ಅತ್ಯುತ್ತಮ ಮಲೇರಿಯಾ ನಿರೋಧಕ ಔಷಧಿಗಳೆಂದು ಗುರುತಿಸಲ್ಪಟ್ಟ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಈಗ ಕೊವಿಡ್-19 ಚಿಕಿತ್ಸೆಗೆ ಬಳಸಲಾಗುತ್ತಿದೆ. ಈ ಮಾತ್ರೆಗಳನ್ನು ರವಾನಿಸುವಂತೆ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರೇ ಭಾರತ ಸರ್ಕಾರವನ್ನು ಕೇಳಿದ್ದಾರೆ. ಲಕ್ಷಾಂತರ ಎಚ್ಸಿಕ್ಯು ಟ್ಯಾಬ್ಲೆಟ್ಗಳನ್ನು ವಿದೇಶಗಳಿಗೆ ರಫ್ತು ಮಾಡುವ ಭಾರತದ ಪ್ರಸ್ತುತ ಸ್ಥಾನದ ಹಿಂದೆ ಮಹಾನ್ ಮನುಷ್ಯನ ಉದ್ಯಮವಿದೆ. ಭಾರತೀಯ 'ರಸಾಯನಶಾಸ್ತ್ರದ ಪಿತಾಮಹ' ಎಂದು ಕರೆಯಲ್ಪಡುವ ಆಚಾರ್ಯ ಪ್ರಫುಲ್ಲಾ ರೇ ಹಲವಾರು ಕ್ಷೇತ್ರಗಳಲ್ಲಿ ಅಸಾಧಾರಣ ಪ್ರಯತ್ನಗಳನ್ನು ಮಾಡಿದ್ದಾರೆ.
ಬಂಗಾಳ ಕೆಮಿಕಲ್ ವರ್ಕ್ಸ್ ಪ್ರಾರಂಭ:
ಸರ್ ರೇ 1861 ರ ಆಗಸ್ಟ್ 2 ರಂದು ಹಿಂದಿನ ಬಂಗಾಳ ಪ್ರೆಸಿಡೆನ್ಸಿಯ ರರುಲಿ-ಕಟಿಪರಾದಲ್ಲಿ ಜನಿಸಿದರು. 1887 ರಲ್ಲಿ, ಎಡಿನ್ಬರ್ಗ್ ವಿಶ್ವವಿದ್ಯಾಲಯದಿಂದ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಪದವಿ ನೀಡಲಾಯಿತು. ನಂತರ ಅವರು 1892 ರವರೆಗೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ರಸಾಯನ ಶಾಸ್ತ್ರವನ್ನು ಕಲಿಸಿದರು. ರೂಪಾಯಿ 700 ರ ಬಂಡವಾಳದೊಂದಿಗೆ, ಅವರು ಬಂಗಾಳ ಕೆಮಿಕಲ್ ವರ್ಕ್ಸ್ ಎಂಬ ಕಂಪನಿಯನ್ನು ಪ್ರಾರಂಭಿಸಿದರು. ಇದು ಸಾರ್ವಜನಿಕ ಬಳಕೆಗಾಗಿ ಹಲವಾರು ಔಷಧಿಗಳನ್ನು ತಯಾರಿಸಿತು. ಅವರು 1901 ರಲ್ಲಿ 2,00,000 ರೂ. ಹೂಡಿಕೆಯೊಂದಿಗೆ ಬಂಗಾಳ ಕೆಮಿಕಲ್ಸ್ ಮತ್ತು ಫಾರ್ಮಾಸಿಟಿಕಲ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಎನ್ನುವ ಕಂಪನಿಯನ್ನು ಸ್ಥಾಪಿಸಿದರು. ಕಂಪನಿಯು ಹೆಚ್ಚಿನ ಪ್ರಮಾಣದಲ್ಲಿ ಮಲೇರಿಯಾ ಪ್ರತಿರೋಧಕ ಔಷಧಿಗಳನ್ನು ಅದರಲ್ಲೂ ಮುಖ್ಯವಾಗಿ ಎಚ್ಸಿಕ್ಯು ಉತ್ಪಾದಿಸಿತು. ಇದರ ಉತ್ಪಾದನೆ ಕೆಲವು ವರ್ಷಗಳ ಹಿಂದೆ ಸ್ಥಗಿತಗೊಂಡಿತ್ತು. ಒಂದು ರೂಪಾಯಿ ಲಾಭವನ್ನು ನಿರೀಕ್ಷಿಸದೆ, ಸರ್ ರೇ ರಸಾಯನಶಾಸ್ತ್ರದಲ್ಲಿನ ತಮ್ಮ ಅಪಾರ ಜ್ಞಾನವನ್ನು ಬಳಸಿಕೊಂಡು ಹಲವಾರು ಔಷಧಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. 1902 ರಲ್ಲಿ ಅವರು ಎ ಹಿಸ್ಟರಿ ಆಫ್ ಹಿಂದೂ ಕೆಮಿಸ್ಟ್ರಿಯ ಎರಡು ಸಂಪುಟಗಳನ್ನು ಪ್ರಕಟಿಸಿದರು. ಅವರ ಲೇಖನಗಳು ಮತ್ತು ಪ್ರಬಂಧಗಳು ಹಲವಾರು ವೈಜ್ಞಾನಿಕ ನಿಯತಕಾಲಿಕಗಳಲ್ಲಿ ಪ್ರಕಟವಾದವು. ಅವರು ಜೂನ್ 16, 1944 ರಂದು ನಿಧನರಾದರು.
