ETV Bharat / bharat

ಭೂಕುಸಿತದಿಂದ ವೈದ್ಯೆ ಸಾವು.. ಮೃತಪಡುವ ಮೊದಲು ಹಂಚಿಕೊಂಡಿದ್ದ ಫೊಟೋಸ್ ವೈರಲ್!

ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಬಟ್ಸೆರಿ ಪ್ರದೇಶದಲ್ಲಿ ಭೂಕುಸಿತ ಉಂಟಾಗಿ ಪರ್ವತಗಳಿಂದ ಕಲ್ಲುಗಳು ಬಿದ್ದು ಜೈಪುರ ಮೂಲದ ಆಯುರ್ವೇದ ವೈದ್ಯೆ ದೀಪ ಶರ್ಮಾ ಸೇರಿದಂತೆ 9 ಜನರು ಸಾವನ್ನಪ್ಪಿದ್ದಾರೆ. ಸಾಯುವ ಮೊದಲು ಡಾ.ದೀಪಾ ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

author img

By

Published : Jul 26, 2021, 1:03 PM IST

before-she-died-in-kinnaur-landslide-jaipur-based-doctor-tweeted-this-photo
before-she-died-in-kinnaur-landslide-jaipur-based-doctor-tweeted-this-photo

ಕಿನ್ನೌರ್ (ಹಿಮಾಚಲ ಪ್ರದೇಶ): ಜಿಲ್ಲೆಯ ಬಟ್ಸೆರಿ ಪ್ರದೇಶದಲ್ಲಿ ನಿನ್ನೆ ಮಧ್ಯಾಹ್ನ ಭೂಕುಸಿತದಿಂದಾಗಿ ಪರ್ವತಗಳಿಂದ ಕಲ್ಲುಗಳು ಉರುಳಿ ಬಿದ್ದ ಪರಿಣಾಮ ಒಂಬತ್ತು ಜನರು ಸಾವನ್ನಪ್ಪಿದ್ದು, ಮೂವರು ಸಾವು - ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಸಾವನ್ನಪ್ಪಿದವರಲ್ಲಿ ಜೈಪುರದ ಆಯುರ್ವೇದ ವೈದ್ಯೆ ದೀಪ ಶರ್ಮಾ ಕೂಡ ಒಬ್ಬರು.

ಡಾ. ದೀಪಾ ಶರ್ಮಾ ಅವರು ಜುಲೈ 25ರ ಮಧ್ಯಾಹ್ನ 12.59ಕ್ಕೆ ಟ್ವಿಟರ್​ನಲ್ಲಿ ತಮ್ಮ ಕೊನೆಯ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವನು ಐಟಿಬಿಪಿ ಚೆಕ್ - ಪೋಸ್ಟ್ ಹತ್ತಿರದ ಬೋರ್ಡ್ ಬಳಿ ನಿಂತಿದ್ದಾರೆ. 'ನಾನು ಭಾರತದ ಕೊನೆಯ ಹಂತದಲ್ಲಿ ನಿಂತಿದ್ದೇನೆ. ಇಲ್ಲಿಂದ ಸುಮಾರು 80 ಕಿ.ಮೀ ದೂರದಲ್ಲಿ ಚೀನಾ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಟಿಬೆಟ್‌ನ ಗಡಿಯಾಗಿದೆ.' ಎಂದು ಅವರು ಅವರು ಈ ಫೋಟೋದೊಂದಿಗೆ ಬರೆದಿದ್ದಾರೆ.

kinnaur
ವೈದ್ಯೆ ಹಂಚಿಕೊಂಡಿದ್ದ ಫೋಟೋ

ಹಿಮಾಚಲದ ಸುಂದರ ಪ್ರದೇಶಗಳನ್ನು ನೋಡಲು 34 ವರ್ಷದ ಡಾ.ದೀಪ ಜೈಪುರದಿಂದ ಬಂದಿದ್ದರು. ಆದರೆ, ಈ ಸುಂದರ ಪಯಣ ಅವರ ಕೊನೆಯ ಪ್ರಯಾಣ ಎಂದು ಅವರಿಗೆ ತಿಳಿದಿರಲಿಲ್ಲ. ದೀಪಾ ತನ್ನ ಪ್ರಯಾಣದ ಚಿತ್ರಗಳನ್ನು ನಿರಂತರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದರು.

kinnaur
ವೈದ್ಯೆ ಹಂಚಿಕೊಂಡಿದ್ದ ಫೋಟೋ

ಡಾ. ದೀಪಾ ಚಿಟ್ಕುಲ್​ನಿಂದ ಹಿಂದಿರುಗುತ್ತಿದ್ದಾಗ, ಸುಮಾರು 13 ಕಿ.ಮೀ ದೂರದಲ್ಲಿರುವ ಬಟ್ಸೆರಿಯಲ್ಲಿ ಭೂಕುಸಿತದಿಂದಾಗಿ ಪರ್ವತಗಳಿಂದ ಕಲ್ಲುಗಳ ಉರುಳಲು ಪ್ರಾರಂಭವಾಯಿತು. ಪರಿಣಾಮವಾಗಿ ದೀಪಾ ಸೇರಿದಂತೆ 9 ಜನರು ಸಾವನ್ನಪ್ಪಿದರು. ಡಾ. ದೀಪಾ ಅವರು ತಮ್ಮ ಸಾವಿಗೆ ಕೆಲವೇ ಕ್ಷಣಗಳ ಮೊದಲು ಭಾರತದ ಕೊನೆಯ ಹಳ್ಳಿಯಿಂದ ಹಂಚಿಕೊಂಡ ಚಿತ್ರಗಳು ಯಾವತ್ತೂ ಜೀವಂತವಾಗಿರಲಿದೆ.

