ETV Bharat / bharat

ಚುಮು ಚುಮು ಚಳಿಯಲ್ಲಿ 'ಈರುಳ್ಳಿ' ತಿನ್ನೋದ್ರಿಂದ ಹತ್ತಾರು ಲಾಭ - Benefits Of Onions

ನಿಯಮಿತವಾಗಿ ಈರುಳ್ಳಿಯ ಸೇವನೆ ಉತ್ತಮವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪೋಷಕಾಂಶಗಳು ದೇಹದಲ್ಲಿನ ಸಿರೊಟೋನಿನ್ ಮತ್ತು ಡೋಪಮೈನ್​​ನಂತಹ ಕೆಲವು ಹಾರ್ಮೋನುಗಳ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಉತ್ತಮ ಮನಸ್ಥಿತಿ ಮತ್ತು ಗುಣಮಟ್ಟದ ನಿದ್ರೆಯನ್ನು ಹೊಂದಲು ಅವಶ್ಯಕವಾಗಿದೆ.

Benefits Of Onions During Winters
ಈರುಳ್ಳಿ
author img

By

Published : Jan 28, 2021, 10:22 PM IST

ಹೈದರಾಬಾದ್​: ನೋಡು ನೋಡುತ್ತಿದ್ದಂತೆ ಜಿಟಿ-ಜಿಟಿ ಮಳೆಗಾಲ ಮುಗಿದು ಚುಮು-ಚುಮು ಚಳಿಗಾಲ ಶುರುವಾಗಿಬಿಟ್ಟಿದೆ. ಈ ಕಾಲದಲ್ಲಿ ದೇಹವನ್ನು ಬೆಚ್ಚಗಿಟ್ಟುಕೊಳ್ಳುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ ನಾವು ವಿವಿಧ ಆಹಾರ ಪದಾರ್ಥಗಳ ಮೊರೆ ಹೋಗುತ್ತೇವೆ. ಇದೀಗ ಈರುಳ್ಳಿಯನ್ನು ನೆನೆಯುವ ಕಾಲ ಬಂದಿದೆ.

ಚಳಿಗಾಲದಲ್ಲಿ ಈರುಳ್ಳಿಯ ಪ್ರಯೋಜನಗಳು:

ಸಾಮಾನ್ಯವಾಗಿ ಬಹುತೇಕ ಜನ ಈರುಳ್ಳಿಯ ರುಚಿ ಹಾಗೂ ಅದರ ಪರಿಮಳವನ್ನು ಇಷ್ಟಪಡದಿದ್ದರೆ, ಕೆಲವೊಂದಿಷ್ಟು ಜನ ಇದನ್ನು ಇಷ್ಟಪಡುತ್ತಾರೆ. ಕಚ್ಚಾ ಈರುಳ್ಳಿಯನ್ನು ಸಲಾಡ್, ಗ್ರೇವಿ ಮತ್ತು ಸೂಪ್‌ಗಳಿಗೆ ಸೇರಿಸುತ್ತಾರೆ. ಅಷ್ಟೇ ಅಲ್ಲದೇ, ನಮ್ಮ ಅಡುಗೆ ಮನೆಯಲ್ಲಿರುವ ಇತರ ಮಸಾಲೆಗಳು, ಹಣ್ಣುಗಳು ಮತ್ತು ತರಕಾರಿಗಳಂತೆ ಇದರಲ್ಲಿಯೂ ಔಷಧಿಯ ಗುಣ ಹೇರಳವಾಗಿದೆ. ವಿಶೇಷವಾಗಿ ಚಳಿಗಾಲದ ಅವಧಿಯಲ್ಲಿ ಈರುಳ್ಳಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಉತ್ತಮ ಜೀರ್ಣಕ್ರಿಯೆ, ಮಧುಮೇಹ ಮತ್ತು ಹಲವಾರು ಅಲರ್ಜಿಗಳು ಮತ್ತು ವೈರಲ್ ಸೋಂಕುಗಳನ್ನು ನಾಶಮಾಡುವುದರಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.

