ETV Bharat / bharat

ಲೋಕಸಭೆಯಲ್ಲಿ ಪ್ರತಿಧ್ವನಿಸಿದ ಗಾಂಧಿ ಕುಟುಂಬದ ಎಸ್​ಪಿಜಿ ಭದ್ರತೆ, ಜೆಎನ್​ಯು ವಿಚಾರ - ಲೋಕಸಭೆಯಲ್ಲಿ ಪ್ರತಿಧ್ವನಿಸಿದ ಗಾಂಧಿ ಕುಟುಂಬದ ಎಸ್​ಜಿಪಿ ಭದ್ರತೆ

ನಿನ್ನೆಯಿಂದ ಸಂಸತ್​ನ ಚಳಿಗಾಲದ ಅಧಿವೇಶನ ಆರಂಭಗೊಂಡಿದ್ದು, ಎರಡನೇ ದಿನವಾದ ಇಂದು ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಲೋಕಸಭೆಯಲ್ಲಿ ಇಂದು ಜೆಎನ್​ಯು ವಿಚಾರ, ರೈತರ ಸಮಸ್ಯೆಗಳು, ಗಾಂಧಿ ಕುಟುಂಬಕ್ಕೆ ಎಸ್​ಪಿಜಿ ಭದ್ರತೆ ವಿಚಾರ ಸೇರಿದಂತೆ ಹಲವು ಮಹತ್ವದ ವಿಚಾರಗಳು ಪ್ರತಿಧ್ವನಿಸಿದ್ದು, ಹಲವು ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿದೆ.

ಲೋಕಸಭೆ
author img

By

Published : Nov 19, 2019, 3:53 PM IST

ನವದೆಹಲಿ: ಸೋಮವಾರದಿಂದ ಸಂಸತ್​ನ ಚಳಿಗಾಲದ ಅಧಿವೇಶನ ಆರಂಭಗೊಂಡಿದ್ದು, ಹಲವು ವಿಷಯಗಳ ಕುರಿತ ಚರ್ಚೆ ನಡೆದಿದೆ. ಮಧ್ಯಾಹ್ನದ ಭೋಜನ ವಿರಾಮದ ಬಳಿಕ ಮತ್ತೆ ಸದನದ ಕಲಾಪ ಮಧ್ಯಾಹ್ನ 3 ಗಂಟೆಗೆ ಆರಂಭವಾಗಿದೆ.

ಜೆನ್​ಯು ವಿದ್ಯಾರ್ಥಿಗಳ ಪ್ರತಿಭಟನೆ ವಿಚಾರ...

ಸದನದಲ್ಲಿ ಜೆನ್​ಯು ವಿಚಾರ ಪ್ರಸ್ತಾಪಿಸದ ಬಿಎಸ್​ಪಿಯ ಡ್ಯಾನಿಶ್ ಅಲಿ ವಿಚಾರಕ್ಕೆ ಸ್ಪೀಕರ್ ಓಂ ಬಿರ್ಲಾ ಅವಕಾಶ ನಿರಾಕರಿಸಿದರು. ಶುಲ್ಕ ಹೆಚ್ಚಳ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ಲಾಠಿಚಾರ್ಜ್‌ ಮಾಡಿದ್ದು ದುರದೃಷ್ಟಕರ. ಈ ವಿಚಾರವಾಗಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ಡ್ಯಾನಿಶ್ ಅಲಿ ಒತ್ತಾಯಿಸಿದರು. ಆದರೆ ಈ ವಿಷಯ ಸ್ಪೀಕರ್​ ಪಟ್ಟಿ ಮಾಡಿದ ವಿಷಯ ಅಲ್ಲವಾದ್ದರಿಂದ ಸ್ಪೀಕರ್ ಓಂ ಬಿರ್ಲಾ ವಿಷಯದ ಚರ್ಚೆಗೆ ಅವಕಾಶ ನೀಡಲು ನಿರಾಕರಿಸಿದರು.

  • Delhi: Slogans of 'Tanashahi bandh karo, bandh karo' by Opposition as Question Hour gets underway in Lok Sabha. The first question in the House is on doubling of farmers income by 2022. pic.twitter.com/yUx2M64HaD

    — ANI (@ANI) November 19, 2019 " class="align-text-top noRightClick twitterSection" data=" ">

ಗಾಂಧಿ ಕುಟುಂಬಕ್ಕೆ ಎಸ್​ಪಿಜಿ ಭದ್ರತೆ ಹಿಂತೆಗೆದ ವಿಚಾರ ಚರ್ಚೆ...

