ETV Bharat / bharat

ಎಸ್‌ಸಿ, ಒಬಿಸಿ, ಅಲ್ಪಸಂಖ್ಯಾತರಿಗೆ ಹಕ್ಕು ಪತ್ರ ನೀಡಿ ಎಂದ ರಾಹುಲ್ ಗಾಂಧಿ

author img

By

Published : Jul 29, 2022, 9:21 PM IST

ಗುಜರಾತ್‌ನಲ್ಲಿ ಬುಡಕಟ್ಟು ಜನಾಂಗದವರ ಮೇಲೆ ಕಾಂಗ್ರೆಸ್ ಗಮನ ಹರಿಸಿದಂತಿದೆ. ಕಾಂಗ್ರೆಸ್​​ ದಲಿತ, ಒಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ತಲುಪಲು ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ ರಾಹುಲ್​ ಗಾಂಧಿ ದಲಿತರು, ಒಬಿಸಿಗಳು ಮತ್ತು ಅಲ್ಪಸಂಖ್ಯಾತರಿಗೆ ಹಕ್ಕು ಪತ್ರಗಳನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಕೇಳಿದ್ದಾರೆ.

ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಗುಜರಾತ್‌ನಲ್ಲಿ ಬುಡಕಟ್ಟು ಜನಾಂಗದವರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ, ರಾಹುಲ್​ ಗಾಂಧಿ ಇತ್ತೀಚೆಗೆ ಸತ್ಯಾಗ್ರಹ ನಡೆಸಿದ್ದರು. ಇದೀಗ ರಾಹುಲ್ ಗಾಂಧಿ ಇಲ್ಲಿನ ದಲಿತರು, ಒಬಿಸಿಗಳು ಮತ್ತು ಅಲ್ಪಸಂಖ್ಯಾತರಿಗೆ ಇದೇ ರೀತಿಯ ದಾಖಲೆ ನೀಡುವಂತೆ ರಾಜ್ಯ ನಾಯಕರಿಗೆ ಆಗ್ರಹಿಸಿದ್ದಾರೆ.

ಕಳೆದ 27 ವರ್ಷಗಳಿಂದ ಕಾಂಗ್ರೆಸ್ ಅಧಿಕಾರದಿಂದ ಹೊರಗುಳಿದಿರುವ ಗುಜರಾತ್‌ನಲ್ಲಿ, ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಗುಜರಾತ್‌ನಲ್ಲಿ ಈ ವರ್ಷದ ಕೊನೆಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕಾಗಿ ಕಾಂಗ್ರೆಸ್​ ಭಾರಿ ಕಸರತ್ತು ಮಾಡುತ್ತಿದೆ.

ರಾಹುಲ್ ಗಾಂಧಿ ಮೇ.10 ರಂದು ದಾಹೋದ್‌ನಲ್ಲಿ ಆದಿವಾಸಿಗಳಿಗೆ ಹಕ್ಕಪತ್ರ ನೀಡಬೇಕು ಎಂದು ಆಗ್ರಹಿಸಿ, ಸತ್ಯಾಗ್ರಹ ನಡೆಸಿದ್ದರು. ಇದೇ ವೇಳೆ, ಅಲ್ಲಿನ ಅರಣ್ಯವಾಸಿಗಳ ಜಲ, ಕಾಡು ಮತ್ತು ಜಮೀನು (ನೀರು, ಅರಣ್ಯ ಮತ್ತು ಭೂ ಸಂಪನ್ಮೂಲ) ರಕ್ಷಿಸುವ ಭರವಸೆ ನೀಡಿದ್ದರು. ಇದೀಗ ದಲಿತರು, ಒಬಿಸಿಗಳು ಮತ್ತು ಅಲ್ಪಸಂಖ್ಯಾತರಿಗೆ ಇದೇ ಹಕ್ಕಪತ್ರಗಳನ್ನು ನೀಡುವಂತೆ ರಾಹುಲ್​ ಗಾಂಧಿ ಆಗ್ರಹಿಸಿದ್ದಾರೆ.

ಅಹಮದಾಬಾದ್​ನಲ್ಲಿ ಮುಂದಿನ ಹೋರಾಟದ ಕುರಿತು ಚರ್ಚೆ: ನಾವು ಗುಜರಾತ್‌ನಲ್ಲಿ ಅಳಿವಿನಂಚಿನಲ್ಲಿರುವ ಸಮುದಾಯಗಳ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ. ಅವರ ಸಮಸ್ಯೆಗಳನ್ನು ಪರಿಹರಿಸುವ ದಾಖಲೆಯನ್ನು ರೂಪಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ರಾಜು ಹೇಳಿದರು. ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರ ಗುಂಪುಗಳ ಎಐಸಿಸಿ ರಾಷ್ಟ್ರೀಯ ಸಂಯೋಜಕರಾಗಿರುವ ರಾಜು ಅವರು ಗುರುವಾರ ಅಹಮದಾಬಾದ್‌ನಲ್ಲಿ ವಿವಿಧ ಸಮುದಾಯದ ಮುಖಂಡರೊಂದಿಗೆ ಈ ವಿಷಯದ ಬಗ್ಗೆ ವಿವರವಾಗಿ ಚರ್ಚೆ ನಡೆಸಿದರು.

