ETV Bharat / bharat

ಅತೃಪ್ತ ಶಾಸಕರ ಅರ್ಜಿ ವಿಚಾರಣೆ: ಸುಪ್ರೀಂನಲ್ಲಿ ಹೀಗಿತ್ತು ಸುದೀರ್ಘ ವಾದ-ಪ್ರತಿವಾದ!

author img

By

Published : Jul 16, 2019, 5:06 PM IST

ತಮ್ಮ ರಾಜೀನಾಮೆ ಅಂಗೀಕಾರ ಮಾಡಲು ಸ್ಪೀಕರ್​ ರಮೇಶ್​ ಕುಮಾರ್​ ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದ ಅತೃಪ್ತ ಶಾಸಕರ ಅರ್ಜಿ ವಿಚಾರಣೆಯ ತೀರ್ಪು ನಾಳೆ ಪ್ರಕಟಗೊಳ್ಳಲಿದೆ.

ಸುಪ್ರೀಂ ಕೋರ್ಟ್​​

ನವದೆಹಲಿ: ಸುದೀರ್ಘ ವಿಚಾರಣೆ ಬಳಿಕ ಸುಪ್ರೀಂಕೋರ್ಟ್​​ ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ. ಬೆಳಗ್ಗೆ 10:30ಕ್ಕೆ ಆರಂಭವಾದ ವಾದ- ಪ್ರತಿವಾದ ಸರಿಸುಮಾರು ಮಧ್ಯಾಹ್ನ 3:30 ರವರೆಗೂ ಮುಂದುವರೆಯಿತು.

ಅಂತಿಮವಾಗಿ 3:30ಕ್ಕೆ ವಾದ - ಪ್ರತಿವಾದ ಕೊನೆಗೊಂಡಿತು. ಅಂತಿಮವಾಗಿ ಸುಪ್ರೀಂಕೋರ್ಟ್​ ತೀರ್ಪನ್ನು ನಾಳೆಗೆ ಕಾಯ್ದಿರಿಸಿತು. ಈ ನಡುವೆ ಗುರುವಾರ ಕುಮಾರಸ್ವಾಮಿ ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.

ಕೋರ್ಟ್​ ಮುಂದೆ ಈಗ ಸ್ಪೀಕರ್​​ ಮೊದಲಿಗೆ ರಾಜೀನಾಮೆ ವಿಚಾರ ಮೊದಲಿಗೆ ತೀರ್ಮಾನ ಮಾಡಬೇಕೋ, ಇಲ್ಲವೇ ಮೊದಲಿಗೆ ಅನರ್ಹತೆ ವಿಚಾರವನ್ನ ಪರಿಗಣನೆಗೆ ತೆಗೆದುಕೊಳ್ಳಬೇಕಾ ಎಂಬ ಬಗ್ಗೆ ತನ್ನ ತೀರ್ಮಾನ ಪ್ರಕಟಿಸಬೇಕಿದೆ. ಇನ್ನು ಅದಕ್ಕಿಂತ ಪೂರ್ವದಲ್ಲಿ ಸ್ಪೀಕರ್​ ಅವರ ಸಾಂವಿಧಾನಿಕ ಕಾರ್ಯದಲ್ಲಿ ಕೋರ್ಟ್​ ಮಧ್ಯಪ್ರವೇಶ ಮಾಡಬೇಕೇ ಬೇಡವೇ ಎಂಬ ಬಗ್ಗೆಯೇ ನ್ಯಾಯಮೂರ್ತಿಗಳು ತೀರ್ಮಾನ ಕೈಗೊಳ್ಳಬೇಕಿದೆ.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​​ನ ತ್ರಿ ಸದಸ್ಯಪೀಠ ಅಂತಿಮವಾಗಿ ತೀರ್ಪನ್ನ ನಾಳೆ ಬೆಳಗ್ಗೆ 10:30ಕ್ಕೆ ಮುಂದೂಡಿತು.

ರೋಹಟಗಿ ವಾದವೇನಿತ್ತು?

