ETV Bharat / bharat

ಬಿಜೆಪಿಯವರು ಸಂವಿಧಾನ, ಪ್ರಜಾಪ್ರಭುತ್ವದ ನಾಶಕ್ಕೆ ಮುಂದಾಗಿದ್ದಾರೆ: ಖರ್ಗೆ - undefined

ಬಾಬಾ ಸಾಹೇಬ್​ ಅಂಬೇಡ್ಕರ್​ ನೀಡಿದ ಸಂವಿಧಾನದ ತತ್ವಗಳು ಹಾಗೂ ಪಂಡಿತ್​ ಜವಹರಲಾಲ್​ ನೆಹರೂ ಹಾಕಿಕೊಟ್ಟ ರಾಜಕೀಯ ಸಿದ್ಧಾಂತಗಳ ಮೂಲಕ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸೋಣ. ನಾವು ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಬಿಜೆಪಿ ಕೈಯಿಂದ ರಕ್ಷಿಸಬೇಕಿದೆ ಎಂದು ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ
author img

By

Published : Jul 18, 2019, 10:03 PM IST

ಮುಂಬೈ: ಆರ್​ಎಸ್​ಎಸ್​, ಬಿಜೆಪಿಯವರು ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಇನ್ನೊಬ್ಬರನ್ನು ನಾಶ ಮಾಡುವುದಕ್ಕೆ ನೋಡುತ್ತಿದ್ದಾರೆ. ಆದರೆ ನಾವು ಅಂಥವರ ರಕ್ಷಣೆಗೆ ಮುಂದಾಗಬೇಕಿದೆ ಎಂದು ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಮಹಾರಾಷ್ಟ್ರ ಕಾಂಗ್ರೆಸ್​​ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕೇವಲ ಸರ್ಕಾರ ಅಥವಾ ಪಕ್ಷದ ರಕ್ಷಣೆಗೆ ಮಾತ್ರವಲ್ಲದೆ ದೇಶವನ್ನು ನಾವು ಬಿಜೆಪಿಯಿಂದ ರಕ್ಷಿಸಬೇಕಿದೆ. ಸಮಾಜದಲ್ಲಿ ಸಮಾನತೆ ಹಾಗೂ ಸಹಿಷ್ಣುತೆ ತರಲು ಕಾಂಗ್ರೆಸ್​ ಮತ್ತೆ ಬರಬೇಕಿದೆ. ಕಾಂಗ್ರೆಸ್​ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದಿದೆ. ಪ್ರಜಾಪ್ರಭುತ್ವದ ತಳಹದಿ ಮೇಲೆ ಕೆಲಸ ಮಾಡಿದೆ ಎಂದರು.

ಬಾಬಾ ಸಾಹೇಬ್​ ಅಂಬೇಡ್ಕರ್​ ನೀಡಿದ ಸಂವಿಧಾನದ ತತ್ವಗಳು ಹಾಗೂ ಪಂಡಿತ್​ ಜವಹರಲಾಲ್​ ನೆಹರೂ ಹಾಕಿಕೊಟ್ಟ ರಾಜಕೀಯ ಸಿದ್ಧಾಂತಗಳ ಮೂಲಕ ಈ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸೋಣ ಎಂದರು.

ಮಲ್ಲಿಕಾರ್ಜುನ ಖರ್ಗೆ ಕರೆ

ಕಾಂಗ್ರೆಸ್​ ಶಾಸಕರು, ಸಂಸದರು, ಮಾಜಿ ಪ್ರಧಾನಿ, ಮಾಜಿ ಸಿಎಂ ಎಲ್ಲರೂ ಒಗ್ಗೂಡಿ ಆಡಳಿತಾರೂಢ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರದಂತೆ ಕೆಲಸ ಮಾಡಬೇಕು. ಇದು ನಾವು ಅಂದುಕೊಂಡಷ್ಟು ಸುಲಭವಲ್ಲ. ಬಹಳ ಕಠಿಣವಿದೆ. ಆದರೂ ಕೂಡಾ ನಾವು ಈ ಕೆಲಸವನ್ನು ಮಾಡಲೇಬೇಕು. ಬರಲಿರೋ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸೋಣ. ಬಿಜೆಪಿ ಮುಂದೆ ಸರ್ಕಾರ ರಚಿಸದಂತೆ ಮಾಡುವುದೇ ಇದರ ಮುಖ್ಯ ಉದ್ದೇಶ. ಬಿಜೆಪಿಯನ್ನು ರಾಜಕೀಯ ಸಿದ್ಧಾಂತದ ಮೂಲಕ ದೂರವಿಡೋಣ ಎಂದು ಖರ್ಗೆ ಕರೆ ನೀಡಿದರು.

