ETV Bharat / bharat

ಅನಿಲ್ ದೇಶಮುಖ್​ಗೆ ಡಿ.13ರ ವರೆಗೆ ನ್ಯಾಯಾಂಗ ಬಂಧನ: ಇಂದು ಚಾಂದಿವಾಲ್​ ಆಯೋಗದಿಂದ ವಿಚಾರಣೆ

author img

By

Published : Nov 30, 2021, 12:49 PM IST

ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಇಂದು ಚಾಂದಿವಾಲ್​ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.

Anil Deshmukh
ಅನಿಲ್ ದೇಶಮುಖ್

ಮುಂಬೈ (ಮಹಾರಾಷ್ಟ್ರ): ಅಕ್ರಮ ಹಣ ವರ್ಗಾವಣೆ ಮತ್ತು ಸುಲಿಗೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರ ನ್ಯಾಯಾಂಗ ಬಂಧನವನ್ನು ಡಿಸೆಂಬರ್​ 13ರ ವರೆಗೆ ವಿಸ್ತರಿಸಲಾಗಿದ್ದು, ಇಂದು ಚಾಂದಿವಾಲ್​ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.

ಏನಿದು ಚಾಂದಿವಾಲ್​ ಆಯೋಗ?

ಮುಂಬೈ ಮಾಜಿ ಪೊಲೀಸ್​ ಕಮಿಷನರ್​ ಪರಮ್​ ಬೀರ್​ ಸಿಂಗ್​ ಮಾಡಿರುವ ಭ್ರಷ್ಟಾಚಾರ ಆರೋಪಗಳ ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಕೈಲಾಶ್ ಉತ್ತಮ್‌ಚಂದ್ ಚಾಂಡಿವಾಲ್ ಅವರ ನೇತೃತ್ವದಲ್ಲಿ ಏಕ ಸದಸ್ಯ ತನಿಖಾ ಸಮಿತಿಯನ್ನು ರಚಿಸಿತ್ತು.

ಈ ಆಯೋಗವು ಈಗಾಗಲೇ ಪರಮ್​ ಬೀರ್​ ಸಿಂಗ್, ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಮತ್ತು ದೇಶಮುಖ್ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಪಲಾಂಡೆ ಅವರ ವಿಚಾರಣೆ ನಡೆಸಿದೆ. ನಿನ್ನೆ ಪರಮ್​ ಬೀರ್​ ಸಿಂಗ್​ರ ವಿಚಾರಣೆ ನಡೆಸಿದ್ದ ಆಯೋಗ ಅವರ ವಿರುದ್ಧ ಇದ್ದ ಜಾಮೀನು ಸಹಿತ ವಾರಂಟ್​ ರದ್ದುಗೊಳಿಸಿದೆ.

ಇದನ್ನೂ ಓದಿ: ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಪುತ್ರನೂ ಹಗರಣದಲ್ಲಿ ಭಾಗಿ: ಜಾರಿ ನಿರ್ದೇಶನಾಲಯ

ಅನಿಲ್ ದೇಶಮುಖ್ ನ್ಯಾಯಾಂಗ ಬಂಧನ ವಿಸ್ತರಣೆ

ಅಕ್ರಮ ಹಣ ವರ್ಗಾವಣೆ ಮತ್ತು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್​ 2ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿದ್ದ ಅನಿಲ್ ದೇಶಮುಖ್​ರನ್ನು 14 ದಿನಗಳ ಇಡಿ ಕಸ್ಟಡಿಗೆ ನೀಡಲಾಗಿತ್ತು. ಇಡಿ ಕಸ್ಟಡಿಯಲ್ಲಿ 14 ದಿನಗಳನ್ನು ಕಳೆದ ನಂತರ, ವಿಶೇಷ ನ್ಯಾಯಾಲಯವು ನವೆಂಬರ್ 15 ರಂದು ದೇಶಮುಖ್ ಅವರನ್ನು ನವೆಂಬರ್ 29 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು. ನಿನ್ನೆ ಮತ್ತೆ ಕೋರ್ಟ್​ ನ್ಯಾಯಾಂಗ ಬಂಧನದ ಅವಧಿಯನ್ನು ಡಿ.13ರ ವರೆಗೆ ವಿಸ್ತರಿಸಿ ಆದೇಶ ನೀಡಿದೆ.

