೆ ನೀಡುವುದು ಈ ಆಚರಣೆಯ ಉದ್ದೇಶವಾಗಿದೆ.

ರಾಷ್ಟ್ರೀಯ ನೇತ್ರದಾನ ದಿನವನ್ನು ಆಗಸ್ಟ್ 25 ರಿಂದ ಸೆಪ್ಟೆಂಬರ್ 8 ರವರೆಗೆ ಭಾರತದಲ್ಲಿ ಆಚರಿಸಲಾಗುತ್ತದೆ. ರಾಷ್ಟ್ರೀಯ ನೇತ್ರದಾನ ಫೋರ್ಟ್‌ನೈಟ್​​ನನ್ನು 1985ರಲ್ಲಿ ಪ್ರಾರಂಭಿಸಲಾಯಿತು. ಭಾರತದಲ್ಲಿ ಕಣ್ಣಿನ ದಾನದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಜನರನ್ನು ದಾನಕ್ಕೆ ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ.

ಕುರುಡುತನಕ್ಕೆ ಕಾರಣಗಳು ಹಲವಾರು. ಕಣ್ಣಿನ ಪೊರೆ(ಕ್ಯಾಟರ‍್ಯಾಕ್ಟ್), ಕಣ್ಣಿನ ಒಳಭಾಗದಲ್ಲಿ ಏರಿದ ಒತ್ತಡ (ಗ್ಲೂಕೋಮ), ಕಣ್ಣಿನ ಒಳಪರದೆ (ರೆಟಿನಾ)ಯಲ್ಲಿನ ದೋಷ ಹಾಗೂ ಕಣ್ಣಿನ ಮುಂಭಾಗಲ್ಲಿರುವ ಪಾರದರ್ಶಕ ಪಟಲದಲ್ಲಿನ (ಕಾರ್ನಿಯ) ದೋಷ - ಇವೇ ಮುಂತಾದುವು ಕುರುಡುತನಕ್ಕೆ ಮುಖ್ಯ ಕಾರಣಗಳು.

ಹದಿನೈದು ದಿನಗಳ ರಾಷ್ಟ್ರೀಯ ನೇತ್ರದಾನದ ಗುರಿ ಏನು:

  • 1. ಮರಣದ ನಂತರ ಜನರು ತಮ್ಮ ಕಣ್ಣುಗಳನ್ನು ದಾನ ಮಾಡುವಂತೆ ಅವರನ್ನು ಪ್ರೋತ್ಸಾಹಿಸುವುದು.
  • 2.ಮರಣದ ನಂತರ ಕಣ್ಣನ್ನು ದಾನ ಮಾಡುವುದರಿಂದ ಯಾವುದೇ ಹಾನಿ ಆಗುವುದಿಲ್ಲ ಎಂದು ಜನರಿಗೆ ತಿಳಿ ಹೇಳುವುದು.
  • 3. ಕಣ್ಣಿನ ಕಸಿ ಮಾಡುವ ಅಗತ್ಯತೆಯ ಬಗ್ಗೆ ಜನರಿಗೆ ಮಾಹಿತಿ ನೀಡುವುದು.

ನೇತ್ರದಾನವನ್ನು ಹೇಗೆ ಮಾಡುವುದು:

ವ್ಯಕ್ತಿ ಮರಣ ಹೊಂದಿದ 4 ರಿಂದ 6 ಗಂಟೆಗಳ ಒಳಗೆ ಕಣ್ಣುಗಳನ್ನು ದಾನ ಮಾಡಬಹುದಾಗಿದೆ. ವ್ಯಕ್ತಿಯ ಕಣ್ಣುಗಳನ್ನು ನೋಂದಾಯಿತ ವೈದ್ಯಕೀಯ ವೈದ್ಯರು ಮಾತ್ರ ತೆಗೆಯಬಹುದಾಗಿದೆ.