ಈರುಳ್ಳಿಯಲ್ಲಿರುವ ಪೌಷ್ಟಿಕ ಅಂಶಗಳು: ಈರುಳ್ಳಿಯು ವಿಟಮಿನ್ ಸಿ, ಬಿ 6, ಖನಿಜ, ಮ್ಯಾಂಗನೀಸ್, ಫೈಬರ್, ಫೋಲೇಟ್, ರಂಜಕ ಮತ್ತು ಪ್ರೋಟೀನ್‌ಗಳನ್ನು ಒಳಗೊಂಡಿರುತ್ತದೆ. ಕ್ವೆರ್ಸೆಟಿನ್ ಎಂಬ ಉತ್ಕರ್ಷಣ ನಿರೋಧಕ ವಿವಿಧ ರೀತಿಯ ಕಾಯಿಲೆಗಳು ಮತ್ತು ಅಲರ್ಜಿಯಿಂದ ರಕ್ಷಣೆ ನೀಡುತ್ತದೆ. ಜೊತೆಗೆ ಪ್ರಾಸ್ಟೇಟ್ ಮತ್ತು ಕಿಡ್ನಿ ಕಲ್ಲಿನ ಸಮಸ್ಯೆಗೆ ಪರಿಹಾರ ನೀಡುತ್ತದೆ.

ಕ್ವೆರ್ಸೆಟಿನ್ ಫ್ಲೇವೊನೈಡ್​ಗಳು ಮತ್ತು ಫೈಟೊ-ರಾಸಾಯನಿಕಗಳನ್ನು ಹೊಂದಿದೆ. ಇದು ಆಂಟಿಹಿಸ್ಟಾಮೈನ್ ಗುಣಗಳನ್ನು ಹೊಂದಿದೆ. ಈ ಕಾರಣದಿಂದಾಗಿ ಚಳಿಗಾಲದಲ್ಲಿ ಚರ್ಮದ ಅಲರ್ಜಿಯನ್ನು ತಪ್ಪಿಸಲು ಮತ್ತು ದೇಹದಲ್ಲಿನ ಉರಿಯೂತದ ಸಮಸ್ಯೆಯನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ. ಇದರಲ್ಲಿ ಪಾಲಿಫಿನಾಲ್​​ಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಇದು ಮಧುಮೇಹ, ಕ್ಯಾನ್ಸರ್ ಮತ್ತು ಹೃದ್ರೋಗವನ್ನು ತಡೆಯುತ್ತದೆ.

ಚಳಿಗಾಲದಲ್ಲಿ ಈರುಳ್ಳಿಯ ಪ್ರಯೋಜನಗಳು: ನಿಯಮಿತವಾಗಿ ಈರುಳ್ಳಿಯ ಸೇವನೆ ಉತ್ತಮವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪೋಷಕಾಂಶಗಳು ದೇಹದಲ್ಲಿನ ಸಿರೊಟೋನಿನ್ ಮತ್ತು ಡೋಪಮೈನ್​​ನಂತಹ ಕೆಲವು ಹಾರ್ಮೋನುಗಳ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಉತ್ತಮ ಮನಸ್ಥಿತಿ ಮತ್ತು ಗುಣಮಟ್ಟದ ನಿದ್ರೆಯನ್ನು ಹೊಂದಲು ಅವಶ್ಯಕವಾಗಿದೆ.

