ETV Bharat / bharat

ನಾಪತ್ತೆ ಪ್ರಕರಣಕ್ಕೆ ನ್ಯೂ ಟ್ವಿಸ್ಟ್: ಕೊಲೆಯಾಗಿದ್ದಾನೆ ಎನ್ನಲಾದ ನೌಶಾದ್ ಪ್ರತ್ಯಕ್ಷ ..!

author img

By

Published : Jul 28, 2023, 7:35 PM IST

ಕೇರಳದ ಪತ್ತನಂತಿಟ್ಟ ವ್ಯಕ್ತಿ ನಾಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದೆ. ನೌಶಾದ್ ಕೊಲೆಯಾಗಿಲ್ಲ, ಅಫ್ಸಾನಾ ಕೊಲೆಗಾರ್ತಿಯಲ್ಲ ಎಂಬುದು ತಿಳಿದಿದೆ. ನಾಪತ್ತೆಯಾಗಿದ್ದ ನೌಶಾದ್ ತೊಡುಪುಳದಲ್ಲಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

A new twist to Pathanamthitta man missing Case
ನಾಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್: ನೌಶಾದ್ ಕೊಲೆಯಾಗಿಲ್ಲ, ನಾಪತ್ತೆಯಾಗಿದ್ದ ನೌಶಾದ್ ಪ್ರತ್ಯಕ್ಷ ..!

ತೊಡುಪುಳ (ಕೇರಳ): ಕಳೆದ ಒಂದೂವರೆ ವರ್ಷಗಳಿಂದ ಪತ್ತನಂತಿಟ್ಟದ ಕಳಂಜೂರಿನಿಂದ ನಾಪತ್ತೆಯಾಗಿದ್ದ ನೌಶಾದ್ (36) ಎಂಬಾತನನ್ನು ಹತ್ಯೆ ಮಾಡಿರುವ ಕುರಿತು ಶಂಕೆ ವ್ಯಕ್ತವಾಗಿತ್ತು. ನಿನ್ನೆ ಆತನ ಪತ್ನಿ ಅಫ್ಸಾನಾ ತನ್ನ ಪತಿಯನ್ನು ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾಳೆ. ಆದರೆ, ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದ್ದು, ಇಂದು ಬೆಳಗ್ಗೆ ತೊಡುಪುಳ ಬಳಿಯ ತೊಮ್ಮಂಕುತು ಎಂಬಲ್ಲಿ ನೌಶಾದ್‌ನನ್ನು ಪೊಲೀಸರು ಜೀವಂತವಾಗಿ ಪತ್ತೆ ಮಾಡಿದ್ದಾರೆ. ನೌಶಾದ್ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ತಂಡ ನಿನ್ನೆ ಸಂಜೆಯವರೆಗೂ ತೀವ್ರ ಗೊಂದಲದಲ್ಲಿತ್ತು.

ನೌಶಾದ್ ಮೃತದೇಹ ಹುಡುಕಾಡಿ ಸುಸ್ತಾಗಿದ್ದ ಪೊಲೀಸರು: ಒಂದೂವರೆ ವರ್ಷದ ಹಿಂದೆ ನಾಪತ್ತೆಯಾಗಿದ್ದ ನೌಶಾದ್ ನನ್ನು ಕೊಂದಿರುವುದಾಗಿ ಆತನ ಪತ್ನಿ ಅಫ್ಸಾನಾ ನಿನ್ನೆ ಪೊಲೀಸರಿಗೆ ಹೇಳಿಕೆ ನೀಡಿದ್ದಳು. ಆದರೆ, ನೌಶಾದ್ ಪತ್ನಿ ಅಫ್ಸಾನಾ ತನ್ನ ಹೇಳಿಕೆಯನ್ನು ಬದಲಾಯಿಸುತ್ತಲೇ ಇದ್ದಾಗ ಪೊಲೀಸ್ ತಂಡಕ್ಕೆ ಗೊಂದಲ ಉಂಟಾಯಿತು. ಪೊಲೀಸರು ನಡೆಸಿದ ತನಿಖೆಯಲ್ಲಿ ಯಾವುದೇ ಮಹತ್ವದ ಸಾಕ್ಷ್ಯಾಧಾರಗಳು ಸಿಗದ ಹಿನ್ನೆಲೆಯಲ್ಲಿ ನೌಶಾದ್ ಬದುಕಿರುವ ಶಂಕೆ ಪೊಲೀಸರಿಗೆ ಬಂದಿತ್ತು. ನಿನ್ನೆ ಪೊಲೀಸರು ನೌಶಾದ್ ಮೃತದೇಹದ ಪತ್ತೆಗೆ ಹುಡುಕಾಟ ನಡೆಸಿದ್ದರು, ಆದರೆ ವಿಫಲರಾಗಿದ್ದರು.