ಮುಂಬೈ: ಆರ್​ಎಸ್​ಎಸ್​, ಬಿಜೆಪಿಯವರು ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಇನ್ನೊಬ್ಬರನ್ನು ನಾಶ ಮಾಡುವುದಕ್ಕೆ ನೋಡುತ್ತಿದ್ದಾರೆ. ಆದರೆ ನಾವು ಅಂಥವರ ರಕ್ಷಣೆಗೆ ಮುಂದಾಗಬೇಕಿದೆ ಎಂದು ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಮಹಾರಾಷ್ಟ್ರ ಕಾಂಗ್ರೆಸ್​​ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕೇವಲ ಸರ್ಕಾರ ಅಥವಾ ಪಕ್ಷದ ರಕ್ಷಣೆಗೆ ಮಾತ್ರವಲ್ಲದೆ ದೇಶವನ್ನು ನಾವು ಬಿಜೆಪಿಯಿಂದ ರಕ್ಷಿಸಬೇಕಿದೆ. ಸಮಾಜದಲ್ಲಿ ಸಮಾನತೆ ಹಾಗೂ ಸಹಿಷ್ಣುತೆ ತರಲು ಕಾಂಗ್ರೆಸ್​ ಮತ್ತೆ ಬರಬೇಕಿದೆ. ಕಾಂಗ್ರೆಸ್​ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದಿದೆ. ಪ್ರಜಾಪ್ರಭುತ್ವದ ತಳಹದಿ ಮೇಲೆ ಕೆಲಸ ಮಾಡಿದೆ ಎಂದರು.

ಬಾಬಾ ಸಾಹೇಬ್​ ಅಂಬೇಡ್ಕರ್​ ನೀಡಿದ ಸಂವಿಧಾನದ ತತ್ವಗಳು ಹಾಗೂ ಪಂಡಿತ್​ ಜವಹರಲಾಲ್​ ನೆಹರೂ ಹಾಕಿಕೊಟ್ಟ ರಾಜಕೀಯ ಸಿದ್ಧಾಂತಗಳ ಮೂಲಕ ಈ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸೋಣ ಎಂದರು.

ಮಲ್ಲಿಕಾರ್ಜುನ ಖರ್ಗೆ ಕರೆ

ಕಾಂಗ್ರೆಸ್​ ಶಾಸಕರು, ಸಂಸದರು, ಮಾಜಿ ಪ್ರಧಾನಿ, ಮಾಜಿ ಸಿಎಂ ಎಲ್ಲರೂ ಒಗ್ಗೂಡಿ ಆಡಳಿತಾರೂಢ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರದಂತೆ ಕೆಲಸ ಮಾಡಬೇಕು. ಇದು ನಾವು ಅಂದುಕೊಂಡಷ್ಟು ಸುಲಭವಲ್ಲ. ಬಹಳ ಕಠಿಣವಿದೆ. ಆದರೂ ಕೂಡಾ ನಾವು ಈ ಕೆಲಸವನ್ನು ಮಾಡಲೇಬೇಕು. ಬರಲಿರೋ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸೋಣ. ಬಿಜೆಪಿ ಮುಂದೆ ಸರ್ಕಾರ ರಚಿಸದಂತೆ ಮಾಡುವುದೇ ಇದರ ಮುಖ್ಯ ಉದ್ದೇಶ. ಬಿಜೆಪಿಯನ್ನು ರಾಜಕೀಯ ಸಿದ್ಧಾಂತದ ಮೂಲಕ ದೂರವಿಡೋಣ ಎಂದು ಖರ್ಗೆ ಕರೆ ನೀಡಿದರು.

Intro:Body:

kharge


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.