ಸೋಂಕುಗಳ ವಿರುದ್ಧ ರಕ್ಷಣೆ: ಈರುಳ್ಳಿ ಉರಿಯೂತ, ನಂಜುನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಎಂದು ತಿಳಿದು ಬಂದಿದೆ. ಅದಕ್ಕಾಗಿಯೇ ಚಳಿಗಾಲದಲ್ಲಿ ಈರುಳ್ಳಿ ಸೇವಿಸುವುದರಿಂದ ಕೆಮ್ಮು, ಕಿವಿ ನೋವು, ಜ್ವರ ಮತ್ತು ಇತರ ಅನೇಕ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಕೂದಲು ಮತ್ತು ಚರ್ಮದ ಆರೋಗ್ಯದ ರಕ್ಷಣೆ: ಚರ್ಮದ ಆರೋಗ್ಯವು ಕಾಲಜನ್ ಅವಲಂಬಿಸಿರುತ್ತದೆ. ಇದಕ್ಕೆ ವಿಟಮಿನ್ ಸಿ ಅಗತ್ಯವಾಗಿದೆ. ಇದು ಈರುಳ್ಳಿಯಲ್ಲಿ ಸಾಕಷ್ಟು ಕಂಡುಬರುತ್ತದೆ. ಅಲ್ಲದೆ, ಇದರ ರಸವನ್ನು ಕೂದಲಿನ ಬೇರುಗಳು ಅಥವಾ ನೆತ್ತಿಯ ಮೇಲೆ ಹಚ್ಚುವುದರಿಂದ ಕೂದಲು ಉದುರುವುದು, ಬೂದು ಬಣ್ಣ ಮತ್ತು ಕೂದಲಿನ ಪರೋಪಜೀವಿಗಳಂತಹ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಸಹಾಯಕ: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಈರುಳ್ಳಿ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಮಧುಮೇಹ ರೋಗಿಗಳು ತಮ್ಮ ದೈನಂದಿನ ಆಹಾರದಲ್ಲಿ ಈರುಳ್ಳಿಯನ್ನು ಬಳಸಬೇಕು ಎಂದು ಸಲಹೆಯನ್ನು ನೀಡಲಾಗುತ್ತದೆ.

ಜೀರ್ಣಕ್ರಿಯೆಯ ಸುಧಾರಣೆ: ಈರುಳ್ಳಿ ಫೈಬರ್ ಮತ್ತು ಪ್ರೋಬಯಾಟಿಕ್​​ಗಳಿಂದ ಸಮೃದ್ಧವಾಗಿದೆ. ಇದು ಕರುಳಿನ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಇದಲ್ಲದೆ, ಈರುಳ್ಳಿಯಲ್ಲಿ ಕಂಡುಬರುವ ಪ್ರೋಬಯಾಟಿಕ್‌ಗಳು ದೇಹವು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಇದು ಮೂಳೆಯ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ.

ಚಳಿಗಾಲದಲ್ಲಿ ಮಾತ್ರವಲ್ಲ, ಈರುಳ್ಳಿ ಸೇವನೆ ಮತ್ತು ಅದರ ರಸವನ್ನು ಬಳಸುವುದು ಲೈಂಗಿಕ ಶಕ್ತಿ, ಚೈತನ್ಯ, ಮೂತ್ರಪಿಂಡದಲ್ಲಿನ ಕಲ್ಲುಗಳು, ಅಸ್ತಮಾ, ಕೀಲು ನೋವುಗಳು ಹೀಗೆ ಅನೇಕ ಆರೋಗ್ಯ ಸಮಸ್ಯೆಯನ್ನು ನಿವಾರಿಸುತ್ತದೆ.

ಹೈದರಾಬಾದ್​: ನೋಡು ನೋಡುತ್ತಿದ್ದಂತೆ ಜಿಟಿ-ಜಿಟಿ ಮಳೆಗಾಲ ಮುಗಿದು ಚುಮು-ಚುಮು ಚಳಿಗಾಲ ಶುರುವಾಗಿಬಿಟ್ಟಿದೆ. ಈ ಕಾಲದಲ್ಲಿ ದೇಹವನ್ನು ಬೆಚ್ಚಗಿಟ್ಟುಕೊಳ್ಳುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ ನಾವು ವಿವಿಧ ಆಹಾರ ಪದಾರ್ಥಗಳ ಮೊರೆ ಹೋಗುತ್ತೇವೆ. ಇದೀಗ ಈರುಳ್ಳಿಯನ್ನು ನೆನೆಯುವ ಕಾಲ ಬಂದಿದೆ.

