ETV Bharat / bharat

25 ದಿನದಲ್ಲಿ 222ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿದ ಪಾಕ್ ಸೇನೆ!

author img

By

Published : Aug 29, 2019, 11:32 PM IST

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬಳಿಕ ಪಾಕ್​ ಕಾಲುಕೆದರಿ ಜಗಳಕ್ಕೆ ಬರುತ್ತಿದ್ದು, ಒಂದೇ ತಿಂಗಳಲ್ಲಿ ಬರೋಬ್ಬರಿ 222ಕ್ಕೂ ಹೆಚ್ಚು ಸಲ ಅಂತರಾಷ್ಟ್ರೀಯ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿದೆ.

ಕದನ ವಿರಾಮ ಉಲ್ಲಂಘನೆ

ಶ್ರೀನಗರ: ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾರ್ಪಡಿಸಿದ ಬಳಿಕ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕ್ ಉಪಟಳ ಹೆಚ್ಚಾಗುತ್ತಿದೆ.​​ ಕಳೆದ 25 ದಿನಗಳಲ್ಲಿ ಬರೋಬ್ಬರಿ 222ಕ್ಕೂ ಹೆಚ್ಚು ಸಲ ಕದನ ವಿರಾಮ ಉಲ್ಲಂಘಿಸಿದ ಪಾಕ್ ಸೇನೆ ಉದ್ಧಟತನ ಪ್ರದರ್ಶಿಸುತ್ತಿದೆ.

2019ರಲ್ಲೇ 1,889 ಸಲ ಕದನ ವಿರಾಮ(Ceasefire) ಉಲ್ಲಂಘಿಸಿರುವ ಪಾಕ್ ಇದೇ ತಿಂಗಳಲ್ಲಿ ಬರೋಬ್ಬರಿ 222 ಸಲ ಗಡಿಯಲ್ಲಿ ಗುಂಡಿನ ಚಕಮಕಿ ನಡೆಸಿದೆ ಎಂದು ವರದಿಯಾಗಿದೆ. ಪ್ರಮುಖವಾಗಿ ರಜೌರಿ, ಉರಿ ಸೆಕ್ಟರ್, ಕುಪ್ವಾರ್​, ಹದ್ವಾರ್​, ಪುಲ್ವಾಮಾ ಬಳಿ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿದೆ.

ಶ್ರೀನಗರ: ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾರ್ಪಡಿಸಿದ ಬಳಿಕ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕ್ ಉಪಟಳ ಹೆಚ್ಚಾಗುತ್ತಿದೆ.​​ ಕಳೆದ 25 ದಿನಗಳಲ್ಲಿ ಬರೋಬ್ಬರಿ 222ಕ್ಕೂ ಹೆಚ್ಚು ಸಲ ಕದನ ವಿರಾಮ ಉಲ್ಲಂಘಿಸಿದ ಪಾಕ್ ಸೇನೆ ಉದ್ಧಟತನ ಪ್ರದರ್ಶಿಸುತ್ತಿದೆ.

2019ರಲ್ಲೇ 1,889 ಸಲ ಕದನ ವಿರಾಮ(Ceasefire) ಉಲ್ಲಂಘಿಸಿರುವ ಪಾಕ್ ಇದೇ ತಿಂಗಳಲ್ಲಿ ಬರೋಬ್ಬರಿ 222 ಸಲ ಗಡಿಯಲ್ಲಿ ಗುಂಡಿನ ಚಕಮಕಿ ನಡೆಸಿದೆ ಎಂದು ವರದಿಯಾಗಿದೆ. ಪ್ರಮುಖವಾಗಿ ರಜೌರಿ, ಉರಿ ಸೆಕ್ಟರ್, ಕುಪ್ವಾರ್​, ಹದ್ವಾರ್​, ಪುಲ್ವಾಮಾ ಬಳಿ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿದೆ.

Intro:Body:

ಆರ್ಟಿಕಲ್​ 370 ರದ್ಧು: 25 ದಿನದಲ್ಲಿ 222ಕ್ಕೂ ಹೆಚ್ಚು ಸಲ ಕದನ ವಿರಾಮ ಉಲ್ಲಂಘಿಸಿದ ಪಾಕ್!​​



ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್​ 370 ರದ್ಧು ಮಾಡಿದ ಬಳಿಕ ಪಾಕ್​​ ಗಡಿಯಲ್ಲಿ ಮೇಲಿಂದ ಮೇಲೆ ಬಾಲ ಬಿಚ್ಚುತ್ತಿದ್ದು, ಕಳೆದ 25 ದಿನಗಳಲ್ಲಿ ಬರೋಬ್ಬರಿ 222ಕ್ಕೂ ಹೆಚ್ಚು ಸಲ ಕದನ ವಿರಾಮ ಉಲ್ಲಂಘನೆ ಮಾಡಿದೆ.



ಆಗಸ್ಟ್​ 5ರ,2019ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್​ 370 ರದ್ಧು ಮಾಡಿ, ಜಮ್ಮು-ಕಾಶ್ಮೀರಕ್ಕೆ ವಿಧಾನಸಭೆ ಸಹಿತ ಕೇಂದ್ರಾಡಳಿತ ಪ್ರದೇಶ ಹಾಗೂ ಲಡಾಖ್​ಗೆ ವಿಧಾನಸಭೆ ರಹಿತ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಿದೆ. ಇದಾದ ಬಳಿಕ ಪ್ರತಿದಿನ ಕಾಲುಕೆದರಿ ಪಕ್ಕದ ಪಾಕ್​ ಭಾರತದ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. 



2019ರಲ್ಲೇ 1,889 ಸಲ ಕದನ ವಿರಾಮ ಉಲ್ಲಂಘನೆ ಮಾಡಿರುವ ಪಾಕ್​ ಇದೇ ತಿಂಗಳಲ್ಲಿ ಬರೋಬ್ಬರಿ 222 ಸಲ ಭಾರತದ ಗಡಿಯಲ್ಲಿ ಗುಂಡಿನ ಚಕಮಕಿ ನಡೆಸಿದೆ ಎಂದು ವರದಿಯಾಗಿದೆ. ಪ್ರಮುಖವಾಗಿ ರಾಜೌರಿ,ಉರಿ ಸೆಕ್ಟರ್, ಕುಪ್ವಾರ್​,ಹದ್ವಾರ್​,ಪುಲ್ವಾಮಾ ಸೇರಿದಂತೆ ಪ್ರಮುಖ ಗಡಿ ರೇಖೆ ಬಳಿ ಗುಂಡಿನ ದಾಳಿ ನಡೆಸುತ್ತಿದೆ. 



ಈಗಾಗಲೇ ಇದೇ ವಿಷಯವನ್ನಿಟ್ಟುಕೊಂಡು ವಿಶ್ವಸಂಸ್ಥೆ ಮೆಟ್ಟಿಲೇರಿದ್ದ ಪಾಕ್ ಮುಖಭಂಗ ಅನುಭವಿಸಿದ್ದು, ಮೇಲಿಂದ ಮೇಲೆ ಯುದ್ಧದ ಹೇಳಿಕೆ ನೀಡುತ್ತಿದೆ. ಇದೀಗ ಇದೇ ವಿಷಯವನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ತೆಗೆದುಕೊಂಡು ಹೋಗಲು ಅದು ನಿರ್ಧರಿಸಿದೆ. ​


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.