ETV Bharat / bharat

ಜಮ್ಮು - ಕಾಶ್ಮೀರ & ಲಡಾಖ್​ಗೆ ಲೆಪ್ಟಿನೆಂಟ್​ ಗವರ್ನರ್​​​ಗಳ ನೇಮಕ: ಸತ್ಯಪಾಲ್​ ಮಲಿಕ್​​ ದಿಢೀರ್​ ಎತ್ತಂಗಡಿ! - ಲೆಪ್ಟಿನೆಂಟ್​ ಗವರ್ನರ್

ಕೇಂದ್ರಾಡಳಿತ ಪ್ರದೇಶಗಳಾಗಿರುವ ಜಮ್ಮು-ಕಾಶ್ಮೀರ ಹಾಗೂ ಲಡಾಖ್​ಗೆ ನೂತನ ಲೆಪ್ಟಿನೆಂಟ್​ ಗವರ್ನರ್​ಗಳ ನೇಮಕವಾಗಿದ್ದು, ಕೇಂದ್ರ ಸರ್ಕಾರದಿಂದ ಹೊಸ ಆದೇಶ ಹೊರಬಿದ್ದಿದೆ.

ಜಮ್ಮು-ಕಾಶ್ಮೀರಕ್ಕೆ ನೂತನ ಗವರ್ನರ್​
author img

By

Published : Oct 25, 2019, 9:09 PM IST

ನವದೆಹಲಿ: ಜಮ್ಮು-ಕಾಶ್ಮೀರದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಸತ್ಯಪಾಲ್ ಮಲಿಕ್ ಅವರನ್ನು ಹಠಾತ್ತನೆ ವರ್ಗಾವಣೆ ಮಾಡಲಾಗಿದ್ದು, ಗೋವಾ ರಾಜ್ಯಪಾಲರಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಇದೀಗ ಜಮ್ಮು-ಕಾಶ್ಮೀರ ಹಾಗೂ ಲಡಾಖ್​ಗೆ ಮಾಜಿ ಐಎಎಸ್​​ ಅಧಿಕಾರಿಗಳಾಗಿರುವ ಗಿರೀಶ್​​​ ಚಂದ್ರ ಮುರ್ಮು ಹಾಗೂ ರಾಧಾ ಕೃಷ್ಣ ಮಾಥೂರ್​ ಲೆಪ್ಟಿನೆಂಟ್​ ಗವರ್ನರ್​ ಆಗಿ ನೇಮಕಗೊಂಡಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್​ 370 ರದ್ದು ಗೊಳಿಸಿದ ಬಳಿಕ ಅಕ್ಟೋಬರ್​ 31ರಂದು ಜಮ್ಮು-ಕಾಶ್ಮೀರ ಹಾಗೂ ಲಡಾಖ್​ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಣೆ ಮಾಡಲಾಗಿತ್ತು. ಈ ಹಿಂದೆ ಬಿಹಾರದ ಗವರ್ನರ್​ ಆಗಿದ್ದ ಸತ್ಯಪಾಲ್​ ಮಲಿಕ್​ 2018ರಲ್ಲಿ ಒಡಿಶಾದ ಹೆಚ್ಚುವರಿ ಗವರ್ನರ್​ ಆಗಿ ಸೇವೆ ಸಲ್ಲಿಸಿದ್ದರು. 1980-86 ಹಾಗೂ 1986-1992ರಲ್ಲಿ ಉತ್ತರ ಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿದ್ದ ಇವರು, 1974-1977ರಲ್ಲಿ ಉತ್ತರಪ್ರದೇಶದ ಅಸೆಂಬ್ಲಿ ಸದಸ್ಯರಾಗಿದ್ದರು.

ಇದೀಗ ಜಮ್ಮು-ಕಾಶ್ಮೀರಕ್ಕೆ ಲೆಪ್ಟಿನೆಂಟ್​ ಗವರ್ನರ್​ ಆಗಿ ಆಯ್ಕೆಯಾಗಿರುವ ಗಿರೀಶ್​ ಚಂದ್ರ ಮುರ್ಮು 1985ರ ಐಎಎಸ್ ಬ್ಯಾಚ್​ನ ಅಧಿಕಾರಿಯಾಗಿದ್ದು, ಕೇಂದ್ರ ಹಣಕಾಸು ವಿಭಾಗದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಜತೆಗೆ ಮೋದಿ ಗುಜರಾತ್​ ಸಿಎಂ ಆಗಿದ್ದ ವೇಳೆ ಅಲ್ಲಿನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ.

