ETV Bharat / bharat

ಶ್ರೀಕಾಳಹಸ್ತಿಯಲ್ಲಿ ಆಕಸ್ಮಿಕವಾಗಿ ಗುಂಡು ಹಾರಿಸಿದ ಪೊಲೀಸ್

author img

By

Published : Oct 1, 2020, 3:50 PM IST

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಶ್ರೀಕಾಳಹಸ್ತಿ ದೇವಸ್ಥಾನದ ಭದ್ರತಾ ಕರ್ತವ್ಯದಲ್ಲಿದ್ದ ಸಿಬ್ಬಂದಿ ಶಸ್ತ್ರಾಸ್ತ್ರ ಇಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಗುಂಡು ಹಾರಿರುವ ಘಟನೆ ನಡೆದಿದೆ.

ಶ್ರೀಕಾಳಹಸ್ತಿಯಲ್ಲಿ  ಗುಂಡು ಹಾರಿಸಿದ ಪೊಲೀಸ್
ಶ್ರೀಕಾಳಹಸ್ತಿಯಲ್ಲಿ ಗುಂಡು ಹಾರಿಸಿದ ಪೊಲೀಸ್

ಚಿತ್ತೂರು (ಆಂಧ್ರಪ್ರದೇಶ): ಇಲ್ಲಿನ ಶ್ರೀಕಾಳಹಸ್ತಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ ಆಕಸ್ಮಿಕವಾಗಿ ಗುಂಡು ಹಾರಿರುವ ಘಟನೆ ನಡೆದಿದೆ. ಇನ್ನು ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಇನ್ನು ಈ ಸಂಬಂಧ ಮಾತನಾಡಿದ ಶ್ರೀಕಾಳಹಸ್ತಿ ಇನ್ಸ್‌ಪೆಕ್ಟರ್ ನಾಗಾರ್ಜುನ, "ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ಸುಬ್ರಹ್ಮಣ್ಯಂ ಎಂಬವರು ನಿನ್ನೆ ರಾತ್ರಿ ದೇವಾಲಯದ ಭದ್ರತಾ ಕರ್ತವ್ಯದಲ್ಲಿದ್ದರು. ದೇವಾಲಯ ಮುಚ್ಚಿದ ಬಳಿಕ , ಶಸ್ತ್ರಾಸ್ತ್ರಗಳನ್ನು ಭದ್ರಪಡಿಸಿಕೊಳ್ಳಲು ನಿಗದಿಪಡಿಸಿದ ಕೋಣೆಯಲ್ಲಿ (303 ಮಾದರಿ) ಇಡುತ್ತಿದ್ದರು. ಆ ಸಮಯದಲ್ಲಿ ಗುಂಡು ಆಕಸ್ಮಿಕವಾಗಿ ಹಾರಿದ್ದು, ಗೋಡೆಗೆ ಬಡಿದು ಒಂದು ಸಣ್ಣ ಕ್ಲಲು ಕೆಳಗೆ ಬಿದ್ದಿದೆ. ಸದ್ಯ ಮುನ್ನೆಚ್ಚರಿಕಾ ಕ್ರಮವಾಗಿ ಸುಬ್ರಹ್ಮಣ್ಯಂ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಸಣ್ಣಪುಟ್ಟ ಗಾಯಗಳಾಗಿದೆ" ಎಂದಿದ್ದಾರೆ.

ಇನ್ನು ಪೊಲೀಸರು ಈ ಬಗ್ಗೆ ಆಂತರಿಕ ತನಿಖೆಗೆ ಆದೇಶಿಸಿದ್ದಾರೆ ಎಂದು ಇನ್ಸ್‌ಪೆಕ್ಟರ್ ನಾಗಾರ್ಜುನ ಹೇಳಿದ್ದಾರೆ.

ಚಿತ್ತೂರು (ಆಂಧ್ರಪ್ರದೇಶ): ಇಲ್ಲಿನ ಶ್ರೀಕಾಳಹಸ್ತಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ ಆಕಸ್ಮಿಕವಾಗಿ ಗುಂಡು ಹಾರಿರುವ ಘಟನೆ ನಡೆದಿದೆ. ಇನ್ನು ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಇನ್ನು ಈ ಸಂಬಂಧ ಮಾತನಾಡಿದ ಶ್ರೀಕಾಳಹಸ್ತಿ ಇನ್ಸ್‌ಪೆಕ್ಟರ್ ನಾಗಾರ್ಜುನ, "ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ಸುಬ್ರಹ್ಮಣ್ಯಂ ಎಂಬವರು ನಿನ್ನೆ ರಾತ್ರಿ ದೇವಾಲಯದ ಭದ್ರತಾ ಕರ್ತವ್ಯದಲ್ಲಿದ್ದರು. ದೇವಾಲಯ ಮುಚ್ಚಿದ ಬಳಿಕ , ಶಸ್ತ್ರಾಸ್ತ್ರಗಳನ್ನು ಭದ್ರಪಡಿಸಿಕೊಳ್ಳಲು ನಿಗದಿಪಡಿಸಿದ ಕೋಣೆಯಲ್ಲಿ (303 ಮಾದರಿ) ಇಡುತ್ತಿದ್ದರು. ಆ ಸಮಯದಲ್ಲಿ ಗುಂಡು ಆಕಸ್ಮಿಕವಾಗಿ ಹಾರಿದ್ದು, ಗೋಡೆಗೆ ಬಡಿದು ಒಂದು ಸಣ್ಣ ಕ್ಲಲು ಕೆಳಗೆ ಬಿದ್ದಿದೆ. ಸದ್ಯ ಮುನ್ನೆಚ್ಚರಿಕಾ ಕ್ರಮವಾಗಿ ಸುಬ್ರಹ್ಮಣ್ಯಂ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಸಣ್ಣಪುಟ್ಟ ಗಾಯಗಳಾಗಿದೆ" ಎಂದಿದ್ದಾರೆ.

ಇನ್ನು ಪೊಲೀಸರು ಈ ಬಗ್ಗೆ ಆಂತರಿಕ ತನಿಖೆಗೆ ಆದೇಶಿಸಿದ್ದಾರೆ ಎಂದು ಇನ್ಸ್‌ಪೆಕ್ಟರ್ ನಾಗಾರ್ಜುನ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.