ಇದನ್ನೂ ಓದಿ: 75 ವರ್ಷಗಳಿಂದಲೂ ಭಿಕ್ಷುಕರಿಗೆ ಸಾಕು ಎನ್ನುವಷ್ಟು ಸಿಹಿತಿಂಡಿ ನೀಡುವ ಮಾಲೀಕ: ಯಾಕಾಗಿ ಗೊತ್ತಾ!?

ಎಐಸಿಸಿ ಗುಜರಾತ್‌ನ ಉಸ್ತುವಾರಿ ರಘು ಶರ್ಮಾ, ರಾಜ್ಯ ಘಟಕದ ಮುಖ್ಯಸ್ಥ ಜಗದೀಶ್ ಠಾಕೂರ್ ಮತ್ತು ಸಿಎಲ್‌ಪಿ ನಾಯಕ ಸುಖರಾಮ್ ರಥ್ವಾ ಅವರು ಹಲವಾರು ರಾಜ್ಯ ನಾಯಕರೊಂದಿಗೆ ಅಧಿವೇಶನದಲ್ಲಿ ಭಾಗವಹಿಸಿದ್ದರು. ಎಐಸಿಸಿ ಎಸ್‌ಸಿ ವಿಭಾಗದ ಅಧ್ಯಕ್ಷ ರಾಜೇಶ್ ಲಿಲೋಥಿಯಾ ಕೂಡ ಇದ್ದರು. ಈ ಸಮುದಾಯಗಳು ಒಟ್ಟಾಗಿ ಮತದಾರರ ಪ್ರಮುಖ ಭಾಗವಾಗಿವೆ ಮತ್ತು ಕಳೆದ 27 ವರ್ಷಗಳಿಂದ ಆಡಳಿತಾರೂಢ ಬಿಜೆಪಿಯಿಂದ ಯಾವುದೇ ಪ್ರಯೋಜನ ಪಡೆದಿಲ್ಲ ಎಂದು ಪಕ್ಷದ ತಂತ್ರಜ್ಞರು ಹೇಳಿದ್ದಾರೆ. ಹೀಗಾಗಿ ಅವರ ಬೆಂಬಲವನ್ನು ಪಡೆಯಲು ಕಾಂಗ್ರೆಸ್ ಮುಂದಾಗಿದೆ.

ಪಕ್ಷದ ಅಂದಾಜಿನ ಪ್ರಕಾರ, ಪರಿಶಿಷ್ಟ ಜಾತಿಯ ಸಮುದಾಯವು ಇಡೀ ರಾಜ್ಯದ ಜನಸಂಖ್ಯೆಯ 16 ಪ್ರತಿಶತದಷ್ಟಿದೆ. ಆದರೆ, ಎಣಿಕೆಯು ಕ್ರಮವಾಗಿ ಬುಡಕಟ್ಟು ಮತ್ತು ಒಬಿಸಿ (ಇತರ ಹಿಂದುಳಿದ ವರ್ಗಗಳು) 7 ಪ್ರತಿಶತ ಮತ್ತು 20 ಪ್ರತಿಶತದಷ್ಟಿದೆ. ಒಬಿಸಿಯಲ್ಲಿ, ಪಾಟಿದಾರರು ಸುಮಾರು 14 ಪ್ರತಿಶತ ಮತದಾರರನ್ನು ಹೊಂದಿದ್ದಾರೆ ಮತ್ತು ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ಎರಡರಿಂದಲೂ ಅವರನ್ನು ಹುಡುಕುತ್ತಿದ್ದಾರೆ.

ರಾಜು ಇತ್ತೀಚೆಗೆ ರಾಷ್ಟ್ರೀಯ ಎಸ್‌ಸಿ, ಎಸ್‌ಟಿ ಆಯೋಗಕ್ಕೆ ಪತ್ರ ಬರೆದಿದ್ದು, ಪರಿಸರ ಮತ್ತು ಅರಣ್ಯ ಸಚಿವಾಲಯ ರೂಪಿಸಿರುವ ಹೊಸ ನಿಯಮಗಳು ಬುಡಕಟ್ಟು ಸಮುದಾಯಕ್ಕೆ ವಿರುದ್ಧವಾಗಿವೆ ಎಂದು ಹೇಳಿದ್ದಾರೆ. ಕೈಗಾರಿಕಾ ಯೋಜನೆಗಳಿಗೆ ಭೂ ಸ್ವಾಧೀನದ ಅನುಮೋದನೆಯ ಸಂದರ್ಭದಲ್ಲಿ ನಿಯಮಗಳು ಸ್ಥಳೀಯ ಪಂಚಾಯತ್‌ಗಳ ಪಾತ್ರವನ್ನು ದುರ್ಬಲಗೊಳಿಸಿವೆ ಎಂದು ಆರೋಪಿಸಲಾಗಿದೆ.