PS Sreedharan Pillai
ಮಿಜೋರಾಂ ಗವರ್ನರ್​​

ಲಡಾಖ್​​ ಕೇಂದ್ರಾಡಳಿತ ಪ್ರದೇಶಕ್ಕೆ ಲೆಪ್ಟಿನೆಂಟ್​ ಗವರ್ನರ್​ ಆಗಿ ಆಯ್ಕೆಯಾಗಿರುವ ರಾಧಾಕೃಷ್ಣ ಮಾಥೂರ್​ ಕೂಡ 1977ರ ಐಎಎಸ್​ ಬ್ಯಾಚ್​ನ ಅಧಿಕಾರಿಯಾಗಿದ್ದು, ಮುಖ್ಯ ಮಾಹಿತಿ ಆಯುಕ್ತರಾಗಿ ಸೇವೆ ಸಲ್ಲಿಕೆ ಮಾಡಿದ್ದಾರೆ. ಇದರ ಮಧ್ಯೆ ಮಿಜೋರಾಂದ ಗವರ್ನರ್​ ಆಗಿ ಪಿಎಸ್​ ಶ್ರೀಧರನ್​ ಆಯ್ಕೆಯಾಗಿದ್ದಾರೆ.

ನವದೆಹಲಿ: ಜಮ್ಮು-ಕಾಶ್ಮೀರದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಸತ್ಯಪಾಲ್ ಮಲಿಕ್ ಅವರನ್ನು ಹಠಾತ್ತನೆ ವರ್ಗಾವಣೆ ಮಾಡಲಾಗಿದ್ದು, ಗೋವಾ ರಾಜ್ಯಪಾಲರಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಇದೀಗ ಜಮ್ಮು-ಕಾಶ್ಮೀರ ಹಾಗೂ ಲಡಾಖ್​ಗೆ ಮಾಜಿ ಐಎಎಸ್​​ ಅಧಿಕಾರಿಗಳಾಗಿರುವ ಗಿರೀಶ್​​​ ಚಂದ್ರ ಮುರ್ಮು ಹಾಗೂ ರಾಧಾ ಕೃಷ್ಣ ಮಾಥೂರ್​ ಲೆಪ್ಟಿನೆಂಟ್​ ಗವರ್ನರ್​ ಆಗಿ ನೇಮಕಗೊಂಡಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್​ 370 ರದ್ದು ಗೊಳಿಸಿದ ಬಳಿಕ ಅಕ್ಟೋಬರ್​ 31ರಂದು ಜಮ್ಮು-ಕಾಶ್ಮೀರ ಹಾಗೂ ಲಡಾಖ್​ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಣೆ ಮಾಡಲಾಗಿತ್ತು. ಈ ಹಿಂದೆ ಬಿಹಾರದ ಗವರ್ನರ್​ ಆಗಿದ್ದ ಸತ್ಯಪಾಲ್​ ಮಲಿಕ್​ 2018ರಲ್ಲಿ ಒಡಿಶಾದ ಹೆಚ್ಚುವರಿ ಗವರ್ನರ್​ ಆಗಿ ಸೇವೆ ಸಲ್ಲಿಸಿದ್ದರು. 1980-86 ಹಾಗೂ 1986-1992ರಲ್ಲಿ ಉತ್ತರ ಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿದ್ದ ಇವರು, 1974-1977ರಲ್ಲಿ ಉತ್ತರಪ್ರದೇಶದ ಅಸೆಂಬ್ಲಿ ಸದಸ್ಯರಾಗಿದ್ದರು.

ಇದೀಗ ಜಮ್ಮು-ಕಾಶ್ಮೀರಕ್ಕೆ ಲೆಪ್ಟಿನೆಂಟ್​ ಗವರ್ನರ್​ ಆಗಿ ಆಯ್ಕೆಯಾಗಿರುವ ಗಿರೀಶ್​ ಚಂದ್ರ ಮುರ್ಮು 1985ರ ಐಎಎಸ್ ಬ್ಯಾಚ್​ನ ಅಧಿಕಾರಿಯಾಗಿದ್ದು, ಕೇಂದ್ರ ಹಣಕಾಸು ವಿಭಾಗದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಜತೆಗೆ ಮೋದಿ ಗುಜರಾತ್​ ಸಿಎಂ ಆಗಿದ್ದ ವೇಳೆ ಅಲ್ಲಿನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ.

PS Sreedharan Pillai
ಮಿಜೋರಾಂ ಗವರ್ನರ್​​

ಲಡಾಖ್​​ ಕೇಂದ್ರಾಡಳಿತ ಪ್ರದೇಶಕ್ಕೆ ಲೆಪ್ಟಿನೆಂಟ್​ ಗವರ್ನರ್​ ಆಗಿ ಆಯ್ಕೆಯಾಗಿರುವ ರಾಧಾಕೃಷ್ಣ ಮಾಥೂರ್​ ಕೂಡ 1977ರ ಐಎಎಸ್​ ಬ್ಯಾಚ್​ನ ಅಧಿಕಾರಿಯಾಗಿದ್ದು, ಮುಖ್ಯ ಮಾಹಿತಿ ಆಯುಕ್ತರಾಗಿ ಸೇವೆ ಸಲ್ಲಿಕೆ ಮಾಡಿದ್ದಾರೆ. ಇದರ ಮಧ್ಯೆ ಮಿಜೋರಾಂದ ಗವರ್ನರ್​ ಆಗಿ ಪಿಎಸ್​ ಶ್ರೀಧರನ್​ ಆಯ್ಕೆಯಾಗಿದ್ದಾರೆ.

