ETV Bharat / bharat

ಮಹಿಳೆ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಆರೋಪ: ಮಂತ್ರವಾದಿ ಹೊಡೆದು ಕೊಂದ ಗ್ರಾಮಸ್ಥರು

author img

By

Published : Oct 18, 2021, 3:44 PM IST

ಮೊಣಕಾಲು ನೋವಿಗೆ ಔಷಧ ನೀಡುವುದಾಗಿ ಮನೆಗೆ ಕರೆಯಿಸಿಕೊಂಡು ಅತ್ಯಾಚಾರಕ್ಕೆ ಯತ್ನಿಸಿರುವ ವ್ಯಕ್ತಿಯೋರ್ವ, ಆಕೆಯ ಕೊಲೆ ಮಾಡಿದ್ದು, ಇದರಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ಆತನ ಹತ್ಯೆ ಮಾಡಿದ್ದಾರೆ.

AP News
AP News

ಪ್ರಕಾಶಂ(ಆಂಧ್ರಪ್ರದೇಶ): 42 ವರ್ಷದ ಮಹಿಳೆಯೊಬ್ಬಳ ಮೇಲೆ ಮಂತ್ರವಾದಿ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದಾನೆಂಬ ಆರೋಪದ ಮೇಲೆ ಆತನನ್ನ ಹೊಡೆದು ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂನಲ್ಲಿ ನಡೆದಿದೆ.

42 ವರ್ಷದ ಮಹಿಳೆ ವಿಜಯಲಕ್ಷ್ಮಿ ಮೇಲೆ 51 ವರ್ಷದ ಓಬಯ್ಯ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದಾನೆಂಬ ಆರೋಪ ಕೇಳಿ ಬಂದಿತ್ತು. ಈ ಆಕ್ರೋಶದಲ್ಲೇ ಆತನ ಮೆಲೆ ಹಲ್ಲೆ ಮಾಡಿರುವ ಗ್ರಾಮಸ್ಥರು ಹತ್ಯೆ ಮಾಡಿದ್ದಾರೆ. ಈ ವೇಳೆ, ಪೊಲೀಸ್ ಸಬ್​ ಇನ್ಸ್​​ಪೆಕ್ಟರ್​​​ ರಜಿಯಾ ಸುಲ್ತಾನ್​​ ಬೇಗಂ ಅವರನ್ನ ತಡೆಯಲು ಯತ್ನಿಸಿದ್ರೂ, ವಿಫಲವಾಗಿದ್ದಾರೆ.

ಪ್ರಕರಣ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಉಪ ಪೊಲೀಸ್​ ವರಿಷ್ಠಾಧಿಕಾರಿ ನಾಗರಾಜ್​, ಕಂದಕೂರು ಡಿಎಸ್ಪಿ ಶ್ರೀನಿವಾಸನ್​ ಸೇರಿದಂತೆ ಅನೇಕ ಅಧಿಕಾರಿಗಳು ಸ್ಥಳಕ್ಕಾಗಮಿಸಿ, ಪರಿಶೀಲನೆ ನಡೆಸಿದ್ದರು.

ಇದನ್ನೂ ಓದಿರಿ: ಲವರ್​​ ಜೊತೆ ಜಿಮ್​ನಲ್ಲಿ ಪತಿ ಕಂಡ ಹೆಂಡ್ತಿ.. ಶೂ ನಿಂದ ಇಬ್ಬರಿಗೂ ಮಂಗಳಾರತಿ!

ಓಬಯ್ಯ, ಓರ್ವ ಮಂತ್ರವಾದಿಯಾಗಿದ್ದು, ವಿಜಯಲಕ್ಷ್ಮಿಯವರ ಮೊಣಕಾಲು ನೋವು ಕಡಿಮೆ ಮಾಡಲು ಔಷಧ ನೀಡುವುದಾಗಿ ಹೇಳಿ ಮನೆಗೆ ಕರೆಯಿಸಿಕೊಂಡಿದ್ದನು. ಈ ವೇಳೆ, ಆಕೆಯ ಮೇಲೆ ಅತ್ಯಾಚಾರವೆಸಗಲು ಮುಂದಾಗಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾಳೆ.