ನವದೆಹಲಿ: ಗುಜರಾತ್‌ನಲ್ಲಿ ಬುಡಕಟ್ಟು ಜನಾಂಗದವರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ, ರಾಹುಲ್​ ಗಾಂಧಿ ಇತ್ತೀಚೆಗೆ ಸತ್ಯಾಗ್ರಹ ನಡೆಸಿದ್ದರು. ಇದೀಗ ರಾಹುಲ್ ಗಾಂಧಿ ಇಲ್ಲಿನ ದಲಿತರು, ಒಬಿಸಿಗಳು ಮತ್ತು ಅಲ್ಪಸಂಖ್ಯಾತರಿಗೆ ಇದೇ ರೀತಿಯ ದಾಖಲೆ ನೀಡುವಂತೆ ರಾಜ್ಯ ನಾಯಕರಿಗೆ ಆಗ್ರಹಿಸಿದ್ದಾರೆ.

ಕಳೆದ 27 ವರ್ಷಗಳಿಂದ ಕಾಂಗ್ರೆಸ್ ಅಧಿಕಾರದಿಂದ ಹೊರಗುಳಿದಿರುವ ಗುಜರಾತ್‌ನಲ್ಲಿ, ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಗುಜರಾತ್‌ನಲ್ಲಿ ಈ ವರ್ಷದ ಕೊನೆಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕಾಗಿ ಕಾಂಗ್ರೆಸ್​ ಭಾರಿ ಕಸರತ್ತು ಮಾಡುತ್ತಿದೆ.

ರಾಹುಲ್ ಗಾಂಧಿ ಮೇ.10 ರಂದು ದಾಹೋದ್‌ನಲ್ಲಿ ಆದಿವಾಸಿಗಳಿಗೆ ಹಕ್ಕಪತ್ರ ನೀಡಬೇಕು ಎಂದು ಆಗ್ರಹಿಸಿ, ಸತ್ಯಾಗ್ರಹ ನಡೆಸಿದ್ದರು. ಇದೇ ವೇಳೆ, ಅಲ್ಲಿನ ಅರಣ್ಯವಾಸಿಗಳ ಜಲ, ಕಾಡು ಮತ್ತು ಜಮೀನು (ನೀರು, ಅರಣ್ಯ ಮತ್ತು ಭೂ ಸಂಪನ್ಮೂಲ) ರಕ್ಷಿಸುವ ಭರವಸೆ ನೀಡಿದ್ದರು. ಇದೀಗ ದಲಿತರು, ಒಬಿಸಿಗಳು ಮತ್ತು ಅಲ್ಪಸಂಖ್ಯಾತರಿಗೆ ಇದೇ ಹಕ್ಕಪತ್ರಗಳನ್ನು ನೀಡುವಂತೆ ರಾಹುಲ್​ ಗಾಂಧಿ ಆಗ್ರಹಿಸಿದ್ದಾರೆ.

ಅಹಮದಾಬಾದ್​ನಲ್ಲಿ ಮುಂದಿನ ಹೋರಾಟದ ಕುರಿತು ಚರ್ಚೆ: ನಾವು ಗುಜರಾತ್‌ನಲ್ಲಿ ಅಳಿವಿನಂಚಿನಲ್ಲಿರುವ ಸಮುದಾಯಗಳ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ. ಅವರ ಸಮಸ್ಯೆಗಳನ್ನು ಪರಿಹರಿಸುವ ದಾಖಲೆಯನ್ನು ರೂಪಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ರಾಜು ಹೇಳಿದರು. ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರ ಗುಂಪುಗಳ ಎಐಸಿಸಿ ರಾಷ್ಟ್ರೀಯ ಸಂಯೋಜಕರಾಗಿರುವ ರಾಜು ಅವರು ಗುರುವಾರ ಅಹಮದಾಬಾದ್‌ನಲ್ಲಿ ವಿವಿಧ ಸಮುದಾಯದ ಮುಖಂಡರೊಂದಿಗೆ ಈ ವಿಷಯದ ಬಗ್ಗೆ ವಿವರವಾಗಿ ಚರ್ಚೆ ನಡೆಸಿದರು.

