ಮಹಾರಾಷ್ಟ್ರ: ನಂದೂರ್ಬಾರ್ನ ಅಂಗನವಾಡಿ ಕಾರ್ಯಕರ್ತೆ ರೇಲು ವಾಸವೆ ಎಂಬುವರು 6ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮತ್ತು ಹಳ್ಳಿಗಾಡಿನ ತಾಯಂದಿರ ಯೋಗಕ್ಷೇಮ ವಿಚಾರಿಸಿಕೊಳ್ಳಲು ನದಿಯಲ್ಲಿ ಸುಮಾರು 18 ಕಿ.ಮೀ. ದೋಣಿಯನ್ನು ತಾವೇ ನಡೆಸಿಕೊಂಡು ಹೋಗ್ತಾರೆ.
ಈ ಕುರಿತು ಪ್ರತಿಕ್ರಿಯಿಸುವ ರೇಲು ವಾಸವೆ, ಪ್ರತಿದಿನ ದೋಣಿ ನಡೆಸಿಕೊಂಡು ಬರುವುದು ಕಷ್ಟ. ಆದರೆ, ಶಿಶುಗಳು ಮತ್ತು ತಾಯಂದಿರು ಪೌಷ್ಠಿಕ ಆಹಾರವನ್ನು ಸೇವಿಸುವುದು ಅವಶ್ಯಕ ಹಾಗೂ ಆರೋಗ್ಯಕರವಾಗಿರುವುದು ಮುಖ್ಯವಾದ್ದರಿಂದ ಅವರಿಗಾಗಿ ನಾನು ಹೋಗುತ್ತೇನೆ ಎಂದು ತಿಳಿಸಿದ್ರು.
ರೇವು ಕಾರ್ಯನಿರ್ವಹಿಸುತ್ತಿರುವುದು ಬುಡಕಟ್ಟು ಜನರಿಗಾಗಿ. ಈ ಜನರು ವಾಸಿರುವ ಕುಗ್ರಾಮಗಳಿಗೆ ತೆರಳಲು ರಸ್ತೆಮಾರ್ಗ ಉತ್ತಮವಾಗಿಲ್ಲ. ದೋಣಿ ಮೂಲಕವೇ ತೆರಳಬೇಕು. ಹೀಗಾಗಿ, ಸ್ಥಳೀಯರೊಬ್ಬರ ಬಳಿ ಚಿಕ್ಕ ದೋಣಿಯೊಂದನ್ನು ಖರೀದಿಸಿದ್ದು, ಈ ದೋಣಿ ಮೂಲಕವೇ ದಿನ ಹೋಗಿ ಬರುತ್ತಾರೆ.
ಗರ್ಭಿಣಿಯರು ಹಾಗೂ ಬಾಣಂತಿಯರ ಆರೋಗ್ಯ ವಿಚಾರಿಸುವುದು,ಮಕ್ಕಳ ತೂಕ ಪರೀಕ್ಷಿಸುವುದು, ಅಪೌಷ್ಠಿಕತೆಯಿಂದ ಕೂಡಿದ ತಾಯಂದಿರಿಗೆ ಸರ್ಕಾರದಿಂದ ಕೊಡಲ್ಪಡುವ ಮೊಟ್ಟೆ ಮತ್ತಿತರ ಪೌಷ್ಠಿಕ ಆಹಾರ ನೀಡುತ್ತಾರೆ.
ಬೆಳಗ್ಗೆ 7:30ಕ್ಕೆ ಹೊರಡುವ ಅವರು ಮತ್ತೆ ಮನೆ ತಲುಪುವುದು ಸಂಜೆಗೆ. ಹೀಗಾಗಿ ರೇಲು ವಾಸವೆ ಅವರ ನಿಸ್ವಾರ್ಥ ಸೇವೆಗಾಗಿ ಜನ ಇವರಿಗೆ ವಿಶೇಷ ಗೌರವ ನೀಡುತ್ತಾರೆ.