ಹೈದರಾಬಾದ್ : ಕೋವಿಡ್-19 ವೈರಸ್ ತಡೆಗಟ್ಟುವ ಸಲುವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ನಾಗರಿಕರಿಗೆ ಸಲಹೆ ನೀಡಿತ್ತು. ವಿಪರ್ಯಾಸವೆಂದರೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಈ ನಿಯಮವನ್ನು ಅನುಸರಿಸಲು ಸಾಧ್ಯವಿಲ್ಲ. ಯಾಕೆಂದರೆ, ಸುಮಾರು 55 ಕೈದಿಗಳು ಒಂದೇ ಕೋಣೆ ಹಂಚಿಕೊಳ್ಳುತ್ತಿದ್ದಾರೆ ಎಂದು 'ಭಾರತೀಯ ನ್ಯಾಯ ವರದಿ 2020' ತಿಳಿಸಿದೆ.
ಕೊರೊನಾ ವೈರಸ್ ಹಿನ್ನೆಲೆ ಮಾರ್ಚ್ 23ರಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉನ್ನತ ಮಟ್ಟದ ಸಮಿತಿಗಳನ್ನು ರಚಿಸುವಂತೆ ನಿರ್ದೇಶನ ನೀಡಿತು.
ಕಾರಾಗೃಹಗಳಲ್ಲಿ ಜನದಟ್ಟಣೆ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ವಿಶೇಷ ಕಾಳಜಿ ವಹಿಸುವಂತೆ ಸೂಚಿಸಿತ್ತು. ಆದರೆ, ಭಾರತ ನ್ಯಾಯ ವರದಿ 2020ರ ವರದಿ ಪಕ್ರಟಿಸಿದ್ದು, ಒಟ್ಟು ಕೈದಿಗಳಲ್ಲಿ 67% ಶಿಕ್ಷೆಯಿಲ್ಲದೆ ಜೈಲಿನಲ್ಲಿದ್ದಾರೆ ಎಂದು ತಿಳಿಸಿದೆ.
ಕಾರಾಗೃಹಗಳ ಸಂಖ್ಯೆ 1,412 ರಿಂದ 1,350 ಕ್ಕೆ ಇಳಿಕೆ : ಪಿಎಸ್ಐ ಪ್ರಕಾರ ಕಾರಾಗೃಹದಲ್ಲಿರುವ ಆರೋಪಿಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. 2016ರಲ್ಲಿ 4,33,003 ಜನ ಜೈಲಿನಲ್ಲಿದ್ದು, 2019ರ ವೇಳೆಗೆ 4,78,600 ಕ್ಕೆ ಏರಿಯಾಗಿದೆ. ಆದರೆ, ಕಾರಾಗೃಹಗಳ ಸಂಖ್ಯೆ 1,412 ರಿಂದ 1,350ಕ್ಕೆ ಇಳಿದಿದೆ. ಹಲವಾರು ಸಮರ್ಥನೀಯವಲ್ಲದ ಉಪ ಜೈಲುಗಳನ್ನು ಮುಚ್ಚಲಾಗಿದೆ.
ಜೈಲಿನಲ್ಲಿರುವವರ ಸಂಖ್ಯೆ ಹೆಚ್ಚಳಕ್ಕೆ ಕಾರಣವೇನು? : ವರದಿಗಳ ಪ್ರಕಾರ, ಅನಗತ್ಯ ಬಂಧನ, ಜಾಮೀನು ನೀಡುವ ವಿಧಾನಗಳು, ವಿಚಾರಣೆಯಲ್ಲಿ ವಿಳಂಬ, ಅಂಡರ್ ಟ್ರಯಲ್ ರಿವ್ಯೂ ಕಮಿಟಿಗಳಂತಹ ಮೇಲ್ವಿಚಾರಣಾ ಕಾರ್ಯವಿಧಾನಗಳ ಅಸಮರ್ಥತೆಯು ಜನದಟ್ಟಣೆಗೆ ಕಾರಣವಾಗಿದೆ. ಇನ್ನು, ದೆಹಲಿಯಲ್ಲಿ ಶೇ.175, ಉತ್ತರ ಪ್ರದೇಶದಲ್ಲಿ ಶೇ.168 ಮತ್ತು ಉತ್ತರಾಖಂಡ ಶೇ.159 ಕಾರಾಗೃಹಗಳಲ್ಲಿ ಹೆಚ್ಚು ಜನದಟ್ಟಣೆ ಇದೆ ಎನ್ನಲಾಗಿದೆ.
ಭಾರತ ನ್ಯಾಯ ವರದಿ : ಭಾರತ ನ್ಯಾಯ ವರದಿಯ ಎರಡನೇ ಆವೃತ್ತಿಯು ನ್ಯಾಯ ವಿತರಣೆಯ ನಾಲ್ಕು ಸ್ತಂಭಗಳಾದ ಪೊಲೀಸ್, ನ್ಯಾಯಾಂಗ, ಕಾರಾಗೃಹಗಳು ಮತ್ತು ಕಾನೂನು ನೆರವುಗಳ ಕುರಿತು ವಿವಿಧ ಸರ್ಕಾರಿ ಸಂಸ್ಥೆಗಳು ಸಾರ್ವಜನಿಕವಾಗಿ ಲಭ್ಯವಿರುವ ದತ್ತಾಂಶ ಆಧರಿಸಿದೆ. ಶ್ರೇಯಾಂಕವು ಟಾಟಾ ಟ್ರಸ್ಟ್ನ ಸಾಮಾಜಿಕ ನ್ಯಾಯ, ಸಾಮಾನ್ಯ ಕಾರಣ, ಕಾಮನ್ವೆಲ್ತ್ ಮಾನವ ಹಕ್ಕುಗಳ ಉಪಕ್ರಮ, ಡಿಎಕೆಎಸ್, ಟಿಐಎಸ್ಎಸ್-ಪ್ರಯಾಸ್, ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ಮತ್ತು ಹೌ ಇಂಡಿಯಾ ಲೈವ್ಸ್ ಸಹಯೋಗದೊಂದಿಗೆ ಒಂದು ಉಪಕ್ರಮವಾಗಿದೆ.