ಇದನ್ನೂ ಓದಿ: 75 ವರ್ಷಗಳಿಂದಲೂ ಭಿಕ್ಷುಕರಿಗೆ ಸಾಕು ಎನ್ನುವಷ್ಟು ಸಿಹಿತಿಂಡಿ ನೀಡುವ ಮಾಲೀಕ: ಯಾಕಾಗಿ ಗೊತ್ತಾ!?

ಎಐಸಿಸಿ ಗುಜರಾತ್‌ನ ಉಸ್ತುವಾರಿ ರಘು ಶರ್ಮಾ, ರಾಜ್ಯ ಘಟಕದ ಮುಖ್ಯಸ್ಥ ಜಗದೀಶ್ ಠಾಕೂರ್ ಮತ್ತು ಸಿಎಲ್‌ಪಿ ನಾಯಕ ಸುಖರಾಮ್ ರಥ್ವಾ ಅವರು ಹಲವಾರು ರಾಜ್ಯ ನಾಯಕರೊಂದಿಗೆ ಅಧಿವೇಶನದಲ್ಲಿ ಭಾಗವಹಿಸಿದ್ದರು. ಎಐಸಿಸಿ ಎಸ್‌ಸಿ ವಿಭಾಗದ ಅಧ್ಯಕ್ಷ ರಾಜೇಶ್ ಲಿಲೋಥಿಯಾ ಕೂಡ ಇದ್ದರು. ಈ ಸಮುದಾಯಗಳು ಒಟ್ಟಾಗಿ ಮತದಾರರ ಪ್ರಮುಖ ಭಾಗವಾಗಿವೆ ಮತ್ತು ಕಳೆದ 27 ವರ್ಷಗಳಿಂದ ಆಡಳಿತಾರೂಢ ಬಿಜೆಪಿಯಿಂದ ಯಾವುದೇ ಪ್ರಯೋಜನ ಪಡೆದಿಲ್ಲ ಎಂದು ಪಕ್ಷದ ತಂತ್ರಜ್ಞರು ಹೇಳಿದ್ದಾರೆ. ಹೀಗಾಗಿ ಅವರ ಬೆಂಬಲವನ್ನು ಪಡೆಯಲು ಕಾಂಗ್ರೆಸ್ ಮುಂದಾಗಿದೆ.

ಪಕ್ಷದ ಅಂದಾಜಿನ ಪ್ರಕಾರ, ಪರಿಶಿಷ್ಟ ಜಾತಿಯ ಸಮುದಾಯವು ಇಡೀ ರಾಜ್ಯದ ಜನಸಂಖ್ಯೆಯ 16 ಪ್ರತಿಶತದಷ್ಟಿದೆ. ಆದರೆ, ಎಣಿಕೆಯು ಕ್ರಮವಾಗಿ ಬುಡಕಟ್ಟು ಮತ್ತು ಒಬಿಸಿ (ಇತರ ಹಿಂದುಳಿದ ವರ್ಗಗಳು) 7 ಪ್ರತಿಶತ ಮತ್ತು 20 ಪ್ರತಿಶತದಷ್ಟಿದೆ. ಒಬಿಸಿಯಲ್ಲಿ, ಪಾಟಿದಾರರು ಸುಮಾರು 14 ಪ್ರತಿಶತ ಮತದಾರರನ್ನು ಹೊಂದಿದ್ದಾರೆ ಮತ್ತು ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ಎರಡರಿಂದಲೂ ಅವರನ್ನು ಹುಡುಕುತ್ತಿದ್ದಾರೆ.

ರಾಜು ಇತ್ತೀಚೆಗೆ ರಾಷ್ಟ್ರೀಯ ಎಸ್‌ಸಿ, ಎಸ್‌ಟಿ ಆಯೋಗಕ್ಕೆ ಪತ್ರ ಬರೆದಿದ್ದು, ಪರಿಸರ ಮತ್ತು ಅರಣ್ಯ ಸಚಿವಾಲಯ ರೂಪಿಸಿರುವ ಹೊಸ ನಿಯಮಗಳು ಬುಡಕಟ್ಟು ಸಮುದಾಯಕ್ಕೆ ವಿರುದ್ಧವಾಗಿವೆ ಎಂದು ಹೇಳಿದ್ದಾರೆ. ಕೈಗಾರಿಕಾ ಯೋಜನೆಗಳಿಗೆ ಭೂ ಸ್ವಾಧೀನದ ಅನುಮೋದನೆಯ ಸಂದರ್ಭದಲ್ಲಿ ನಿಯಮಗಳು ಸ್ಥಳೀಯ ಪಂಚಾಯತ್‌ಗಳ ಪಾತ್ರವನ್ನು ದುರ್ಬಲಗೊಳಿಸಿವೆ ಎಂದು ಆರೋಪಿಸಲಾಗಿದೆ.


For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.