  • - ಅತೃಪ್ತ ಶಾಸಕರ ಪರ ಹಿರಿಯ ನ್ಯಾಯವಾದಿ ಮುಕುಲ್​ ರೋಹಟಗಿ ಸುದೀರ್ಘ 1:30 ಗಂಟೆ ಕಾಲ ವಾದ ಮಂಡಿಸಿದರು. ಕೇವಲ ಇಬ್ಬರು ಶಾಸಕರ ವಿರುದ್ಧ ಮಾತ್ರ ಅನರ್ಹತೆ ವಿಷಯ ಸ್ಪೀಕರ್ ಮುಂದಿದೆ ಎಂಬುದನ್ನ ಸಿಜೆಐ ಗಮನಕ್ಕೆ ತಂದರು.ಇದೇ ವೇಳೆ, ಅನರ್ಹತೆ ನೋಟಿಸ್​ ನೀಡಿದ್ದ ಉಮೇಶ್​ ಜಾಧವ್​ ಅವರ ರಾಜೀನಾಮೆ ಪತ್ರವನ್ನ ಇದೇ ಸ್ಪೀಕರ್​ ಸ್ಪೀಕಾರ ಮಾಡಿದ ಬಗ್ಗೆಯೂ ಕೋರ್ಟ್​ನ ಗಮನ ಸೆಳೆದರು.
  • ಅಷ್ಟೇ ಅಲ್ಲ ಆರ್ಟಿಕಲ್​​​​ 190 ಹಾಗೂ ಸಂವಿಧಾನದ ಶೆಡ್ಯೂಲ್​​​​ 10 ನಿಯಮಗಳು ಬೇರೆ.. ಇವರೆಡು ಒಂದಕ್ಕೊಂದು ಸಂಬಂಧವಿಲ್ಲ. ಅನರ್ಹತೆ ವಿಚಾರಣೆ ರಾಜೀನಾಮೆಯನ್ನ ನೀಡದಂತೆ ತಡೆಯಲು ಬರುವುದಿಲ್ಲ ಎಂದು ರೋಹಟಗಿ ತಮ್ಮ ವಾದ ಮಂಡನೆ ಮಾಡಿದರು.
  • ಈ ನಡುವೆ ಬಂಡಾಯ ಎದ್ದು ರಾಜೀನಾಮೆ ನೀಡಿರುವ ಶಾಸಕರು ಬಿಜೆಪಿ ಸೇರ್ಪಡೆ ಆಗುತ್ತಾರೆ ಎಂಬುದನ್ನು ಅಲ್ಲಗಳೆದರು. ಅವರೆಲ್ಲ ರಾಜೀನಾಮೆ ನೀಡಿ ಜನರ ಬಳಿ ಹೋಗಲು ತೀರ್ಮಾನಿಸಿದ್ದಾರೆ ಎಂಬುದನ್ನ ಸುಪ್ರೀಂ ಪೀಠದ ಗಮನಕ್ಕೆ ತಂದರು. ಸಂವಿಧಾನದ ಆರ್ಟಿಕಲ್​​​ 212 ಪ್ರಕಾರ ಸದನದ ಕಾರ್ಯವಿಧಾನದಲ್ಲಿ ಕೋರ್ಟ್​ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಹೇಳಿದೆ. ಆದರೆ, ಸ್ಪೀಕರ್​ ನಿರ್ಧಾರ ಕೈಗೊಳ್ಳಲು ಸಮಯ ನಿಗದಿ ಮಾಡುವದನ್ನ ಅಥವಾ ನಿರ್ದೇಶನ ನೀಡುವ ಹಕ್ಕನ್ನು ಕಸಿದುಕೊಂಡಿಲ್ಲ ಎಂಬುದನ್ನ ಮುಖ್ಯನ್ಯಾಯಮೂರ್ತಿಗಳ ಗಮನಕ್ಕೆ ತಂದರು.

ಸ್ಪೀಕರ್​ ಪರ ಹಾಜರಾದ ಹಿರಿಯ ನ್ಯಾಯವಾದಿ ಮನುಸಿಂಘ್ವಿ ವಾದ ಏನು?

  • ಕಳೆದ ಫೆಬ್ರವರಿಯಲ್ಲೇ ಶಾಸಕರ ವಿರುದ್ಧದ ಅನರ್ಹತೆ ಪ್ರಕರಣ ಸ್ಪೀಕರ್​ ಮುಂದಿದೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಈಗ ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ ಎಂದರು.
  • ರಾಜೀನಾಮೆ ಸಲ್ಲಿಸುವ ಶಾಸಕರು ಖುದ್ದಾಗಿ ಸ್ಪೀಕರ್​ ಭೇಟಿ ಮಾಡಿ ರಾಜೀನಾಮೆ ಸಲ್ಲಿಕೆ ಮಾಡಬೇಕು. ಅವರು ಮೊದಲು ರಾಜೀನಾಮೆ ಸಲ್ಲಿಸಿದ್ದಾಗ ಸ್ಪೀಕರ್​ ಭೇಟಿ ಮಾಡಿರಲಿಲ್ಲ. 11ನೇ ತಾರಿಖಿನಂದು ಖುದ್ದಾಗಿ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ ಎಂದರು.
  • ಆದರೆ ಈಗಾಗಲೇ ಅನರ್ಹತೆ ವಿಚಾರಣೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ರಾಜೀನಾಮೆ ಸಲ್ಲಿಕೆ ಮಾಡಿರುವುದರಿಂದ ಮೊದಲು ಅನರ್ಹತೆಯನ್ನ ನಿರ್ಧಾರ ಮಾಡಬೇಕಿದೆ ಎಂದರಲ್ಲದೆ, ಸಂವಿಧಾನದ 10ನೇ ಪರಿಚ್ಛೇದ ಹಾಗೂ ಆರ್ಟಿಕಲ್​​​ 190 ಎರಡಕ್ಕೂ ಸಂಬಂಧ ಇದೆ ಇವರೆಡು ಬೇರೆ ಬೇರೆ ಅಲ್ಲ ಎಂದು ವಾದಿಸಿದರು.
  • ಈ ಸಂದರ್ಭದಲ್ಲಿ ಮಧ್ಯ ಪ್ರವೇಶಸಿದ ಸಿಜೆಐ, 11ನೇ ತಾರಿಖು 10 ಶಾಸಕರು ಖುದ್ದಾಗಿ ಹಾಜರಾಗಿ ರಾಜೀನಾಮೆ ನೀಡಿದ್ದಾರಲ್ಲ, ಯಾಕೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಪ್ರಶ್ನಿಸಿದರು.
  • ಇದಕ್ಕೆ ಉತ್ತರಿಸಿದ ಅಭಿಷೇಕ್​ ಮನು ಸಿಂಘ್ವಿ, ನೀವೇ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿದ್ದರಿಂದಾಗಿ ರಾಜೀನಾಮೆ ಹಾಗೂ ಅನರ್ಹತೆ ವಿಚಾರದ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿಲ್ಲ. ಅನುಮತಿ ಕೊಟ್ಟರೆ ನಾಳೆಯೇ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

ಸಿಎಂ ಪರ ವಕೀಲ ಧವನ್​ ವಾದ ಏನು?

