ETV Bharat / bharat

ರಾಜಸ್ಥಾನ ರಾಜಕೀಯ ವಿದ್ಯಮಾನ: ಈ ಟಿವಿ ಭಾರತದಲ್ಲಿ ಸಂವಾದ

author img

By

Published : Jul 29, 2020, 1:03 PM IST

ಈಟಿವಿ ಭಾರತ್‌ನ ಪ್ರಾದೇಶಿಕ ಸಂಪಾದಕ ಬ್ರಜ್ ಮೋಹನ್ ಸಿಂಗ್, ಹಿರಿಯ ಪತ್ರಕರ್ತ ಓಂ ಸೈನಿ ಮತ್ತು ಖ್ಯಾತ ವಕೀಲ ಹೇಮಂತ್ ನಾಟಾ ಅವರು ಇತ್ತೀಚೆಗೆ ವಿಶೇಷ ಸಂವಾದ ನಡೆಸಿದರು.

ಈಟಿವಿ ಭಾರತ ಸಂದರ್ಶನ
ಈಟಿವಿ ಭಾರತ ಸಂದರ್ಶನ

ಜೈಪುರ: ಈಟಿವಿ ಭಾರತ್‌ನ ಪ್ರಾದೇಶಿಕ ಸಂಪಾದಕ ಬ್ರಜ್ ಮೋಹನ್ ಸಿಂಗ್, ಹಿರಿಯ ಪತ್ರಕರ್ತ ಓಂ ಸೈನಿ ಮತ್ತು ಖ್ಯಾತ ವಕೀಲ ಹೇಮಂತ್ ನಾಟಾ ಅವರು ಇತ್ತೀಚೆಗೆ ವಿಶೇಷ ಸಂವಾದ ನಡೆಸಿದ್ದು, ಈ ವೇಳೆ ರಾಜಸ್ಥಾನ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಚರ್ಚಿಸಿದರು.

ಕಾಂಗ್ರೆಸ್ ಸದಸ್ಯರಾಗಿ ಸೇರ್ಪಡೆಗೊಂಡ ರಾಜಸ್ಥಾನದ ಆರು ಬಿಎಸ್​ಪಿ ಶಾಸಕರಿಗೆ ಪಕ್ಷದ ರಾಷ್ಟ್ರೀಯ ವರಿಷ್ಠೆ ಮಾಯಾವತಿ, ಸಿಎಂ ಅಶೋಕ್​ ಗೆಹ್ಲೋಟ್​ಗೆ ಮತ ಹಾಕದಂತೆ ಆದೇಶಿಸಿದ್ದರು. ಇದಾದ ಬಳಿಕ ರಾಜಸ್ಥಾನ ರಾಜಕೀಯದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಪ್ರಸ್ತುತ ಸಿಎಂ ಅಶೋಕ್​ ಗೆಹ್ಲೋಟ್​​ ಸರ್ಕಾರ ರಾಜಕೀಯ ಅನಿಶ್ಚಿತತೆ ಎದುರಿಸುತ್ತಿದೆ. ಈ ಸಂಬಂದ ಇವರೆಲ್ಲ ಸಂವಾದ ನಡೆಸಿದರು. ಸರ್ಕಾರ, ಬಂಡಾಯ ಹಾಗೂ ಪ್ರತಿಪಕ್ಷಗಳ ನಡೆಗಳ ಬಗ್ಗೆ ವಿಶ್ಲೇಷಣೆ ಮಾಡಿದರು.

ಈಟಿವಿ ಭಾರತ ಸಂದರ್ಶನ

ಬಿಎಸ್​ಪಿಯು ರಾಷ್ಟ್ರೀಯ ಪಕ್ಷವಾಗಿರುವುದರಿಂದ ಸಂವಿಧಾನದ 10ನೇ ಶೆಡ್ಯೂಲ್ಡ್​​​( ಪರಿಚ್ಛೇದ) ಪ್ರಕಾರ, ಬಿಎಸ್​​ಪಿ ಆರು ಶಾಸಕರು (ಕಾಂಗ್ರೆಸ್) ರಾಷ್ಟ್ರೀಯ ಪಕ್ಷವೊಂದರಲ್ಲಿ ವಿಲೀನ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳಲಾಯಿತು. ಈ ಸಂಬಂಧ ಕಾನೂನು ತಜ್ಞರು ಏನ್​ ಹೇಳ್ತಾರೆ, ಸಂವಿಧಾನ ಏನ್​ ಹೇಳಿದೆ ಎಂಬ ಬಗ್ಗೆ ಸಂವಾದದಲ್ಲಿ ಚರ್ಚಿಸಲಾಯಿತು. ಬಿಎಸ್​ಪಿಯು ಶಾಸಕಾಂಗ ಪಕ್ಷದ ಮುಖಂಡರಿಗೆ ಮಾತ್ರ ವಿಪ್​ ಹೊರಡಿಸಬಹುದು. ಬದಲಾಗಿ ಕಾಂಗ್ರೆಸ್ ಆಡಳಿತದಲ್ಲಿ ಕಾರ್ಯ ನಿರ್ವಹಿಸುವ ಶಾಸಕರಿಗೆ ವಿಪ್​ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಇವರೆಲ್ಲ ಅಭಿಪ್ರಾಯಪಟ್ಟರು.

