ಅಹಮದಾಬಾದ್: ಗುಜರಾತ್ನಲ್ಲಿ ಕೊಯ್ಲು ಹಬ್ಬ 'ಉತ್ತರಾಯಣ'ವನ್ನು ನಿನ್ನೆ ಸಂಭ್ರಮದಿಂದ ಆಚರಿಸಲಾಯ್ತು.
ಸಂಕ್ರಾಂತಿಯ ಭಾಗವಾಗಿ ಉತ್ತರಾಯಣ ಹಬ್ಬವನ್ನು ರಾಜ್ಯದ ಜನತೆ ಆಚರಿಸುತ್ತಾರೆ. ವಿವಿಧ ಖಾದ್ಯಗಳನ್ನು ತಯಾರಿಸಿ, ಗಾಳಿಪಟ ಹಾರಿಬಿಟ್ಟು ಸಂಭ್ರಮಿಸುತ್ತಾರೆ.
ಈ ಪ್ರಯುಕ್ತ ಕೆಲ ಉತ್ಸಾಹಿಗಳು ಗುಜರಾತ್ನ ವಿಶ್ವಪ್ರಸಿದ್ಧ ಏಕತಾ ಪ್ರತಿಮೆ ಬಳಿ ಬಣ್ಣಬಣ್ಣದ ಗಾಳಿಪಟಗಳನ್ನು ಹಾರಿಸಿ ಸಂಭ್ರಮಿಸಿದರು. ಈ ಫೋಟೋಗಳನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇನ್ನು ಚಳಿಗಾಲ ಮುಗಿದು ಬೇಸಿಗೆ ಆರಂಭಕ್ಕೂ ಮುಂಚಿತವಾಗಿ ಆಚರಿಸೋ ಉತ್ತರಾಯಣ ಹಬ್ಬವನ್ನು ಅಹಮದಾಬಾದ್ ಜನತೆ ತಮ್ಮ ತಮ್ಮ ಮನೆಗಳಲ್ಲಿ ಗಾಳಿಪಟಗಳನ್ನು ಹಾರಿಸೋ ಮೂಲಕ ಆಚರಿಸಿದರು.