ಕಿನ್ನೌರ್ (ಹಿಮಾಚಲ ಪ್ರದೇಶ): ಜಿಲ್ಲೆಯ ಬಟ್ಸೆರಿ ಪ್ರದೇಶದಲ್ಲಿ ನಿನ್ನೆ ಮಧ್ಯಾಹ್ನ ಭೂಕುಸಿತದಿಂದಾಗಿ ಪರ್ವತಗಳಿಂದ ಕಲ್ಲುಗಳು ಉರುಳಿ ಬಿದ್ದ ಪರಿಣಾಮ ಒಂಬತ್ತು ಜನರು ಸಾವನ್ನಪ್ಪಿದ್ದು, ಮೂವರು ಸಾವು - ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಸಾವನ್ನಪ್ಪಿದವರಲ್ಲಿ ಜೈಪುರದ ಆಯುರ್ವೇದ ವೈದ್ಯೆ ದೀಪ ಶರ್ಮಾ ಕೂಡ ಒಬ್ಬರು.

ಡಾ. ದೀಪಾ ಶರ್ಮಾ ಅವರು ಜುಲೈ 25ರ ಮಧ್ಯಾಹ್ನ 12.59ಕ್ಕೆ ಟ್ವಿಟರ್​ನಲ್ಲಿ ತಮ್ಮ ಕೊನೆಯ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವನು ಐಟಿಬಿಪಿ ಚೆಕ್ - ಪೋಸ್ಟ್ ಹತ್ತಿರದ ಬೋರ್ಡ್ ಬಳಿ ನಿಂತಿದ್ದಾರೆ. 'ನಾನು ಭಾರತದ ಕೊನೆಯ ಹಂತದಲ್ಲಿ ನಿಂತಿದ್ದೇನೆ. ಇಲ್ಲಿಂದ ಸುಮಾರು 80 ಕಿ.ಮೀ ದೂರದಲ್ಲಿ ಚೀನಾ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಟಿಬೆಟ್‌ನ ಗಡಿಯಾಗಿದೆ.' ಎಂದು ಅವರು ಅವರು ಈ ಫೋಟೋದೊಂದಿಗೆ ಬರೆದಿದ್ದಾರೆ.

kinnaur
ವೈದ್ಯೆ ಹಂಚಿಕೊಂಡಿದ್ದ ಫೋಟೋ

ಹಿಮಾಚಲದ ಸುಂದರ ಪ್ರದೇಶಗಳನ್ನು ನೋಡಲು 34 ವರ್ಷದ ಡಾ.ದೀಪ ಜೈಪುರದಿಂದ ಬಂದಿದ್ದರು. ಆದರೆ, ಈ ಸುಂದರ ಪಯಣ ಅವರ ಕೊನೆಯ ಪ್ರಯಾಣ ಎಂದು ಅವರಿಗೆ ತಿಳಿದಿರಲಿಲ್ಲ. ದೀಪಾ ತನ್ನ ಪ್ರಯಾಣದ ಚಿತ್ರಗಳನ್ನು ನಿರಂತರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದರು.

kinnaur
ವೈದ್ಯೆ ಹಂಚಿಕೊಂಡಿದ್ದ ಫೋಟೋ

ಡಾ. ದೀಪಾ ಚಿಟ್ಕುಲ್​ನಿಂದ ಹಿಂದಿರುಗುತ್ತಿದ್ದಾಗ, ಸುಮಾರು 13 ಕಿ.ಮೀ ದೂರದಲ್ಲಿರುವ ಬಟ್ಸೆರಿಯಲ್ಲಿ ಭೂಕುಸಿತದಿಂದಾಗಿ ಪರ್ವತಗಳಿಂದ ಕಲ್ಲುಗಳ ಉರುಳಲು ಪ್ರಾರಂಭವಾಯಿತು. ಪರಿಣಾಮವಾಗಿ ದೀಪಾ ಸೇರಿದಂತೆ 9 ಜನರು ಸಾವನ್ನಪ್ಪಿದರು. ಡಾ. ದೀಪಾ ಅವರು ತಮ್ಮ ಸಾವಿಗೆ ಕೆಲವೇ ಕ್ಷಣಗಳ ಮೊದಲು ಭಾರತದ ಕೊನೆಯ ಹಳ್ಳಿಯಿಂದ ಹಂಚಿಕೊಂಡ ಚಿತ್ರಗಳು ಯಾವತ್ತೂ ಜೀವಂತವಾಗಿರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.