ಮುಂಬೈ: ಷೇರು ಮಾರುಕಟ್ಟೆ ಎಂಬ ವಹಿವಾಟಿನ ಸಾಗರದಲೆಯನ್ನ ಭೇದಿಸಿ ನುಗ್ಗುವ ಕಿರು ದೋಣಿಯನ್ನ ಒಂದು ಚಿಕ್ಕ ಅಲೆ ಮಗುಚಿ ಹಾಕಬಹುದು. ಅಂತಹ ಘಟನೆ ಇಂದಿನ ವಹಿವಾಟಿನಲ್ಲಿ ಸಂಭವಿಸಿದೆ.
ಮುಂಬೈ ಷೇರು ಪೇಟೆಯಲ್ಲಿ ಹೂಡಿಕೆದಾರರು ಗುರುವಾರದ ಒಂದು ದಿನದ ವಹಿವಾಟಿನಲ್ಲಿ ಸುಮಾರು ₹ 2.22 ಲಕ್ಷ ಕೋಟಿ (₹ 2.22 ಟ್ರಿಲಿಯನ್) ಸಂಪತ್ತು ಕಳೆದುಕೊಂಡಿದ್ದಾರೆ. ಇದಕ್ಕೆ ಆರ್ಬಿಐ ತೆಗೆದುಕೊಂಡ ಇಂದಿನ ನಿರ್ಧಾರ ಹಾಗೂ ದೇಶಿ- ವಿದೇಶಿ ಮಾರುಕಟ್ಟೆಗಳ ಬೆಳವಣಿಗೆಗಳು ಸಹ ಪುಷ್ಟಿನೀಡಿವೆ.
ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿ ದರದಲ್ಲಿ ಕಡಿತಗೊಳಿಸಿದ ಬಳಿಕ ಸೆನ್ಸೆಕ್ಸ್ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿತು. ''ಹಣಕಾಸೇತರ ಬ್ಯಾಂಕಿಂಗ್ ವಲಯದಲ್ಲಿ ಭರವಸೆ ಮೂಡಿಸುವಲ್ಲಿ ಆರ್ಬಿಐ ವಿಫಲವಾಗಿದ್ದು ಕುಸಿತಕ್ಕೆ ಮುಖ್ಯಕಾರಣ'' ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪ್ರಮುಖ 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 553.83 ಅಂಶಗಳ ಇಳಿಕೆ ಕಂಡು ಶೇ 1.38ರಷ್ಟು ಕ್ಷೀಣಿಸಿತ್ತು. ಅಂತಿಮವಾಗಿ 39,529.72 ಅಂಕಗಳಲ್ಲಿ ಮುಕ್ತಾಯ ಕಂಡಿದೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಕಂಡು ಬಂದ ನಕರಾತ್ಮಕ ನಡೆಯನ್ನು ಅನುಸರಿಸಿದ ಮಾರುಕಟ್ಟೆ ಕ್ಯಾಪಿಟಲೈಸೇಷನ್ನ (ಎಂ- ಕ್ಯಾಪ್) ಬಿಎಸ್ಇ ಒಟ್ಟು ಮಾರುಕಟ್ಟೆ ಮೌಲ್ಯ ₹ 2,22,304.65 ಕೋಟಿಯಿಂದ ₹ 1,53,19,126.66 ತಲುಪಿದೆ.
ಕಿರು ಎಂ-ಕ್ಯಾಪ್ ಸೂಚ್ಯಂಕದಲ್ಲೂ ಶೇ 1.77ರಷ್ಟು ಇಳಿಕೆ ದಾಖಲಿಸಿದೆ. ಬಿಎಸ್ಇನಲ್ಲಿ 1,859 ಷೇರುಗಳ ಮೌಲ್ಯದಲ್ಲಿ ಇಳಿಕೆ ಕಂಡುಬಂದಿದ್ದರೇ 740 ಷೇರುಗಳು ಅಲ್ಪ ಏರಿಕೆ ಹಾಗೂ 132 ಷೇರುಗಳ ಬೆಲೆ ಸ್ಥಿರವಾಗಿದ್ದವು.