ETV Bharat / bharat

'ಅಧಿಕಾರಿಗಳು ಸಮಸ್ಯೆ ಬಗೆಹರಿಸದಿದ್ದರೇ ಬಿದಿರಿನ ಬೆತ್ತಗಳಿಂದ ಥಳಿಸಿ': ಕೇಂದ್ರ ಸಚಿವ

ನಿಮ್ಮ ಸಮಸ್ಯೆಗಳನ್ನ ಬಗೆಹರಿಸದೇ ಬೇಜಾಬ್ದಾರಿ ತೋರುವವರಿಗೆ ಬಿದಿನ ಬೆತ್ತಗಳಿಂದ ಹೊಡೆಯಿರಿ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.

author img

By

Published : Mar 7, 2021, 4:27 AM IST

Beat officials with bamboo, if they don't listen to you: Giriraj to Begusarai residents
'ಅಧಿಕಾರಿಗಳು ಸಮಸ್ಯೆ ಬಗೆಹಹರಿಸೇ ಇದ್ದರೆ ಬಿದಿರಿನ ಬೆತ್ತಗಳಿಂದ ಥಳಿಸಿ': ಕೇಂದ್ರ ಸಚಿವ

ಬೆಗುಸರಾಯ್​ (ಬಿಹಾರ): ಯಾರು ನಿಮ್ಮ ಸಮಸ್ಯೆಗಳನ್ನು ಕೇಳಿಸಿಕೊಳ್ಳುವುದಿಲ್ಲವೋ ಅಂಥಹ ಅಧಿಕಾರಿಗಳನ್ನು ಬಿದಿರಿನ ಬೆತ್ತಗಳಿಂದ ಹೊಡೆಯಿರಿ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಖೋದವಾಂಡ್​ಪುರ ಎಂಬಲ್ಲಿ ಕೃಷಿ ಸಂಸ್ಥೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಂಪಿ, ಎಂಎಲ್​ಎ, ಗ್ರಾಮ ಪಂಚಾಯಿತಿ ಮುಖ್ಯಸ್ಥರು, ಜಿಲ್ಲಾ ಮ್ಯಾಜಿಸ್ಟ್ರೇಟ್​ಗಳು, ಎಸ್​​ಡಿಎಂಗಳು ಇರುವುದು ಜನರ ಸೇವೆಗಾಗಿ. ಅವರು ನಿಮ್ಮ ಮಾತನ್ನು ಕೇಳದಿದ್ದರೇ ಬಿದಿರಿನ ಬೆತ್ತದಿಂದ ಹೊಡೆಯಿರಿ, ತಲೆ ಪುಡಿಯಾಗುವ ಹಾಗೆ ಎರಡೂ ಕೈಗಳಿಂದ ಗುದ್ದಿ ಎಂದು ನೆರೆದಿದ್ದ ಜನರಿಗೆ ಹೇಳಿದರು.

ಇದನ್ನೂ ಓದಿ: ರಾಕೇಶ್ ಟಿಕಾಯತ್​ಗೆ ಕೊಲೆ ಬೆದರಿಕೆ: ಟೀ ಮಾರಾಟಗಾರನ ಬಂಧನ, ಬಿಡುಗಡೆ

ಇಷ್ಟಾದರೂ ಅಧಿಕಾರಿಗಳು ಸಮಸ್ಯೆಗಳಿಗೆ ಸರಿಯಾದ ಸ್ಪಂದನೆ ಕೊಡದಿದ್ದರೆ, ನಿಮ್ಮ ಬೆನ್ನಿಗೆ ನಾನು ನಿಲ್ಲುತ್ತೇನೆ ಎಂದು ಗಿರಿರಾಜ್ ಸಿಂಗ್ ಭರವಸೆ ನೀಡಿದ್ದಾರೆ.

