ನವದೆಹಲಿ: ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರ ರೈಲ್ವೆ ಇಲಾಖೆ ನಡುವೆ ಮುಸುಕಿನ ರಾಜಕೀಯ ಗುದ್ದಾಟ ಪ್ರಾರಂಭವಾಗಿದ್ದು, ವಲಸೆ ಕಾರ್ಮಿಕರಿಗಾಗಿ ರೈಲುಗಳನ್ನು ಬಿಟ್ಟರೂ ಅದನ್ನು ಮಹಾ ಸರ್ಕಾರ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದು ರೈಲ್ವೆ ಸಚಿವರು ಆರೋಪಿಸಿದ್ದಾರೆ.
ನಾಲ್ಕು ಗಂಟೆಗಳ ಅವಧಿಯಲ್ಲಿ ಈ ಬಗ್ಗೆ ಸರಣಿ ಟ್ವೀಟ್ಗಳನ್ನು ಮಾಡಿರುವ ರೈಲ್ವೆ ಸಚಿವ ಪಿಯೂಷ್ ಗೋಯಲ್, ಮಹಾರಾಷ್ಟ್ರದಿಂದ ಓಡಾಟ ನಡೆಸಲು ತಯಾರಾಗಿದ್ದ ವಿಶೇಷ ಶ್ರಮಿಕ್ ರೈಲುಗಳು ಪ್ರಯಾಣಿಕರ ಕೊರತೆಯಿಂದಾಗಿ ಸಂಚಾರ ನಡೆಸುವಲ್ಲಿ ವಿಫಲವಾಗಿವೆ. ಸೋಮವಾರ ರಾತ್ರಿ 11 ಗಂಟೆಯ ಹೊತ್ತಿಗೆ 145 ರೈಲುಗಳು ಸಂಚರಿಸಲು ಸಿದ್ಧವಾಗಿದ್ದವು. ಆದರೆ ಪ್ರಯಾಣಿಕರ ಕೊರತೆಯಿಂದಾಗಿ ಕೇವಲ 60 ರೈಲುಗಳು ಮಾತ್ರ ಓಡಾಟ ನಡೆಸಿವೆ ಎಂದಿದ್ದಾರೆ.
-
महाराष्ट्र सरकार ने प्रवासी मजदूरों की कठिनाइयों का राजनीतिकरण करने की कोशिश की है।
— Piyush Goyal (@PiyushGoyal) May 26, 2020 " class="align-text-top noRightClick twitterSection" data="
भारतीय रेल प्रवासी मजदूरों को उनके घर परिवार के पास पहुंचाने के लिए दिन रात सेवा में जुटी है। pic.twitter.com/iuGg5j7r1a
">महाराष्ट्र सरकार ने प्रवासी मजदूरों की कठिनाइयों का राजनीतिकरण करने की कोशिश की है।
— Piyush Goyal (@PiyushGoyal) May 26, 2020
भारतीय रेल प्रवासी मजदूरों को उनके घर परिवार के पास पहुंचाने के लिए दिन रात सेवा में जुटी है। pic.twitter.com/iuGg5j7r1aमहाराष्ट्र सरकार ने प्रवासी मजदूरों की कठिनाइयों का राजनीतिकरण करने की कोशिश की है।
— Piyush Goyal (@PiyushGoyal) May 26, 2020
भारतीय रेल प्रवासी मजदूरों को उनके घर परिवार के पास पहुंचाने के लिए दिन रात सेवा में जुटी है। pic.twitter.com/iuGg5j7r1a
ಮಂಗಳವಾರ ಸಂಜೆ 6 ಗಂಟೆಯವರೆಗೆ 145 ರೈಲುಗಳ ಪೈಕಿ 85 ರೈಲುಗಳು ಸಂಚರಿಸಬೇಕಿತ್ತು. ಆದರೆ ಪ್ರಯಾಣಿಕರನ್ಜು ಕರೆ ತರಲು ರಾಜ್ಯ ಸರ್ಕಾರ ವ್ಯವಸ್ಥೆ ಮಾಡದ ಕಾರಣ ಕೇವಲ 27 ರೈಲುಗಳು ಅಂದರೆ ಶೇ. 10ರಷ್ಟು ಮಾತ್ರ ಓಡಾಟ ನಡೆಸಿವೆ. ಬಡ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ದಯವಿಟ್ಟು ಸಹಾಯ ಮಾಡಬೇಕೆಂದು ನಾನು ಮಹಾರಾಷ್ಟ್ರ ಸರ್ಕಾರಕ್ಕೆ ವಿನಂತಿ ಮಾಡುತ್ತೇನೆ ಎಂದು ಗೋಯಲ್ ಹೇಳಿದ್ದಾರೆ.