ಗಾಂಧಿ ಕುಟುಂಬಕ್ಕೆ ಎಸ್​ಪಿಜಿ ಭದ್ರತೆ ತೆಗೆದು ಹಾಕಿದ ವಿಚಾರವನ್ನು ಕಾಂಗ್ರೆಸ್​ ನಾಯಕ ಅಧಿರ್​ ರಂಜನ್​ ಪ್ರಸ್ತಾಪಿಸಿದರು. ಗಾಂಧಿ ಕುಟುಂಬದ ಎಸ್​ಪಿಜಿ ಭದ್ರತೆ ತೆಗೆದು ಹಾಕುವ ಅವಶ್ಯಕತೆಯಾದರೂ ಏನಿತ್ತು? ಅವರು ಸಾಮನ್ಯ ರಾಜಕಾರಣಿಗಳಲ್ಲ. ದಿಢೀರನೆ ಅದನ್ನು ತೆಗೆದುಹಾಕುವಂತಹದ್ದು ಏನಾಯ್ತು ಎಂದು ಪ್ರಶ್ನಿಸಿದರು. 1991ರಿಂದ 2019ರವರೆಗೂ ಎನ್​ಡಿಎ ಸರ್ಕಾರ ಆಡಳಿತದಲ್ಲಿದ್ದಾಗ ಎಸ್​ಪಿಜಿ ಭದ್ರತೆಯನ್ನು ತೆಗೆದು ಹಾಕಿರಲೇ ಇಲ್ಲ ಎಂದು ಅಧಿರ್​ ರಂಜನ್​ ಹೇಳಿದರು.

ರೈತರ ಆದಾಯವನ್ನು ದ್ವಿಗುಣಗೊಳಿಸುವ ವಿಚಾರ...

2022ರ ವೇಳೆಗೆ ರೈತರ ಆದಯವನ್ನು ದ್ವಿಗುಣಗೊಳಿಸುವ ವಿಚಾರ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಪ್ರಸ್ತಾಪಗೊಂಡಿತು. ಈ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಪ್ರತಿಪಕ್ಷದ ಸಂಸದರು ಸದನದ ಬಾವಿಗಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಸಭಾಪತಿಗಳು, ರೈತರ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ಪ್ರತಿಪಕ್ಷದ ಸದಸ್ಯರಿಗೆ ಮನವಿ ಮಾಡಿದರು.

  • Congress leader Adhir Ranjan Chowdhury in Lok Sabha: Sonia Gandhi ji & Rahul Gandhi ji are not normal protectees. Vajpayee ji had allowed Special Protection Group (SPG) protection for the Gandhi family. From 1991-2019, NDA came to power twice but their SPG cover was never removed pic.twitter.com/FvyRacxRlL

    — ANI (@ANI) November 19, 2019 " class="align-text-top noRightClick twitterSection" data=" ">

ರೈತರು ನಮ್ಮ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ...

ಸದನದಲ್ಲಿ ರೈತರ ಬಗೆಗಿನ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ, ಕೃಷಿ ಹಾಗೂ ರೈತರ ಯೋಗಕ್ಷೇಮ ಸಚಿವ ನರೇಂದ್ರ ಸಿಂಗ್​ ತೋಮರ್​, ರೈತರ ಸಮಸ್ಯೆಗಳಿಗೆ ಪರಿಹಾರ ಕೊಡುವಲ್ಲಿ ಕೇಂದ್ರ ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ನಮ್ಮ ಯೋಜನೆಗಳಿಂದ ದೇಶದ ಎಲ್ಲಾ ರೈತರು ಅನುಕೂಲ ಪಡೆದಿದ್ದಾರೆ ಎಂದರು.

ನವದೆಹಲಿ: ಸೋಮವಾರದಿಂದ ಸಂಸತ್​ನ ಚಳಿಗಾಲದ ಅಧಿವೇಶನ ಆರಂಭಗೊಂಡಿದ್ದು, ಹಲವು ವಿಷಯಗಳ ಕುರಿತ ಚರ್ಚೆ ನಡೆದಿದೆ. ಮಧ್ಯಾಹ್ನದ ಭೋಜನ ವಿರಾಮದ ಬಳಿಕ ಮತ್ತೆ ಸದನದ ಕಲಾಪ ಮಧ್ಯಾಹ್ನ 3 ಗಂಟೆಗೆ ಆರಂಭವಾಗಿದೆ.

ಜೆನ್​ಯು ವಿದ್ಯಾರ್ಥಿಗಳ ಪ್ರತಿಭಟನೆ ವಿಚಾರ...

ಸದನದಲ್ಲಿ ಜೆನ್​ಯು ವಿಚಾರ ಪ್ರಸ್ತಾಪಿಸದ ಬಿಎಸ್​ಪಿಯ ಡ್ಯಾನಿಶ್ ಅಲಿ ವಿಚಾರಕ್ಕೆ ಸ್ಪೀಕರ್ ಓಂ ಬಿರ್ಲಾ ಅವಕಾಶ ನಿರಾಕರಿಸಿದರು. ಶುಲ್ಕ ಹೆಚ್ಚಳ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ಲಾಠಿಚಾರ್ಜ್‌ ಮಾಡಿದ್ದು ದುರದೃಷ್ಟಕರ. ಈ ವಿಚಾರವಾಗಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ಡ್ಯಾನಿಶ್ ಅಲಿ ಒತ್ತಾಯಿಸಿದರು. ಆದರೆ ಈ ವಿಷಯ ಸ್ಪೀಕರ್​ ಪಟ್ಟಿ ಮಾಡಿದ ವಿಷಯ ಅಲ್ಲವಾದ್ದರಿಂದ ಸ್ಪೀಕರ್ ಓಂ ಬಿರ್ಲಾ ವಿಷಯದ ಚರ್ಚೆಗೆ ಅವಕಾಶ ನೀಡಲು ನಿರಾಕರಿಸಿದರು.

