ETV Bharat / bharat

ಪೈಲಟ್ ಬಣದ ಶಾಸಕ ಮತ್ತು ಬಿಜೆಪಿ ಸಚಿವನ ನಡುವೆ ಚರ್ಚೆ: ರಾಜಸ್ಥಾನ ಕಾಂಗ್ರೆಸ್​ನಿಂದ ಆಡಿಯೋ ರಿಲೀಸ್​​

author img

By

Published : Jul 17, 2020, 3:38 PM IST

ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಸಚಿನ್ ಪೈಲಟ್‌ ಬಣದ ಶಾಸಕ ಭನ್ವರ್​ಲಾಲ್ ಶರ್ಮಾ ನಡುವೆ ನಡೆದ ಮಾತುಕತೆಯದ್ದು ಎನ್ನಲಾದ ಆಡಿಯೋ ತುಣುಕುಗಳನ್ನು ರಾಜಸ್ಥಾನ ಕಾಂಗ್ರೆಸ್​ ಬಿಡುಗಡೆ ಮಾಡಿದೆ.

Rajasthan Political Crisis
ಆಡಿಯೋ ಬಿಡುಗಡೆ ಮಾಡಿದ ರಾಜಸ್ಥಾನ ಕಾಂಗ್ರೆಸ್​

ಜೈಪುರ (ರಾಜಸ್ಥಾನ): ರಾಜಸ್ಥಾನದಲ್ಲಿನ ರಾಜಕೀಯ ಬಿಕ್ಕಟ್ಟಿನ ಮಧ್ಯೆ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಸಚಿನ್ ಪೈಲಟ್‌ ಬಣದ ಶಾಸಕನ ನಡುವೆ ನಡೆದಿದೆ ಎನ್ನಲಾದ ಚರ್ಚೆಯ ಮೂರು ಆಡಿಯೋ ತುಣುಕುಗಳನ್ನು ಕಾಂಗ್ರೆಸ್​ ಬಿಡುಗಡೆ ಮಾಡಿದೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬಣ ಬಿಡುಗಡೆ ಮಾಡಿರುವ ಈ ಆಡಿಯೋ ತುಣುಕುಗಳು ಬಿಜೆಪಿಯ ಶೇಖಾವತ್ ಮತ್ತು ಪೈಲಟ್ ಬಣದ ಶಾಸಕ ಭನ್ವರ್​ಲಾಲ್ ಶರ್ಮಾ ನಡುವಿನ ಸಂಭಾಷಣೆಯದ್ದಾಗಿದೆ ಎಂದು ಹೇಳಲಾಗ್ತಿದೆ. ಜೈಪುರ ನಿವಾಸಿ ಸಂಜಯ್ ಜೈನ್ ಮೂಲಕ ಶೇಖಾವತ್ ಅವರು ಕಾಂಗ್ರೆಸ್ ಶಾಸಕ ಭನ್ವರ್​ಲಾಲ್ ಶರ್ಮಾ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಸಿಎಂ ಗೆಹ್ಲೋಟ್ ಬಣ ಆರೋಪಿಸಿದೆ.

30 ಶಾಸಕರನ್ನು ಒಗ್ಗೂಡಿಸಿ ಸಿಎಂ ಅಶೋಕ್ ಗೆಹ್ಲೋಟ್​ ಅವರ ಸರ್ಕಾರವನ್ನು ಉರುಳಿಸುವ ಕುರಿತು ಇಬ್ಬರು ನಾಯಕರು ಚರ್ಚಿಸಿರುವುದು ಆಡಿಯೋದಿಂದ ಗೊತ್ತಾಗಿದೆ. ಸಚಿವ ಶೇಖಾವತ್​ ಎಂದು ಹೇಳಲಾಗುತ್ತಿರುವ ವ್ಯಕ್ತಿ ಶರ್ಮಾ ಬಣದ ಶಾಸಕರನ್ನು 8 ರಿಂದ 10 ದಿನಗಳ ಕಾಲ ಹೋಟೆಲ್​ನಲ್ಲಿ ವಾಸ್ತವ್ಯ ಹೂಡುವಂತೆ ಹೇಳುತ್ತಿರುವುದು ಕೂಡ ಆಡಿಯೋದಲ್ಲಿ ಸ್ಪಷ್ಟವಾಗಿದೆ ಎನ್ನಲಾಗ್ತಿದೆ.