ಪತ್ನಿ ತನ್ನ ಪ್ರಾಣಕ್ಕೆ ಹಾನಿ ಮಾಡಬಹುದು ಎಂಬ ಭಯದಿಂದ ಒಂದೂವರೆ ವರ್ಷದ ಹಿಂದೆ ಊರಿನಿಂದ ಓಡಿ ಹೋಗಿದ್ದೆ ಎಂದು ನೌಷಾದ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ತೊಡುಪುಳ ಬಳಿಯ ತೊಮ್ಮಂಕುತು ಎಂಬಲ್ಲಿ ವಾಸವಿದ್ದು, ಅಲ್ಲಿಯೇ ದಿನಗೂಲಿ ನೌಕರನಾಗಿ ಜೀವನ ಸಾಗಿಸುತ್ತಿರುವುದಾಗಿಯೂ ಆತ ತಿಳಿಸಿದ್ದಾನೆ. ನಾಪತ್ತೆ ಪ್ರಕರಣ ಮತ್ತು ಪೊಲೀಸರ ಹುಡುಕಾಟದ ಬಗ್ಗೆ ತನಗೆ ಸಂಪೂರ್ಣವಾಗಿ ತಿಳಿದಿಲ್ಲ ಎಂದ ನೌಶಾದ್, ತಾನು ಯಾವುದೇ ಮೊಬೈಲ್ ಫೋನ್ ಬಳಸುತ್ತಿಲ್ಲ ಎಂದು ಹೇಳಿಕೊಂಡಿದ್ದಾನೆ. ತನ್ನ ಹೆಂಡತಿ ತನ್ನನ್ನು ಕೊಲೆ ಮಾಡಿದ್ದಾಳೆ ಎಂಬ ಹೇಳಿಕೆಯ ಕುರಿತು ನೌಶಾದ್​ಗೆ ತಿಳಿದಿಲ್ಲ. ಕಳೆದ ಒಂದೂವರೆ ವರ್ಷಗಳಿಂದ ನೌಶಾದ್ ತನ್ನ ಸಂಬಂಧಿಕರೊಂದಿಗೆ ಸಂಪರ್ಕದಲ್ಲೂ ಇರಲಿಲ್ಲ.