ವ್ಯಕ್ತಿಯ ಕಣ್ಣುಗಳನ್ನು ತೆಗೆಯಲು ಕಣ್ಣಿನ ಬ್ಯಾಂಕ್ ತಂಡ ಸತ್ತವರ ಮನೆಗೆ ಅಥವಾ ಆಸ್ಪತ್ರೆಗೆ ಭೇಟಿ ನೀಡಬೇಕಾಗುತ್ತದೆ.

ಕಣ್ಣುಗಳನ್ನು ತೆಗೆಯುವ ಪ್ರಕ್ರಿಯೆಯೂ ಅಂತ್ಯಕ್ರಿಯೆಗೆ ವಿಳಂಬ ಮಾಡುವುದಿಲ್ಲ. ಏಕೆಂದರೆ ಇಡೀ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸುಮಾರು 20 ರಿಂದ 30 ನಿಮಿಷಗಳು ಸಾಕಗುತ್ತದೆ.

ವ್ಯಕ್ತಿ ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳನ್ನು ಹೊಂದಿದ್ದಾನೋ ಅಥವಾ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ರಕ್ತದ ಮಾದರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲದೇ ದಾನಿ ಮತ್ತು ಕಣ್ಣುಗಳನ್ನು ಹಾಕುವ ವ್ಯಕ್ತಿಯ ಮಾಹಿತಿಯನ್ನು ಗೌಪ್ಯವಾಗಿಡಲಾಗುತ್ತದೆ.

ಯಾವ ವ್ಯಕ್ತಿಗಳು ನೇತ್ರದಾನ ಮಾಡಲಾಗುವುದಿಲ್ಲ:

ಏಡ್ಸ್, ಹೆಪಟೈಟಿಸ್ ಬಿ ಮತ್ತು ಸಿ, ರೇಬೀಸ್, ಸೆಪ್ಟಿಸೆಮಿಯಾ, ತೀವ್ರವಾದ ರಕ್ತದ ಕ್ಯಾನ್ಸರ್, ಟೆಟನಸ್, ಕಾಲರಾ, ಸಾಂಕ್ರಾಮಿಕ ರೋಗಗಳಾದ ಎನ್ಸೆಫಾಲಿಟಿಸ್ ಮತ್ತು ಮೆನಿಂಜೈಟಿಸ್‌ನಿಂದ ಬಳಲುತ್ತಿರುವವರು ಕಣ್ಣುಗಳನ್ನು ದಾನ ಮಾಡಲು ಸಾಧ್ಯವಿಲ್ಲ.

ಅಸಮರ್ಪಕ ನೇತ್ರದಾನಕ್ಕೆ ಕಾರಣಗಳು:

ಪ್ರಚಲಿತ ಜನರಲ್ಲಿ ತಪ್ಪು ಗ್ರಹಿಕೆಗಳಿರುವುದು. ಅರಿವು ಹಾಗೂ ಅಸಮರ್ಪಕ ಸುಸಜ್ಜಿತ ಕಣ್ಣಿನ ಬ್ಯಾಂಕ್​ ಮತ್ತು ದಾನಿಗಳ ಕೊರತೆ. ಇವು ಅಸಮರ್ಪಕ ದಾನದ ಹಿಂದಿನ ಕೆಲವು ಪ್ರಮುಖ ಕಾರಣಗಳಾಗಿವೆ.

ನೇತ್ರದಾನ ಮಾಡಲಿಚ್ಚಿಸುವವರು ಮಾಡಬೇಕಾದುದೇನು ?