ಮುಂಬೈ (ಮಹಾರಾಷ್ಟ್ರ): ಅಕ್ರಮ ಹಣ ವರ್ಗಾವಣೆ ಮತ್ತು ಸುಲಿಗೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರ ನ್ಯಾಯಾಂಗ ಬಂಧನವನ್ನು ಡಿಸೆಂಬರ್​ 13ರ ವರೆಗೆ ವಿಸ್ತರಿಸಲಾಗಿದ್ದು, ಇಂದು ಚಾಂದಿವಾಲ್​ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.

ಏನಿದು ಚಾಂದಿವಾಲ್​ ಆಯೋಗ?

ಮುಂಬೈ ಮಾಜಿ ಪೊಲೀಸ್​ ಕಮಿಷನರ್​ ಪರಮ್​ ಬೀರ್​ ಸಿಂಗ್​ ಮಾಡಿರುವ ಭ್ರಷ್ಟಾಚಾರ ಆರೋಪಗಳ ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಕೈಲಾಶ್ ಉತ್ತಮ್‌ಚಂದ್ ಚಾಂಡಿವಾಲ್ ಅವರ ನೇತೃತ್ವದಲ್ಲಿ ಏಕ ಸದಸ್ಯ ತನಿಖಾ ಸಮಿತಿಯನ್ನು ರಚಿಸಿತ್ತು.

ಈ ಆಯೋಗವು ಈಗಾಗಲೇ ಪರಮ್​ ಬೀರ್​ ಸಿಂಗ್, ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಮತ್ತು ದೇಶಮುಖ್ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಪಲಾಂಡೆ ಅವರ ವಿಚಾರಣೆ ನಡೆಸಿದೆ. ನಿನ್ನೆ ಪರಮ್​ ಬೀರ್​ ಸಿಂಗ್​ರ ವಿಚಾರಣೆ ನಡೆಸಿದ್ದ ಆಯೋಗ ಅವರ ವಿರುದ್ಧ ಇದ್ದ ಜಾಮೀನು ಸಹಿತ ವಾರಂಟ್​ ರದ್ದುಗೊಳಿಸಿದೆ.

ಇದನ್ನೂ ಓದಿ: ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಪುತ್ರನೂ ಹಗರಣದಲ್ಲಿ ಭಾಗಿ: ಜಾರಿ ನಿರ್ದೇಶನಾಲಯ

ಅನಿಲ್ ದೇಶಮುಖ್ ನ್ಯಾಯಾಂಗ ಬಂಧನ ವಿಸ್ತರಣೆ

ಅಕ್ರಮ ಹಣ ವರ್ಗಾವಣೆ ಮತ್ತು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್​ 2ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿದ್ದ ಅನಿಲ್ ದೇಶಮುಖ್​ರನ್ನು 14 ದಿನಗಳ ಇಡಿ ಕಸ್ಟಡಿಗೆ ನೀಡಲಾಗಿತ್ತು. ಇಡಿ ಕಸ್ಟಡಿಯಲ್ಲಿ 14 ದಿನಗಳನ್ನು ಕಳೆದ ನಂತರ, ವಿಶೇಷ ನ್ಯಾಯಾಲಯವು ನವೆಂಬರ್ 15 ರಂದು ದೇಶಮುಖ್ ಅವರನ್ನು ನವೆಂಬರ್ 29 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು. ನಿನ್ನೆ ಮತ್ತೆ ಕೋರ್ಟ್​ ನ್ಯಾಯಾಂಗ ಬಂಧನದ ಅವಧಿಯನ್ನು ಡಿ.13ರ ವರೆಗೆ ವಿಸ್ತರಿಸಿ ಆದೇಶ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.