ETV Bharat / bharat

ಇಂದು 'ಭಾರತ್​ ಬಂದ್​': ರೈಲು, ಸಾರಿಗೆ ಸೇರಿ ಯಾವೆಲ್ಲ ಸೇವೆಗಳ ಮೇಲೆ ಪರಿಣಾಮ!?

ಕೃಷಿ ಕಾಯ್ದೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ತೊಡೆ ತಟ್ಟಿರುವ ರೈತ ಸಂಘಟನೆಗಳು ಇಂದು ಭಾರತ್​ ಬಂದ್​ಗೆ ಕರೆ ನೀಡಿವೆ.

author img

By

Published : Mar 26, 2021, 4:38 AM IST

Bharat Bandh
Bharat Bandh

ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ವಿರೋಧಿಸಿ ಕಳೆದ ನಾಲ್ಕು ತಿಂಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದ್ದು, ಅದರ ಭಾಗವಾಗಿ ಇಂದು ದೇಶಾದ್ಯಂತ ಭಾರತ್​ ಬಂದ್​ಗೆ ಕರೆ ನೀಡಲಾಗಿದೆ.

ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ 4 ತಿಂಗಳು ಪೂರೈಕೆ ಮಾಡುತ್ತಿರುವ ಕಾರಣ ಈ ಬಂದ್​ಗೆ ಕರೆ ನೀಡಲಾಗಿದ್ದು, ಕರ್ನಾಟಕದಲ್ಲೂ ಇದರ ಬಿಸಿ ತಟ್ಟಲಿದೆ. ಪ್ರಮುಖವಾಗಿ ದೆಹಲಿಯ ಸಿಂಘು, ಗಾಜಿಪುರ್​ ಮತ್ತು ಟಿಕ್ರಿ ಗಡಿಯಲ್ಲಿ ಹೆಚ್ಚಿನ ರೈತರು ಸೇರಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಥೇಲಿಯಂ ವಿಷ ಬೆರೆಸಿ ಪತ್ನಿ, ಆಕೆಯ ಕುಟುಂಬಕ್ಕೆ ನೀಡಿದ ಉದ್ಯಮಿ: ಅತ್ತೆ,ನಾದಿನಿ ಸಾವು, ಪತ್ನಿ ಕೋಮಾದಲ್ಲಿ!

ಸಂಯುಕ್ತ ಕಿಸಾನ್​ ಮೋರ್ಚ್​ ಈ ಬಂದ್​​ ಮುಂದಾಳತ್ವವಹಿಸಿದ್ದು, ವಿವಿಧ ಸಂಘಟನೆಗಳು ಸಹ ಇದರಲ್ಲಿ ಭಾಗಿಯಾಗುತ್ತಿವೆ. ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಬಂದ್ ನಡೆಯಲಿದ್ದು, ಪ್ರಮುಖ ಸೇವೆಗಳು ಬಂದ್ ಆಗುವ ಎಲ್ಲ ಲಕ್ಷಣ ಗೋಚರಿಸುತ್ತಿವೆ. ಪ್ರಮುಖವಾಗಿ ರೈಲು ಸಂಚಾರ, ಬಸ್ ಸೇವೆ ಹಾಗೂ ಮಾರುಕಟ್ಟೆ ಬಂದ್​ ಆಗುವುದು ಬಹುತೇಕ ಖಚಿತವಾಗಿದ್ದು, ಕೆಲವೊಂದು ಸಾರ್ವಜನಿಕ ಸ್ಥಳಗಳು ಬಂದ್​ ಆಗಿರಲಿವೆ. ಆದರೆ ಆರೋಗ್ಯ ಸೇರಿ ಪ್ರಮುಖ ತುರ್ತು ಸೇವೆ ಕಾರ್ಯನಿರ್ವಹಿಸಲಿವೆ.

ಬಂದ್​ಗೆ ವಿವಿಧ ಕಾರ್ಮಿಕ ಸಂಘಟನೆ, ಸಾರಿಗೆ ಹಾಗೂ ವಿವಿಧ ಒಕ್ಕೂಟಗಳು ಬೆಂಬಲ ಸೂಚಿಸಿದ್ದು, ಕರ್ನಾಟಕದಲ್ಲೂ ಕೃಷಿ ಕಾಯ್ದೆಗಳ ಶವಯಾತ್ರೆ ಪ್ರತಿಭಟನೆ ನಡೆಸಲಾಗುವುದು ಎಂದು ಕುರುಬುರು ಶಾಂತಕುಮಾರ್ ಈಗಾಗಲೇ ತಿಳಿಸಿದ್ದಾರೆ. ಆದರೆ ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಬಂದ್ ನಡೆಸದಂತೆ ಸೂಚನೆ ನೀಡಲಾಗಿದೆ.

ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್​

ಲಭ್ಯವಾಗಿರುವ ಮಾಹಿತಿ ಪ್ರಕಾರ ಸಂಯುಕ್ತ ಕಿಸಾನ್​ ಮೋರ್ಚಾ ಬೆಳಗ್ಗೆ 6ಗಂಟೆಯಿಂದ ಸಂಜೆ 6ರವರೆಗೆ ಭಾರತ್​ ಬಂದ್​​ಗೆ ಕರೆ ನೀಡಿದ್ದು, ಈ ವೇಳೆ ರಸ್ತೆ ಮತ್ತು ರೈಲು ಸಂಚಾರ ಸಂಪೂರ್ಣವಾಗಿ ಸ್ತಬ್ಧವಾಗಲಿದೆ. ಬ್ಯಾಂಕಿಂಗ್​ ಸೇವೆಗಳು ಬಂದ್​ ಇರಲಿದ್ದು, ಇದರಿಂದ ಜನಸಾಮಾನ್ಯರಿಗೆ ತಲೆನೀವಾಗಲಿದೆ.

ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ವಿರೋಧಿಸಿ ಕಳೆದ ನಾಲ್ಕು ತಿಂಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದ್ದು, ಅದರ ಭಾಗವಾಗಿ ಇಂದು ದೇಶಾದ್ಯಂತ ಭಾರತ್​ ಬಂದ್​ಗೆ ಕರೆ ನೀಡಲಾಗಿದೆ.

ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ 4 ತಿಂಗಳು ಪೂರೈಕೆ ಮಾಡುತ್ತಿರುವ ಕಾರಣ ಈ ಬಂದ್​ಗೆ ಕರೆ ನೀಡಲಾಗಿದ್ದು, ಕರ್ನಾಟಕದಲ್ಲೂ ಇದರ ಬಿಸಿ ತಟ್ಟಲಿದೆ. ಪ್ರಮುಖವಾಗಿ ದೆಹಲಿಯ ಸಿಂಘು, ಗಾಜಿಪುರ್​ ಮತ್ತು ಟಿಕ್ರಿ ಗಡಿಯಲ್ಲಿ ಹೆಚ್ಚಿನ ರೈತರು ಸೇರಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಥೇಲಿಯಂ ವಿಷ ಬೆರೆಸಿ ಪತ್ನಿ, ಆಕೆಯ ಕುಟುಂಬಕ್ಕೆ ನೀಡಿದ ಉದ್ಯಮಿ: ಅತ್ತೆ,ನಾದಿನಿ ಸಾವು, ಪತ್ನಿ ಕೋಮಾದಲ್ಲಿ!

ಸಂಯುಕ್ತ ಕಿಸಾನ್​ ಮೋರ್ಚ್​ ಈ ಬಂದ್​​ ಮುಂದಾಳತ್ವವಹಿಸಿದ್ದು, ವಿವಿಧ ಸಂಘಟನೆಗಳು ಸಹ ಇದರಲ್ಲಿ ಭಾಗಿಯಾಗುತ್ತಿವೆ. ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಬಂದ್ ನಡೆಯಲಿದ್ದು, ಪ್ರಮುಖ ಸೇವೆಗಳು ಬಂದ್ ಆಗುವ ಎಲ್ಲ ಲಕ್ಷಣ ಗೋಚರಿಸುತ್ತಿವೆ. ಪ್ರಮುಖವಾಗಿ ರೈಲು ಸಂಚಾರ, ಬಸ್ ಸೇವೆ ಹಾಗೂ ಮಾರುಕಟ್ಟೆ ಬಂದ್​ ಆಗುವುದು ಬಹುತೇಕ ಖಚಿತವಾಗಿದ್ದು, ಕೆಲವೊಂದು ಸಾರ್ವಜನಿಕ ಸ್ಥಳಗಳು ಬಂದ್​ ಆಗಿರಲಿವೆ. ಆದರೆ ಆರೋಗ್ಯ ಸೇರಿ ಪ್ರಮುಖ ತುರ್ತು ಸೇವೆ ಕಾರ್ಯನಿರ್ವಹಿಸಲಿವೆ.

ಬಂದ್​ಗೆ ವಿವಿಧ ಕಾರ್ಮಿಕ ಸಂಘಟನೆ, ಸಾರಿಗೆ ಹಾಗೂ ವಿವಿಧ ಒಕ್ಕೂಟಗಳು ಬೆಂಬಲ ಸೂಚಿಸಿದ್ದು, ಕರ್ನಾಟಕದಲ್ಲೂ ಕೃಷಿ ಕಾಯ್ದೆಗಳ ಶವಯಾತ್ರೆ ಪ್ರತಿಭಟನೆ ನಡೆಸಲಾಗುವುದು ಎಂದು ಕುರುಬುರು ಶಾಂತಕುಮಾರ್ ಈಗಾಗಲೇ ತಿಳಿಸಿದ್ದಾರೆ. ಆದರೆ ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಬಂದ್ ನಡೆಸದಂತೆ ಸೂಚನೆ ನೀಡಲಾಗಿದೆ.

ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್​

ಲಭ್ಯವಾಗಿರುವ ಮಾಹಿತಿ ಪ್ರಕಾರ ಸಂಯುಕ್ತ ಕಿಸಾನ್​ ಮೋರ್ಚಾ ಬೆಳಗ್ಗೆ 6ಗಂಟೆಯಿಂದ ಸಂಜೆ 6ರವರೆಗೆ ಭಾರತ್​ ಬಂದ್​​ಗೆ ಕರೆ ನೀಡಿದ್ದು, ಈ ವೇಳೆ ರಸ್ತೆ ಮತ್ತು ರೈಲು ಸಂಚಾರ ಸಂಪೂರ್ಣವಾಗಿ ಸ್ತಬ್ಧವಾಗಲಿದೆ. ಬ್ಯಾಂಕಿಂಗ್​ ಸೇವೆಗಳು ಬಂದ್​ ಇರಲಿದ್ದು, ಇದರಿಂದ ಜನಸಾಮಾನ್ಯರಿಗೆ ತಲೆನೀವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.