  • ಸಿಎಂ ಪರ ಹಾಜರಾದ ವಕೀಲ ರಾಜೀವ್​ ಧವನ್​ ಕೋರ್ಟ್​​​ ಯಾವುದೇ ನಿರ್ದೇಶನ ನೀಡುವಂತಿಲ್ಲ. ಜುಲೈ 11 ರಂದು ನೀವು ಮಧ್ಯಪ್ರವೇಶಿಸಿ ನೀಡಿದ ಆದೇಶವೂ ಸರಿಯಿಲ್ಲ ಎಂದು ವಾದ ಮಂಡನೆ ಮಾಡಿದರು.
  • ಸ್ಪೀಕರ್​​ ಕೆಲಸದಲ್ಲಿ ಕೋರ್ಟ್​ ಹಸ್ತಕ್ಷೇಪ ಮಾಡುವಂತಿಲ್ಲ. ಯಾವಾಗ ಸ್ಪೀಕರ್​ ತೀರ್ಮಾನ ಕೈಗೊಳ್ಳುತ್ತಾರೋ ಆಗ ಕೋರ್ಟ್​ ಮಧ್ಯಪ್ರವೇಶಿಸಬಹುದು. ಆದರೆ ಅದಕ್ಕಿಂತ ಮೊದಲು ಅಂದರೆ ವಿಚಾರಣೆ ಹಂತದಲ್ಲಿ ಹಸ್ತಕ್ಷೇಪ ಸರಿಯಲ್ಲ ಎಂದರು. ಹಾಗಂತಾ ತಾವು ಕೋರ್ಟ್​ನ ನ್ಯಾಯಾಂಗ ವಿಮರ್ಶೆಯನ್ನ ತಾವು ಪ್ರಶ್ನಿಸುತ್ತಿಲ್ಲ ಎಂದು ಧವನ್​ ಸ್ಪಷ್ಟಪಡಿಸಿದರು.
  • ಅಷ್ಟೇ ಅಲ್ಲ ಸುಪ್ರೀಂಕೋರ್ಟ್, ​ ಸರ್ಕಾರ ಕೆಡುವುದಕ್ಕೆ ರಚಿಸಿಕೊಂಡ ಗುಂಪಿಗೆ ಮನ್ನಣೆ ನೀಡಿ ವಿಚಾರಣೆಗೆ ಅಂಗೀಕರಿಸಿದಂತಾಗಿದೆ ಎಂದರು. ಅಷ್ಟೇ ಅಲ್ಲ ಸ್ಪೀಕರ್​​ ಸುಪ್ರೀಂಕೋರ್ಟ್​ನ ಡೆಡ್​ಲೈನ್​ ಯಾಕೆ ಒಪ್ಪಿಕೊಳ್ಳಲಿಲ್ಲ ಎಂಬ ಬಗ್ಗೆಯೂ ಧವನ್​ ವಾದ ಮಂಡನೆ ಮಾಡಿದರು.

ಅಂತಿಮವಾಗಿ ವಾದ - ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್​​ ಅಂತಿಮವಾಗಿ ನಾಳೆ ಬೆಳಗ್ಗೆ 10:30ಕ್ಕೆ ತೀರ್ಪು ಪ್ರಕಟಿಸುವುದಾಗಿ ಹೇಳಿತು.

ನವದೆಹಲಿ: ಸುದೀರ್ಘ ವಿಚಾರಣೆ ಬಳಿಕ ಸುಪ್ರೀಂಕೋರ್ಟ್​​ ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ. ಬೆಳಗ್ಗೆ 10:30ಕ್ಕೆ ಆರಂಭವಾದ ವಾದ- ಪ್ರತಿವಾದ ಸರಿಸುಮಾರು ಮಧ್ಯಾಹ್ನ 3:30 ರವರೆಗೂ ಮುಂದುವರೆಯಿತು.

ಅಂತಿಮವಾಗಿ 3:30ಕ್ಕೆ ವಾದ - ಪ್ರತಿವಾದ ಕೊನೆಗೊಂಡಿತು. ಅಂತಿಮವಾಗಿ ಸುಪ್ರೀಂಕೋರ್ಟ್​ ತೀರ್ಪನ್ನು ನಾಳೆಗೆ ಕಾಯ್ದಿರಿಸಿತು. ಈ ನಡುವೆ ಗುರುವಾರ ಕುಮಾರಸ್ವಾಮಿ ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.