ನಿಮ್ಮ ಹತ್ತಿರದ ನೇತ್ರ ಭಂಡಾರದಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಿರಬೇಕು. ಅಲ್ಲಿ ಅವರು ಕೊಡುವ ನೇತ್ರದಾನದ ಪ್ರತಿಜ್ಞಾಪತ್ರದಲ್ಲಿ ನಿಮ್ಮ ಸಂಪೂರ್ಣ ವಿವರಗಳನ್ನು ಬರೆದು, ನಿಮ್ಮ ಸಹಿ ಹಾಕಬೇಕು. ಜೊತೆಯಲ್ಲಿಯೇ ಇಬ್ಬರು ಸಾಕ್ಷಿಗಳ ಸಹಿಯೂ ಇರಬೇಕು. ನೇತ್ರ ಭಂಡಾರದಿಂದ ನಿಮಗೆ ದಾನಿಗಳ ಚೀಟಿಯನ್ನು ಕೊಡಲಾಗುತ್ತದೆ.

ಈ ಚೀಟಿಯನ್ನು ನೀವು ಸದಾ ನಿಮ್ಮ ಬಳಿ ಇರಿಸಿಕೊಂಡಿರಬೇಕು. ಅಥವಾ ಮನೆಯಲ್ಲಿ, ಕುಟುಂಬದ ಸದಸ್ಯರಿಗೆ ಸುಲಭದಲ್ಲಿ ದೊರಕುವಂತಹ ಸ್ಥಳದಲ್ಲಿ ಇರಿಸಿರಬೇಕು. ನಿಮ್ಮ ಹತ್ತಿರದ ಸಂಬಂಧಿಕರಲ್ಲಿ/ ಕುಟುಂಬ ಸದಸ್ಯರಲ್ಲಿ ನಿಮ್ಮ ನೇತ್ರದಾನದ ಒಲವನ್ನು ಮೊದಲೇ ತಿಳಿಸಿರಬೇಕು. ಏಕೆಂದರೆ, ಅವರ ಸಹಕಾರವಿಲ್ಲದೆ ನೇತ್ರದಾನ ಅಸಾಧ್ಯ.

ಮಧುಮೇಹ ಅಥವಾ ರಕ್ತದೊತ್ತಡದಿಂದ ಬಳಲಿದ್ದ ವ್ಯಕ್ತಿಯೂ ನೇತ್ರದಾನ ಮಾಡಬಹುದಾಗಿದೆ. ಕಣ್ಣಿನ ದೋಷಕ್ಕಾಗಿ ಕನ್ನಡಕ ಧರಿಸುವವರೂ ನೇತ್ರದಾನ ಮಾಡಬಹುದು. ಜೀವಿತಾವಧಿಯಲ್ಲಿ ಕಣ್ಣಿನ ಪೊರೆ ಅಥವಾ ಇನ್ನ್ಯಾವುದೇ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದವರೂ ತಮ್ಮ ಕಣ್ಣುಗಳನ್ನು ದಾನ ಮಾಡಬಹುದಾಗಿದೆ.
ಅಂಕಿಅಂಶಗಳು:

ಲ್ಯಾನ್ಸೆಟ್ ಗ್ಲೋಬಲ್ ಹೆಲ್ತ್ ಜರ್ನಲ್ ಪ್ರಕಾರ, ಪ್ರಪಂಚದಾದ್ಯಂತ ಸುಮಾರು 36 ಮಿಲಿಯನ್ ಜನರು ಕುರುಡುತನದಿಂದ ಬಳಲುತ್ತಿದ್ದಾರೆ. ಇದರಲ್ಲಿ ಭಾರತವು ಪ್ರಪಂಚದಲ್ಲಿನ ನಾಲ್ಕನೇ ಒಂದು ಭಾಗದಷ್ಟು ಕುರುಡರನ್ನು ಹೊಂದಿದೆ. ಸುಮಾರು 8.8 ಮಿಲಿಯನ್ ಜನರು ಅಂಧರಾಗಿದ್ದಾರೆ.