ಚಳಿಗಾಲದಲ್ಲಿ ಈರುಳ್ಳಿಯ ಪ್ರಯೋಜನಗಳು:

ಸಾಮಾನ್ಯವಾಗಿ ಬಹುತೇಕ ಜನ ಈರುಳ್ಳಿಯ ರುಚಿ ಹಾಗೂ ಅದರ ಪರಿಮಳವನ್ನು ಇಷ್ಟಪಡದಿದ್ದರೆ, ಕೆಲವೊಂದಿಷ್ಟು ಜನ ಇದನ್ನು ಇಷ್ಟಪಡುತ್ತಾರೆ. ಕಚ್ಚಾ ಈರುಳ್ಳಿಯನ್ನು ಸಲಾಡ್, ಗ್ರೇವಿ ಮತ್ತು ಸೂಪ್‌ಗಳಿಗೆ ಸೇರಿಸುತ್ತಾರೆ. ಅಷ್ಟೇ ಅಲ್ಲದೇ, ನಮ್ಮ ಅಡುಗೆ ಮನೆಯಲ್ಲಿರುವ ಇತರ ಮಸಾಲೆಗಳು, ಹಣ್ಣುಗಳು ಮತ್ತು ತರಕಾರಿಗಳಂತೆ ಇದರಲ್ಲಿಯೂ ಔಷಧಿಯ ಗುಣ ಹೇರಳವಾಗಿದೆ. ವಿಶೇಷವಾಗಿ ಚಳಿಗಾಲದ ಅವಧಿಯಲ್ಲಿ ಈರುಳ್ಳಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಉತ್ತಮ ಜೀರ್ಣಕ್ರಿಯೆ, ಮಧುಮೇಹ ಮತ್ತು ಹಲವಾರು ಅಲರ್ಜಿಗಳು ಮತ್ತು ವೈರಲ್ ಸೋಂಕುಗಳನ್ನು ನಾಶಮಾಡುವುದರಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.

ಈರುಳ್ಳಿಯಲ್ಲಿರುವ ಪೌಷ್ಟಿಕ ಅಂಶಗಳು: ಈರುಳ್ಳಿಯು ವಿಟಮಿನ್ ಸಿ, ಬಿ 6, ಖನಿಜ, ಮ್ಯಾಂಗನೀಸ್, ಫೈಬರ್, ಫೋಲೇಟ್, ರಂಜಕ ಮತ್ತು ಪ್ರೋಟೀನ್‌ಗಳನ್ನು ಒಳಗೊಂಡಿರುತ್ತದೆ. ಕ್ವೆರ್ಸೆಟಿನ್ ಎಂಬ ಉತ್ಕರ್ಷಣ ನಿರೋಧಕ ವಿವಿಧ ರೀತಿಯ ಕಾಯಿಲೆಗಳು ಮತ್ತು ಅಲರ್ಜಿಯಿಂದ ರಕ್ಷಣೆ ನೀಡುತ್ತದೆ. ಜೊತೆಗೆ ಪ್ರಾಸ್ಟೇಟ್ ಮತ್ತು ಕಿಡ್ನಿ ಕಲ್ಲಿನ ಸಮಸ್ಯೆಗೆ ಪರಿಹಾರ ನೀಡುತ್ತದೆ.

ಕ್ವೆರ್ಸೆಟಿನ್ ಫ್ಲೇವೊನೈಡ್​ಗಳು ಮತ್ತು ಫೈಟೊ-ರಾಸಾಯನಿಕಗಳನ್ನು ಹೊಂದಿದೆ. ಇದು ಆಂಟಿಹಿಸ್ಟಾಮೈನ್ ಗುಣಗಳನ್ನು ಹೊಂದಿದೆ. ಈ ಕಾರಣದಿಂದಾಗಿ ಚಳಿಗಾಲದಲ್ಲಿ ಚರ್ಮದ ಅಲರ್ಜಿಯನ್ನು ತಪ್ಪಿಸಲು ಮತ್ತು ದೇಹದಲ್ಲಿನ ಉರಿಯೂತದ ಸಮಸ್ಯೆಯನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ. ಇದರಲ್ಲಿ ಪಾಲಿಫಿನಾಲ್​​ಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಇದು ಮಧುಮೇಹ, ಕ್ಯಾನ್ಸರ್ ಮತ್ತು ಹೃದ್ರೋಗವನ್ನು ತಡೆಯುತ್ತದೆ.