ತದನಂತರ ಆಕೆಯ ಕಾಲು, ಕೈ ಕಟ್ಟಿಹಾಕಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದಾದ ಬಳಿಕ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಇದರಿಂದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಆತ ತಪ್ಪೊಪ್ಪಿಕೊಂಡಿದ್ದಾನೆ. ಈ ವೇಳೆ, ಪೊಲೀಸ್ ಠಾಣೆಗೆ ಕರೆದೊಯ್ಯುವಾಗ ಗ್ರಾಮಸ್ಥರೆಲ್ಲರೂ ಸೇರಿ ಹಲ್ಲೆ ನಡೆಸಿದ್ದಾರೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಪ್ರಕಾಶಂ(ಆಂಧ್ರಪ್ರದೇಶ): 42 ವರ್ಷದ ಮಹಿಳೆಯೊಬ್ಬಳ ಮೇಲೆ ಮಂತ್ರವಾದಿ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದಾನೆಂಬ ಆರೋಪದ ಮೇಲೆ ಆತನನ್ನ ಹೊಡೆದು ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂನಲ್ಲಿ ನಡೆದಿದೆ.

42 ವರ್ಷದ ಮಹಿಳೆ ವಿಜಯಲಕ್ಷ್ಮಿ ಮೇಲೆ 51 ವರ್ಷದ ಓಬಯ್ಯ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದಾನೆಂಬ ಆರೋಪ ಕೇಳಿ ಬಂದಿತ್ತು. ಈ ಆಕ್ರೋಶದಲ್ಲೇ ಆತನ ಮೆಲೆ ಹಲ್ಲೆ ಮಾಡಿರುವ ಗ್ರಾಮಸ್ಥರು ಹತ್ಯೆ ಮಾಡಿದ್ದಾರೆ. ಈ ವೇಳೆ, ಪೊಲೀಸ್ ಸಬ್​ ಇನ್ಸ್​​ಪೆಕ್ಟರ್​​​ ರಜಿಯಾ ಸುಲ್ತಾನ್​​ ಬೇಗಂ ಅವರನ್ನ ತಡೆಯಲು ಯತ್ನಿಸಿದ್ರೂ, ವಿಫಲವಾಗಿದ್ದಾರೆ.

ಪ್ರಕರಣ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಉಪ ಪೊಲೀಸ್​ ವರಿಷ್ಠಾಧಿಕಾರಿ ನಾಗರಾಜ್​, ಕಂದಕೂರು ಡಿಎಸ್ಪಿ ಶ್ರೀನಿವಾಸನ್​ ಸೇರಿದಂತೆ ಅನೇಕ ಅಧಿಕಾರಿಗಳು ಸ್ಥಳಕ್ಕಾಗಮಿಸಿ, ಪರಿಶೀಲನೆ ನಡೆಸಿದ್ದರು.

ಇದನ್ನೂ ಓದಿರಿ: ಲವರ್​​ ಜೊತೆ ಜಿಮ್​ನಲ್ಲಿ ಪತಿ ಕಂಡ ಹೆಂಡ್ತಿ.. ಶೂ ನಿಂದ ಇಬ್ಬರಿಗೂ ಮಂಗಳಾರತಿ!

ಓಬಯ್ಯ, ಓರ್ವ ಮಂತ್ರವಾದಿಯಾಗಿದ್ದು, ವಿಜಯಲಕ್ಷ್ಮಿಯವರ ಮೊಣಕಾಲು ನೋವು ಕಡಿಮೆ ಮಾಡಲು ಔಷಧ ನೀಡುವುದಾಗಿ ಹೇಳಿ ಮನೆಗೆ ಕರೆಯಿಸಿಕೊಂಡಿದ್ದನು. ಈ ವೇಳೆ, ಆಕೆಯ ಮೇಲೆ ಅತ್ಯಾಚಾರವೆಸಗಲು ಮುಂದಾಗಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾಳೆ.

ತದನಂತರ ಆಕೆಯ ಕಾಲು, ಕೈ ಕಟ್ಟಿಹಾಕಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದಾದ ಬಳಿಕ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಇದರಿಂದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಆತ ತಪ್ಪೊಪ್ಪಿಕೊಂಡಿದ್ದಾನೆ. ಈ ವೇಳೆ, ಪೊಲೀಸ್ ಠಾಣೆಗೆ ಕರೆದೊಯ್ಯುವಾಗ ಗ್ರಾಮಸ್ಥರೆಲ್ಲರೂ ಸೇರಿ ಹಲ್ಲೆ ನಡೆಸಿದ್ದಾರೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.