ETV Bharat / bharat

ಶೇ.90ರಷ್ಟು ರೈತರು ಆಂದೋಲನ ಮುಂದುವರಿಸುವ ಆಸಕ್ತಿ ಹೊಂದಿಲ್ಲ: ಬಾರ್​​ ಕೌನ್ಸಿಲ್​ ಆಫ್ ಇಂಡಿಯಾ

author img

By

Published : Jan 14, 2021, 6:55 AM IST

ಸುಪ್ರೀಂಕೋರ್ಟ್‌ನ ಈ ಆದೇಶವು ಮೊದಲನೆಯದಾಗಿ ಆಂದೋಲನ ನಡೆಸುವ ರೈತರು, ವೃದ್ಧರು, ಮಹಿಳೆಯರು, ಚಳಿ ಮತ್ತು ಹವಾಮಾನ ಪರಿಸ್ಥಿತಿ ಹಾಗೂ ಕೋವಿಡ್​​​ನಿಂದ ಪ್ರಾಣ ಉಳಿಸುವುದಾಗಿತ್ತು. ಈ ಆದೇಶವನ್ನು ಆಂದೋಲನ ನಡೆಸುವಾಗ ಆತ್ಮಹತ್ಯೆ ಮಾಡಿಕೊಂಡವರ ಹಾಗೂ ಹಿರಿಯ ಜೀವಿಗಳ ನೆನಪಿನಲ್ಲಿಟ್ಟುಕೊಂಡು ನೀಡಲಾಗಿದೆ ಎಂದಿದ್ದಾರೆ.

ನವದೆಹಲಿ: ಮೂರು ಕೃಷಿ ಕಾನೂನು ಅನುಷ್ಠಾನಕ್ಕೆ ತಡೆಯಾಜ್ಞೆ ತರುವ ಸುಪ್ರೀಂಕೋರ್ಟ್​​ನ ಮಹತ್ತರ ಆದೇಶದ ಬಳಿಕ ಶೇ.90ರಷ್ಟು ರೈತರು ಆಂದೋಲನ ಮುಂದುವರಿಸುವ ಆಸಕ್ತಿ ಹೊಂದಿಲ್ಲ ಎಂದು ಬಾರ್​​ ಕೌನ್ಸಿಲ್​ ಆಫ್ ಇಂಡಿಯಾ (ಬಿಸಿಐ) ಮಾಹಿತಿ ನೀಡಿದೆ.

ಕೃಷಿ ಮಸೂದೆಗಳ ಅನುಷ್ಠಾನಕ್ಕೆ ತಾತ್ಕಾಲಿಕ ತಡೆ ನೀಡಿದ ಸುಪ್ರೀಂ ಆದೇಶದ ಬಳಿಕ ಶೇ.90 ರಷ್ಟು ರೈತರು ಆಂದೋಲನ ಮುಂದುವರಿಸುವರರ ಪರವಾಗಿಲ್ಲ. ಆದರೆ, ಕೆಲವರ ವೈಯಕ್ತಿಕ ರಾಜಕೀಯ ಲಾಭಕ್ಕಾಗಿ ಆಂದೋಲನ ಮುಂದುವರಿಸುವ ಪ್ರಯತ್ನದಲ್ಲಿದ್ದಾರೆ ಎಂದು ಬಾರ್​ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷ ಮನನ್​ ಕುಮಾರ್ ಮಿಶ್ರಾ ಹೇಳಿದ್ದಾರೆ.

ರೈತರ ಆಂದೋಲನ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿದ ಆದೇಶವನ್ನು ಈ ದೇಶದ ವಿವೇಕಯುತ ಪ್ರಜೆಗಳು ಶ್ಲಾಘಿಸುತ್ತಾರೆ. ದೇಶದ ಹಿತದೃಷ್ಟಿಯ ಉದ್ದೇಶದಿಂದ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ ಎಂದು ಮಿಶ್ರಾ ಹೇಳಿದ್ದಾರೆ.

ಸುಪ್ರೀಂಕೋರ್ಟ್‌ನ ಈ ಆದೇಶವು ಮೊದಲನೆಯದಾಗಿ ಆಂದೋಲನ ನಡೆಸುವ ರೈತರು, ವೃದ್ಧರು, ಮಹಿಳೆಯರು, ಚಳಿ ಮತ್ತು ಹವಾಮಾನ ಪರಿಸ್ಥಿತಿ ಹಾಗೂ ಕೋವಿಡ್​​​ನಿಂದ ಪ್ರಾಣ ಉಳಿಸುವುದಾಗಿತ್ತು. ಈ ಆದೇಶವನ್ನು ಆಂದೋಲನ ನಡೆಸುವಾಗ ಆತ್ಮಹತ್ಯೆ ಮಾಡಿಕೊಂಡವರ ಹಾಗೂ ಹಿರಿಯ ಜೀವಿಗಳ ನೆನಪಿನಲ್ಲಿಟ್ಟುಕೊಂಡು ನೀಡಲಾಗಿದೆ ಎಂದಿದ್ದಾರೆ.

