ETV Bharat / bharat

ಪತ್ನಿ ಕೊಂದಿದ್ದ ಸೋಂಕಿತ ಕೈದಿ ಆ್ಯಂಬುಲೆನ್ಸ್​​​​​​​ನಿಂದ ಎಸ್ಕೇಪ್​: ರಸ್ತೆಯಲ್ಲೇ ಸೃಷ್ಟಿಯಾದ ಮಹಾಡ್ರಾಮಾ!

author img

By

Published : Aug 3, 2020, 8:04 AM IST

Updated : Aug 3, 2020, 9:10 AM IST

ಪತ್ನಿ ಕೊಂದು ಬಂಧಿತವಾಗಿದ್ದ ಕೊರೊನಾ ಸೋಂಕಿತ ಆರೋಪಿಯೊಬ್ಬ ಆ್ಯಂಬುಲೆನ್ಸ್​​​ನಿಂದ ಪರಾರಿಯಾಗಿರುವ ಘಟನೆ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್​ನಲ್ಲಿ ನಡೆದಿದೆ.

corona infected man runs away, corona infected man runs away from ambulance, corona infected man runs away in Darjeeling, Darjeeling news, Darjeeling kannada news, ಸೋಂಕಿತ ಕೈದಿ ಎಸ್ಕೇಪ್, ಆಂಬ್ಯುಲೆನ್ಸ್​ನಿಂದ ಸೋಂಕಿತ ಕೈದಿ ಎಸ್ಕೇಪ್, ಡಾರ್ಜಿಲಿಂಗ್​ನಲ್ಲಿ ಸೋಂಕಿತ ಕೈದಿ ಎಸ್ಕೇಪ್, ಡಾರ್ಜಿಲಿಂಗ್​ ಸುದ್ದಿ, ಡಾರ್ಜಿಲಿಂಗ್​ ಕನ್ನಡ ಸುದ್ದಿ,
ಪತ್ನಿ ಕೊಂದಿದ್ದ ಸೋಂಕಿತ ಕೈದಿ ಆಂಬ್ಯುಲೆನ್ಸ್​ನಿಂದ ಎಸ್ಕೇಪ್

ಡಾರ್ಜಿಲಿಂಗ್: ಡಾರ್ಜಿಲಿಂಗ್‌ ರಸ್ತೆಯಲ್ಲಿ ನಾಟಕೀಯ ಬೆಳವಣಿಗೆಯೊಂದು ನಡೆದಿದೆ. ಪತ್ನಿಯನ್ನು ಕೊಂದು ಬಂಧಿತವಾಗಿದ್ದ 55 ವರ್ಷದ ಕೊರೊನಾ ಸೋಂಕಿತ ವ್ಯಕ್ತಿ ಆ್ಯಂಬುಲೆನ್ಸ್‌ನಿಂದ ತಪ್ಪಿಸಿಕೊಂಡು ಓಡಿಹೋಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಪತ್ನಿ ಕೊಂದಿದ್ದ ಸೋಂಕಿತ ಕೈದಿ ಆ್ಯಂಬುಲೆನ್ಸ್​ನಿಂದ ಎಸ್ಕೇಪ್

ಕೊರೊನಾ ಸೋಂಕಿತ ವ್ಯಕ್ತಿ ಶೌಚಕ್ಕೆ ಹೋಗಬೇಕು. ಆ್ಯಂಬುಲೆನ್ಸ್​​​​​ ನಿಲ್ಲಿಸುವಂತೆ ಕೇಳಿಕೊಂಡಿದ್ದಾನೆ. ಆ್ಯಂಬುಲೆನ್ಸ್​​​​ ಇಳಿದು ರಸ್ತೆ ಬದಿಯ ಕಾಡಿಗೆ ಹೋಗಿದ್ದಾನೆ. ಈ ವೇಳೆ ಆ್ಯಂಬುಲೆನ್ಸ್​ ಚಾಲಕನಿಗೆ ರೋಗಿ ಓಡಿ ಹೋಗುವುದು ಅರಿವಾಗಿದೆ.

’’ಶೌಚಾಲಯಕ್ಕಾಗಿ ಆ್ಯಂಬುಲೆನ್ಸ್​ ನಿಲ್ಲಿಸುವಂತೆ ಕೇಳಿಕೊಂಡನು. ಆ್ಯಂಬುಲೆನ್ಸ್​​​​​ ನಿಲ್ಲಿಸಿದ ನಂತರ ಆ ವ್ಯಕ್ತಿ ಹತ್ತಿರದ ಕಾಡಿಗೆ ಹೋದನು. ಸ್ವಲ್ಪ ಸಮಯದ ನಂತರ ಆತ ಓಡಿ ಹೋಗ್ತಿರುವುದು ಕಂಡು ಬಂತು. ತಕ್ಷಣ ಆತನನ್ನು ಹುಡುಕುವ ಪ್ರಯತ್ನ ಮಾಡಿದೆ. ಆದರೆ ಆತ ಸಿಗಲಿಲ್ಲ. ಹೀಗಾಗಿ ತಕ್ಷಣ ಪೊಲೀಸರಿಗೆ ದೂರು ನೀಡಿದ್ದೇನೆ’’ ಎಂದು ಡ್ರೈವರ್​ ಹೇಳಿದ್ದಾನೆ. ಇನ್ನು ವಿಷಯ ತಿಳಿದ ಪೊಲೀಸರು ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.

