ETV Bharat / bharat

2 ವರ್ಷಗಳಲ್ಲಿ 50 ಸಾವಿರ ಗಿಡಗಳ ಪೋಷಣೆ : ಮಾರ್ಗದರ್ಶಿ ಎಂಡಿ ಶೈಲಜಾ ಕಿರಣ್ - ಮಾರ್ಗದರ್ಶಿ ಚಿಟ್​ಫಂಡ್ಸ್ ಎಂಡಿ ಶೈಲಜಾ ಕಿರಣ್

ಮಾರ್ಗದರ್ಶಿ ಚಿಟ್​ಫಂಡ್ಸ್ ಯೋಜನೆಯಡಿ ಎರಡು ವರ್ಷಗಳಲ್ಲಿ 53 ಸಾವಿರ ಎಕರೆ ಪ್ರದೇಶದಲ್ಲಿ 50 ಸಾವಿರ ಗಿಡಗಳನ್ನು ನೆಡಲಾಗಿದೆ ಎಂದು ಎಂಡಿ ಶೈಲಜಾ ಕಿರಣ್ ಹೇಳಿದ್ದಾರೆ.

kiran
ಶೈಲಜಾ ಕಿರಣ್
author img

By

Published : Jan 18, 2021, 4:58 PM IST

ಹೈದರಾಬಾದ್ : ಎರಡು ವರ್ಷಗಳಲ್ಲಿ 53 ಸಾವಿರ ಎಕರೆ ಪ್ರದೇಶದಲ್ಲಿ 50 ಸಾವಿರ ಗಿಡಗಳನ್ನು ನೆಡಲಾಗಿದೆ ಎಂದು ಮಾರ್ಗದರ್ಶಿ ಚಿಟ್​ಫಂಡ್ಸ್ ಎಂಡಿ ಶೈಲಜಾ ಕಿರಣ್ ಹೇಳಿದ್ದಾರೆ.

2 ವರ್ಷಗಳಲ್ಲಿ 50 ಸಾವಿರ ಗಿಡಗಳ ಪೋಷಣೆ : ಚಿಟ್​ಫಂಡ್ಸ್ ಎಂಡಿ ಶೈಲಜಾ ಕಿರಣ್

ತೆಲಂಗಾಣದ ಹರಿತ ಹಾರಂ​​ನ ಭಾಗವಾಗಿ ಸಾಮಾಜಿಕ ಜವಾಬ್ದಾರಿಯಡಿ ಈ ಕಾರ್ಯವನ್ನು ಮಾಡಲಾಗಿದ್ದು, ಇಂದು ಈ ಪ್ರದೇಶದ ಗಿಡಗಳನ್ನು ಇಬ್ರಾಹಿಂಪಟ್ಟಣಂ ವಲಯದ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಅರಣ್ಯ ವಲಯಾಧಿಕಾರಿ ವಿಷ್ಣುವರ್ಧನ್​ ರಾವ್​​ ಸೇರಿ ಹಲವರೊಂದಿಗೆ ಗುರ್ರಂಗುಡ ಮೀಸಲು ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ ಶೈಲಜಾ ಕಿರಣ್, ಗಿಡಗಳನ್ನು ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, 2019 ರಲ್ಲಿ ಅರಳಿ, ಹುಣಸೆ, ನೆಮಾಲಿ, ಬಾದಾಮಿ, ಪೇರಲ ಸೇರಿ ಮುಂತಾದ ಗಿಡಗಳನ್ನು ನೆಟ್ಟಿದ್ದೆವು. ಎಲ್ಲಾ ಗಿಡಗಳು ಇಂದು ಸೊಗಸಾಗಿ ಬೆಳೆದಿವೆ ಎಂದು ಹರ್ಷ ವ್ಯಕ್ತಪಡಿಸಿದರು. ಅಲ್ಲದೆ, ಅರಣ್ಯಾಧಿಕಾರಿಗಳ ಸಹಾಯದಿಂದ ಇನ್ನೂ 50 ಸಾವಿರ ಸಸಿಗಳನ್ನು ನೆಡಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.

ಹೈದರಾಬಾದ್ : ಎರಡು ವರ್ಷಗಳಲ್ಲಿ 53 ಸಾವಿರ ಎಕರೆ ಪ್ರದೇಶದಲ್ಲಿ 50 ಸಾವಿರ ಗಿಡಗಳನ್ನು ನೆಡಲಾಗಿದೆ ಎಂದು ಮಾರ್ಗದರ್ಶಿ ಚಿಟ್​ಫಂಡ್ಸ್ ಎಂಡಿ ಶೈಲಜಾ ಕಿರಣ್ ಹೇಳಿದ್ದಾರೆ.

2 ವರ್ಷಗಳಲ್ಲಿ 50 ಸಾವಿರ ಗಿಡಗಳ ಪೋಷಣೆ : ಚಿಟ್​ಫಂಡ್ಸ್ ಎಂಡಿ ಶೈಲಜಾ ಕಿರಣ್

ತೆಲಂಗಾಣದ ಹರಿತ ಹಾರಂ​​ನ ಭಾಗವಾಗಿ ಸಾಮಾಜಿಕ ಜವಾಬ್ದಾರಿಯಡಿ ಈ ಕಾರ್ಯವನ್ನು ಮಾಡಲಾಗಿದ್ದು, ಇಂದು ಈ ಪ್ರದೇಶದ ಗಿಡಗಳನ್ನು ಇಬ್ರಾಹಿಂಪಟ್ಟಣಂ ವಲಯದ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಅರಣ್ಯ ವಲಯಾಧಿಕಾರಿ ವಿಷ್ಣುವರ್ಧನ್​ ರಾವ್​​ ಸೇರಿ ಹಲವರೊಂದಿಗೆ ಗುರ್ರಂಗುಡ ಮೀಸಲು ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ ಶೈಲಜಾ ಕಿರಣ್, ಗಿಡಗಳನ್ನು ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, 2019 ರಲ್ಲಿ ಅರಳಿ, ಹುಣಸೆ, ನೆಮಾಲಿ, ಬಾದಾಮಿ, ಪೇರಲ ಸೇರಿ ಮುಂತಾದ ಗಿಡಗಳನ್ನು ನೆಟ್ಟಿದ್ದೆವು. ಎಲ್ಲಾ ಗಿಡಗಳು ಇಂದು ಸೊಗಸಾಗಿ ಬೆಳೆದಿವೆ ಎಂದು ಹರ್ಷ ವ್ಯಕ್ತಪಡಿಸಿದರು. ಅಲ್ಲದೆ, ಅರಣ್ಯಾಧಿಕಾರಿಗಳ ಸಹಾಯದಿಂದ ಇನ್ನೂ 50 ಸಾವಿರ ಸಸಿಗಳನ್ನು ನೆಡಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.