ರಾಷ್ಟ್ರೀಯ ನೇತ್ರದಾನ ಆಚರಣೆಯನ್ನು ಪ್ರತಿ ವರ್ಷ ಆಗಸ್ಟ್ 25ರಿಂದ ಸೆಪ್ಟೆಂಬರ್ 8ರವರೆಗೆ ಆಚರಿಸಲಾಗುತ್ತದೆ. ಸಾರ್ವಜನಿಕರಲ್ಲಿ ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಜನರು ತಮ್ಮ ನೇತ್ರ ಸೇರಿದಂತೆ ಅಂಗಾಂಗವನ್ನು ದಾನ ಮಾಡಲು ಪ್ರೇರೆಪಣೆ ನೀಡುವುದು ಈ ಆಚರಣೆಯ ಉದ್ದೇಶವಾಗಿದೆ.

ರಾಷ್ಟ್ರೀಯ ನೇತ್ರದಾನ ದಿನವನ್ನು ಆಗಸ್ಟ್ 25 ರಿಂದ ಸೆಪ್ಟೆಂಬರ್ 8 ರವರೆಗೆ ಭಾರತದಲ್ಲಿ ಆಚರಿಸಲಾಗುತ್ತದೆ. ರಾಷ್ಟ್ರೀಯ ನೇತ್ರದಾನ ಫೋರ್ಟ್‌ನೈಟ್​​ನನ್ನು 1985ರಲ್ಲಿ ಪ್ರಾರಂಭಿಸಲಾಯಿತು. ಭಾರತದಲ್ಲಿ ಕಣ್ಣಿನ ದಾನದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಜನರನ್ನು ದಾನಕ್ಕೆ ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ.

ಕುರುಡುತನಕ್ಕೆ ಕಾರಣಗಳು ಹಲವಾರು. ಕಣ್ಣಿನ ಪೊರೆ(ಕ್ಯಾಟರ‍್ಯಾಕ್ಟ್), ಕಣ್ಣಿನ ಒಳಭಾಗದಲ್ಲಿ ಏರಿದ ಒತ್ತಡ (ಗ್ಲೂಕೋಮ), ಕಣ್ಣಿನ ಒಳಪರದೆ (ರೆಟಿನಾ)ಯಲ್ಲಿನ ದೋಷ ಹಾಗೂ ಕಣ್ಣಿನ ಮುಂಭಾಗಲ್ಲಿರುವ ಪಾರದರ್ಶಕ ಪಟಲದಲ್ಲಿನ (ಕಾರ್ನಿಯ) ದೋಷ - ಇವೇ ಮುಂತಾದುವು ಕುರುಡುತನಕ್ಕೆ ಮುಖ್ಯ ಕಾರಣಗಳು.

ಹದಿನೈದು ದಿನಗಳ ರಾಷ್ಟ್ರೀಯ ನೇತ್ರದಾನದ ಗುರಿ ಏನು:

  • 1. ಮರಣದ ನಂತರ ಜನರು ತಮ್ಮ ಕಣ್ಣುಗಳನ್ನು ದಾನ ಮಾಡುವಂತೆ ಅವರನ್ನು ಪ್ರೋತ್ಸಾಹಿಸುವುದು.
  • 2.ಮರಣದ ನಂತರ ಕಣ್ಣನ್ನು ದಾನ ಮಾಡುವುದರಿಂದ ಯಾವುದೇ ಹಾನಿ ಆಗುವುದಿಲ್ಲ ಎಂದು ಜನರಿಗೆ ತಿಳಿ ಹೇಳುವುದು.
  • 3. ಕಣ್ಣಿನ ಕಸಿ ಮಾಡುವ ಅಗತ್ಯತೆಯ ಬಗ್ಗೆ ಜನರಿಗೆ ಮಾಹಿತಿ ನೀಡುವುದು.

ನೇತ್ರದಾನವನ್ನು ಹೇಗೆ ಮಾಡುವುದು:

ವ್ಯಕ್ತಿ ಮರಣ ಹೊಂದಿದ 4 ರಿಂದ 6 ಗಂಟೆಗಳ ಒಳಗೆ ಕಣ್ಣುಗಳನ್ನು ದಾನ ಮಾಡಬಹುದಾಗಿದೆ. ವ್ಯಕ್ತಿಯ ಕಣ್ಣುಗಳನ್ನು ನೋಂದಾಯಿತ ವೈದ್ಯಕೀಯ ವೈದ್ಯರು ಮಾತ್ರ ತೆಗೆಯಬಹುದಾಗಿದೆ.