ಜೈಪುರ: ಈಟಿವಿ ಭಾರತ್‌ನ ಪ್ರಾದೇಶಿಕ ಸಂಪಾದಕ ಬ್ರಜ್ ಮೋಹನ್ ಸಿಂಗ್, ಹಿರಿಯ ಪತ್ರಕರ್ತ ಓಂ ಸೈನಿ ಮತ್ತು ಖ್ಯಾತ ವಕೀಲ ಹೇಮಂತ್ ನಾಟಾ ಅವರು ಇತ್ತೀಚೆಗೆ ವಿಶೇಷ ಸಂವಾದ ನಡೆಸಿದ್ದು, ಈ ವೇಳೆ ರಾಜಸ್ಥಾನ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಚರ್ಚಿಸಿದರು.

ಕಾಂಗ್ರೆಸ್ ಸದಸ್ಯರಾಗಿ ಸೇರ್ಪಡೆಗೊಂಡ ರಾಜಸ್ಥಾನದ ಆರು ಬಿಎಸ್​ಪಿ ಶಾಸಕರಿಗೆ ಪಕ್ಷದ ರಾಷ್ಟ್ರೀಯ ವರಿಷ್ಠೆ ಮಾಯಾವತಿ, ಸಿಎಂ ಅಶೋಕ್​ ಗೆಹ್ಲೋಟ್​ಗೆ ಮತ ಹಾಕದಂತೆ ಆದೇಶಿಸಿದ್ದರು. ಇದಾದ ಬಳಿಕ ರಾಜಸ್ಥಾನ ರಾಜಕೀಯದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಪ್ರಸ್ತುತ ಸಿಎಂ ಅಶೋಕ್​ ಗೆಹ್ಲೋಟ್​​ ಸರ್ಕಾರ ರಾಜಕೀಯ ಅನಿಶ್ಚಿತತೆ ಎದುರಿಸುತ್ತಿದೆ. ಈ ಸಂಬಂದ ಇವರೆಲ್ಲ ಸಂವಾದ ನಡೆಸಿದರು. ಸರ್ಕಾರ, ಬಂಡಾಯ ಹಾಗೂ ಪ್ರತಿಪಕ್ಷಗಳ ನಡೆಗಳ ಬಗ್ಗೆ ವಿಶ್ಲೇಷಣೆ ಮಾಡಿದರು.

ಈಟಿವಿ ಭಾರತ ಸಂದರ್ಶನ

ಬಿಎಸ್​ಪಿಯು ರಾಷ್ಟ್ರೀಯ ಪಕ್ಷವಾಗಿರುವುದರಿಂದ ಸಂವಿಧಾನದ 10ನೇ ಶೆಡ್ಯೂಲ್ಡ್​​​( ಪರಿಚ್ಛೇದ) ಪ್ರಕಾರ, ಬಿಎಸ್​​ಪಿ ಆರು ಶಾಸಕರು (ಕಾಂಗ್ರೆಸ್) ರಾಷ್ಟ್ರೀಯ ಪಕ್ಷವೊಂದರಲ್ಲಿ ವಿಲೀನ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳಲಾಯಿತು. ಈ ಸಂಬಂಧ ಕಾನೂನು ತಜ್ಞರು ಏನ್​ ಹೇಳ್ತಾರೆ, ಸಂವಿಧಾನ ಏನ್​ ಹೇಳಿದೆ ಎಂಬ ಬಗ್ಗೆ ಸಂವಾದದಲ್ಲಿ ಚರ್ಚಿಸಲಾಯಿತು. ಬಿಎಸ್​ಪಿಯು ಶಾಸಕಾಂಗ ಪಕ್ಷದ ಮುಖಂಡರಿಗೆ ಮಾತ್ರ ವಿಪ್​ ಹೊರಡಿಸಬಹುದು. ಬದಲಾಗಿ ಕಾಂಗ್ರೆಸ್ ಆಡಳಿತದಲ್ಲಿ ಕಾರ್ಯ ನಿರ್ವಹಿಸುವ ಶಾಸಕರಿಗೆ ವಿಪ್​ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಇವರೆಲ್ಲ ಅಭಿಪ್ರಾಯಪಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.