ETV Bharat / bharat

ಮಗನ ಮೇಲೆ ಹಲ್ಲೆ ನಡೆಸಲು ಸುಪಾರಿ ಕೊಟ್ಟ ತಂದೆ: ಆಂಧ್ರಪ್ರದೇಶದಲ್ಲೊಂದು ವಿಚಿತ್ರ ಘಟನೆ!

author img

By

Published : Jan 7, 2021, 4:51 PM IST

ಇಷ್ಟವಿಲ್ಲದ ಮದುವೆ ಮಾಡಿಕೊಂಡ ಮಗನ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಬೇರೆಯವರಿಗೆ ಹಣ ನೀಡಿದ್ದ ಪಾಪಿ ತಂದೆ ತಾನು ಕೂಡ ಆತನ ಮೇಲೆ ದಾಳಿ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.

Father attacks on 28 year-old son
Father attacks on 28 year-old son

ಕರ್ನೂಲ್​(ಆಂಧ್ರಪ್ರದೇಶ): ಮಗ ತನ್ನಿಷ್ಟಕ್ಕೆ ವಿರುದ್ಧವಾಗಿ ಮದುವೆಯಾದ ಎಂದು ಕುಪಿತಗೊಂಡ ತಂದೆಯೊಬ್ಬ ಮಗನ ಮೇಲೆ ಹಲ್ಲೆ ನಡೆಸಲು ದುಷ್ಕರ್ಮಿಗಳಿಗೆ ಸುಪಾರಿ ನೀಡಿದ ಘಟನೆ ಆಂಧ್ರಪ್ರದೇಶದ ಕರ್ನೂಲ್​ನಲ್ಲಿ ನಡೆದಿದೆ.

ಹೀಗೆ ಹಣ ಪಡೆದ ದುಷ್ಕರ್ಮಿಗಳು ಗ್ಯಾಂಗ್ ಯುವಕ ಮೇಲೆ ಕೆಲ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಡೆಸಿರುವ ತನಿಖೆಯಿಂದ ಮಹತ್ವದ ವಿಚಾರ ಬೆಳಕಿಗೆ ಬಂದಿದೆ.

ಹರ್ಷವರ್ಧನ್ (28)​ ನಿನ್ನೆ ಬೆಳಗ್ಗೆ ತಂದೆ ಜತೆ ವಾಕಿಂಗ್​ ಹೋಗಿದ್ದಾನೆ. ಈ ವೇಳೆ ದಿಢೀರ್ ಆಗಿ ಆತನ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ. ಈ ವೇಳೆ ಆತನೊಂದಿಗೆ ತಂದೆ ಶ್ರೀನಿವಾಸ ಆಚಾರಿ ಸಹ ಇದ್ದರು. ಘಟನೆಯಿಂದ ಗಾಯಗೊಂಡಿರುವ ಹರ್ಷವರ್ಧನ್​ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Father attacks on 28 year-old son
ಹರ್ಷವರ್ಧನ್​ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

ಏನಿದು ಘಟನೆ!?:

ಮೂರು ವರ್ಷಗಳ ಹಿಂದೆ ಹರ್ಷವರ್ಧನ್ ತನ್ನ ತಾಯಿಯ ಚಿಕ್ಕಮ್ಮನ ಮಗಳನ್ನು ಕುಟುಂಬ ಸದಸ್ಯರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಾನೆ. ಇದಾದ ಬಳಿಕ ದಂಪತಿ ಕರ್ನಾಟಕದ ಕಲಬುರಗಿಯಲ್ಲಿ ವಾಸವಾಗಿದ್ದರು. ಇದರಿಂದ ಶ್ರೀನಿವಾಸ ಆಚಾರಿ​ ಅವಮಾನಕ್ಕೊಳಗಾಗಿದ್ದಾರೆ. ಹೀಗಾಗಿ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಮನೆಗೆ ಬರುವಂತೆ ಕಳೆದ ಕೆಲ ದಿನಗಳ ಹಿಂದೆ ಮಗನನ್ನು ಕರೆಯಿಸಿಕೊಂಡು ಈ ಕೃತ್ಯ ಎಸಗಿದ್ದಾರೆ.

Father attacks on 28 year-old son
ಹಲ್ಲೆಗೊಳಗಾದ ಹರ್ಷವರ್ಧನ್

ಕರ್ನೂಲ್​(ಆಂಧ್ರಪ್ರದೇಶ): ಮಗ ತನ್ನಿಷ್ಟಕ್ಕೆ ವಿರುದ್ಧವಾಗಿ ಮದುವೆಯಾದ ಎಂದು ಕುಪಿತಗೊಂಡ ತಂದೆಯೊಬ್ಬ ಮಗನ ಮೇಲೆ ಹಲ್ಲೆ ನಡೆಸಲು ದುಷ್ಕರ್ಮಿಗಳಿಗೆ ಸುಪಾರಿ ನೀಡಿದ ಘಟನೆ ಆಂಧ್ರಪ್ರದೇಶದ ಕರ್ನೂಲ್​ನಲ್ಲಿ ನಡೆದಿದೆ.

ಹೀಗೆ ಹಣ ಪಡೆದ ದುಷ್ಕರ್ಮಿಗಳು ಗ್ಯಾಂಗ್ ಯುವಕ ಮೇಲೆ ಕೆಲ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಡೆಸಿರುವ ತನಿಖೆಯಿಂದ ಮಹತ್ವದ ವಿಚಾರ ಬೆಳಕಿಗೆ ಬಂದಿದೆ.

ಹರ್ಷವರ್ಧನ್ (28)​ ನಿನ್ನೆ ಬೆಳಗ್ಗೆ ತಂದೆ ಜತೆ ವಾಕಿಂಗ್​ ಹೋಗಿದ್ದಾನೆ. ಈ ವೇಳೆ ದಿಢೀರ್ ಆಗಿ ಆತನ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ. ಈ ವೇಳೆ ಆತನೊಂದಿಗೆ ತಂದೆ ಶ್ರೀನಿವಾಸ ಆಚಾರಿ ಸಹ ಇದ್ದರು. ಘಟನೆಯಿಂದ ಗಾಯಗೊಂಡಿರುವ ಹರ್ಷವರ್ಧನ್​ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Father attacks on 28 year-old son
ಹರ್ಷವರ್ಧನ್​ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

ಏನಿದು ಘಟನೆ!?:

ಮೂರು ವರ್ಷಗಳ ಹಿಂದೆ ಹರ್ಷವರ್ಧನ್ ತನ್ನ ತಾಯಿಯ ಚಿಕ್ಕಮ್ಮನ ಮಗಳನ್ನು ಕುಟುಂಬ ಸದಸ್ಯರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಾನೆ. ಇದಾದ ಬಳಿಕ ದಂಪತಿ ಕರ್ನಾಟಕದ ಕಲಬುರಗಿಯಲ್ಲಿ ವಾಸವಾಗಿದ್ದರು. ಇದರಿಂದ ಶ್ರೀನಿವಾಸ ಆಚಾರಿ​ ಅವಮಾನಕ್ಕೊಳಗಾಗಿದ್ದಾರೆ. ಹೀಗಾಗಿ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಮನೆಗೆ ಬರುವಂತೆ ಕಳೆದ ಕೆಲ ದಿನಗಳ ಹಿಂದೆ ಮಗನನ್ನು ಕರೆಯಿಸಿಕೊಂಡು ಈ ಕೃತ್ಯ ಎಸಗಿದ್ದಾರೆ.

Father attacks on 28 year-old son
ಹಲ್ಲೆಗೊಳಗಾದ ಹರ್ಷವರ್ಧನ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.