ETV Bharat / bharat

ಮುಸ್ಲಿಂ ಮಾರಾಟಗಾರರಿಂದ ತರಕಾರಿ ಖರೀದಿ ಮಾಡ್ಬೇಡಿ...  ಬಿಜೆಪಿ ಶಾಸಕನ ವಿವಾದಿತ ಮಾತು!

author img

By

Published : Apr 29, 2020, 2:08 PM IST

Updated : Apr 29, 2020, 2:34 PM IST

ನನ್ನ ಕ್ಷೇತ್ರದಲ್ಲಿ ತರಕಾರಿ ಮಾರಾಟ ಮಾಡುತ್ತಿರುವ ಮುಸ್ಲಿಂ ಮಾರಾಟಗಾರರಿಂದ ಯಾವುದೇ ಕಾರಣಕ್ಕೂ ತರಕಾರಿ ಖರೀದಿ ಮಾಡಬೇಡಿ ಎಂದು ಹೇಳಿಕೆ ನೀಡಿ ಬಿಜೆಪಿ ಶಾಸಕ ವಿವಾದದ ಕಿಡಿ ಹೊತ್ತಿಸಿದ್ದಾರೆ.

BJP MLA
BJP MLA

ಗೋರಖ್‌ಪುರ(ಯುಪಿ): ದೇಶಾದ್ಯಂತ ಭೀತಿ ಹುಟ್ಟಿಸಿರುವ ಮಹಾಮಾರಿ ಕೊರೊನಾ ವಿರುದ್ಧದ ಹೋರಾಟ ಮುಂದುವರೆದಿದ್ದು, ಇದರ ಮಧ್ಯೆ ಬಿಜೆಪಿ ಶಾಸಕರೊಬ್ಬರು ವಿವಾದಿತ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಉತ್ತರಪ್ರದೇಶದ ಬರ್ಹಾಜ್​​ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್​ ತಿವಾರಿ ಈ ಹೇಳಿಕೆ ನೀಡಿದ್ದು, ಅದರ ವಿಡಿಯೋ ತುಣುಕು ಎಲ್ಲೆಡೆ ವೈರಲ್​ ಆಗಿದೆ.

ಶಾಸಕ ಹೇಳಿದ್ದೇನು!?

ಯಾವುದೇ ಕಾರಣಕ್ಕೂ ಮುಸ್ಲಿಂ ಮಾರಾಟಗಾರರಿಂದ ತರಕಾರಿ ಖರೀದಿ ಮಾಡಬೇಡಿ. ಈ ಮಾತನ್ನು ನಾನು ಎಲ್ಲರ ಸಮ್ಮುಖದಲ್ಲೇ ಹೇಳುತ್ತಿರುವೆ ಎಂದಿದ್ದಾರೆ.

ಬಿಜೆಪಿ ಶಾಸಕನ ವಿವಾದಿತ ಹೇಳಿಕೆ

ಸಮರ್ಥನೆ ನೀಡಿದ ಶಾಸಕ

ಇದೇ ವಿಷಯವಾಗಿ ಪ್ರಶ್ನೆ ಮಾಡಿದಾಗ, ಏಪ್ರಿಲ್​ 17, 18ರಂದು ನಾನು ಮಾಸ್ಕ್​ ಹಾಗೂ ಸ್ಯಾನಿಟೈಸರ್​​ ವಿತರಣೆ ಮಾಡ್ತಿದ್ದಾಗ, ನನ್ನ ಬಳಿ ಬಂದ ಕೆಲವರು ತಬ್ಲಿಘಿಗೆ ತೆರಳಿ ವಾಪಸ್​​ ಆದ ಕೆಲವರು ತರಕಾರಿ ಮಾರಾಟ ಮಾಡ್ತಿದ್ದು, ಇದರಿಂದ ಕೊರೊನಾ ವೈರಸ್​ ಹರಡುತ್ತಿದೆ ಎಂದಿದ್ದರು. ಈ ವೇಳೆ, ನಾನು ಅವರೊಂದಿಗೆ ಯಾವುದೇ ಕಾರಣಕ್ಕೂ ಜಗಳ ಮಾಡಬೇಡಿ. ಅವರು ಮಾರಾಟ ಮಾಡುವ ತರಕಾರಿ ಖರೀದಿ ಮಾಡಬೇಡಿ ಎಂದು ಹೇಳಿರುವೆ ಎಂದಿದ್ದಾರೆ. ನನ್ನ ಕ್ಷೇತ್ರದಲ್ಲಿ ಅನೇಕ ಮುಸ್ಲಿಂ ಮಾರಾಟಗಾರರು ತರಕಾರಿ ಮಾರಾಟ ಮಾಡ್ತಿದ್ದು, ಡೆಡ್ಲಿ ವೈರಸ್​ನಿಂದ ಕ್ಷೇತ್ರದ ಜನರ ರಕ್ಷಣೆ ಮಾಡಲು ಈ ರೀತಿ ಹೇಳಿರುವೆ ಎಂದಿದ್ದಾರೆ.