ಚಳಿಗಾಲದಲ್ಲಿ ಈರುಳ್ಳಿಯ ಪ್ರಯೋಜನಗಳು: ನಿಯಮಿತವಾಗಿ ಈರುಳ್ಳಿಯ ಸೇವನೆ ಉತ್ತಮವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪೋಷಕಾಂಶಗಳು ದೇಹದಲ್ಲಿನ ಸಿರೊಟೋನಿನ್ ಮತ್ತು ಡೋಪಮೈನ್​​ನಂತಹ ಕೆಲವು ಹಾರ್ಮೋನುಗಳ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಉತ್ತಮ ಮನಸ್ಥಿತಿ ಮತ್ತು ಗುಣಮಟ್ಟದ ನಿದ್ರೆಯನ್ನು ಹೊಂದಲು ಅವಶ್ಯಕವಾಗಿದೆ.

ಸೋಂಕುಗಳ ವಿರುದ್ಧ ರಕ್ಷಣೆ: ಈರುಳ್ಳಿ ಉರಿಯೂತ, ನಂಜುನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಎಂದು ತಿಳಿದು ಬಂದಿದೆ. ಅದಕ್ಕಾಗಿಯೇ ಚಳಿಗಾಲದಲ್ಲಿ ಈರುಳ್ಳಿ ಸೇವಿಸುವುದರಿಂದ ಕೆಮ್ಮು, ಕಿವಿ ನೋವು, ಜ್ವರ ಮತ್ತು ಇತರ ಅನೇಕ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಕೂದಲು ಮತ್ತು ಚರ್ಮದ ಆರೋಗ್ಯದ ರಕ್ಷಣೆ: ಚರ್ಮದ ಆರೋಗ್ಯವು ಕಾಲಜನ್ ಅವಲಂಬಿಸಿರುತ್ತದೆ. ಇದಕ್ಕೆ ವಿಟಮಿನ್ ಸಿ ಅಗತ್ಯವಾಗಿದೆ. ಇದು ಈರುಳ್ಳಿಯಲ್ಲಿ ಸಾಕಷ್ಟು ಕಂಡುಬರುತ್ತದೆ. ಅಲ್ಲದೆ, ಇದರ ರಸವನ್ನು ಕೂದಲಿನ ಬೇರುಗಳು ಅಥವಾ ನೆತ್ತಿಯ ಮೇಲೆ ಹಚ್ಚುವುದರಿಂದ ಕೂದಲು ಉದುರುವುದು, ಬೂದು ಬಣ್ಣ ಮತ್ತು ಕೂದಲಿನ ಪರೋಪಜೀವಿಗಳಂತಹ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಸಹಾಯಕ: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಈರುಳ್ಳಿ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಮಧುಮೇಹ ರೋಗಿಗಳು ತಮ್ಮ ದೈನಂದಿನ ಆಹಾರದಲ್ಲಿ ಈರುಳ್ಳಿಯನ್ನು ಬಳಸಬೇಕು ಎಂದು ಸಲಹೆಯನ್ನು ನೀಡಲಾಗುತ್ತದೆ.

ಜೀರ್ಣಕ್ರಿಯೆಯ ಸುಧಾರಣೆ: ಈರುಳ್ಳಿ ಫೈಬರ್ ಮತ್ತು ಪ್ರೋಬಯಾಟಿಕ್​​ಗಳಿಂದ ಸಮೃದ್ಧವಾಗಿದೆ. ಇದು ಕರುಳಿನ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಇದಲ್ಲದೆ, ಈರುಳ್ಳಿಯಲ್ಲಿ ಕಂಡುಬರುವ ಪ್ರೋಬಯಾಟಿಕ್‌ಗಳು ದೇಹವು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಇದು ಮೂಳೆಯ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ.

ಚಳಿಗಾಲದಲ್ಲಿ ಮಾತ್ರವಲ್ಲ, ಈರುಳ್ಳಿ ಸೇವನೆ ಮತ್ತು ಅದರ ರಸವನ್ನು ಬಳಸುವುದು ಲೈಂಗಿಕ ಶಕ್ತಿ, ಚೈತನ್ಯ, ಮೂತ್ರಪಿಂಡದಲ್ಲಿನ ಕಲ್ಲುಗಳು, ಅಸ್ತಮಾ, ಕೀಲು ನೋವುಗಳು ಹೀಗೆ ಅನೇಕ ಆರೋಗ್ಯ ಸಮಸ್ಯೆಯನ್ನು ನಿವಾರಿಸುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.