ETV Bharat / bharat

ಪ್ರತ್ಯೇಕ ಅಪಘಾತದಲ್ಲಿ ಪಿಕಪ್​ ವಾಹನಗಳು ಪಲ್ಟಿ: 12 ಮಂದಿ ದುರ್ಮರಣ

author img

By

Published : Jan 31, 2021, 10:55 PM IST

Updated : Feb 1, 2021, 7:52 AM IST

ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಒಟ್ಟು 12 ಜನ ಸಾವನ್ನಪ್ಪಿದ್ದು, 19 ಜನರು ಗಾಯಗೊಂಡ ಘಟನೆ ಒಡಿಶಾ ರಾಜ್ಯದಲ್ಲಿ ನಡೆದಿದೆ.

5-dead-12-critical-as-pick-up-van-overturns-in-koraput
ಪಿಕಪ್ ವಾಹನ ಉರುಳಿ ಐವರ ದುರ್ಮರಣ

ಸುಂದರ್​ಗಢ್​/ಕೊರಾಪುಟ್​:

ಘಟನೆ 1: ಕೊರಾಪುಟ್​ ಅಪಘಾತ

ವೇಗವಾಗಿ ಚಲಿಸುತ್ತಿದ್ದ ಪಿಕಪ್ ವಾಹನ ನಿಯಂತ್ರಣ ತಪ್ಪಿ ನೆಲಕ್ಕುರುಳಿ ಬಿದ್ದ ಪರಿಣಾಮ, 9 ಮಂದಿ ಸಾವನ್ನಪ್ಪಿ 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದುರ್ಘಟನೆ ಕೊರಾಪುಟ್​ ಜಿಲ್ಲೆಯ ಕೋಟ್ಪಡ್​ ಪೊಲೀಸ್ ಠಾಣಾ ವ್ಯಾಪ್ತಿಯ ಮೂರ್ತಹಂಡಿ ಬಳಿ ನಡೆದಿದೆ.

ಘಟನೆ ಹೀಗೆ ನಡೀತು..

ಛತ್ತೀಸ್‌ಗಢದ ನಿವಾಸಿಗಳಾದ 20ಕ್ಕೂ ಹೆಚ್ಚು ಮಂದಿ ಪಿಕಪ್‌ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಭಾನುವಾರ ರಾತ್ರಿ ವ್ಯಕ್ತಿಯೊಬ್ಬರ 10ನೇ ದಿನದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದ ವೇಳೆ ಮೂರ್ತಹಂಡಿ ಬಳಿ ಅಪಘಾತ ಸಂಭವಿಸಿದ್ದು, 9 ಜನ ಮೃತಪಟ್ಟಿದ್ದಾರೆ. ಈ ಘಟನೆ ಕೋಟ್ಪಡ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ 2: ಸುಂದರ್​ಗಢ್​ ಅಪಘಾತ

ಕಾಡು ಹಂದಿಗೆ ಡಿಕ್ಕಿ ಹೊಡೆದ ನಂತರ ಮ್ಯಾಕ್ಸ್ ಪಿಕಪ್ ವಾಹನ ಪಲ್ಲಿಯಾಗಿದೆ. ದುರ್ಘಟನೆಯಲ್ಲಿ ಮೂವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಸುಂದರ್​ಗಢ್​ ಜಿಲ್ಲೆಯಲ್ಲಿ ನಡೆದಿದೆ.

ಸುಂದರ್‌ಗಢ್​ ಜಿಲ್ಲೆಯ ಹೆಮ್‌ಗೀರ್-ಕಾನಿಕಾ ರಸ್ತೆಯಲ್ಲಿ ಕಾಡು ಹಂದಿಗೆ ಡಿಕ್ಕಿ ಹೊಡೆದ ನಂತರ ಪಿಕಪ್ ವ್ಯಾನ್ ಪಲ್ಟಿಯಾಗಿದೆ. ವಾಹನದಲ್ಲಿ 9ಕ್ಕೂ ಹೆಚ್ಚು ಕಾರ್ಮಿಕರು ಪ್ರಯಾಣಿಸುತ್ತಿದ್ದು, ಮೂವರು ಸ್ಥಳದಲ್ಲೇ ಅಸುನೀಗಿದ್ದಾರೆ. ಆರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಹೇಮ್​ಗಿರ್​ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಂದರ್​ಗಢ್​/ಕೊರಾಪುಟ್​:

ಘಟನೆ 1: ಕೊರಾಪುಟ್​ ಅಪಘಾತ

ವೇಗವಾಗಿ ಚಲಿಸುತ್ತಿದ್ದ ಪಿಕಪ್ ವಾಹನ ನಿಯಂತ್ರಣ ತಪ್ಪಿ ನೆಲಕ್ಕುರುಳಿ ಬಿದ್ದ ಪರಿಣಾಮ, 9 ಮಂದಿ ಸಾವನ್ನಪ್ಪಿ 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದುರ್ಘಟನೆ ಕೊರಾಪುಟ್​ ಜಿಲ್ಲೆಯ ಕೋಟ್ಪಡ್​ ಪೊಲೀಸ್ ಠಾಣಾ ವ್ಯಾಪ್ತಿಯ ಮೂರ್ತಹಂಡಿ ಬಳಿ ನಡೆದಿದೆ.

ಘಟನೆ ಹೀಗೆ ನಡೀತು..

ಛತ್ತೀಸ್‌ಗಢದ ನಿವಾಸಿಗಳಾದ 20ಕ್ಕೂ ಹೆಚ್ಚು ಮಂದಿ ಪಿಕಪ್‌ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಭಾನುವಾರ ರಾತ್ರಿ ವ್ಯಕ್ತಿಯೊಬ್ಬರ 10ನೇ ದಿನದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದ ವೇಳೆ ಮೂರ್ತಹಂಡಿ ಬಳಿ ಅಪಘಾತ ಸಂಭವಿಸಿದ್ದು, 9 ಜನ ಮೃತಪಟ್ಟಿದ್ದಾರೆ. ಈ ಘಟನೆ ಕೋಟ್ಪಡ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ 2: ಸುಂದರ್​ಗಢ್​ ಅಪಘಾತ

ಕಾಡು ಹಂದಿಗೆ ಡಿಕ್ಕಿ ಹೊಡೆದ ನಂತರ ಮ್ಯಾಕ್ಸ್ ಪಿಕಪ್ ವಾಹನ ಪಲ್ಲಿಯಾಗಿದೆ. ದುರ್ಘಟನೆಯಲ್ಲಿ ಮೂವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಸುಂದರ್​ಗಢ್​ ಜಿಲ್ಲೆಯಲ್ಲಿ ನಡೆದಿದೆ.

ಸುಂದರ್‌ಗಢ್​ ಜಿಲ್ಲೆಯ ಹೆಮ್‌ಗೀರ್-ಕಾನಿಕಾ ರಸ್ತೆಯಲ್ಲಿ ಕಾಡು ಹಂದಿಗೆ ಡಿಕ್ಕಿ ಹೊಡೆದ ನಂತರ ಪಿಕಪ್ ವ್ಯಾನ್ ಪಲ್ಟಿಯಾಗಿದೆ. ವಾಹನದಲ್ಲಿ 9ಕ್ಕೂ ಹೆಚ್ಚು ಕಾರ್ಮಿಕರು ಪ್ರಯಾಣಿಸುತ್ತಿದ್ದು, ಮೂವರು ಸ್ಥಳದಲ್ಲೇ ಅಸುನೀಗಿದ್ದಾರೆ. ಆರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಹೇಮ್​ಗಿರ್​ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Last Updated : Feb 1, 2021, 7:52 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.