ವ್ಯಕ್ತಿಯ ಕಣ್ಣುಗಳನ್ನು ತೆಗೆಯಲು ಕಣ್ಣಿನ ಬ್ಯಾಂಕ್ ತಂಡ ಸತ್ತವರ ಮನೆಗೆ ಅಥವಾ ಆಸ್ಪತ್ರೆಗೆ ಭೇಟಿ ನೀಡಬೇಕಾಗುತ್ತದೆ.

ಕಣ್ಣುಗಳನ್ನು ತೆಗೆಯುವ ಪ್ರಕ್ರಿಯೆಯೂ ಅಂತ್ಯಕ್ರಿಯೆಗೆ ವಿಳಂಬ ಮಾಡುವುದಿಲ್ಲ. ಏಕೆಂದರೆ ಇಡೀ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸುಮಾರು 20 ರಿಂದ 30 ನಿಮಿಷಗಳು ಸಾಕಗುತ್ತದೆ.

ವ್ಯಕ್ತಿ ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳನ್ನು ಹೊಂದಿದ್ದಾನೋ ಅಥವಾ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ರಕ್ತದ ಮಾದರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲದೇ ದಾನಿ ಮತ್ತು ಕಣ್ಣುಗಳನ್ನು ಹಾಕುವ ವ್ಯಕ್ತಿಯ ಮಾಹಿತಿಯನ್ನು ಗೌಪ್ಯವಾಗಿಡಲಾಗುತ್ತದೆ.

ಯಾವ ವ್ಯಕ್ತಿಗಳು ನೇತ್ರದಾನ ಮಾಡಲಾಗುವುದಿಲ್ಲ:

ಏಡ್ಸ್, ಹೆಪಟೈಟಿಸ್ ಬಿ ಮತ್ತು ಸಿ, ರೇಬೀಸ್, ಸೆಪ್ಟಿಸೆಮಿಯಾ, ತೀವ್ರವಾದ ರಕ್ತದ ಕ್ಯಾನ್ಸರ್, ಟೆಟನಸ್, ಕಾಲರಾ, ಸಾಂಕ್ರಾಮಿಕ ರೋಗಗಳಾದ ಎನ್ಸೆಫಾಲಿಟಿಸ್ ಮತ್ತು ಮೆನಿಂಜೈಟಿಸ್‌ನಿಂದ ಬಳಲುತ್ತಿರುವವರು ಕಣ್ಣುಗಳನ್ನು ದಾನ ಮಾಡಲು ಸಾಧ್ಯವಿಲ್ಲ.

ಅಸಮರ್ಪಕ ನೇತ್ರದಾನಕ್ಕೆ ಕಾರಣಗಳು:

ಪ್ರಚಲಿತ ಜನರಲ್ಲಿ ತಪ್ಪು ಗ್ರಹಿಕೆಗಳಿರುವುದು. ಅರಿವು ಹಾಗೂ ಅಸಮರ್ಪಕ ಸುಸಜ್ಜಿತ ಕಣ್ಣಿನ ಬ್ಯಾಂಕ್​ ಮತ್ತು ದಾನಿಗಳ ಕೊರತೆ. ಇವು ಅಸಮರ್ಪಕ ದಾನದ ಹಿಂದಿನ ಕೆಲವು ಪ್ರಮುಖ ಕಾರಣಗಳಾಗಿವೆ.

ನೇತ್ರದಾನ ಮಾಡಲಿಚ್ಚಿಸುವವರು ಮಾಡಬೇಕಾದುದೇನು ?

