ETV Bharat / bharat

ಅಯೋಧ್ಯೆಯಲ್ಲಿ ಮಂದಿರ ನಿರ್ಮಿಸಲು ಮುಸ್ಲಿಂ ಸಂಘಟನೆಗಳಿಂದ ₹ 6 ಲಕ್ಷ ದೇಣಿಗೆ!

author img

By

Published : Nov 10, 2019, 8:45 AM IST

ಸುಪ್ರೀಂಕೋರ್ಟ್‌ನ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿರುವ ಕೆಲ ಮುಸ್ಲಿಂ ಸಂಘಟನೆಗಳು ಅಯೋಧ್ಯೆಯಲ್ಲಿ ಮಂದಿರ ನಿರ್ಮಣಕ್ಕೆ ದೇಣಿಗೆ ನೀಡಲು ಮುಂದಾಗಿವೆ. ಶಾಂತಿಯಿಂದ ಧಾರ್ಮಿಕ ಸಾಮರಸ್ಯೆ ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ. ಮಂದಿರ ನಿರ್ಮಾಣಕ್ಕೆ ಇದ್ದ ತೊಡಕು ನಿವಾರಣೆ ಆಗಿದೆ ಎಂದು ಅಭಿಪ್ರಾಯಪಟ್ಟಿದೆ.

ಸಾಂದರ್ಭಿಕ

ಗುವಾಹಟಿ: ಅಸ್ಸಾಂನ ವಿವಿಧ 21 ಮುಸ್ಲಿಂ ಸಂಘಟನೆಗಳ ಒಕ್ಕೂಟವಾದ ಜನಗೋಷ್ಠಿಯ ಸಮನ್ವಯ ಪರಿಷದ್​ ₹ 5 ಲಕ್ಷ ಹಾಗೂ ಮುಸ್ಲಿಂ ವಿದ್ಯಾರ್ಥಿಗಳ ಸಂಘಟನೆ ₹ 1 ಲಕ್ಷ ಹಣವನ್ನು ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ದೇಣಿಗೆಯಾಗಿ ನೀಡಲು ಮುಂದಾಗಿದ್ದು, ಈ ಮೂಲಕ ಧಾರ್ಮಿಕ ಸೌಹಾರ್ದತೆ ಮೆರೆಯಲಾಗಿದೆ.

ನಾವು ಸುಪ್ರೀಂಕೋರ್ಟ್‌ನ ಐತಿಹಾಸಿಕ ತೀರ್ಪನ್ನು ಸ್ವಾಗತಿಸುತ್ತೇವೆ. ತೀರ್ಪನ್ನು ಸ್ವೀಕರಿಸಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳಬೇಕೆಂದು ನಾವು ಎಲ್ಲರನ್ನೂ ಕೋರುತ್ತೇವೆ. ಮಂದಿರ ನಿರ್ಮಾಣಕ್ಕಾಗಿ ನಮ್ಮ ಸಂಸ್ಥೆ 1 ಲಕ್ಷ ರೂ. ನೀಡುತ್ತದೆ ಎಂದು ವಿದ್ಯಾರ್ಥಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮೈನುಲ್ ಹಕ್ ಹೇಳಿದ್ದಾರೆ.

ಸುಪ್ರೀಂಕೋರ್ಟ್​ ನೀಡಿದ ಐತಿಹಾಸಿಕ ತೀರ್ಪಿನಿಂದ ಮಂದಿರ ನಿರ್ಮಿಸಲು ಇದ್ದ ತೊಡಕು ನಿವಾರಣೆ ಆಗಿದೆ. ಮಂದಿರ ನಿರ್ಮಿಸುವ ಟ್ರಸ್ಟ್​ಗೆ ದೇಣಿಗೆ ನೀಡುತ್ತೇವೆ ಎಂದು ಸಮನ್ವಯ ಪರಿಷದ್​ ಮುಖಂಡರು ಹೇಳಿದ್ದಾರೆ.

ಗುವಾಹಟಿ: ಅಸ್ಸಾಂನ ವಿವಿಧ 21 ಮುಸ್ಲಿಂ ಸಂಘಟನೆಗಳ ಒಕ್ಕೂಟವಾದ ಜನಗೋಷ್ಠಿಯ ಸಮನ್ವಯ ಪರಿಷದ್​ ₹ 5 ಲಕ್ಷ ಹಾಗೂ ಮುಸ್ಲಿಂ ವಿದ್ಯಾರ್ಥಿಗಳ ಸಂಘಟನೆ ₹ 1 ಲಕ್ಷ ಹಣವನ್ನು ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ದೇಣಿಗೆಯಾಗಿ ನೀಡಲು ಮುಂದಾಗಿದ್ದು, ಈ ಮೂಲಕ ಧಾರ್ಮಿಕ ಸೌಹಾರ್ದತೆ ಮೆರೆಯಲಾಗಿದೆ.

ನಾವು ಸುಪ್ರೀಂಕೋರ್ಟ್‌ನ ಐತಿಹಾಸಿಕ ತೀರ್ಪನ್ನು ಸ್ವಾಗತಿಸುತ್ತೇವೆ. ತೀರ್ಪನ್ನು ಸ್ವೀಕರಿಸಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳಬೇಕೆಂದು ನಾವು ಎಲ್ಲರನ್ನೂ ಕೋರುತ್ತೇವೆ. ಮಂದಿರ ನಿರ್ಮಾಣಕ್ಕಾಗಿ ನಮ್ಮ ಸಂಸ್ಥೆ 1 ಲಕ್ಷ ರೂ. ನೀಡುತ್ತದೆ ಎಂದು ವಿದ್ಯಾರ್ಥಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮೈನುಲ್ ಹಕ್ ಹೇಳಿದ್ದಾರೆ.

ಸುಪ್ರೀಂಕೋರ್ಟ್​ ನೀಡಿದ ಐತಿಹಾಸಿಕ ತೀರ್ಪಿನಿಂದ ಮಂದಿರ ನಿರ್ಮಿಸಲು ಇದ್ದ ತೊಡಕು ನಿವಾರಣೆ ಆಗಿದೆ. ಮಂದಿರ ನಿರ್ಮಿಸುವ ಟ್ರಸ್ಟ್​ಗೆ ದೇಣಿಗೆ ನೀಡುತ್ತೇವೆ ಎಂದು ಸಮನ್ವಯ ಪರಿಷದ್​ ಮುಖಂಡರು ಹೇಳಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.