  • Delhi: Slogans of 'Tanashahi bandh karo, bandh karo' by Opposition as Question Hour gets underway in Lok Sabha. The first question in the House is on doubling of farmers income by 2022. pic.twitter.com/yUx2M64HaD

    — ANI (@ANI) November 19, 2019 " class="align-text-top noRightClick twitterSection" data=" ">

ಗಾಂಧಿ ಕುಟುಂಬಕ್ಕೆ ಎಸ್​ಪಿಜಿ ಭದ್ರತೆ ಹಿಂತೆಗೆದ ವಿಚಾರ ಚರ್ಚೆ...

ಗಾಂಧಿ ಕುಟುಂಬಕ್ಕೆ ಎಸ್​ಪಿಜಿ ಭದ್ರತೆ ತೆಗೆದು ಹಾಕಿದ ವಿಚಾರವನ್ನು ಕಾಂಗ್ರೆಸ್​ ನಾಯಕ ಅಧಿರ್​ ರಂಜನ್​ ಪ್ರಸ್ತಾಪಿಸಿದರು. ಗಾಂಧಿ ಕುಟುಂಬದ ಎಸ್​ಪಿಜಿ ಭದ್ರತೆ ತೆಗೆದು ಹಾಕುವ ಅವಶ್ಯಕತೆಯಾದರೂ ಏನಿತ್ತು? ಅವರು ಸಾಮನ್ಯ ರಾಜಕಾರಣಿಗಳಲ್ಲ. ದಿಢೀರನೆ ಅದನ್ನು ತೆಗೆದುಹಾಕುವಂತಹದ್ದು ಏನಾಯ್ತು ಎಂದು ಪ್ರಶ್ನಿಸಿದರು. 1991ರಿಂದ 2019ರವರೆಗೂ ಎನ್​ಡಿಎ ಸರ್ಕಾರ ಆಡಳಿತದಲ್ಲಿದ್ದಾಗ ಎಸ್​ಪಿಜಿ ಭದ್ರತೆಯನ್ನು ತೆಗೆದು ಹಾಕಿರಲೇ ಇಲ್ಲ ಎಂದು ಅಧಿರ್​ ರಂಜನ್​ ಹೇಳಿದರು.

ರೈತರ ಆದಾಯವನ್ನು ದ್ವಿಗುಣಗೊಳಿಸುವ ವಿಚಾರ...

2022ರ ವೇಳೆಗೆ ರೈತರ ಆದಯವನ್ನು ದ್ವಿಗುಣಗೊಳಿಸುವ ವಿಚಾರ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಪ್ರಸ್ತಾಪಗೊಂಡಿತು. ಈ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಪ್ರತಿಪಕ್ಷದ ಸಂಸದರು ಸದನದ ಬಾವಿಗಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಸಭಾಪತಿಗಳು, ರೈತರ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ಪ್ರತಿಪಕ್ಷದ ಸದಸ್ಯರಿಗೆ ಮನವಿ ಮಾಡಿದರು.

  • Congress leader Adhir Ranjan Chowdhury in Lok Sabha: Sonia Gandhi ji & Rahul Gandhi ji are not normal protectees. Vajpayee ji had allowed Special Protection Group (SPG) protection for the Gandhi family. From 1991-2019, NDA came to power twice but their SPG cover was never removed pic.twitter.com/FvyRacxRlL

    — ANI (@ANI) November 19, 2019 " class="align-text-top noRightClick twitterSection" data=" ">

ರೈತರು ನಮ್ಮ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ...

ಸದನದಲ್ಲಿ ರೈತರ ಬಗೆಗಿನ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ, ಕೃಷಿ ಹಾಗೂ ರೈತರ ಯೋಗಕ್ಷೇಮ ಸಚಿವ ನರೇಂದ್ರ ಸಿಂಗ್​ ತೋಮರ್​, ರೈತರ ಸಮಸ್ಯೆಗಳಿಗೆ ಪರಿಹಾರ ಕೊಡುವಲ್ಲಿ ಕೇಂದ್ರ ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ನಮ್ಮ ಯೋಜನೆಗಳಿಂದ ದೇಶದ ಎಲ್ಲಾ ರೈತರು ಅನುಕೂಲ ಪಡೆದಿದ್ದಾರೆ ಎಂದರು.

Intro:Body:

Lok sabha adjourned till 3 pm


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.