ಅಫ್ಸಾನಾ ಹೇಳಿದ್ದೇನು?: ''ನೌಶಾದ್ ಬದುಕಿದ್ದು, ಅವರ ಬಳಿಯೇ ನೆಲೆಸಿದ್ದಾನೆ'' ಎಂದು ತೊಮ್ಮನಕುನ್ನು ಗ್ರಾಮದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಅವರನ್ನು ತಮ್ಮೊಂದಿಗೆ ಕರೆದೊಯ್ದರು. ತೊಡುಪುಳ ಪೊಲೀಸರು ನೌಶಾದ್ ನನ್ನು ಡಿವೈಎಸ್​ಪಿ ಕಚೇರಿಗೆ ಕರೆದೊಯ್ದರು. ನಾಪತ್ತೆ ಪ್ರಕರಣದ ಮುಂದಿನ ಪ್ರಕ್ರಿಯೆಗಾಗಿ ಕೂಡಲ್‌ನಿಂದ ಪೊಲೀಸ್ ತಂಡವು ತೊಡುಪುಳಕ್ಕೆ ತಲುಪಿದೆ. ಕೊನೆಗೆ ನೌಶಾದ್ ನಾಪತ್ತೆಯಾಗಿರುವ ಕುರಿತು ಅಫ್ಸಾನಾ, ತನ್ನ ಸ್ನೇಹಿತ ನಸೀರ್ ಸಹಾಯದಿಂದ ಗೂಡ್ಸ್ ಆಟೋದಲ್ಲಿ ಮೃತದೇಹವನ್ನು ಸಾಗಿಸಿದ್ದಾಗಿ ಹೇಳಿಕೆ ನೀಡಿದ್ದಾಳೆ. ಆತನನ್ನು ಕೂಡ ಪೊಲೀಸರು ವಿಚಾರಣೆಗೊಳಪಡಿಸಿದ್ದು, ನೌಶಾದ್‌ನ ಶವವನ್ನು ಆಟೋದಲ್ಲಿ ತೆಗೆದುಕೊಂಡು ಹೋಗಿರುವುದಾಗಿ ಅಫ್ಸಾನಾ ಹೇಳಿರುವುದು ಸುಳ್ಳು ಎಂದು ತಿಳಿದು ಬಂದಿದೆ.

ನೌಶಾದ್ ತಂದೆ ಅಶ್ರಫ್ ನೀಡಿದ ದೂರಿನಂತೆ ಕೂಡಲ್ ಪೊಲೀಸರು ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿದ್ದರು. ನೌಶಾದ್ 2021ರ ನವೆಂಬರ್ 1ರಿಂದ ನಾಪತ್ತೆಯಾಗಿದ್ದ ಎಂದು ಆತನ ತಂದೆ ತಿಳಿಸಿದ್ದರು. ಈ ನಡುವೆ ಕೂಡಲ್ ಎಸ್‌ಐ ಶೆಮಿಮೋಲ್‌ಗೆ ಸಿಕ್ಕ ಮಾಹಿತಿ ಮೇರೆಗೆ ನೌಷಾದ್‌ನ ಪತ್ನಿ ನೂರನಾಡು ಮೂಲದ ಅಫ್ಸಾನಾ ಅವರನ್ನು ಠಾಣೆಗೆ ಕರೆಸಿ ಹೇಳಿಕೆ ದಾಖಲಿಸಿಕೊಂಡಿದ್ದರು. ಮೂರು ದಿನಗಳ ಹಿಂದೆ ಅಡೂರ್‌ನಲ್ಲಿ ನೌಶಾದ್‌ನನ್ನು ನೋಡಿದ್ದಾಗಿ ಆಕೆಯ ಹಿಂದಿನ ಹೇಳಿಕೆಯ ಬಗ್ಗೆ ವಿಚಾರಿಸಲು, ಆಕೆಯನ್ನು ಠಾಣೆಗೆ ಕರೆಸಲಾಯಿತು. ವಿಚಾರಣೆ ವೇಳೆ ವ್ಯತಿರಿಕ್ತವಾಗಿ ಮಾತನಾಡಿದ ಆಕೆ, ನೌಶಾದ್​ನನ್ನು ಕೊಂದು ಹೂತಿಟ್ಟಿರುವುದಾಗಿ ಹೇಳಿದ್ದಾಳೆ.

