ETV Bharat / bharat

ಕೋವಿಡ್ ಆಸ್ಪತ್ರೆ ದುರಂತ: ಸಾವಿಗೂ ಮುನ್ನ 11 ಲಕ್ಷ ರೂ. ಬಿಲ್ ಕಟ್ಟಿದ್ದ ಅಪ್ಪ-ಮಗ

author img

By

Published : Aug 6, 2020, 4:43 PM IST

ಅಹಮದಾಬಾದ್ ಕೋವಿಡ್ ಆಸ್ಪತ್ರೆಯ ಅಗ್ನಿ ದುರಂತದಲ್ಲಿ ಮೃತಪಟ್ಟ ತಂದೆ-ಮಗ ಇಬ್ಬರು ಚಿಕಿತ್ಸೆಗಾಗಿ 11 ಲಕ್ಷ ರೂ. ಬಿಲ್​ ಕಟ್ಟಿದ್ದರು.

hospital fire
ಕೋವಿಡ್ ಆಸ್ಪತ್ರೆ ದುರಂತ

ಅಹಮದಾಬಾದ್ (ಗುಜರಾತ್​): ಇಲ್ಲಿನ ನವರಂಗ್​ಪುರದ ಶ್ರೇಯ ಕೋವಿಡ್ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟ ಎಂಟು ರೋಗಿಗಳ ಪೈಕಿ ತಂದೆ-ಮಗ ಕೂಡ ಇದ್ದರು.

ಧೋಲ್ಕಾ ಜಿಲ್ಲೆಯ ನಿವಾಸಿಗಳಾದ ನವನೀತ್​ ಶಾ ಹಾಗೂ ಅವರ ಮಗ ನರೇಂದ್ರ ಎಂಬವರು ಕಳೆದ 10 ದಿನಗಳಿಂದ ಶ್ರೇಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈವರೆಗೆ ಚಿಕಿತ್ಸೆಗಾಗಿ ಇಬ್ಬರಿಂದ 11 ಲಕ್ಷ ರೂ. ಬಿಲ್​ ಕಟ್ಟಲಾಗಿದೆ. ಕೊರೊನಾದಿಂದ ಚೇತರಿಸಿಕೊಳ್ಳುತ್ತಿದ್ದರು. ಆದರೆ ಆಸ್ಪತ್ರೆಯ ನಿರ್ಲಕ್ಷ್ಯದಿಂದಾಗಿ ಘಟನೆ ನಡೆದಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

ಇಂದು ಮುಂಜಾನೆ 3.30 ರ ಸುಮಾರಿಗೆ ನಡೆದ ಘಟನೆಯಲ್ಲಿ ಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 8 ರೋಗಿಗಳು ಸಾವನ್ನಪ್ಪಿದ್ದರು. ಈ ಸಂಬಂಧ ಗುಜರಾತ್​ ಮುಖ್ಯಮಂತ್ರಿ ವಿಜಯ್​ ರೂಪಾನಿ ತನಿಖೆಗೆ ಆದೇಶಿಸಿದ್ದಾರೆ. ಮೃತರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.

ಅಹಮದಾಬಾದ್ (ಗುಜರಾತ್​): ಇಲ್ಲಿನ ನವರಂಗ್​ಪುರದ ಶ್ರೇಯ ಕೋವಿಡ್ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟ ಎಂಟು ರೋಗಿಗಳ ಪೈಕಿ ತಂದೆ-ಮಗ ಕೂಡ ಇದ್ದರು.

ಧೋಲ್ಕಾ ಜಿಲ್ಲೆಯ ನಿವಾಸಿಗಳಾದ ನವನೀತ್​ ಶಾ ಹಾಗೂ ಅವರ ಮಗ ನರೇಂದ್ರ ಎಂಬವರು ಕಳೆದ 10 ದಿನಗಳಿಂದ ಶ್ರೇಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈವರೆಗೆ ಚಿಕಿತ್ಸೆಗಾಗಿ ಇಬ್ಬರಿಂದ 11 ಲಕ್ಷ ರೂ. ಬಿಲ್​ ಕಟ್ಟಲಾಗಿದೆ. ಕೊರೊನಾದಿಂದ ಚೇತರಿಸಿಕೊಳ್ಳುತ್ತಿದ್ದರು. ಆದರೆ ಆಸ್ಪತ್ರೆಯ ನಿರ್ಲಕ್ಷ್ಯದಿಂದಾಗಿ ಘಟನೆ ನಡೆದಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

ಇಂದು ಮುಂಜಾನೆ 3.30 ರ ಸುಮಾರಿಗೆ ನಡೆದ ಘಟನೆಯಲ್ಲಿ ಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 8 ರೋಗಿಗಳು ಸಾವನ್ನಪ್ಪಿದ್ದರು. ಈ ಸಂಬಂಧ ಗುಜರಾತ್​ ಮುಖ್ಯಮಂತ್ರಿ ವಿಜಯ್​ ರೂಪಾನಿ ತನಿಖೆಗೆ ಆದೇಶಿಸಿದ್ದಾರೆ. ಮೃತರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.