ಕೋರ್ಟ್​ ಮುಂದೆ ಈಗ ಸ್ಪೀಕರ್​​ ಮೊದಲಿಗೆ ರಾಜೀನಾಮೆ ವಿಚಾರ ಮೊದಲಿಗೆ ತೀರ್ಮಾನ ಮಾಡಬೇಕೋ, ಇಲ್ಲವೇ ಮೊದಲಿಗೆ ಅನರ್ಹತೆ ವಿಚಾರವನ್ನ ಪರಿಗಣನೆಗೆ ತೆಗೆದುಕೊಳ್ಳಬೇಕಾ ಎಂಬ ಬಗ್ಗೆ ತನ್ನ ತೀರ್ಮಾನ ಪ್ರಕಟಿಸಬೇಕಿದೆ. ಇನ್ನು ಅದಕ್ಕಿಂತ ಪೂರ್ವದಲ್ಲಿ ಸ್ಪೀಕರ್​ ಅವರ ಸಾಂವಿಧಾನಿಕ ಕಾರ್ಯದಲ್ಲಿ ಕೋರ್ಟ್​ ಮಧ್ಯಪ್ರವೇಶ ಮಾಡಬೇಕೇ ಬೇಡವೇ ಎಂಬ ಬಗ್ಗೆಯೇ ನ್ಯಾಯಮೂರ್ತಿಗಳು ತೀರ್ಮಾನ ಕೈಗೊಳ್ಳಬೇಕಿದೆ.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​​ನ ತ್ರಿ ಸದಸ್ಯಪೀಠ ಅಂತಿಮವಾಗಿ ತೀರ್ಪನ್ನ ನಾಳೆ ಬೆಳಗ್ಗೆ 10:30ಕ್ಕೆ ಮುಂದೂಡಿತು.

ರೋಹಟಗಿ ವಾದವೇನಿತ್ತು?

  • - ಅತೃಪ್ತ ಶಾಸಕರ ಪರ ಹಿರಿಯ ನ್ಯಾಯವಾದಿ ಮುಕುಲ್​ ರೋಹಟಗಿ ಸುದೀರ್ಘ 1:30 ಗಂಟೆ ಕಾಲ ವಾದ ಮಂಡಿಸಿದರು. ಕೇವಲ ಇಬ್ಬರು ಶಾಸಕರ ವಿರುದ್ಧ ಮಾತ್ರ ಅನರ್ಹತೆ ವಿಷಯ ಸ್ಪೀಕರ್ ಮುಂದಿದೆ ಎಂಬುದನ್ನ ಸಿಜೆಐ ಗಮನಕ್ಕೆ ತಂದರು.ಇದೇ ವೇಳೆ, ಅನರ್ಹತೆ ನೋಟಿಸ್​ ನೀಡಿದ್ದ ಉಮೇಶ್​ ಜಾಧವ್​ ಅವರ ರಾಜೀನಾಮೆ ಪತ್ರವನ್ನ ಇದೇ ಸ್ಪೀಕರ್​ ಸ್ಪೀಕಾರ ಮಾಡಿದ ಬಗ್ಗೆಯೂ ಕೋರ್ಟ್​ನ ಗಮನ ಸೆಳೆದರು.
  • ಅಷ್ಟೇ ಅಲ್ಲ ಆರ್ಟಿಕಲ್​​​​ 190 ಹಾಗೂ ಸಂವಿಧಾನದ ಶೆಡ್ಯೂಲ್​​​​ 10 ನಿಯಮಗಳು ಬೇರೆ.. ಇವರೆಡು ಒಂದಕ್ಕೊಂದು ಸಂಬಂಧವಿಲ್ಲ. ಅನರ್ಹತೆ ವಿಚಾರಣೆ ರಾಜೀನಾಮೆಯನ್ನ ನೀಡದಂತೆ ತಡೆಯಲು ಬರುವುದಿಲ್ಲ ಎಂದು ರೋಹಟಗಿ ತಮ್ಮ ವಾದ ಮಂಡನೆ ಮಾಡಿದರು.
  • ಈ ನಡುವೆ ಬಂಡಾಯ ಎದ್ದು ರಾಜೀನಾಮೆ ನೀಡಿರುವ ಶಾಸಕರು ಬಿಜೆಪಿ ಸೇರ್ಪಡೆ ಆಗುತ್ತಾರೆ ಎಂಬುದನ್ನು ಅಲ್ಲಗಳೆದರು. ಅವರೆಲ್ಲ ರಾಜೀನಾಮೆ ನೀಡಿ ಜನರ ಬಳಿ ಹೋಗಲು ತೀರ್ಮಾನಿಸಿದ್ದಾರೆ ಎಂಬುದನ್ನ ಸುಪ್ರೀಂ ಪೀಠದ ಗಮನಕ್ಕೆ ತಂದರು. ಸಂವಿಧಾನದ ಆರ್ಟಿಕಲ್​​​ 212 ಪ್ರಕಾರ ಸದನದ ಕಾರ್ಯವಿಧಾನದಲ್ಲಿ ಕೋರ್ಟ್​ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಹೇಳಿದೆ. ಆದರೆ, ಸ್ಪೀಕರ್​ ನಿರ್ಧಾರ ಕೈಗೊಳ್ಳಲು ಸಮಯ ನಿಗದಿ ಮಾಡುವದನ್ನ ಅಥವಾ ನಿರ್ದೇಶನ ನೀಡುವ ಹಕ್ಕನ್ನು ಕಸಿದುಕೊಂಡಿಲ್ಲ ಎಂಬುದನ್ನ ಮುಖ್ಯನ್ಯಾಯಮೂರ್ತಿಗಳ ಗಮನಕ್ಕೆ ತಂದರು.

