ETV Bharat / bharat

ಜೂನ್​ ಅಂತ್ಯಕ್ಕೆ ಪಿಎಂ ಕೇರ್ಸ್​ನಿಂದ 60 ಸಾವಿರ ವೆಂಟಿಲೇಟರ್‌ ಲಭ್ಯ.. ಜೆ ಪಿ ನಡ್ಡಾ ಭರವಸೆ - ಉತ್ತರ ಪ್ರದೇಶ ಜನಸಂವಾದ ವರ್ಚುವಲ್​ ರ‍್ಯಾಲಿ

ಲಾಕ್​ಡೌನ್ ಘೋಷಿಸಿದಾಗ ನಾವು ಯಾವುದೇ ಪಿಪಿಇ ಕಿಟ್​ಗಳನ್ನು ಉತ್ಪಾದಿಸುತ್ತಿರಲಿಲ್ಲ. ಪ್ರಧಾನಿ ಮೋದಿ ಸ್ಥಳೀಯ ಉತ್ಪಾದಕರನ್ನು ಪ್ರೇರೇಪಿಸಿದ್ದಾರೆ. ಈಗ ನಾವು ಪ್ರತಿದಿನ 4.5 ಲಕ್ಷ ಪಿಪಿಇ ಕಿಟ್​ಗಳನ್ನು ಉತ್ಪಾದಿಸುತ್ತಿದ್ದೇವೆ ಎಂದು ಬಹಳ ಹೆಮ್ಮೆಯಿಂದ ಹೇಳಬಲ್ಲೆ..

BJP chief Nadda
ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ
author img

By

Published : Jun 21, 2020, 10:35 PM IST

ನವದೆಹಲಿ : ಪ್ರಸ್ತುತ ದೇಶದಲ್ಲಿ 21 ಸಾವಿರ ವೆಂಟಿಲೇಟರ್‌ಗಳಿವೆ. ಜೂನ್ ಅಂತ್ಯದ ವೇಳೆಗೆ ಪಿಎಂ-ಕೇರ್ಸ್ ನಿಧಿಯ ಮೂಲಕ ಸುಮಾರು 60 ಸಾವಿರ ವೆಂಟಿಲೇಟರ್‌ಗಳು ಲಭ್ಯವಾಗಲಿವೆ ಎಂದು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಹೇಳಿದ್ದಾರೆ.

ಲಾಕ್‌ಡೌನ್ ಘೋಷಿಸಿದಾಗ ನಮ್ಮಲ್ಲಿ ಯಾವುದೇ ಮೀಸಲಾದ ಕೋವಿಡ್-19 ಆಸ್ಪತ್ರೆಗಳು ಇರಲಿಲ್ಲ. ಇಂದು ನಮ್ಮಲ್ಲಿ 1,000 ಕೋವಿಡ್-19 ಆಸ್ಪತ್ರೆ ಮತ್ತು 2 ಲಕ್ಷ ಕೋವಿಡ್-19 ರೋಗಿಗಳಿಗೆ ಮೀಸಲಾದ ಹಾಸಿಗೆಗಳಿವೆ. ನಮ್ಮಲ್ಲಿ 21 ಸಾವಿರ ವೆಂಟಿಲೇಟರ್‌ಗಳಿವೆ. ಜೂನ್ ಅಂತ್ಯದ ವೇಳೆಗೆ ಪಿಎಂ-ಕೇರ್ಸ್ ನಿಧಿಯ ಮೂಲಕ ಸುಮಾರು 60 ಸಾವಿರ ವೆಂಟಿಲೇಟರ್‌ಗಳು ಲಭ್ಯವಾಗಲಿವೆ ಎಂದು ಉತ್ತರಪ್ರದೇಶ ಜನಸಂವಾದ ವರ್ಚುವಲ್​ ರ‍್ಯಾಲಿಯಲ್ಲಿ ತಿಳಿಸಿದ್ದಾರೆ.

ಅಲ್ಲದೆ ಲಾಕ್​ಡೌನ್ ಘೋಷಿಸಿದಾಗ ನಾವು ಯಾವುದೇ ಪಿಪಿಇ ಕಿಟ್​ಗಳನ್ನು ಉತ್ಪಾದಿಸುತ್ತಿರಲಿಲ್ಲ. ಪ್ರಧಾನಿ ಮೋದಿ ಸ್ಥಳೀಯ ಉತ್ಪಾದಕರನ್ನು ಪ್ರೇರೇಪಿಸಿದ್ದಾರೆ. ಈಗ ನಾವು ಪ್ರತಿದಿನ 4.5 ಲಕ್ಷ ಪಿಪಿಇ ಕಿಟ್​ಗಳನ್ನು ಉತ್ಪಾದಿಸುತ್ತಿದ್ದೇವೆ ಎಂದು ಬಹಳ ಹೆಮ್ಮೆಯಿಂದ ಹೇಳಬಲ್ಲೆ ಎಂದಿದ್ದಾರೆ.