ನಿಮ್ಮ ಹತ್ತಿರದ ನೇತ್ರ ಭಂಡಾರದಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಿರಬೇಕು. ಅಲ್ಲಿ ಅವರು ಕೊಡುವ ನೇತ್ರದಾನದ ಪ್ರತಿಜ್ಞಾಪತ್ರದಲ್ಲಿ ನಿಮ್ಮ ಸಂಪೂರ್ಣ ವಿವರಗಳನ್ನು ಬರೆದು, ನಿಮ್ಮ ಸಹಿ ಹಾಕಬೇಕು. ಜೊತೆಯಲ್ಲಿಯೇ ಇಬ್ಬರು ಸಾಕ್ಷಿಗಳ ಸಹಿಯೂ ಇರಬೇಕು. ನೇತ್ರ ಭಂಡಾರದಿಂದ ನಿಮಗೆ ದಾನಿಗಳ ಚೀಟಿಯನ್ನು ಕೊಡಲಾಗುತ್ತದೆ.

ಈ ಚೀಟಿಯನ್ನು ನೀವು ಸದಾ ನಿಮ್ಮ ಬಳಿ ಇರಿಸಿಕೊಂಡಿರಬೇಕು. ಅಥವಾ ಮನೆಯಲ್ಲಿ, ಕುಟುಂಬದ ಸದಸ್ಯರಿಗೆ ಸುಲಭದಲ್ಲಿ ದೊರಕುವಂತಹ ಸ್ಥಳದಲ್ಲಿ ಇರಿಸಿರಬೇಕು. ನಿಮ್ಮ ಹತ್ತಿರದ ಸಂಬಂಧಿಕರಲ್ಲಿ/ ಕುಟುಂಬ ಸದಸ್ಯರಲ್ಲಿ ನಿಮ್ಮ ನೇತ್ರದಾನದ ಒಲವನ್ನು ಮೊದಲೇ ತಿಳಿಸಿರಬೇಕು. ಏಕೆಂದರೆ, ಅವರ ಸಹಕಾರವಿಲ್ಲದೆ ನೇತ್ರದಾನ ಅಸಾಧ್ಯ.

ಮಧುಮೇಹ ಅಥವಾ ರಕ್ತದೊತ್ತಡದಿಂದ ಬಳಲಿದ್ದ ವ್ಯಕ್ತಿಯೂ ನೇತ್ರದಾನ ಮಾಡಬಹುದಾಗಿದೆ. ಕಣ್ಣಿನ ದೋಷಕ್ಕಾಗಿ ಕನ್ನಡಕ ಧರಿಸುವವರೂ ನೇತ್ರದಾನ ಮಾಡಬಹುದು. ಜೀವಿತಾವಧಿಯಲ್ಲಿ ಕಣ್ಣಿನ ಪೊರೆ ಅಥವಾ ಇನ್ನ್ಯಾವುದೇ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದವರೂ ತಮ್ಮ ಕಣ್ಣುಗಳನ್ನು ದಾನ ಮಾಡಬಹುದಾಗಿದೆ.
ಅಂಕಿಅಂಶಗಳು:

ಲ್ಯಾನ್ಸೆಟ್ ಗ್ಲೋಬಲ್ ಹೆಲ್ತ್ ಜರ್ನಲ್ ಪ್ರಕಾರ, ಪ್ರಪಂಚದಾದ್ಯಂತ ಸುಮಾರು 36 ಮಿಲಿಯನ್ ಜನರು ಕುರುಡುತನದಿಂದ ಬಳಲುತ್ತಿದ್ದಾರೆ. ಇದರಲ್ಲಿ ಭಾರತವು ಪ್ರಪಂಚದಲ್ಲಿನ ನಾಲ್ಕನೇ ಒಂದು ಭಾಗದಷ್ಟು ಕುರುಡರನ್ನು ಹೊಂದಿದೆ. ಸುಮಾರು 8.8 ಮಿಲಿಯನ್ ಜನರು ಅಂಧರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.