ಸ್ಪೀಕರ್​ ಪರ ಹಾಜರಾದ ಹಿರಿಯ ನ್ಯಾಯವಾದಿ ಮನುಸಿಂಘ್ವಿ ವಾದ ಏನು?

  • ಕಳೆದ ಫೆಬ್ರವರಿಯಲ್ಲೇ ಶಾಸಕರ ವಿರುದ್ಧದ ಅನರ್ಹತೆ ಪ್ರಕರಣ ಸ್ಪೀಕರ್​ ಮುಂದಿದೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಈಗ ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ ಎಂದರು.
  • ರಾಜೀನಾಮೆ ಸಲ್ಲಿಸುವ ಶಾಸಕರು ಖುದ್ದಾಗಿ ಸ್ಪೀಕರ್​ ಭೇಟಿ ಮಾಡಿ ರಾಜೀನಾಮೆ ಸಲ್ಲಿಕೆ ಮಾಡಬೇಕು. ಅವರು ಮೊದಲು ರಾಜೀನಾಮೆ ಸಲ್ಲಿಸಿದ್ದಾಗ ಸ್ಪೀಕರ್​ ಭೇಟಿ ಮಾಡಿರಲಿಲ್ಲ. 11ನೇ ತಾರಿಖಿನಂದು ಖುದ್ದಾಗಿ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ ಎಂದರು.
  • ಆದರೆ ಈಗಾಗಲೇ ಅನರ್ಹತೆ ವಿಚಾರಣೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ರಾಜೀನಾಮೆ ಸಲ್ಲಿಕೆ ಮಾಡಿರುವುದರಿಂದ ಮೊದಲು ಅನರ್ಹತೆಯನ್ನ ನಿರ್ಧಾರ ಮಾಡಬೇಕಿದೆ ಎಂದರಲ್ಲದೆ, ಸಂವಿಧಾನದ 10ನೇ ಪರಿಚ್ಛೇದ ಹಾಗೂ ಆರ್ಟಿಕಲ್​​​ 190 ಎರಡಕ್ಕೂ ಸಂಬಂಧ ಇದೆ ಇವರೆಡು ಬೇರೆ ಬೇರೆ ಅಲ್ಲ ಎಂದು ವಾದಿಸಿದರು.
  • ಈ ಸಂದರ್ಭದಲ್ಲಿ ಮಧ್ಯ ಪ್ರವೇಶಸಿದ ಸಿಜೆಐ, 11ನೇ ತಾರಿಖು 10 ಶಾಸಕರು ಖುದ್ದಾಗಿ ಹಾಜರಾಗಿ ರಾಜೀನಾಮೆ ನೀಡಿದ್ದಾರಲ್ಲ, ಯಾಕೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಪ್ರಶ್ನಿಸಿದರು.
  • ಇದಕ್ಕೆ ಉತ್ತರಿಸಿದ ಅಭಿಷೇಕ್​ ಮನು ಸಿಂಘ್ವಿ, ನೀವೇ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿದ್ದರಿಂದಾಗಿ ರಾಜೀನಾಮೆ ಹಾಗೂ ಅನರ್ಹತೆ ವಿಚಾರದ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿಲ್ಲ. ಅನುಮತಿ ಕೊಟ್ಟರೆ ನಾಳೆಯೇ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

ಸಿಎಂ ಪರ ವಕೀಲ ಧವನ್​ ವಾದ ಏನು?

  • ಸಿಎಂ ಪರ ಹಾಜರಾದ ವಕೀಲ ರಾಜೀವ್​ ಧವನ್​ ಕೋರ್ಟ್​​​ ಯಾವುದೇ ನಿರ್ದೇಶನ ನೀಡುವಂತಿಲ್ಲ. ಜುಲೈ 11 ರಂದು ನೀವು ಮಧ್ಯಪ್ರವೇಶಿಸಿ ನೀಡಿದ ಆದೇಶವೂ ಸರಿಯಿಲ್ಲ ಎಂದು ವಾದ ಮಂಡನೆ ಮಾಡಿದರು.
  • ಸ್ಪೀಕರ್​​ ಕೆಲಸದಲ್ಲಿ ಕೋರ್ಟ್​ ಹಸ್ತಕ್ಷೇಪ ಮಾಡುವಂತಿಲ್ಲ. ಯಾವಾಗ ಸ್ಪೀಕರ್​ ತೀರ್ಮಾನ ಕೈಗೊಳ್ಳುತ್ತಾರೋ ಆಗ ಕೋರ್ಟ್​ ಮಧ್ಯಪ್ರವೇಶಿಸಬಹುದು. ಆದರೆ ಅದಕ್ಕಿಂತ ಮೊದಲು ಅಂದರೆ ವಿಚಾರಣೆ ಹಂತದಲ್ಲಿ ಹಸ್ತಕ್ಷೇಪ ಸರಿಯಲ್ಲ ಎಂದರು. ಹಾಗಂತಾ ತಾವು ಕೋರ್ಟ್​ನ ನ್ಯಾಯಾಂಗ ವಿಮರ್ಶೆಯನ್ನ ತಾವು ಪ್ರಶ್ನಿಸುತ್ತಿಲ್ಲ ಎಂದು ಧವನ್​ ಸ್ಪಷ್ಟಪಡಿಸಿದರು.
  • ಅಷ್ಟೇ ಅಲ್ಲ ಸುಪ್ರೀಂಕೋರ್ಟ್, ​ ಸರ್ಕಾರ ಕೆಡುವುದಕ್ಕೆ ರಚಿಸಿಕೊಂಡ ಗುಂಪಿಗೆ ಮನ್ನಣೆ ನೀಡಿ ವಿಚಾರಣೆಗೆ ಅಂಗೀಕರಿಸಿದಂತಾಗಿದೆ ಎಂದರು. ಅಷ್ಟೇ ಅಲ್ಲ ಸ್ಪೀಕರ್​​ ಸುಪ್ರೀಂಕೋರ್ಟ್​ನ ಡೆಡ್​ಲೈನ್​ ಯಾಕೆ ಒಪ್ಪಿಕೊಳ್ಳಲಿಲ್ಲ ಎಂಬ ಬಗ್ಗೆಯೂ ಧವನ್​ ವಾದ ಮಂಡನೆ ಮಾಡಿದರು.