ವಿವಿಧ ಕಲಂಗಳ ಅಡಿ ಪ್ರಕರಣ ದಾಖಲು: ನಂತರ, ಕೊನ್ನಿ ಡಿವೈಎಸ್ಪಿ ಕೂಡ ಮಹಿಳೆಯ ವಿಚಾರಣೆ ನಡೆಸಿದ್ದಾರೆ. ಮೃತದೇಹವನ್ನು ಅಡಗಿಸಿಟ್ಟಿದ್ದಾರೆ ಎನ್ನಲಾದ ಎಲ್ಲ ಸ್ಥಳಗಳಿಗೆ ಮಹಿಳೆಯನ್ನು ಕರೆದುಕೊಂಡು ಹೋದರೂ ಶವ ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ. ಅವರು ಸೂಚಿಸಿದ ಸ್ಥಳಗಳೆಲ್ಲವೂ ಅಗೆದೆವು. ಅಡುಗೆ ಕೋಣೆ ಸೇರಿದಂತೆ ಎರಡು ಕೊಠಡಿಗಳನ್ನು ಅಗೆದು, ಮೃತದೇಹವನ್ನು ಹೂಳಲಾಗಿದೆ ಎಂದು ಅಫ್ಸಾನಾ ಹೇಳಿದ್ದಾರೆ. ಮನೆಯ ಹಿಂಬದಿಯ ಅಂಗಳದಲ್ಲಿ ಕಸ ಸುರಿಯಲು ತೆಗೆದ ಗುಂಡಿಯನ್ನೂ ಪರಿಶೀಲಿಸಿದರೂ ಏನೂ ಪತ್ತೆಯಾಗಿಲ್ಲ. ಅಂಗಳದಲ್ಲಿ ನೌಶಾದ್ ಅವರ ರಕ್ತದ ಕಲೆಯಿರುವ ಅಂಗಿಯ ಭಾಗಗಳು ಸುಟ್ಟು ಹೋಗಿರುವುದು ಕಂಡುಬಂದಿದೆ. ಅಫ್ಸಾನಾ ಹೇಳಿಕೆ ಪ್ರಕಾರ, ಅಡೂರು ಪರುತಿಪಾರದಲ್ಲಿ ಬಾಡಿಗೆ ಮನೆಯಲ್ಲಿ ಮೂರು ತಿಂಗಳಿನಿಂದ ಒಟ್ಟಿಗೆ ಇದ್ದೇವೆ, ನೌಶಾದ್ ನಿತ್ಯ ಮದ್ಯ ಸೇವಿಸಿ ಥಳಿಸುತ್ತಿದ್ದ. ಆಕೆಯ ಮೇಲೆ ಭಾರತೀಯ ದಂಡ ಸಂಹಿತೆ 177, 182 , 201 ಮತ್ತು 297 ಕಲಂ ಅಡಿ ಆರೋಪ ಹೊರಿಸಲಾಗಿತ್ತು.

ಸದ್ಯ ಜೈಲಿನಲ್ಲಿ ಇದ್ದಾಳೆ ಅಫ್ಸಾನಾ: ಸದ್ಯ ಜೈಲಿನಲ್ಲಿರುವ ಅಫ್ಸಾನಾಳನ್ನು ಪೊಲೀಸರು ಕಸ್ಟಡಿಗೆ ಪಡೆದು ಸುಳ್ಳು ಪರೀಕ್ಷೆ ಸೇರಿದಂತೆ ವೈಜ್ಞಾನಿಕ ತನಿಖೆ ನಡೆಸಲು ಸೂಚನೆಗಳು ಇವೆ. ತಾನು ನೌಶಾದ್‌ನನ್ನು ಕೊಂದು ಹೂತಿಟ್ಟಿದ್ದೇನೆ ಎಂದು ಅಫ್ಸಾನಾ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆಕೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿಲ್ಲ. ನಾಪತ್ತೆ ಪ್ರಕರಣದಲ್ಲಿ ಹೊಸ ಟ್ವಿಸ್ಟ್‌ನ ನಂತರ, ಅಫ್ಸಾನಾ ಏಕೆ ಸುಳ್ಳು ಹೇಳಿದ್ದಾಳೆ. ಕೊಲೆ ಮಾಡಿರುವುದಾಗಿ ಯಾಕೆ ಒಪ್ಪಿಕೊಂಡಿದ್ದಾಳೆ ಎನ್ನುವ ಕುರಿತು ತನಿಖೆ ಪೊಲೀಸರು ನಡೆಸಲಿದ್ದಾರೆ.