ಆಘಾತಕಾರಿ ವಿಷಯ ಏನೆಂದರೆ ಸೋಂಕಿತ ವ್ಯಕ್ತಿ ಕೊಲೆ ಆರೋಪಿಯಾಗಿದ್ದಾನೆ. ವಾರದ ಹಿಂದೆಯಷ್ಟೇ ಪೆರೋಲ್​ ಮೇಲೆ ಆತ ಜೈಲಿನಿಂದ ಬಿಡುಗಡೆ ಆಗಿದ್ದ. ಈ ವೇಳೆ ಆತನನ್ನ ಪರೀಕ್ಷೆಗೊಳಪಡಿಸಿದಾಗ ಪಾಸಿಟಿವ್ ಕಂಡು ಬಂದಿತ್ತು.

ಡಾರ್ಜಿಲಿಂಗ್: ಡಾರ್ಜಿಲಿಂಗ್‌ ರಸ್ತೆಯಲ್ಲಿ ನಾಟಕೀಯ ಬೆಳವಣಿಗೆಯೊಂದು ನಡೆದಿದೆ. ಪತ್ನಿಯನ್ನು ಕೊಂದು ಬಂಧಿತವಾಗಿದ್ದ 55 ವರ್ಷದ ಕೊರೊನಾ ಸೋಂಕಿತ ವ್ಯಕ್ತಿ ಆ್ಯಂಬುಲೆನ್ಸ್‌ನಿಂದ ತಪ್ಪಿಸಿಕೊಂಡು ಓಡಿಹೋಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಪತ್ನಿ ಕೊಂದಿದ್ದ ಸೋಂಕಿತ ಕೈದಿ ಆ್ಯಂಬುಲೆನ್ಸ್​ನಿಂದ ಎಸ್ಕೇಪ್

ಕೊರೊನಾ ಸೋಂಕಿತ ವ್ಯಕ್ತಿ ಶೌಚಕ್ಕೆ ಹೋಗಬೇಕು. ಆ್ಯಂಬುಲೆನ್ಸ್​​​​​ ನಿಲ್ಲಿಸುವಂತೆ ಕೇಳಿಕೊಂಡಿದ್ದಾನೆ. ಆ್ಯಂಬುಲೆನ್ಸ್​​​​ ಇಳಿದು ರಸ್ತೆ ಬದಿಯ ಕಾಡಿಗೆ ಹೋಗಿದ್ದಾನೆ. ಈ ವೇಳೆ ಆ್ಯಂಬುಲೆನ್ಸ್​ ಚಾಲಕನಿಗೆ ರೋಗಿ ಓಡಿ ಹೋಗುವುದು ಅರಿವಾಗಿದೆ.

’’ಶೌಚಾಲಯಕ್ಕಾಗಿ ಆ್ಯಂಬುಲೆನ್ಸ್​ ನಿಲ್ಲಿಸುವಂತೆ ಕೇಳಿಕೊಂಡನು. ಆ್ಯಂಬುಲೆನ್ಸ್​​​​​ ನಿಲ್ಲಿಸಿದ ನಂತರ ಆ ವ್ಯಕ್ತಿ ಹತ್ತಿರದ ಕಾಡಿಗೆ ಹೋದನು. ಸ್ವಲ್ಪ ಸಮಯದ ನಂತರ ಆತ ಓಡಿ ಹೋಗ್ತಿರುವುದು ಕಂಡು ಬಂತು. ತಕ್ಷಣ ಆತನನ್ನು ಹುಡುಕುವ ಪ್ರಯತ್ನ ಮಾಡಿದೆ. ಆದರೆ ಆತ ಸಿಗಲಿಲ್ಲ. ಹೀಗಾಗಿ ತಕ್ಷಣ ಪೊಲೀಸರಿಗೆ ದೂರು ನೀಡಿದ್ದೇನೆ’’ ಎಂದು ಡ್ರೈವರ್​ ಹೇಳಿದ್ದಾನೆ. ಇನ್ನು ವಿಷಯ ತಿಳಿದ ಪೊಲೀಸರು ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.

ಆಘಾತಕಾರಿ ವಿಷಯ ಏನೆಂದರೆ ಸೋಂಕಿತ ವ್ಯಕ್ತಿ ಕೊಲೆ ಆರೋಪಿಯಾಗಿದ್ದಾನೆ. ವಾರದ ಹಿಂದೆಯಷ್ಟೇ ಪೆರೋಲ್​ ಮೇಲೆ ಆತ ಜೈಲಿನಿಂದ ಬಿಡುಗಡೆ ಆಗಿದ್ದ. ಈ ವೇಳೆ ಆತನನ್ನ ಪರೀಕ್ಷೆಗೊಳಪಡಿಸಿದಾಗ ಪಾಸಿಟಿವ್ ಕಂಡು ಬಂದಿತ್ತು.

Last Updated : Aug 3, 2020, 9:10 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.