ಯುಪಿ ಜನ ಸಂವಾದ​ ವರ್ಚುವಲ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಕೋವಿಡ್-19 ಪ್ರಕರಣ ಮತ್ತು ಸಾವುಗಳ ಸಂಖ್ಯೆಯನ್ನು ಗಮನಿಸಿದಾಗ, ನಾವು ತೃಪ್ತಿದಾಯಕ ಪರಿಸ್ಥಿತಿಯಲ್ಲಿದ್ದೇವೆ. ಸುಮಾರು 24 ಕೋಟಿ ಜನಸಂಖ್ಯೆಯ ರಾಜ್ಯದಲ್ಲಿ ಕೇವಲ 6,000 ಸಕ್ರಿಯ ಪ್ರಕರಣಗಳಿವೆ ಎಂದಿದ್ದಾರೆ.

ನವದೆಹಲಿ : ಪ್ರಸ್ತುತ ದೇಶದಲ್ಲಿ 21 ಸಾವಿರ ವೆಂಟಿಲೇಟರ್‌ಗಳಿವೆ. ಜೂನ್ ಅಂತ್ಯದ ವೇಳೆಗೆ ಪಿಎಂ-ಕೇರ್ಸ್ ನಿಧಿಯ ಮೂಲಕ ಸುಮಾರು 60 ಸಾವಿರ ವೆಂಟಿಲೇಟರ್‌ಗಳು ಲಭ್ಯವಾಗಲಿವೆ ಎಂದು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಹೇಳಿದ್ದಾರೆ.

ಲಾಕ್‌ಡೌನ್ ಘೋಷಿಸಿದಾಗ ನಮ್ಮಲ್ಲಿ ಯಾವುದೇ ಮೀಸಲಾದ ಕೋವಿಡ್-19 ಆಸ್ಪತ್ರೆಗಳು ಇರಲಿಲ್ಲ. ಇಂದು ನಮ್ಮಲ್ಲಿ 1,000 ಕೋವಿಡ್-19 ಆಸ್ಪತ್ರೆ ಮತ್ತು 2 ಲಕ್ಷ ಕೋವಿಡ್-19 ರೋಗಿಗಳಿಗೆ ಮೀಸಲಾದ ಹಾಸಿಗೆಗಳಿವೆ. ನಮ್ಮಲ್ಲಿ 21 ಸಾವಿರ ವೆಂಟಿಲೇಟರ್‌ಗಳಿವೆ. ಜೂನ್ ಅಂತ್ಯದ ವೇಳೆಗೆ ಪಿಎಂ-ಕೇರ್ಸ್ ನಿಧಿಯ ಮೂಲಕ ಸುಮಾರು 60 ಸಾವಿರ ವೆಂಟಿಲೇಟರ್‌ಗಳು ಲಭ್ಯವಾಗಲಿವೆ ಎಂದು ಉತ್ತರಪ್ರದೇಶ ಜನಸಂವಾದ ವರ್ಚುವಲ್​ ರ‍್ಯಾಲಿಯಲ್ಲಿ ತಿಳಿಸಿದ್ದಾರೆ.

ಅಲ್ಲದೆ ಲಾಕ್​ಡೌನ್ ಘೋಷಿಸಿದಾಗ ನಾವು ಯಾವುದೇ ಪಿಪಿಇ ಕಿಟ್​ಗಳನ್ನು ಉತ್ಪಾದಿಸುತ್ತಿರಲಿಲ್ಲ. ಪ್ರಧಾನಿ ಮೋದಿ ಸ್ಥಳೀಯ ಉತ್ಪಾದಕರನ್ನು ಪ್ರೇರೇಪಿಸಿದ್ದಾರೆ. ಈಗ ನಾವು ಪ್ರತಿದಿನ 4.5 ಲಕ್ಷ ಪಿಪಿಇ ಕಿಟ್​ಗಳನ್ನು ಉತ್ಪಾದಿಸುತ್ತಿದ್ದೇವೆ ಎಂದು ಬಹಳ ಹೆಮ್ಮೆಯಿಂದ ಹೇಳಬಲ್ಲೆ ಎಂದಿದ್ದಾರೆ.

ಯುಪಿ ಜನ ಸಂವಾದ​ ವರ್ಚುವಲ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಕೋವಿಡ್-19 ಪ್ರಕರಣ ಮತ್ತು ಸಾವುಗಳ ಸಂಖ್ಯೆಯನ್ನು ಗಮನಿಸಿದಾಗ, ನಾವು ತೃಪ್ತಿದಾಯಕ ಪರಿಸ್ಥಿತಿಯಲ್ಲಿದ್ದೇವೆ. ಸುಮಾರು 24 ಕೋಟಿ ಜನಸಂಖ್ಯೆಯ ರಾಜ್ಯದಲ್ಲಿ ಕೇವಲ 6,000 ಸಕ್ರಿಯ ಪ್ರಕರಣಗಳಿವೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.