ಅಂತಿಮವಾಗಿ ವಾದ - ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್​​ ಅಂತಿಮವಾಗಿ ನಾಳೆ ಬೆಳಗ್ಗೆ 10:30ಕ್ಕೆ ತೀರ್ಪು ಪ್ರಕಟಿಸುವುದಾಗಿ ಹೇಳಿತು.

Intro:Body:

ಅತೃಪ್ತ ಶಾಸಕರ ಅರ್ಜಿ ವಿಚಾರಣೆ: ಸುಪ್ರೀಂನಲ್ಲಿ ಹೀಗಿತ್ತು ಸುದೀರ್ಘ ವಾದ-ಪ್ರತಿವಾದ! 



ನವದೆಹಲಿ: ಸುದೀರ್ಘ ವಿಚಾರಣೆ ಬಳಿಕ ಸುಪ್ರೀಂಕೋರ್ಟ್​​ ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ. ಬೆಳಗ್ಗೆ 10:30ಕ್ಕೆ ಆರಂಭವಾದ ವಾದ- ಪ್ರತಿವಾದ ಸರಿಸುಮಾರು ಮಧ್ಯಾಹ್ನ  3:30 ರವರೆಗೂ  ಮುಂದುವರೆಯಿತು. 



ಅಂತಿಮವಾಗಿ 3:30ಕ್ಕೆ ವಾದ - ಪ್ರತಿವಾದ ಕೊನೆಗೊಂಡಿತು. ಅಂತಿಮವಾಗಿ ಸುಪ್ರೀಂಕೋರ್ಟ್​ ತೀರ್ಪನ್ನು ನಾಳೆಗೆ ಕಾಯ್ದಿರಿಸಿತು.   ಈ ನಡುವೆ ಗುರುವಾರ ಕುಮಾರಸ್ವಾಮಿ ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.  



 ಕೋರ್ಟ್​ ಮುಂದೆ ಈಗ ಸ್ಪೀಕರ್​​ ಮೊದಲಿಗೆ ರಾಜೀನಾಮೆ ವಿಚಾರ ಮೊದಲಿಗೆ ತೀರ್ಮಾನ ಮಾಡಬೇಕೋ, ಇಲ್ಲವೇ ಮೊದಲಿಗೆ ಅನರ್ಹತೆ ವಿಚಾರವನ್ನ ಪರಿಗಣನೆಗೆ ತೆಗೆದುಕೊಳ್ಳಬೇಕಾ ಎಂಬ ಬಗ್ಗೆ ತನ್ನ ತೀರ್ಮಾನ ಪ್ರಕಟಿಸಬೇಕಿದೆ. ಇನ್ನು ಅದಕ್ಕಿಂತ ಪೂರ್ವದಲ್ಲಿ ಸ್ಪೀಕರ್​ ಅವರ ಸಾಂವಿಧಾನಿಕ ಕಾರ್ಯದಲ್ಲಿ ಕೋರ್ಟ್​ ಮಧ್ಯಪ್ರವೇಶ ಮಾಡಬೇಕೇ ಬೇಡವೇ ಎಂಬ ಬಗ್ಗೆಯೇ ನ್ಯಾಯಮೂರ್ತಿಗಳು ತೀರ್ಮಾನ ಕೈಗೊಳ್ಳಬೇಕಿದೆ.  



ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​​ನ ತ್ರಿ ಸದಸ್ಯಪೀಠ ಅಂತಿಮವಾಗಿ ತೀರ್ಪನ್ನ ನಾಳೆ ಬೆಳಗ್ಗೆ 10:30ಕ್ಕೆ ಮುಂದೂಡಿತು. 



ರೋಹಟಗಿ ವಾದವೇನಿತ್ತು? 