ಇದನ್ನೂ ಓದಿ: ಪಕ್ಕದ ಮನೆ ಆಂಟಿ ಜೊತೆ ಯುವತಿ ಲವ್ವಿಡವ್ವಿ.. ಗಂಡನ ಬಿಟ್ಟು ಓಡಿ ಹೋದ ಪತ್ನಿ!!

ತೊಡುಪುಳ (ಕೇರಳ): ಕಳೆದ ಒಂದೂವರೆ ವರ್ಷಗಳಿಂದ ಪತ್ತನಂತಿಟ್ಟದ ಕಳಂಜೂರಿನಿಂದ ನಾಪತ್ತೆಯಾಗಿದ್ದ ನೌಶಾದ್ (36) ಎಂಬಾತನನ್ನು ಹತ್ಯೆ ಮಾಡಿರುವ ಕುರಿತು ಶಂಕೆ ವ್ಯಕ್ತವಾಗಿತ್ತು. ನಿನ್ನೆ ಆತನ ಪತ್ನಿ ಅಫ್ಸಾನಾ ತನ್ನ ಪತಿಯನ್ನು ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾಳೆ. ಆದರೆ, ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದ್ದು, ಇಂದು ಬೆಳಗ್ಗೆ ತೊಡುಪುಳ ಬಳಿಯ ತೊಮ್ಮಂಕುತು ಎಂಬಲ್ಲಿ ನೌಶಾದ್‌ನನ್ನು ಪೊಲೀಸರು ಜೀವಂತವಾಗಿ ಪತ್ತೆ ಮಾಡಿದ್ದಾರೆ. ನೌಶಾದ್ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ತಂಡ ನಿನ್ನೆ ಸಂಜೆಯವರೆಗೂ ತೀವ್ರ ಗೊಂದಲದಲ್ಲಿತ್ತು.

ನೌಶಾದ್ ಮೃತದೇಹ ಹುಡುಕಾಡಿ ಸುಸ್ತಾಗಿದ್ದ ಪೊಲೀಸರು: ಒಂದೂವರೆ ವರ್ಷದ ಹಿಂದೆ ನಾಪತ್ತೆಯಾಗಿದ್ದ ನೌಶಾದ್ ನನ್ನು ಕೊಂದಿರುವುದಾಗಿ ಆತನ ಪತ್ನಿ ಅಫ್ಸಾನಾ ನಿನ್ನೆ ಪೊಲೀಸರಿಗೆ ಹೇಳಿಕೆ ನೀಡಿದ್ದಳು. ಆದರೆ, ನೌಶಾದ್ ಪತ್ನಿ ಅಫ್ಸಾನಾ ತನ್ನ ಹೇಳಿಕೆಯನ್ನು ಬದಲಾಯಿಸುತ್ತಲೇ ಇದ್ದಾಗ ಪೊಲೀಸ್ ತಂಡಕ್ಕೆ ಗೊಂದಲ ಉಂಟಾಯಿತು. ಪೊಲೀಸರು ನಡೆಸಿದ ತನಿಖೆಯಲ್ಲಿ ಯಾವುದೇ ಮಹತ್ವದ ಸಾಕ್ಷ್ಯಾಧಾರಗಳು ಸಿಗದ ಹಿನ್ನೆಲೆಯಲ್ಲಿ ನೌಶಾದ್ ಬದುಕಿರುವ ಶಂಕೆ ಪೊಲೀಸರಿಗೆ ಬಂದಿತ್ತು. ನಿನ್ನೆ ಪೊಲೀಸರು ನೌಶಾದ್ ಮೃತದೇಹದ ಪತ್ತೆಗೆ ಹುಡುಕಾಟ ನಡೆಸಿದ್ದರು, ಆದರೆ ವಿಫಲರಾಗಿದ್ದರು.

