ETV Bharat / bharat

ಭ್ರಷ್ಟಾಚಾರ ಪ್ರಕರಣದಲ್ಲಿ ಶರಣಾಗುವ ಇಂದ್ರಾಣಿ ಅರ್ಜಿಗೆ ಅಸ್ತು: ಚಿದಂಬರಂಗೆ ಕಾದಿದೆಯಾ ಸಂಕಷ್ಟ? - undefined

ಮಾಜಿ ಹಣಕಾಸು ಸಚಿವ ಪಿ .ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ಐಎನ್​ಎಕ್ಸ್​ ಮೀಡಿಯಾ ಭ್ರಷ್ಟಾಚಾರ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಇನ್ನು, ಮಗಳು ಶೀನಾ ಬೋರಾಳನ್ನು ಹತ್ಯೆಗೈದ ಕೇಸ್​ನಲ್ಲಿ ಇಂದ್ರಾಣಿ ಜೈಲು ಸೇರಿದ್ದು, ಭ್ರಷ್ಟಾಚಾರ ಪ್ರಕರಣದಲ್ಲಿಯೂ ಶರಣಾಗುತ್ತೇನೆ ಎಂದು ಮನವಿ ಸಲ್ಲಿಸಿದ್ದರು. ಮನವಿ ಪುರಸ್ಕರಿಸಿದ ಕೋರ್ಟ್​ ಮುಂದಿನ ವಿಚಾರಣೆಯನ್ನು ಜುಲೈ 11ಕ್ಕೆ ನಿಗದಿ ಮಾಡಿದೆ.

ಇಂದ್ರಾಣಿ ಮುಖರ್ಜಿ
author img

By

Published : Jul 4, 2019, 1:53 PM IST

ನವದೆಹಲಿ: ಮಗಳನ್ನು ಹತ್ಯೆ ಮಾಡಿ ಪ್ರಕರಣದಲ್ಲಿ ಜೈಲು ಸೇರಿರುವ ಇಂದ್ರಾಣಿ ಮುಖರ್ಜಿ, ಐಎನ್​ಎಕ್ಸ್​ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಶರಣಾಗುವ ಬಗೆಗಿನ ಮನವಿಯನ್ನು ದೆಹಲಿ ಕೋರ್ಟ್​ ಪುರಸ್ಕರಿಸಿದೆ.

ಮಾಜಿ ಹಣಕಾಸು ಸಚಿವ ಪಿ .ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ಈ ಭ್ರಷ್ಟಾಚಾರ ಪ್ರಕರಣದ ಪ್ರಮಖ ಆರೋಪಿಗಳಾಗಿದ್ದಾರೆ. ಇನ್ನು, ಮಗಳು ಶೀನಾ ಬೋರಾಳನ್ನು ಹತ್ಯೆಗೈದ ಕೇಸ್​ನಲ್ಲಿ ಇಂದ್ರಾಣಿ ಜೈಲು ಸೇರಿದ್ದು, ಭ್ರಷ್ಟಾಚಾರ ಪ್ರಕರಣದಲ್ಲಿಯೂ ಶರಣಾಗುತ್ತೇನೆ ಎಂದು ಮನವಿ ಸಲ್ಲಿಸಿದ್ದರು. ಮನವಿ ಪುರಸ್ಕರಿಸಿದ ಕೋರ್ಟ್​ ಮುಂದಿನ ವಿಚಾರಣೆಯನ್ನು ಜುಲೈ 11ಕ್ಕೆ ನಿಗದಿ ಮಾಡಿದೆ.

ಚಿದಂಬರಂ ಹಣಕಾಸು ಸಚಿವರಾಗಿದ್ದ ಸಮಯದಲ್ಲಿ, ಪುತ್ರ ಕಾರ್ತಿ ಚಿದಂಬರಂ ಐಎನ್​ಎಕ್ಸ್​ ಮೀಡಿಯಾಗಾಗಿ ವಿದೇಶಿ ಬಂಡವಾಳ ಪ್ರವರ್ಧನ ಮಂಡಳಿಯಿಂದ 305 ಕೋಟಿ ರೂಗಳ ನಿಧಿಗೆ ಅನುಮೋದನೆ ಪಡೆದಿದ್ದರ ಸಂಬಂಧ ಸಿಬಿಐ ಹಾಗೂ ಇಡಿ ತನಿಖೆ ನಡೆಸುತ್ತಿದೆ.