Intro:Body:

ಜಮ್ಮು-ಕಾಶ್ಮೀರ & ಲಡಾಖ್​ಗೆ ಮೊದಲ ಲೆಪ್ಟಿನೆಂಟ್​ ಗವರ್ನರ್​​... ಸತ್ಯಪಾಲ್​ ಮಲಿಕ್​​ ವರ್ಗಾವಣೆ!



ನವದೆಹಲಿ: ಜಮ್ಮು-ಕಾಶ್ಮೀರದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಸತ್ಯಪಾಲ್ ಮಲಿಕ್ ಅವರನ್ನು ಹಠಾತ್ತನೆ ವರ್ಗಾವಣೆ ಮಾಡಲಾಗಿದ್ದು, ಗೋವಾ ರಾಜ್ಯಪಾಲರಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. 



ಇದೀಗ ಜಮ್ಮು-ಕಾಶ್ಮೀರ ಹಾಗೂ ಲಡಾಖ್​ಗೆ ಮಾಜಿ ಐಎಎಸ್​​ ಅಧಿಕಾರಿಗಳಾಗಿರುವ ಗಿರೀಶ್​​​ ಚಂದ್ರ ಮುರ್ಮಾ ಹಾಗೂ ರಾಧಾ ಕೃಷ್ಣ ಮಾಥೂರ್​ ಲೆಪ್ಟಿನೆಂಟ್​ ಗವರ್ನರ್​ ಆಗಿ ನೇಮಕಗೊಂಡಿದ್ದಾರೆ. 



ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್​ 370 ರದ್ಧುಗೊಳಿಸದ ಬಳಿಕ ಅಕ್ಟೋಬರ್​ 31ರಂದು ಜಮ್ಮು-ಕಾಶ್ಮೀರ ಹಾಗೂ ಲಡಾಖ್​ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಣೆ ಮಾಡಲಾಗಿದೆ. ಈ ಹಿಂದೆ ಬಿಹಾರದ ಗವರ್ನರ್​ ಆಗಿದ್ದ ಸತ್ಯಪಾಲ್​ ಮಲಿಕ್​ 2018ರಲ್ಲಿ ಒಡಿಶಾದ ಹೆಚ್ಚುವರಿ ಗವರ್ನರ್​ ಆಗಿ ಸೇವೆ ಸಲ್ಲಿಸಿದ್ದರು. 1980-86 ಹಾಗೂ 1986-1992ರಲ್ಲಿ ಉತ್ತರ ಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿದ್ದ ಇವರು, 1974-1977ರಲ್ಲಿ ಉತ್ತರಪ್ರದೇಶದ ಅಸೆಬ್ಲಿ ಸದಸ್ಯರಾಗಿದ್ದರು. 



ಇದೀಗ ಜಮ್ಮು-ಕಾಶ್ಮೀರಕ್ಕೆ ಲೆಪ್ಟಿನೆಂಟ್​ ಗವರ್ನರ್​ ಆಗಿ ಆಯ್ಕೆಯಾಗಿರುವ ಗಿರೀಶ್​ ಚಂದ್ರ ಮುರ್ಮಾ 1985ರ ಐಎಎಸ್ ಬ್ಯಾಚ್​ನ ಅಭ್ಯರ್ಥಿಯಾಗಿದ್ದು, ಕೇಂದ್ರ ಹಣಕಾಸು ವಿಭಾಗದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಜತೆಗೆ ಮೋದಿ ಗುಜರಾತ್​ ಸಿಎಂ ಅಗಿದ್ದ ವೇಳೆ ಅಲ್ಲಿನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ. 



ಲಡಾಖ್​​ ಕೇಂದ್ರಾಡಳಿತ ಪ್ರದೇಶಕ್ಕೆ ಲೆಪ್ಟಿನೆಂಟ್​ ಗವರ್ನರ್​ ಆಗಿ ಆಯ್ಕೆಯಾಗಿರುವ ರಾಧಾಕೃಷ್ಣ ಮಾಥೂರ್​ ಕೂಡ 1977ರ ಐಎಎಸ್​ ಬ್ಯಾಚ್​ನ ಅಭ್ಯರ್ಥಿಯಾಗಿದ್ದು, ಮುಖ್ಯ ಮಾಹಿತಿ ಆಯುಕ್ತರಾಗಿ ಸೇವೆ ಸಲ್ಲಿಕೆ ಮಾಡಿದ್ದಾರೆ. ಇದರ ಮಧ್ಯೆ ಮಿಜೋರಾಂದ ಗವರ್ನರ್​ ಆಗಿ ಪಿಎಸ್​ ಶ್ರೀಧರನ್​ ಆಯ್ಕೆಯಾಗಿದ್ದಾರೆ. 


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.