ಪತ್ನಿ ತನ್ನ ಪ್ರಾಣಕ್ಕೆ ಹಾನಿ ಮಾಡಬಹುದು ಎಂಬ ಭಯದಿಂದ ಒಂದೂವರೆ ವರ್ಷದ ಹಿಂದೆ ಊರಿನಿಂದ ಓಡಿ ಹೋಗಿದ್ದೆ ಎಂದು ನೌಷಾದ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ತೊಡುಪುಳ ಬಳಿಯ ತೊಮ್ಮಂಕುತು ಎಂಬಲ್ಲಿ ವಾಸವಿದ್ದು, ಅಲ್ಲಿಯೇ ದಿನಗೂಲಿ ನೌಕರನಾಗಿ ಜೀವನ ಸಾಗಿಸುತ್ತಿರುವುದಾಗಿಯೂ ಆತ ತಿಳಿಸಿದ್ದಾನೆ. ನಾಪತ್ತೆ ಪ್ರಕರಣ ಮತ್ತು ಪೊಲೀಸರ ಹುಡುಕಾಟದ ಬಗ್ಗೆ ತನಗೆ ಸಂಪೂರ್ಣವಾಗಿ ತಿಳಿದಿಲ್ಲ ಎಂದ ನೌಶಾದ್, ತಾನು ಯಾವುದೇ ಮೊಬೈಲ್ ಫೋನ್ ಬಳಸುತ್ತಿಲ್ಲ ಎಂದು ಹೇಳಿಕೊಂಡಿದ್ದಾನೆ. ತನ್ನ ಹೆಂಡತಿ ತನ್ನನ್ನು ಕೊಲೆ ಮಾಡಿದ್ದಾಳೆ ಎಂಬ ಹೇಳಿಕೆಯ ಕುರಿತು ನೌಶಾದ್​ಗೆ ತಿಳಿದಿಲ್ಲ. ಕಳೆದ ಒಂದೂವರೆ ವರ್ಷಗಳಿಂದ ನೌಶಾದ್ ತನ್ನ ಸಂಬಂಧಿಕರೊಂದಿಗೆ ಸಂಪರ್ಕದಲ್ಲೂ ಇರಲಿಲ್ಲ.

ಅಫ್ಸಾನಾ ಹೇಳಿದ್ದೇನು?: ''ನೌಶಾದ್ ಬದುಕಿದ್ದು, ಅವರ ಬಳಿಯೇ ನೆಲೆಸಿದ್ದಾನೆ'' ಎಂದು ತೊಮ್ಮನಕುನ್ನು ಗ್ರಾಮದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಅವರನ್ನು ತಮ್ಮೊಂದಿಗೆ ಕರೆದೊಯ್ದರು. ತೊಡುಪುಳ ಪೊಲೀಸರು ನೌಶಾದ್ ನನ್ನು ಡಿವೈಎಸ್​ಪಿ ಕಚೇರಿಗೆ ಕರೆದೊಯ್ದರು. ನಾಪತ್ತೆ ಪ್ರಕರಣದ ಮುಂದಿನ ಪ್ರಕ್ರಿಯೆಗಾಗಿ ಕೂಡಲ್‌ನಿಂದ ಪೊಲೀಸ್ ತಂಡವು ತೊಡುಪುಳಕ್ಕೆ ತಲುಪಿದೆ. ಕೊನೆಗೆ ನೌಶಾದ್ ನಾಪತ್ತೆಯಾಗಿರುವ ಕುರಿತು ಅಫ್ಸಾನಾ, ತನ್ನ ಸ್ನೇಹಿತ ನಸೀರ್ ಸಹಾಯದಿಂದ ಗೂಡ್ಸ್ ಆಟೋದಲ್ಲಿ ಮೃತದೇಹವನ್ನು ಸಾಗಿಸಿದ್ದಾಗಿ ಹೇಳಿಕೆ ನೀಡಿದ್ದಾಳೆ. ಆತನನ್ನು ಕೂಡ ಪೊಲೀಸರು ವಿಚಾರಣೆಗೊಳಪಡಿಸಿದ್ದು, ನೌಶಾದ್‌ನ ಶವವನ್ನು ಆಟೋದಲ್ಲಿ ತೆಗೆದುಕೊಂಡು ಹೋಗಿರುವುದಾಗಿ ಅಫ್ಸಾನಾ ಹೇಳಿರುವುದು ಸುಳ್ಳು ಎಂದು ತಿಳಿದು ಬಂದಿದೆ.