ಈಗಾಗಲೆ ತಂದೆ, ಮಗ ಇಬ್ಬರೂ ಈ ಬಗ್ಗೆ ವಿಚಾರಣೆ ಎದುರಿಸಿದ್ದಾರೆ. ಐಎನ್​ಎಕ್ಸ್​ ಮೀಡಿಯಾದ ಮಾಲೀಕರು ಇಂದ್ರಾಣಿ ಮುಖರ್ಜಿ ಹಾಗೂ ಪೀಟರ್​ ಆಗಿದ್ದರು. ಈಗಾಗಲೇ ಈ ಇಬ್ಬರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಕಾರ್ತಿ ಚಿದಂಬರಂ ಅವರನ್ನು ಬಂಧಿಸಿ, 54 ಕೋಟಿ ಮೊತ್ತದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಜಾಮೀನಿನ ಮೇಲೆ ಅವರು ಹೊರಬಂದಿದ್ದಾರೆ.

ನವದೆಹಲಿ: ಮಗಳನ್ನು ಹತ್ಯೆ ಮಾಡಿ ಪ್ರಕರಣದಲ್ಲಿ ಜೈಲು ಸೇರಿರುವ ಇಂದ್ರಾಣಿ ಮುಖರ್ಜಿ, ಐಎನ್​ಎಕ್ಸ್​ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಶರಣಾಗುವ ಬಗೆಗಿನ ಮನವಿಯನ್ನು ದೆಹಲಿ ಕೋರ್ಟ್​ ಪುರಸ್ಕರಿಸಿದೆ.

ಮಾಜಿ ಹಣಕಾಸು ಸಚಿವ ಪಿ .ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ಈ ಭ್ರಷ್ಟಾಚಾರ ಪ್ರಕರಣದ ಪ್ರಮಖ ಆರೋಪಿಗಳಾಗಿದ್ದಾರೆ. ಇನ್ನು, ಮಗಳು ಶೀನಾ ಬೋರಾಳನ್ನು ಹತ್ಯೆಗೈದ ಕೇಸ್​ನಲ್ಲಿ ಇಂದ್ರಾಣಿ ಜೈಲು ಸೇರಿದ್ದು, ಭ್ರಷ್ಟಾಚಾರ ಪ್ರಕರಣದಲ್ಲಿಯೂ ಶರಣಾಗುತ್ತೇನೆ ಎಂದು ಮನವಿ ಸಲ್ಲಿಸಿದ್ದರು. ಮನವಿ ಪುರಸ್ಕರಿಸಿದ ಕೋರ್ಟ್​ ಮುಂದಿನ ವಿಚಾರಣೆಯನ್ನು ಜುಲೈ 11ಕ್ಕೆ ನಿಗದಿ ಮಾಡಿದೆ.

ಚಿದಂಬರಂ ಹಣಕಾಸು ಸಚಿವರಾಗಿದ್ದ ಸಮಯದಲ್ಲಿ, ಪುತ್ರ ಕಾರ್ತಿ ಚಿದಂಬರಂ ಐಎನ್​ಎಕ್ಸ್​ ಮೀಡಿಯಾಗಾಗಿ ವಿದೇಶಿ ಬಂಡವಾಳ ಪ್ರವರ್ಧನ ಮಂಡಳಿಯಿಂದ 305 ಕೋಟಿ ರೂಗಳ ನಿಧಿಗೆ ಅನುಮೋದನೆ ಪಡೆದಿದ್ದರ ಸಂಬಂಧ ಸಿಬಿಐ ಹಾಗೂ ಇಡಿ ತನಿಖೆ ನಡೆಸುತ್ತಿದೆ.

ಈಗಾಗಲೆ ತಂದೆ, ಮಗ ಇಬ್ಬರೂ ಈ ಬಗ್ಗೆ ವಿಚಾರಣೆ ಎದುರಿಸಿದ್ದಾರೆ. ಐಎನ್​ಎಕ್ಸ್​ ಮೀಡಿಯಾದ ಮಾಲೀಕರು ಇಂದ್ರಾಣಿ ಮುಖರ್ಜಿ ಹಾಗೂ ಪೀಟರ್​ ಆಗಿದ್ದರು. ಈಗಾಗಲೇ ಈ ಇಬ್ಬರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಕಾರ್ತಿ ಚಿದಂಬರಂ ಅವರನ್ನು ಬಂಧಿಸಿ, 54 ಕೋಟಿ ಮೊತ್ತದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಜಾಮೀನಿನ ಮೇಲೆ ಅವರು ಹೊರಬಂದಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.