ಅತೃಪ್ತ ಶಾಸಕರ ಪರ ಹಿರಿಯ ನ್ಯಾಯವಾದಿ ಮುಕುಲ್​ ರೋಹಟಗಿ ಸುದೀರ್ಘ 1:30 ಗಂಟೆ ಕಾಲ ವಾದ ಮಂಡಿಸಿದರು.   ಕೇವಲ ಇಬ್ಬರು ಶಾಸಕರ ವಿರುದ್ಧ ಮಾತ್ರ ಅನರ್ಹತೆ ವಿಷಯ ಸ್ಪೀಕರ್ ಮುಂದಿದೆ ಎಂಬುದನ್ನ ಸಿಜೆಐ ಗಮನಕ್ಕೆ ತಂದರು. 



ಇದೇ ವೇಳೆ,   ಅನರ್ಹತೆ ನೋಟಿಸ್​ ನೀಡಿದ್ದ ಉಮೇಶ್​ ಜಾಧವ್​ ಅವರ ರಾಜೀನಾಮೆ ಪತ್ರವನ್ನ ಇದೇ ಸ್ಪೀಕರ್​ ಸ್ಪೀಕಾರ ಮಾಡಿದ ಬಗ್ಗೆಯೂ ಕೋರ್ಟ್​ನ  ಗಮನ ಸೆಳೆದರು. 



ಅಷ್ಟೇ ಅಲ್ಲ ಆರ್ಟಿಕಲ್​​​​ 190 ಹಾಗೂ ಸಂವಿಧಾನದ  ಶೆಡ್ಯೂಲ್​​​​ 10 ನಿಯಮಗಳು ಬೇರೆ.. ಇವರೆಡು ಒಂದಕ್ಕೊಂದು ಸಂಬಂಧವಿಲ್ಲ.  ಅನರ್ಹತೆ ವಿಚಾರಣೆ ರಾಜೀನಾಮೆಯನ್ನ ನೀಡದಂತೆ ತಡೆಯಲು ಬರುವುದಿಲ್ಲ ಎಂದು ರೋಹಟಗಿ ತಮ್ಮ ವಾದ ಮಂಡನೆ ಮಾಡಿದರು. 



 ಈ ನಡುವೆ ಬಂಡಾಯ ಎದ್ದು ರಾಜೀನಾಮೆ ನೀಡಿರುವ ಶಾಸಕರು ಬಿಜೆಪಿ ಸೇರ್ಪಡೆ ಆಗುತ್ತಾರೆ ಎಂಬುದನ್ನು ಅಲ್ಲಗಳೆದರು.  ಅವರೆಲ್ಲ ರಾಜೀನಾಮೆ ನೀಡಿ ಜನರ ಬಳಿ ಹೋಗಲು ತೀರ್ಮಾನಿಸಿದ್ದಾರೆ ಎಂಬುದನ್ನ ಸುಪ್ರೀಂ ಪೀಠದ ಗಮನಕ್ಕೆ ತಂದರು. ಸಂವಿಧಾನದ ಆರ್ಟಿಕಲ್​​​ 212 ಪ್ರಕಾರ  ಸದನದ ಕಾರ್ಯವಿಧಾನದಲ್ಲಿ ಕೋರ್ಟ್​ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಹೇಳಿದೆ. ಆದರೆ, ಸ್ಪೀಕರ್​ ನಿರ್ಧಾರ ಕೈಗೊಳ್ಳಲು ಸಮಯ ನಿಗದಿ ಮಾಡುವದನ್ನ ಅಥವಾ ನಿರ್ದೇಶನ ನೀಡುವ ಹಕ್ಕನ್ನು ಕಸಿದುಕೊಂಡಿಲ್ಲ ಎಂಬುದನ್ನ ಮುಖ್ಯನ್ಯಾಯಮೂರ್ತಿಗಳ ಗಮನಕ್ಕೆ ತಂದರು. 



ಸ್ಪೀಕರ್​ ಪರ ಹಾಜರಾದ ಹಿರಿಯ ನ್ಯಾಯವಾದಿ ಮನುಸಿಂಘ್ವಿ ವಾದ ಏನು? 

ಕಳೆದ ಫೆಬ್ರವರಿಯಲ್ಲೇ  ಶಾಸಕರ ವಿರುದ್ಧದ ಅನರ್ಹತೆ ಪ್ರಕರಣ ಸ್ಪೀಕರ್​ ಮುಂದಿದೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಈಗ ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ ಎಂದರು.  



ರಾಜೀನಾಮೆ ಸಲ್ಲಿಸುವ ಶಾಸಕರು  ಖುದ್ದಾಗಿ ಸ್ಪೀಕರ್​ ಭೇಟಿ ಮಾಡಿ ರಾಜೀನಾಮೆ ಸಲ್ಲಿಕೆ ಮಾಡಬೇಕು. ಅವರು ಮೊದಲು ರಾಜೀನಾಮೆ ಸಲ್ಲಿಸಿದ್ದಾಗ ಸ್ಪೀಕರ್​ ಭೇಟಿ ಮಾಡಿರಲಿಲ್ಲ. 11ನೇ ತಾರಿಖಿನಂದು ಖುದ್ದಾಗಿ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ ಎಂದರು. 