ನೌಶಾದ್ ತಂದೆ ಅಶ್ರಫ್ ನೀಡಿದ ದೂರಿನಂತೆ ಕೂಡಲ್ ಪೊಲೀಸರು ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿದ್ದರು. ನೌಶಾದ್ 2021ರ ನವೆಂಬರ್ 1ರಿಂದ ನಾಪತ್ತೆಯಾಗಿದ್ದ ಎಂದು ಆತನ ತಂದೆ ತಿಳಿಸಿದ್ದರು. ಈ ನಡುವೆ ಕೂಡಲ್ ಎಸ್‌ಐ ಶೆಮಿಮೋಲ್‌ಗೆ ಸಿಕ್ಕ ಮಾಹಿತಿ ಮೇರೆಗೆ ನೌಷಾದ್‌ನ ಪತ್ನಿ ನೂರನಾಡು ಮೂಲದ ಅಫ್ಸಾನಾ ಅವರನ್ನು ಠಾಣೆಗೆ ಕರೆಸಿ ಹೇಳಿಕೆ ದಾಖಲಿಸಿಕೊಂಡಿದ್ದರು. ಮೂರು ದಿನಗಳ ಹಿಂದೆ ಅಡೂರ್‌ನಲ್ಲಿ ನೌಶಾದ್‌ನನ್ನು ನೋಡಿದ್ದಾಗಿ ಆಕೆಯ ಹಿಂದಿನ ಹೇಳಿಕೆಯ ಬಗ್ಗೆ ವಿಚಾರಿಸಲು, ಆಕೆಯನ್ನು ಠಾಣೆಗೆ ಕರೆಸಲಾಯಿತು. ವಿಚಾರಣೆ ವೇಳೆ ವ್ಯತಿರಿಕ್ತವಾಗಿ ಮಾತನಾಡಿದ ಆಕೆ, ನೌಶಾದ್​ನನ್ನು ಕೊಂದು ಹೂತಿಟ್ಟಿರುವುದಾಗಿ ಹೇಳಿದ್ದಾಳೆ.