ಇನ್ನೊಂದು ಆಡಿಯೋದಲ್ಲಿ ಶಾಸಕ ಶರ್ಮಾ ಶೇಖಾವತ್ ಅವ​ರೊಂದಿಗೆ ಕೆಲವೊಂದು ಬೇಡಿಕೆಗಳನ್ನು ಮುಂದಿಡುತ್ತಾರೆ. ಈ ವೇಳೆ ಪ್ರತಿಕ್ರಿಯಸುವ ಸಚಿವ ಶೇಖಾವತ್​, ನಿಮ್ಮ ಹಿರಿತನದ ಬಗ್ಗೆ ಗಮನಹರಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಜೈಪುರ (ರಾಜಸ್ಥಾನ): ರಾಜಸ್ಥಾನದಲ್ಲಿನ ರಾಜಕೀಯ ಬಿಕ್ಕಟ್ಟಿನ ಮಧ್ಯೆ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಸಚಿನ್ ಪೈಲಟ್‌ ಬಣದ ಶಾಸಕನ ನಡುವೆ ನಡೆದಿದೆ ಎನ್ನಲಾದ ಚರ್ಚೆಯ ಮೂರು ಆಡಿಯೋ ತುಣುಕುಗಳನ್ನು ಕಾಂಗ್ರೆಸ್​ ಬಿಡುಗಡೆ ಮಾಡಿದೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬಣ ಬಿಡುಗಡೆ ಮಾಡಿರುವ ಈ ಆಡಿಯೋ ತುಣುಕುಗಳು ಬಿಜೆಪಿಯ ಶೇಖಾವತ್ ಮತ್ತು ಪೈಲಟ್ ಬಣದ ಶಾಸಕ ಭನ್ವರ್​ಲಾಲ್ ಶರ್ಮಾ ನಡುವಿನ ಸಂಭಾಷಣೆಯದ್ದಾಗಿದೆ ಎಂದು ಹೇಳಲಾಗ್ತಿದೆ. ಜೈಪುರ ನಿವಾಸಿ ಸಂಜಯ್ ಜೈನ್ ಮೂಲಕ ಶೇಖಾವತ್ ಅವರು ಕಾಂಗ್ರೆಸ್ ಶಾಸಕ ಭನ್ವರ್​ಲಾಲ್ ಶರ್ಮಾ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಸಿಎಂ ಗೆಹ್ಲೋಟ್ ಬಣ ಆರೋಪಿಸಿದೆ.

30 ಶಾಸಕರನ್ನು ಒಗ್ಗೂಡಿಸಿ ಸಿಎಂ ಅಶೋಕ್ ಗೆಹ್ಲೋಟ್​ ಅವರ ಸರ್ಕಾರವನ್ನು ಉರುಳಿಸುವ ಕುರಿತು ಇಬ್ಬರು ನಾಯಕರು ಚರ್ಚಿಸಿರುವುದು ಆಡಿಯೋದಿಂದ ಗೊತ್ತಾಗಿದೆ. ಸಚಿವ ಶೇಖಾವತ್​ ಎಂದು ಹೇಳಲಾಗುತ್ತಿರುವ ವ್ಯಕ್ತಿ ಶರ್ಮಾ ಬಣದ ಶಾಸಕರನ್ನು 8 ರಿಂದ 10 ದಿನಗಳ ಕಾಲ ಹೋಟೆಲ್​ನಲ್ಲಿ ವಾಸ್ತವ್ಯ ಹೂಡುವಂತೆ ಹೇಳುತ್ತಿರುವುದು ಕೂಡ ಆಡಿಯೋದಲ್ಲಿ ಸ್ಪಷ್ಟವಾಗಿದೆ ಎನ್ನಲಾಗ್ತಿದೆ.

ಇನ್ನೊಂದು ಆಡಿಯೋದಲ್ಲಿ ಶಾಸಕ ಶರ್ಮಾ ಶೇಖಾವತ್ ಅವ​ರೊಂದಿಗೆ ಕೆಲವೊಂದು ಬೇಡಿಕೆಗಳನ್ನು ಮುಂದಿಡುತ್ತಾರೆ. ಈ ವೇಳೆ ಪ್ರತಿಕ್ರಿಯಸುವ ಸಚಿವ ಶೇಖಾವತ್​, ನಿಮ್ಮ ಹಿರಿತನದ ಬಗ್ಗೆ ಗಮನಹರಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.