ಗಿರಿರಾಜ್ ಸಿಂಗ್ ಬಿಹಾರದ ಬೇಗುಸರಾಯ ಲೋಕಸಭಾ ಕ್ಷೇತ್ರದಿಂದ ಗೆದ್ದವರಾಗಿದ್ದು, ಕೇಂದ್ರ ಸರ್ಕಾರದಲ್ಲಿ ಮೀನುಗಾರಿಕೆ, ಪಶುಸಂಗೋಪನೆ ಖಾತೆಗಳನ್ನು ಹೊಂದಿದ್ದು, ಇದರಿಂದಾಗಿ ಸಾಕಷ್ಟು ಮಂದಿ ಸಾರ್ವಜನಿಕರು ಪ್ರಶ್ನೆಗಳನ್ನು ಕೇಳುವ ಕಾರಣದಿಂದಲೇ ಕಾರ್ಯಕ್ರಮದಲ್ಲಿ ಆ ರೀತಿಯಾಗಿ ಮಾತನಾಡಲು ಕಾರಣವಾಯ್ರು ಎಂದು ಅಂದಾಜಿಸಲಾಗಿದೆ,.

ಬೆಗುಸರಾಯ್​ (ಬಿಹಾರ): ಯಾರು ನಿಮ್ಮ ಸಮಸ್ಯೆಗಳನ್ನು ಕೇಳಿಸಿಕೊಳ್ಳುವುದಿಲ್ಲವೋ ಅಂಥಹ ಅಧಿಕಾರಿಗಳನ್ನು ಬಿದಿರಿನ ಬೆತ್ತಗಳಿಂದ ಹೊಡೆಯಿರಿ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಖೋದವಾಂಡ್​ಪುರ ಎಂಬಲ್ಲಿ ಕೃಷಿ ಸಂಸ್ಥೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಂಪಿ, ಎಂಎಲ್​ಎ, ಗ್ರಾಮ ಪಂಚಾಯಿತಿ ಮುಖ್ಯಸ್ಥರು, ಜಿಲ್ಲಾ ಮ್ಯಾಜಿಸ್ಟ್ರೇಟ್​ಗಳು, ಎಸ್​​ಡಿಎಂಗಳು ಇರುವುದು ಜನರ ಸೇವೆಗಾಗಿ. ಅವರು ನಿಮ್ಮ ಮಾತನ್ನು ಕೇಳದಿದ್ದರೇ ಬಿದಿರಿನ ಬೆತ್ತದಿಂದ ಹೊಡೆಯಿರಿ, ತಲೆ ಪುಡಿಯಾಗುವ ಹಾಗೆ ಎರಡೂ ಕೈಗಳಿಂದ ಗುದ್ದಿ ಎಂದು ನೆರೆದಿದ್ದ ಜನರಿಗೆ ಹೇಳಿದರು.

ಇದನ್ನೂ ಓದಿ: ರಾಕೇಶ್ ಟಿಕಾಯತ್​ಗೆ ಕೊಲೆ ಬೆದರಿಕೆ: ಟೀ ಮಾರಾಟಗಾರನ ಬಂಧನ, ಬಿಡುಗಡೆ

ಇಷ್ಟಾದರೂ ಅಧಿಕಾರಿಗಳು ಸಮಸ್ಯೆಗಳಿಗೆ ಸರಿಯಾದ ಸ್ಪಂದನೆ ಕೊಡದಿದ್ದರೆ, ನಿಮ್ಮ ಬೆನ್ನಿಗೆ ನಾನು ನಿಲ್ಲುತ್ತೇನೆ ಎಂದು ಗಿರಿರಾಜ್ ಸಿಂಗ್ ಭರವಸೆ ನೀಡಿದ್ದಾರೆ.

ಗಿರಿರಾಜ್ ಸಿಂಗ್ ಬಿಹಾರದ ಬೇಗುಸರಾಯ ಲೋಕಸಭಾ ಕ್ಷೇತ್ರದಿಂದ ಗೆದ್ದವರಾಗಿದ್ದು, ಕೇಂದ್ರ ಸರ್ಕಾರದಲ್ಲಿ ಮೀನುಗಾರಿಕೆ, ಪಶುಸಂಗೋಪನೆ ಖಾತೆಗಳನ್ನು ಹೊಂದಿದ್ದು, ಇದರಿಂದಾಗಿ ಸಾಕಷ್ಟು ಮಂದಿ ಸಾರ್ವಜನಿಕರು ಪ್ರಶ್ನೆಗಳನ್ನು ಕೇಳುವ ಕಾರಣದಿಂದಲೇ ಕಾರ್ಯಕ್ರಮದಲ್ಲಿ ಆ ರೀತಿಯಾಗಿ ಮಾತನಾಡಲು ಕಾರಣವಾಯ್ರು ಎಂದು ಅಂದಾಜಿಸಲಾಗಿದೆ,.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.