ವಿವಿಧ ಕಲಂಗಳ ಅಡಿ ಪ್ರಕರಣ ದಾಖಲು: ನಂತರ, ಕೊನ್ನಿ ಡಿವೈಎಸ್ಪಿ ಕೂಡ ಮಹಿಳೆಯ ವಿಚಾರಣೆ ನಡೆಸಿದ್ದಾರೆ. ಮೃತದೇಹವನ್ನು ಅಡಗಿಸಿಟ್ಟಿದ್ದಾರೆ ಎನ್ನಲಾದ ಎಲ್ಲ ಸ್ಥಳಗಳಿಗೆ ಮಹಿಳೆಯನ್ನು ಕರೆದುಕೊಂಡು ಹೋದರೂ ಶವ ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ. ಅವರು ಸೂಚಿಸಿದ ಸ್ಥಳಗಳೆಲ್ಲವೂ ಅಗೆದೆವು. ಅಡುಗೆ ಕೋಣೆ ಸೇರಿದಂತೆ ಎರಡು ಕೊಠಡಿಗಳನ್ನು ಅಗೆದು, ಮೃತದೇಹವನ್ನು ಹೂಳಲಾಗಿದೆ ಎಂದು ಅಫ್ಸಾನಾ ಹೇಳಿದ್ದಾರೆ. ಮನೆಯ ಹಿಂಬದಿಯ ಅಂಗಳದಲ್ಲಿ ಕಸ ಸುರಿಯಲು ತೆಗೆದ ಗುಂಡಿಯನ್ನೂ ಪರಿಶೀಲಿಸಿದರೂ ಏನೂ ಪತ್ತೆಯಾಗಿಲ್ಲ. ಅಂಗಳದಲ್ಲಿ ನೌಶಾದ್ ಅವರ ರಕ್ತದ ಕಲೆಯಿರುವ ಅಂಗಿಯ ಭಾಗಗಳು ಸುಟ್ಟು ಹೋಗಿರುವುದು ಕಂಡುಬಂದಿದೆ. ಅಫ್ಸಾನಾ ಹೇಳಿಕೆ ಪ್ರಕಾರ, ಅಡೂರು ಪರುತಿಪಾರದಲ್ಲಿ ಬಾಡಿಗೆ ಮನೆಯಲ್ಲಿ ಮೂರು ತಿಂಗಳಿನಿಂದ ಒಟ್ಟಿಗೆ ಇದ್ದೇವೆ, ನೌಶಾದ್ ನಿತ್ಯ ಮದ್ಯ ಸೇವಿಸಿ ಥಳಿಸುತ್ತಿದ್ದ. ಆಕೆಯ ಮೇಲೆ ಭಾರತೀಯ ದಂಡ ಸಂಹಿತೆ 177, 182 , 201 ಮತ್ತು 297 ಕಲಂ ಅಡಿ ಆರೋಪ ಹೊರಿಸಲಾಗಿತ್ತು.

ಸದ್ಯ ಜೈಲಿನಲ್ಲಿ ಇದ್ದಾಳೆ ಅಫ್ಸಾನಾ: ಸದ್ಯ ಜೈಲಿನಲ್ಲಿರುವ ಅಫ್ಸಾನಾಳನ್ನು ಪೊಲೀಸರು ಕಸ್ಟಡಿಗೆ ಪಡೆದು ಸುಳ್ಳು ಪರೀಕ್ಷೆ ಸೇರಿದಂತೆ ವೈಜ್ಞಾನಿಕ ತನಿಖೆ ನಡೆಸಲು ಸೂಚನೆಗಳು ಇವೆ. ತಾನು ನೌಶಾದ್‌ನನ್ನು ಕೊಂದು ಹೂತಿಟ್ಟಿದ್ದೇನೆ ಎಂದು ಅಫ್ಸಾನಾ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆಕೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿಲ್ಲ. ನಾಪತ್ತೆ ಪ್ರಕರಣದಲ್ಲಿ ಹೊಸ ಟ್ವಿಸ್ಟ್‌ನ ನಂತರ, ಅಫ್ಸಾನಾ ಏಕೆ ಸುಳ್ಳು ಹೇಳಿದ್ದಾಳೆ. ಕೊಲೆ ಮಾಡಿರುವುದಾಗಿ ಯಾಕೆ ಒಪ್ಪಿಕೊಂಡಿದ್ದಾಳೆ ಎನ್ನುವ ಕುರಿತು ತನಿಖೆ ಪೊಲೀಸರು ನಡೆಸಲಿದ್ದಾರೆ.

ಇದನ್ನೂ ಓದಿ: ಪಕ್ಕದ ಮನೆ ಆಂಟಿ ಜೊತೆ ಯುವತಿ ಲವ್ವಿಡವ್ವಿ.. ಗಂಡನ ಬಿಟ್ಟು ಓಡಿ ಹೋದ ಪತ್ನಿ!!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.