ಕೋರ್ಟ್ ಮೂರು ಕೃಷಿ ನೀತಿಗಳಿಗೆ ತಡೆ ನೀಡಿದೆ. ಹೀಗಾಗಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಆಂದೋಲನವನ್ನು ಕೈಬಿಡಬೇಕು. ಆದರೆ, ಕೆಲವು ರಾಜಕಾರಣಿಗಳು ಸುಪ್ರೀಂಕೋರ್ಟ್ ಕುರಿತು ನೀಡಿರುವ ಹೇಳಿಕೆಗಳು ದುರದೃಷ್ಟಕರ. ರಾಜಕೀಯ ನಾಯಕರು ಈ ರೀತಿಯ ಆಧಾರ ರಹಿತ ಹೇಳಿಕೆ ನೀಡಬಾರದು ಎಂದು ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಮೊಬೈಲ್​ ಓನ್ಲಿ ಸ್ಟ್ರೀಮಿಂಗ್​ಗೆ ಅಮೆಜಾನ್ ಎಂಟ್ರಿ.. 89 ರೂ. ರಿಚಾರ್ಜ್ ಎಷ್ಟು ದಿನ ಬರುತ್ತೆ ಗೊತ್ತೆ?​

ನವದೆಹಲಿ: ಮೂರು ಕೃಷಿ ಕಾನೂನು ಅನುಷ್ಠಾನಕ್ಕೆ ತಡೆಯಾಜ್ಞೆ ತರುವ ಸುಪ್ರೀಂಕೋರ್ಟ್​​ನ ಮಹತ್ತರ ಆದೇಶದ ಬಳಿಕ ಶೇ.90ರಷ್ಟು ರೈತರು ಆಂದೋಲನ ಮುಂದುವರಿಸುವ ಆಸಕ್ತಿ ಹೊಂದಿಲ್ಲ ಎಂದು ಬಾರ್​​ ಕೌನ್ಸಿಲ್​ ಆಫ್ ಇಂಡಿಯಾ (ಬಿಸಿಐ) ಮಾಹಿತಿ ನೀಡಿದೆ.

ಕೃಷಿ ಮಸೂದೆಗಳ ಅನುಷ್ಠಾನಕ್ಕೆ ತಾತ್ಕಾಲಿಕ ತಡೆ ನೀಡಿದ ಸುಪ್ರೀಂ ಆದೇಶದ ಬಳಿಕ ಶೇ.90 ರಷ್ಟು ರೈತರು ಆಂದೋಲನ ಮುಂದುವರಿಸುವರರ ಪರವಾಗಿಲ್ಲ. ಆದರೆ, ಕೆಲವರ ವೈಯಕ್ತಿಕ ರಾಜಕೀಯ ಲಾಭಕ್ಕಾಗಿ ಆಂದೋಲನ ಮುಂದುವರಿಸುವ ಪ್ರಯತ್ನದಲ್ಲಿದ್ದಾರೆ ಎಂದು ಬಾರ್​ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷ ಮನನ್​ ಕುಮಾರ್ ಮಿಶ್ರಾ ಹೇಳಿದ್ದಾರೆ.

ರೈತರ ಆಂದೋಲನ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿದ ಆದೇಶವನ್ನು ಈ ದೇಶದ ವಿವೇಕಯುತ ಪ್ರಜೆಗಳು ಶ್ಲಾಘಿಸುತ್ತಾರೆ. ದೇಶದ ಹಿತದೃಷ್ಟಿಯ ಉದ್ದೇಶದಿಂದ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ ಎಂದು ಮಿಶ್ರಾ ಹೇಳಿದ್ದಾರೆ.

ಸುಪ್ರೀಂಕೋರ್ಟ್‌ನ ಈ ಆದೇಶವು ಮೊದಲನೆಯದಾಗಿ ಆಂದೋಲನ ನಡೆಸುವ ರೈತರು, ವೃದ್ಧರು, ಮಹಿಳೆಯರು, ಚಳಿ ಮತ್ತು ಹವಾಮಾನ ಪರಿಸ್ಥಿತಿ ಹಾಗೂ ಕೋವಿಡ್​​​ನಿಂದ ಪ್ರಾಣ ಉಳಿಸುವುದಾಗಿತ್ತು. ಈ ಆದೇಶವನ್ನು ಆಂದೋಲನ ನಡೆಸುವಾಗ ಆತ್ಮಹತ್ಯೆ ಮಾಡಿಕೊಂಡವರ ಹಾಗೂ ಹಿರಿಯ ಜೀವಿಗಳ ನೆನಪಿನಲ್ಲಿಟ್ಟುಕೊಂಡು ನೀಡಲಾಗಿದೆ ಎಂದಿದ್ದಾರೆ.

ಕೋರ್ಟ್ ಮೂರು ಕೃಷಿ ನೀತಿಗಳಿಗೆ ತಡೆ ನೀಡಿದೆ. ಹೀಗಾಗಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಆಂದೋಲನವನ್ನು ಕೈಬಿಡಬೇಕು. ಆದರೆ, ಕೆಲವು ರಾಜಕಾರಣಿಗಳು ಸುಪ್ರೀಂಕೋರ್ಟ್ ಕುರಿತು ನೀಡಿರುವ ಹೇಳಿಕೆಗಳು ದುರದೃಷ್ಟಕರ. ರಾಜಕೀಯ ನಾಯಕರು ಈ ರೀತಿಯ ಆಧಾರ ರಹಿತ ಹೇಳಿಕೆ ನೀಡಬಾರದು ಎಂದು ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಮೊಬೈಲ್​ ಓನ್ಲಿ ಸ್ಟ್ರೀಮಿಂಗ್​ಗೆ ಅಮೆಜಾನ್ ಎಂಟ್ರಿ.. 89 ರೂ. ರಿಚಾರ್ಜ್ ಎಷ್ಟು ದಿನ ಬರುತ್ತೆ ಗೊತ್ತೆ?​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.