ಕೈ ತೊಳೆಯುವುದನ್ನು ಮೊದಲು ಪ್ರಸ್ತಾಪಿಸಿದವರು :
ಪ್ರಪಂಚದಾದ್ಯಂತ ಜನರು ಈಗ ಸೋಪ್ ಮತ್ತು ಸ್ಯಾನಿಟೈಜರ್ನಿಂದ ಕೈ ತೊಳೆಯುತ್ತಿದ್ದಾರೆ. ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಕೈ ತೊಳೆಯುವುದನ್ನು ಮೊದಲು ಪ್ರಸ್ತಾಪಿಸಿದವರು ಡಾ.ಇಗ್ನಾಜ್ ಫಿಲಿಪ್. ಅವರು ಹಂಗೇರಿಯನ್ ವೈದ್ಯ ಮತ್ತು ವಿಜ್ಞಾನಿಯಾಗಿದ್ದು, ವಿಯೆನ್ನಾ ಜನರಲ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಆ ಆಸ್ಪತ್ರೆಯಲ್ಲಿ ಎರಡು ಹೆರಿಗೆ ವಾರ್ಡ್ಗಳಿದ್ದವು. ಪುರುಷ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಒಂದು ವಾರ್ಡ್ನಲ್ಲಿ ಕೆಲಸ ಮಾಡುತ್ತಿದ್ದರೆ, ದಾದಿಯರು ಇನ್ನೊಂದು ವಾರ್ಡ್ನಲ್ಲಿ ಕೆಲಸ ಮಾಡುತ್ತಿದ್ದರು. ಅನೇಕ ಗರ್ಭಿಣಿಯರು ಹೆರಿಗೆ ಸಮಯದಲ್ಲಿ ಸಾಯುತ್ತಿದ್ದರು. ಪ್ರಸವ ಸಮಯದಲ್ಲಿನ ಸಾವುಗಳನ್ನು ಕಡಿಮೆ ಮಾಡುವ ಉದ್ದೇಶದಿಂದ, ಡಾ. ಇಗ್ನಾಜ್ ಗರ್ಭಿಣಿಯರ ಸಾವಿಗೆ ಕಾರಣಗಳನ್ನು ಅನ್ವೇಷಿಸಲು ಪ್ರಾರಂಭಿಸಿದರು.
ದಾದಿಯರು ಕೆಲಸ ಮಾಡುತ್ತಿದ್ದ ವಾರ್ಡ್ನಲ್ಲಿ ಸಾವಿನ ಸಂಖ್ಯೆ ಕಡಿಮೆ ಎಂದು ಅವರು ಕಂಡುಹಿಡಿದರು. ಈ ಬಗ್ಗೆ ಕೆಲವು ಗಂಭೀರ ಸಂಶೋಧನೆಯ ನಂತರ, ಅವರು ಸಾವಿಗೆ ಕಾರಣ ಕಂಡುಹಿಡಿದರು. ಪುರುಷ ವೈದ್ಯರು ಪಕ್ಕದ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದರು. ಅವರ ಕೈಯಲ್ಲಿ ರಕ್ತದ ಕಲೆ ಮತ್ತು ಸೂಕ್ಷ್ಮಜೀವಿಗಳು ಇರುತ್ತಿದ್ದವು. ಅವರು ತಮ್ಮ ಕೈಗಳನ್ನು ಸೋಂಕುರಹಿತವಾಗಿಸದೆ ನೇರವಾಗಿ ಹೆರಿಗೆ ವಾರ್ಡ್ಗಳಿಗೆ ಹೋಗಿ ಗರ್ಭಿಣಿ ಮಹಿಳೆಯರಿಗೆ ಸೋಂಕು ತಗುಲಿಸುತ್ತಿದ್ದರು. ಮತ್ತೊಂದೆಡೆ ದಾದಿಯರು ಯಾವುದೇ ಮರಣೋತ್ತರ ಅಥವಾ ಶಸ್ತ್ರಚಿಕಿತ್ಸೆ ಮಾಡುತ್ತಿರಲಿಲ್ಲ. ಎರಡನೇ ವಾರ್ಡ್ನಲ್ಲಿ ಗರ್ಭಿಣಿ ಮಹಿಳೆಯರಿಗೆ ಸೋಂಕಿಗೆ ಸ್ವಲ್ಪ ಅವಕಾಶವಿತ್ತು. ಈ ಸಂಗತಿಯನ್ನು ದೃಢಪಡಿಸಿಕೊಂಡ ನಂತರ, ಡಾ. ಇಗ್ನಾಜ್ ಆಸ್ಪತ್ರೆಯ ನೈರ್ಮಲ್ಯವನ್ನು ಗಂಭೀರವಾಗಿ ಪರಿಗಣಿಸಿದರು. ರೋಗಿಗಳ ಶಸ್ತ್ರಚಿಕಿತ್ಸೆ ನಡೆಸುವ ಮೊದಲು ವೈದ್ಯರು ಕ್ಲೋರಿನ್ ದ್ರಾವಣದಿಂದ ತಮ್ಮ ಕೈಗಳನ್ನು ಸೋಂಕುರಹಿತಗೊಳಿಸಬೇಕು ಎಂಬ ನಿಯಮವನ್ನು ಅವರು ಮಾಡಿದರು.
ಈ ನಿಯಮದಿಂದಾಗಿ ಸಾವುಗಳು ನಿಧಾನವಾಗಿ ಕಡಿಮೆಯಾದವು. ಅವರ ಆವಿಷ್ಕಾರವು ಜನರಿಗೆ ಹಲವಾರು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡಿದೆ. ಪರಿಣಾಮವಾಗಿ, ಇಂದು ಸ್ಯಾನಿಟೈಜರ್ಗಳ ಬಳಕೆ ಹೆಚ್ಚಾಗಿದೆ.