ಇವರ ಹೇಳಿಕೆ ವಿವಾದ ರೂಪ ಪಡೆದುಕೊಳ್ಳುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಉತ್ತರಪ್ರದೇಶ ಬಿಜೆಪಿ ವಕ್ತಾರ ಚಂದ್ರಮೋಹನ್​, ಪಕ್ಷ ಇದರ ಬಗ್ಗೆ ಸಮಾಲೋಚನೆ ನಡೆಸಿ, ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.

ಗೋರಖ್‌ಪುರ(ಯುಪಿ): ದೇಶಾದ್ಯಂತ ಭೀತಿ ಹುಟ್ಟಿಸಿರುವ ಮಹಾಮಾರಿ ಕೊರೊನಾ ವಿರುದ್ಧದ ಹೋರಾಟ ಮುಂದುವರೆದಿದ್ದು, ಇದರ ಮಧ್ಯೆ ಬಿಜೆಪಿ ಶಾಸಕರೊಬ್ಬರು ವಿವಾದಿತ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಉತ್ತರಪ್ರದೇಶದ ಬರ್ಹಾಜ್​​ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್​ ತಿವಾರಿ ಈ ಹೇಳಿಕೆ ನೀಡಿದ್ದು, ಅದರ ವಿಡಿಯೋ ತುಣುಕು ಎಲ್ಲೆಡೆ ವೈರಲ್​ ಆಗಿದೆ.

ಶಾಸಕ ಹೇಳಿದ್ದೇನು!?

ಯಾವುದೇ ಕಾರಣಕ್ಕೂ ಮುಸ್ಲಿಂ ಮಾರಾಟಗಾರರಿಂದ ತರಕಾರಿ ಖರೀದಿ ಮಾಡಬೇಡಿ. ಈ ಮಾತನ್ನು ನಾನು ಎಲ್ಲರ ಸಮ್ಮುಖದಲ್ಲೇ ಹೇಳುತ್ತಿರುವೆ ಎಂದಿದ್ದಾರೆ.

ಬಿಜೆಪಿ ಶಾಸಕನ ವಿವಾದಿತ ಹೇಳಿಕೆ

ಸಮರ್ಥನೆ ನೀಡಿದ ಶಾಸಕ

ಇದೇ ವಿಷಯವಾಗಿ ಪ್ರಶ್ನೆ ಮಾಡಿದಾಗ, ಏಪ್ರಿಲ್​ 17, 18ರಂದು ನಾನು ಮಾಸ್ಕ್​ ಹಾಗೂ ಸ್ಯಾನಿಟೈಸರ್​​ ವಿತರಣೆ ಮಾಡ್ತಿದ್ದಾಗ, ನನ್ನ ಬಳಿ ಬಂದ ಕೆಲವರು ತಬ್ಲಿಘಿಗೆ ತೆರಳಿ ವಾಪಸ್​​ ಆದ ಕೆಲವರು ತರಕಾರಿ ಮಾರಾಟ ಮಾಡ್ತಿದ್ದು, ಇದರಿಂದ ಕೊರೊನಾ ವೈರಸ್​ ಹರಡುತ್ತಿದೆ ಎಂದಿದ್ದರು. ಈ ವೇಳೆ, ನಾನು ಅವರೊಂದಿಗೆ ಯಾವುದೇ ಕಾರಣಕ್ಕೂ ಜಗಳ ಮಾಡಬೇಡಿ. ಅವರು ಮಾರಾಟ ಮಾಡುವ ತರಕಾರಿ ಖರೀದಿ ಮಾಡಬೇಡಿ ಎಂದು ಹೇಳಿರುವೆ ಎಂದಿದ್ದಾರೆ. ನನ್ನ ಕ್ಷೇತ್ರದಲ್ಲಿ ಅನೇಕ ಮುಸ್ಲಿಂ ಮಾರಾಟಗಾರರು ತರಕಾರಿ ಮಾರಾಟ ಮಾಡ್ತಿದ್ದು, ಡೆಡ್ಲಿ ವೈರಸ್​ನಿಂದ ಕ್ಷೇತ್ರದ ಜನರ ರಕ್ಷಣೆ ಮಾಡಲು ಈ ರೀತಿ ಹೇಳಿರುವೆ ಎಂದಿದ್ದಾರೆ.

ಇವರ ಹೇಳಿಕೆ ವಿವಾದ ರೂಪ ಪಡೆದುಕೊಳ್ಳುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಉತ್ತರಪ್ರದೇಶ ಬಿಜೆಪಿ ವಕ್ತಾರ ಚಂದ್ರಮೋಹನ್​, ಪಕ್ಷ ಇದರ ಬಗ್ಗೆ ಸಮಾಲೋಚನೆ ನಡೆಸಿ, ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.

Last Updated : Apr 29, 2020, 2:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.