ಆದರೆ ಈಗಾಗಲೇ ಅನರ್ಹತೆ ವಿಚಾರಣೆ ನಡೆಸಲಾಗಿದೆ.  ಈ ಸಂದರ್ಭದಲ್ಲಿ ರಾಜೀನಾಮೆ ಸಲ್ಲಿಕೆ ಮಾಡಿರುವುದರಿಂದ ಮೊದಲು ಅನರ್ಹತೆಯನ್ನ ನಿರ್ಧಾರ ಮಾಡಬೇಕಿದೆ ಎಂದರಲ್ಲದೆ, ಸಂವಿಧಾನದ 10ನೇ ಪರಿಚ್ಛೇದ ಹಾಗೂ ಆರ್ಟಿಕಲ್​​​ 190 ಎರಡಕ್ಕೂ ಸಂಬಂಧ ಇದೆ ಇವರೆಡು ಬೇರೆ ಬೇರೆ ಅಲ್ಲ ಎಂದು ವಾದಿಸಿದರು. 



ಈ ಸಂದರ್ಭದಲ್ಲಿ ಮಧ್ಯ ಪ್ರವೇಶಸಿದ ಸಿಜೆಐ,  11ನೇ ತಾರಿಖು 10 ಶಾಸಕರು ಖುದ್ದಾಗಿ ಹಾಜರಾಗಿ ರಾಜೀನಾಮೆ ನೀಡಿದ್ದಾರಲ್ಲ, ಯಾಕೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಪ್ರಶ್ನಿಸಿದರು. 



ಇದಕ್ಕೆ ಉತ್ತರಿಸಿದ ಅಭಿಷೇಕ್​ ಮನು ಸಿಂಘ್ವಿ,   ನೀವೇ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿದ್ದರಿಂದಾಗಿ ರಾಜೀನಾಮೆ ಹಾಗೂ ಅನರ್ಹತೆ ವಿಚಾರದ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿಲ್ಲ. ಅನುಮತಿ ಕೊಟ್ಟರೆ ನಾಳೆಯೇ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.  



ಸಿಎಂ ಪರ ವಕೀಲ ಧವನ್​ ವಾದ ಏನು? 

ಸಿಎಂ ಪರ ಹಾಜರಾದ ವಕೀಲ ರಾಜೀವ್​ ಧವನ್​  ಕೋರ್ಟ್​​​ ಯಾವುದೇ ನಿರ್ದೇಶನ ನೀಡುವಂತಿಲ್ಲ.  ಜುಲೈ 11 ರಂದು ನೀವು ಮಧ್ಯಪ್ರವೇಶಿಸಿ ನೀಡಿದ ಆದೇಶವೂ ಸರಿಯಿಲ್ಲ ಎಂದು ವಾದ ಮಂಡನೆ ಮಾಡಿದರು. 



ಸ್ಪೀಕರ್​​ ಕೆಲಸದಲ್ಲಿ ಕೋರ್ಟ್​ ಹಸ್ತಕ್ಷೇಪ ಮಾಡುವಂತಿಲ್ಲ. ಯಾವಾಗ ಸ್ಪೀಕರ್​ ತೀರ್ಮಾನ ಕೈಗೊಳ್ಳುತ್ತಾರೋ ಆಗ ಕೋರ್ಟ್​ ಮಧ್ಯಪ್ರವೇಶಿಸಬಹುದು.   ಆದರೆ ಅದಕ್ಕಿಂತ ಮೊದಲು ಅಂದರೆ ವಿಚಾರಣೆ ಹಂತದಲ್ಲಿ ಹಸ್ತಕ್ಷೇಪ ಸರಿಯಲ್ಲ ಎಂದರು.   ಹಾಗಂತಾ ತಾವು ಕೋರ್ಟ್​ನ ನ್ಯಾಯಾಂಗ ವಿಮರ್ಶೆಯನ್ನ ತಾವು ಪ್ರಶ್ನಿಸುತ್ತಿಲ್ಲ ಎಂದು ಧವನ್​ ಸ್ಪಷ್ಟಪಡಿಸಿದರು. 



ಅಷ್ಟೇ ಅಲ್ಲ ಸುಪ್ರೀಂಕೋರ್ಟ್, ​ ಸರ್ಕಾರ ಕೆಡುವುದಕ್ಕೆ ರಚಿಸಿಕೊಂಡ ಗುಂಪಿಗೆ ಮನ್ನಣೆ ನೀಡಿ ವಿಚಾರಣೆಗೆ ಅಂಗೀಕರಿಸಿದಂತಾಗಿದೆ ಎಂದರು. ಅಷ್ಟೇ ಅಲ್ಲ ಸ್ಪೀಕರ್​​ ಸುಪ್ರೀಂಕೋರ್ಟ್​ನ ಡೆಡ್​ಲೈನ್​ ಯಾಕೆ ಒಪ್ಪಿಕೊಳ್ಳಲಿಲ್ಲ ಎಂಬ ಬಗ್ಗೆಯೂ ಧವನ್​ ವಾದ  ಮಂಡನೆ ಮಾಡಿದರು. 



ಅಂತಿಮವಾಗಿ ವಾದ - ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್​​ ಅಂತಿಮವಾಗಿ ನಾಳೆ ಬೆಳಗ್ಗೆ 10:30ಕ್ಕೆ ತೀರ್ಪು ಪ್ರಕಟಿಸುವುದಾಗಿ ಹೇಳಿತು. 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.